Government ನಿರಾಕರಿಸಿದ್ದಕ್ಕೆ ಬಿಸಿಸಿಐ ಲಿಖಿತ ದಾಖಲೆ ನೀಡಲಿ: ಪಿಸಿಬಿ

ವಿಶ್ವಕಪ್‌ ಬಹಿಷ್ಕಾರದ ಬೆದರಿಕೆ

Team Udayavani, Jul 16, 2024, 6:30 AM IST

PCB

ಕರಾಚಿ: ಚಾಂಪಿಯನ್ಸ್‌ ಟ್ರೋಫಿ ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲು ಭಾರತ ಕ್ರಿಕೆಟ್‌ ತಂಡಕ್ಕೆ ಪಾಕಿಸ್ಥಾನಕ್ಕೆ ಪ್ರಯಾಣಿಸಲು ಕೇಂದ್ರ ಸರಕಾರ ಅನುಮತಿ ನಿರಾಕರಿಸಿದ್ದರೆ, ಅದಕ್ಕೆ ಲಿಖೀತ ದಾಖಲೆ ನೀಡಿ ಎಂದು ಪಿಸಿಬಿ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ ಯನ್ನು (ಬಿಸಿಸಿಐ) ಕೇಳಿರುವುದಾಗಿ ವರದಿಯಾಗಿದೆ.

ಭದ್ರತೆಯ ಕಾರಣದಿಂದಾಗಿ, ಮುಂದಿನ ವರ್ಷ ಪಾಕಿಸ್ಥಾನದಲ್ಲಿ ನಡೆಯಲಿರುವ ಏಕ ದಿನ ಚಾಂಪಿಯನ್ಸ್‌ ಟ್ರೋಫಿ ಪಂದ್ಯಾವಳಿಗೆ ತಂಡ ವನ್ನು ಕಳುಹಿಸಲು ಸಾಧ್ಯವಿಲ್ಲ ಎಂದು ಬಿಸಿಸಿಐ ಮೂಲಗಳು ತಿಳಿಸಿದ್ದವು. ಈ ಹಿನ್ನೆಲೆಯಲ್ಲಿ ಪಿಸಿಬಿ, ಸರಕಾರದ ಲಿಖೀತ ದಾಖಲೆ ನೀಡುವಂತೆ ಬಿಸಿಸಿಐಯನ್ನು ಕೇಳಿದೆ ಎನ್ನಲಾಗಿದೆ.

ಒಂದು ವೇಳೆ ಭಾರತ ಸರಕಾರ ಅನುಮತಿ ನಿರಾಕರಿಸಿದ್ದರೆ, ಅದು ಲಿಖೀತ ರೂಪದಲ್ಲಿ ಇರ ಬೇಕಾದುದು ಕಡ್ಡಾಯ. ಹೀಗಾಗಿ, ಅನುಮತಿ ನಿರಾಕರಣೆಯ ಲಿಖೀತ ಪತ್ರವನ್ನು ಬಿಸಿಸಿಐ ಕೂಡಲೇ ಐಸಿಸಿಗೆ ನೀಡಬೇಕು ಎಂದು ಪಿಸಿಬಿ ತಿಳಿಸಿದೆ.

ಮುಂದಿನ ವರ್ಷ ಫೆಬ್ರವರಿ-ಮಾರ್ಚ್‌ನಲ್ಲಿ ಟೂರ್ನಿಯನ್ನು ನಡೆಸಲು ಉದ್ದೇಶಿಸಲಾಗಿದೆ. ಹೀಗಾಗಿ ಪಾಕಿಸ್ಥಾನಕ್ಕೆ ತನ್ನ ತಂಡವನ್ನು ಕಳುಹಿಸುವ ಬಗ್ಗೆ ಬಿಸಿಸಿಐ, ಟೂರ್ನಿಯ ಆರಂಭಕ್ಕೆ 5-6 ತಿಂಗಳ ಒಳಗಾಗಿ ಐಸಿಸಿಗೆ ಲಿಖೀತ ಮಾಹಿತಿ ನೀಡಬೇಕಾಗಿದೆ.

ಭಾರತ-ಪಾಕಿಸ್ಥಾನ ನಡುವೆ ರಾಜಕೀಯ ಭಿನ್ನಾಭಿಪ್ರಾಯ ಇರುವುದರಿಂದ ಪಾಕ್‌ಗೆ ಭಾರತ ತಂಡ ತೆರಳುವ ಸಾಧ್ಯತೆ ಇಲ್ಲ. ಇದರ ಬದಲು ಚಾಂಪಿಯನ್ಸ್‌ ಟ್ರೋಫಿ ವೇಳೆ ದುಬಾೖ ಅಥವಾ ಶ್ರೀಲಂಕಾದಲ್ಲಿ ಭಾರತದ ಪಂದ್ಯಗಳನ್ನು ನಡೆಸುವಂತೆ ಐಸಿಸಿಗೆ ಪತ್ರ ಬರೆಯಲು ಬಿಸಿಸಿಐ ಮುಂದಾಗಿರುವುದಾಗಿ ವರದಿಯಾಗಿತ್ತು. ಆದರೆ ಈ ಬಗ್ಗೆ ಬಿಸಿಸಿಐ ಅಥವಾ ಐಸಿಸಿ ಈವರೆಗೂ ಯಾವುದೇ ಸ್ಪಷ್ಟನೆ ನೀಡಿಲ್ಲ.

