LSG; ಗೋಯೆಂಕಾ ಭೇಟಿಯಾದ ರಾಹುಲ್;‌ ಯಾವುದೇ ಭರವಸೆ ನೀಡದ ಎಲ್‌ಎಸ್‌ಜಿ ಮಾಲಕ


Team Udayavani, Aug 27, 2024, 4:14 PM IST

LSG; ಗೋಯೆಂಕಾ ಭೇಟಿಯಾದ ರಾಹುಲ್;‌ ಯಾವುದೇ ಭರವಸೆ ನೀಡದ ಎಲ್‌ಎಸ್‌ಜಿ ಮಾಲಕ

ಮುಂಬೈ: ದಿನಕಳೆದಂತೆ ಐಪಿಎಲ್‌ ಮೆಗಾ ಹರಾಜಿನ (IPL Mega Auction) ಬಗ್ಗೆ ಕುತೂಹಲ ಹೆಚ್ಚಾಗುತ್ತಲೇ ಹೋಗುತ್ತಿದೆ. ಯಾವೆಲ್ಲಾ ಆಟಗಾರರನ್ನು ತಂಡಗಳು ಉಳಿಸಿಕೊಳ್ಳಲಿದೆ, ಯಾರನ್ನೆಲ್ಲಾ ಕೈಬಿಡಲಿದೆ ಎನ್ನುವ ಕುತೂಹಲ, ಊಹಾಪೋಹಗಳು ಹೆಚ್ಚುತ್ತಿದೆ. ಸ್ಟಾರ್‌ ಆಟಗಾರ, ಲಕ್ನೋ ಸೂಪರ್‌ ಜೈಂಟ್ಸ್‌ (Lucknow Super Giants) ತಂಡದ ನಾಯಕ ಕೆಎಲ್‌ ರಾಹುಲ್‌ (KL Rahul) ಅವರು ತಂಡ ತೊರೆಯಲಿದ್ದಾರೆ ಎಂಬ ವರದಿ ಕಳೆದ ಸೀಸನ್‌ ನಿಂದಲೇ ಬರುತ್ತಿದೆ. ಇದೀಗ ಸ್ವತಃ ರಾಹುಲ್‌ ಅದಕ್ಕೆ ಅಂತ್ಯ ಹಾಡುವ ಪ್ರಯತ್ನ ಮಾಡುತ್ತಿದ್ದಾರೆ.

ಕಳೆದ ಸೀಸನ್‌ ನ ಕೊನೆಯಲ್ಲಿ ಎಲ್‌ಎಸ್‌ ಜಿ ಹೀನಾಯವಾಗಿ ಪಂದ್ಯ ಸೋತ ಬಳಿಕ ಫ್ರಾಂಚೈಸಿ ಮಾಲಕ ಸಂಜೀವ್‌ ಗೋಯೆಂಕಾ (Sanjiv Goenka) ಅವರು ರಾಹುಲ್‌ ರನ್ನು ತರಾಟೆಗೆ ತೆಗೆದುಕೊಂಡಿದ್ದರು. ಮೈದಾನದಲ್ಲಿ ಕ್ಯಾಮರಾ ಕಣ್ಣಿಗೆ ಸೆರೆಯಾಗುವಂತೆ ಈ ಪ್ರಸಂಗ ನಡೆದಿತ್ತು. ಹೀಗಾಗಿ ರಾಹುಲ್‌ ತಂಡ ತೊರೆಯಲಿದ್ದಾರೆ ಎನ್ನಲಾಗಿತ್ತು.

ಆದರೆ ಇದೀಗ ಸ್ವತಃ ರಾಹುಲ್‌ ಮತ್ತು ಸಂಜೀವ್‌ ಗೋಯೆಂಕಾ ಭೇಟಿಯಾಗಿ ಈ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.

ಕ್ರಿಕ್‌ ಬಝ್‌ ವರದಿಯ ಪ್ರಕಾರ, ಮಾಲಿಕ ಮತ್ತು ಕಪ್ತಾನನ ನಡುವೆ ಸಭೆಯು ಒಂದು ಗಂಟೆಗಳ ಕಾಲ ನಡೆದಿದೆ. ಅಲಿಪೋರ್‌ ನಲ್ಲಿ ನಡೆದ ಈ ಮೀಟಿಂಗ್‌ ನಲ್ಲಿ ಮುಂದಿನ ಸೀಸನ್‌ ಗಾಗಿ ರಾಹುಲ್ ಮತ್ತು ಇತತ ಉಳಿಸಿಕೊಳ್ಳುವ ಆಟಗಾರರ ಬಗ್ಗೆ ಚರ್ಚೆ ನಡೆಸಲಾಗಿದೆ.

