![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Jul 29, 2022, 11:11 PM IST
ಬರ್ಮಿಂಗ್ಹ್ಯಾಮ್: ತನಗೆ ಭಾರತ ಒಲಿಂಪಿಕ್ ಸಂಸ್ಥೆಯ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ ಎಂದು ಕೆಲವು ದಿನಗಳ ಹಿಂದೆ ಆರೋಪಿಸಿದ್ದ ಬಾಕ್ಸರ್ ಲವ್ಲಿನಾ ಬೊರ್ಗೊಹೇನ್ ಈಗ ಇನ್ನೊಂದು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.
ಗುರುವಾರ ರಾತ್ರಿ ಕಾಮನ್ವೆಲ್ತ್ ಗೇಮ್ಸ್ ಉದ್ಘಾಟನ ಸಮಾರಂಭ ನಡೆಯುತ್ತಿದ್ದಾಗ, ಅರ್ಧದಿಂದಲೇ ಕ್ರೀಡಾಗ್ರಾಮಕ್ಕೆ ಮರಳಲು ತೀರ್ಮಾನಿಸಿದ್ದಾರೆ. ಆದರೆ ಮರಳಲು ಸೂಕ್ತ ವ್ಯವಸ್ಥೆಯಿಲ್ಲದೇ ಪರದಾಡಿದ್ದಾರೆ. ಲವ್ಲಿನಾ ಅವರ ಈ ನಡೆ ತಂಡದ ವ್ಯವಸ್ಥಾಪಕ ರಾಜೇಶ್ ಭಂಡಾರಿಯವರ ಸಿಟ್ಟಿಗೆ ಕಾರಣವಾಗಿದೆ.
ಮರುದಿನ ಬೆಳಗ್ಗೆ ಬೇಗ ಎದ್ದು ಅಭ್ಯಾಸ ನಡೆಸುವ ದೃಷ್ಟಿಯಿಂದ ಲವ್ಲಿನಾ ಮತ್ತು ಇನ್ನೊಬ್ಬ ಬಾಕ್ಸರ್ ಹುಸಮುದ್ದೀನ್ ಬೇಗ ಹಿಂದಿರುಗಲು ತೀರ್ಮಾನಿಸಿದ್ದರು. ಆದರೆ ಅವರಿಗೆ ಸಂಘಟಕರಿಂದ ಯಾವುದೇ ವಾಹನ ಸಿಗಲಿಲ್ಲ. ಉದ್ಘಾಟನೆ ಮುಗಿದ ಮೇಲಷ್ಟೇ ವಾಹನಗಳು ಲಭ್ಯವಿದ್ದವು. ಕೆಲ ಹೊತ್ತು ಅತಂತ್ರರಾಗಿ ಪರದಾಡಿದ ಅವರು “ಅಲೆಕ್ಸಾಂಡರ್ ಸ್ಟೇಡಿಯಂ’ನಿಂದ ಕ್ರೀಡಾಗ್ರಾಮಕ್ಕೆ ಬಸ್ನಲ್ಲಿ ಮರಳಿದ್ದಾರೆ.
ಪ್ರಶ್ನಾರ್ಹ ನಡೆ
ಇದು ಗೊಂದಲ ಸೃಷ್ಟಿಸಿದೆ. ತಮಗೆ ಬೇಕನಿಸಿದಾಗ ವಾಪಸ್ ಮರಳಲು ಒಂದೂ ವಾಹನ ಲಭ್ಯವಾಗದಿದ್ದದ್ದು ವಿವಾದಕ್ಕೆ ಕಾರಣವಾಗಿದೆ. ಹಾಗೆಯೇ ಆಟಗಾರ್ತಿಯರ ಈ ನಡೆಯೂ ಪ್ರಶ್ನಾರ್ಹವಾಗಿದೆ. ಇದನ್ನು ವ್ಯವಸ್ಥಾಪಕ ರಾಜೇಶ್ ಅವರು ನೇರವಾಗಿ ಪ್ರಶ್ನಿಸಿದ್ದಾರೆ. “ಒಂದು ವೇಳೆ ಬೆಳಗ್ಗೆ ಅಭ್ಯಾಸ ನಡೆಸಬೇಕು ಎಂದಿದ್ದರೆ ಅವರು ಉದ್ಘಾಟನೆಗೆ ಬರುವ ಅಗತ್ಯವಿರಲಿಲ್ಲ. ಬಹಳ ಮಂದಿ ಹೀಗೆಯೇ ಮಾಡಿದ್ದಾರೆ. ಬಂದ ಮೇಲೆ ಅರ್ಧಕ್ಕೆ ಮರಳಲು ವಾಹನದ ವ್ಯವಸ್ಥೆ ಇರಲಿಲ್ಲ’ ಎಂದು ರಾಜೇಶ್ ವಿವರಿಸಿದ್ದಾರೆ.
ಕೆಲವೇ ದಿನಗಳ ಹಿಂದೆ ತನ್ನ ಕೋಚ್ಗಳಿಗೆ ಕ್ರೀಡಾಗ್ರಾಮಕ್ಕೆ ಪ್ರವೇಶ ನೀಡದೇ ತೊಂದರೆ ನೀಡಲಾಗುತ್ತಿದೆ ಎಂದು ಒಲಿಂಪಿಕ್ಸ್ ಕಂಚು ವಿಜೇತೆ ಲವ್ಲಿನಾ ಆರೋಪಿಸಿದ್ದರು. ಕೂಡಲೇ ಅವರ ಕೋಚ್ಗೆ ಪ್ರವೇಶ ನೀಡಲಾಗಿತ್ತು. ಇದೀಗ ಇನ್ನೊಂದು ಸಣ್ಣ ವಿಷಯ ದೊಡ್ಡದಾಗಿದೆ!
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್ ವಿವಾದ
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Team India: ಪಂತ್-ರಾಹುಲ್ ವಿಚಾರದಲ್ಲಿ ಗಂಭೀರ್- ಅಗರ್ಕರ್ ನಡುವೆ ಭಿನ್ನಾಭಿಪ್ರಾಯ
IPL 2025: ಮತ್ತೊಬ್ಬ ಅಫ್ಘಾನಿ ಬೌಲರ್ ಬದಲು ಮುಂಬೈ ಇಂಡಿಯನ್ಸ್ ತಂಡದ ಸೇರಿದ ಮುಜೀಬ್
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.