ವಿಶ್ವಕಪ್‌ ಬಹಿಷ್ಕಾರದ ಬೆದರಿಕೆ
ಚಾಂಪಿಯನ್ಸ್‌ ಟ್ರೋಫಿಗಾಗಿ ಭಾರತ ತಂಡ ಪಾಕಿಸ್ಥಾನಕ್ಕೆ ತೆರಳದಿದ್ದರೆ, ಭಾರತ-ಶ್ರೀಲಂಕಾ ಜಂಟಿಯಾಗಿ ನಡೆಸುವ 2026ರ ಟಿ20 ವಿಶ್ವಕಪ್‌ ಪಂದ್ಯಾವಳಿಯನ್ನು ಪಾಕಿಸ್ಥಾನ ಬಹಿಷ್ಕರಿಸುವುದಾಗಿ, ಪಿಸಿಬಿಯು ಐಸಿಸಿಗೆ ಬೆದರಿಕೆ ಒಡ್ಡುತ್ತಿದೆ ಎಂದು ಕೆಲವು ವರದಿಗಳು ಹೇಳಿವೆ.

ಟಾಪ್ ನ್ಯೂಸ್

1-census

Report; ಸೆಪ್ಟಂಬರ್‌ನಲ್ಲಿ ನಡೆವ ಜನಗಣತಿ ಜತೆಗೇ ಜಾತಿಗಣತಿ?

Mysuru

Mysuru Dasara: ಅರಮನೆ ತಲುಪಿದ ಗಜಪಡೆ : ಭವ್ಯ ಸ್ವಾಗತ

CM-Siddu

Misappropriation Fund: ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರಿಗೆ ಮತ್ತೊಂದು ದೂರು

Malpe ಮುಂದುವರಿದ ಗಾಳಿ; ಕಡಲಿಗೆ ಇಳಿಯದ ಬೋಟುಗಳು

Malpe ಮುಂದುವರಿದ ಗಾಳಿ; ಕಡಲಿಗೆ ಇಳಿಯದ ಬೋಟುಗಳು

Joshi-vijyebdra

Secret meeting: ಕೇಂದ್ರ ಸಚಿವ ಪ್ರಹ್ಲಾದ ಜೋಶಿ- ವಿಜಯೇಂದ್ರ ಗೌಪ್ಯ ಸಭೆ

Udupi ಗೀತಾರ್ಥ ಚಿಂತನೆ-15; ಭಗವದಿಚ್ಛೆಯೇ ಧರ್ಮಮೂಲ

Udupi ಗೀತಾರ್ಥ ಚಿಂತನೆ-15; ಭಗವದಿಚ್ಛೆಯೇ ಧರ್ಮಮೂಲ

Udupi ಶ್ರೀ ಕೃಷ್ಣಮಠದಲ್ಲಿ ವೈಭವದ ಲಡ್ಡುತ್ಸವ

Udupi ಶ್ರೀ ಕೃಷ್ಣಮಠದಲ್ಲಿ ವೈಭವದ ಲಡ್ಡುತ್ಸವ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-mmm

Mumbai ಹಾಫ್ ಮ್ಯಾರಥಾನ್‌: 20 ಸಾವಿರ ಸ್ಪರ್ಧಿಗಳು ಭಾಗಿ

1–2eweee

Test;ಇಂಗ್ಲೆಂಡ್‌ ಎದುರಿನ  ಪಂದ್ಯ: ಲಂಕೆಗೆ ಮ್ಯಾಥ್ಯೂಸ್‌ ಆಸರೆ

1-ssl

Sri Lanka-ನ್ಯೂಜಿಲ್ಯಾಂಡ್‌ ಟೆಸ್ಟ್‌: ಒಂದು ದಿನ ರೆಸ್ಟ್‌

1-aaa

Women’s ‘ಎ’ ಟೆಸ್ಟ್‌ :192ಕ್ಕೆ ಏರಿದ ಆಸೀಸ್‌ ಲೀಡ್‌

1-asdsadasd

T20 Cricket; ಪಾಲ್‌ ವಲ್ತಾಟಿ ಅಮೆರಿಕದಲ್ಲಿ ಕೋಚ್‌

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

1-ganesh

POP ವಿಗ್ರಹ ನಿಷೇಧ: ಬಿಗಿ ನಿಲುವು ಅಗತ್ಯ

1-mmm

Mumbai ಹಾಫ್ ಮ್ಯಾರಥಾನ್‌: 20 ಸಾವಿರ ಸ್ಪರ್ಧಿಗಳು ಭಾಗಿ

22

Kundapura: ಜೋಳ ನೀಡುವುದಾಗಿ 11.5 ಲಕ್ಷ ರೂ. ವಂಚನೆ: ದೂರು ದಾಖಲು

1-census

Report; ಸೆಪ್ಟಂಬರ್‌ನಲ್ಲಿ ನಡೆವ ಜನಗಣತಿ ಜತೆಗೇ ಜಾತಿಗಣತಿ?

BJP 2

Kashmir Elections:ಬಿಜೆಪಿ ಏಕಾಂಗಿ ಸ್ಪರ್ಧೆ, ಶೀಘ್ರ ಅಭ್ಯರ್ಥಿಗಳ ಪಟ್ಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.