ಲಕ್ನೋ ತಂಡದಲ್ಲಿಯೇ ಮುಂದುವರಿಯುವ ಬಗ್ಗೆ ರಾಹುಲ್‌ ಇಂಗಿತ ವ್ಯಕ್ತಪಡಿಸಿದ್ದಾರೆ. ಆದರೆ ಫ್ರಾಂಚೈಸಿ ಇದರ ಬಗ್ಗೆ ಯಾವುದೇ ಖಚಿತ ಉತ್ತರ ನೀಡಿಲ್ಲ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.

“ಹೌದು, ರಾಹುಲ್ ಕೋಲ್ಕತ್ತಾಗೆ ಬಂದು ಆರ್‌ಪಿಜಿ ಕೇಂದ್ರ ಕಚೇರಿಯಲ್ಲಿ ಡಾ ಗೋಯೆಂಕಾ ಅವರನ್ನು ಭೇಟಿ ಮಾಡಿದರು. ತಾನು ತಂಡದಲ್ಲಿ ಉಳಿದುಕೊಳ್ಳಲು ಬಯಸುತ್ತಾರೆ ಎಂದು ರಾಹುಲ್‌ ಸ್ಪಷ್ಟವಾಗಿ ಹೇಳಿದ್ದಾರೆ. ಆದಾಗ್ಯೂ, ಬಿಸಿಸಿಐ ರೆಟೆನ್ಶನ್‌ ನೀತಿಯನ್ನು ಪ್ರಕಟ ಮಾಡುವವರೆಗೆ, ಎಲ್‌ಎಸ್‌ಜಿ ಆಡಳಿತವು ತಮ್ಮ ಯೋಜನೆಗಳನ್ನು ಹೊರಹಾಕಲು ಬಯಸುವುದಿಲ್ಲ” ಎಂದು ಐಪಿಎಲ್ ಆಡಳಿತ ಮಂಡಳಿಯ ಸದಸ್ಯರೊಬ್ಬರ ಹೇಳಿಕೆಯನ್ನು ಪಿಟಿಐ ವರದಿ ಮಾಡಿದೆ.

ಮೆಂಟರ್‌ ಜಾಗಕ್ಕೆ ಜಹೀರ್?‌

ಕ್ರಿಕ್‌ ಬಝ್‌ ವರದಿಯ ಪ್ರಕಾರ ಟೀಂ ಇಂಡಿಯಾದ ಮಾಜಿ ಬೌಲರ್‌ ಜಹೀರ್‌ ಖಾನ್‌ ಅವರು ಲಕ್ನೋ ಸೂಪರ್‌ ಜೈಂಟ್ಸ್‌ ಕೋಚಿಂಗ್‌ ಪ್ಯಾನೆಲ್‌ ಸೇರಲಿದ್ದಾರೆ. ಎಲ್‌ ಎಸ್‌ ಜಿ ತಂಡದ ಮೆಂಟರ್‌ ಮತ್ತು ಬೌಲಿಂಗ್‌ ಕೋಚ್‌ ಆಗಿ ಜಹೀರ್‌ ಸೇರುವ ಸಾಧ್ಯತೆಯಿದೆ ಎಂದು ವರದಿ ಹೇಳಿದೆ.

ಎಲ್‌ ಎಸ್‌ ಜಿ ಕೋಚಿಂಗ್‌ ಯುನಿಟ್‌ ನಲ್ಲಿ ಜಸ್ಟಿನ್‌ ಲ್ಯಾಂಗರ್‌, ಆಡಂ ವೋಗ್ಸ್‌, ಲ್ಯಾನ್ಸ್‌ ಕ್ಲೂಸ್ನರ್‌ ಮತ್ತು ಜಾಂಟಿ ರೋಡ್ಸ್‌ ಅವರಿದ್ದಾರೆ.

ಟಾಪ್ ನ್ಯೂಸ್

Mysore-Somanna

New Train: ಶೀಘ್ರವೇ ರಾಜ್ಯಕ್ಕೆ ಮತ್ತೊಂದು ವಂದೇ ಭಾರತ್‌ ರೈಲು: ಕೇಂದ್ರ ಸಚಿವ ಸೋಮಣ್ಣ

Sharana-Patil

Security: ಮಹಿಳಾ ಆರೋಗ್ಯ ಸಿಬ್ಬಂದಿ ಭದ್ರತೆಗೆ ಎಐ ವ್ಯವಸ್ಥೆ: ಸಚಿವ ಶರಣ ಪ್ರಕಾಶ ಪಾಟೀಲ್‌

-Hindu-yuvasene

Ganesh Procession: ಮಂಗಳೂರು ಗಣೇಶೋತ್ಸವ ಸಂಪನ್ನ

Udupi-Vidyesh

Udupi: ಶ್ರೀವಿದ್ಯೇಶತೀರ್ಥರ ಕೃತಿ ಕೃಷ್ಣನಿಗೆ ಅರ್ಪಣೆ ಐತಿಹಾಸಿಕ

Father-Muller

Father Muller: ಔಷಧ ವಿಜ್ಞಾನ ಮಹಾವಿದ್ಯಾಲಯ ಬಿ ಫಾರ್ಮ ಕೋರ್ಸ್‌ಗೆ ಅನುಮತಿ

Kaljiga-1

Film Release: ಬಹುನಿರೀಕ್ಷಿತ “ಕಲ್ಜಿಗ’ ಸಿನೆಮಾ ಬಿಡುಗಡೆ

Kateel

Temple: ಕೊನೆಯ ಶ್ರಾವಣ ಶುಕ್ರವಾರ ಕಟೀಲಿಗೆ ಅಪಾರ ಭಕ್ತರ ಭೇಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

indian-flag

South Asia ಆ್ಯತ್ಲೆಟಿಕ್ಸ್‌ : ರಿಲೇಯಲ್ಲಿ ಭಾರತಕ್ಕೆ ಚಿನ್ನ

missing

Paralympics ಕಾಂಗೋ ಆ್ಯತ್ಲೀಟ್‌ಗಳು ನಾಪತ್ತೆ: ತನಿಖೆ ಆರಂಭ

1-reeee

Duleep Trophy:ಇಂಡಿಯಾ ‘ಎ’ಗೆ ಮುನ್ನಡೆ

1–eewewqe

Paralympic ಚಿನ್ನವನ್ನು ಮೋದಿಗೆ ಅರ್ಪಿಸಿದ ಅಂತಿಲ್‌

1-der

National Swimming: ಕರ್ನಾಟಕ ಚಾಂಪಿಯನ್‌

MUST WATCH

udayavani youtube

ಉಡುಪಿ ಕೃಷ್ಣ ಮಠದಲ್ಲಿರುವ ಸುಬ್ರಹ್ಮಣ್ಯ ಸನ್ನಿಧಿ

udayavani youtube

ಕೃಷ್ಣ ಮಠದ ಗಣಪತಿ ವಿಸರ್ಜನೆ ವೇಳೆ ತಾಸೆಯ ಪೆಟ್ಟಿಗೆ ಕುಣಿದು ಕುಪ್ಪಳಿಸಿದ ಭಕ್ತರು|

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

ಹೊಸ ಸೇರ್ಪಡೆ

Mysore-Somanna

New Train: ಶೀಘ್ರವೇ ರಾಜ್ಯಕ್ಕೆ ಮತ್ತೊಂದು ವಂದೇ ಭಾರತ್‌ ರೈಲು: ಕೇಂದ್ರ ಸಚಿವ ಸೋಮಣ್ಣ

Sharana-Patil

Security: ಮಹಿಳಾ ಆರೋಗ್ಯ ಸಿಬ್ಬಂದಿ ಭದ್ರತೆಗೆ ಎಐ ವ್ಯವಸ್ಥೆ: ಸಚಿವ ಶರಣ ಪ್ರಕಾಶ ಪಾಟೀಲ್‌

Katapadi

Katapadi: ಸ್ಟೀಲ್‌ ನಟ್‌ಗಳ‌ ಈಶ ವಿಶ್ವದಾಖಲೆಗೆ

-Hindu-yuvasene

Ganesh Procession: ಮಂಗಳೂರು ಗಣೇಶೋತ್ಸವ ಸಂಪನ್ನ

Udupi-Vidyesh

Udupi: ಶ್ರೀವಿದ್ಯೇಶತೀರ್ಥರ ಕೃತಿ ಕೃಷ್ಣನಿಗೆ ಅರ್ಪಣೆ ಐತಿಹಾಸಿಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.