![mohan bhagwat](https://www.udayavani.com/wp-content/uploads/2025/02/mohan-bhagwat-415x249.jpg)
![mohan bhagwat](https://www.udayavani.com/wp-content/uploads/2025/02/mohan-bhagwat-415x249.jpg)
Team Udayavani, Aug 19, 2023, 11:20 PM IST
ಬೆಂಗಳೂರು: “ಮಹಾರಾಜ ಟ್ರೋಫಿ ಕೆಎಸ್ಸಿಎ ಟಿ20′ ಲೀಗ್ನಲ್ಲಿ ಬೆಂಗಳೂರು ಬ್ಲಾಸ್ಟರ್ ತಂಡದ ಸೋಲಿನ ಆಟ ಮುಂದುವರಿದಿದೆ. ಮಳೆಯಿಂದ ಅಡಚಣೆಗೊಳಗಾದ ಶನಿವಾರದ ಮುಖಾಮುಖೀಯಲ್ಲಿ ಅದು ಮೈಸೂರು ವಾರಿಯರ್ ವಿರುದ್ಧ ವಿಜೆಡಿ ನಿಯಮದಂತೆ 33 ರನ್ನುಗಳ ಆಘಾತಕ್ಕೆ ಸಿಲುಕಿತು. ಇದರೊಂದಿಗೆ ಬೆಂಗಳೂರು ಎಲ್ಲ 5 ಪಂದ್ಯಗಳಲ್ಲೂ ಸೋಲನುಭವಿಸಿದಂತಾಯಿತು.
ಮೊದಲು ಬ್ಯಾಟಿಂಗ್ ನಡೆಸಿದ ಮೈಸೂರು ವಾರಿಯರ್ 7 ವಿಕೆಟಿಗೆ 185 ರನ್ ಗಳಿಸಿದರೆ, ಬೆಂಗಳೂರು ಬ್ಲಾಸ್ಟರ್ 11.1 ಓವರ್ಗಳ ಆಟ ಮುಗಿಸಿದಾಗ ಮಳೆ ಸುರಿಯಿತು. ಮುಂದೆ ಆಡಲಾಗಲಿಲ್ಲ. ಆಗ ಮಾಯಾಂಕ್ ಅಗರ್ವಾಲ್ ಪಡೆ 5 ವಿಕೆಟಿಗೆ 81 ರನ್ ಮಾಡಿತ್ತು.
ಮೈಸೂರು ವಾರಿಯರ್ ಪರ ಆರಂಭಕಾರ ಕಾರ್ತಿಕ್ ಸಿ.ಎ. 62 ರನ್ ಬಾರಿಸಿ ಮಿಂಚಿದರು (43 ಎಸೆತ, 7 ಬೌಂಡರಿ, 2 ಸಿಕ್ಸರ್). ಡೆತ್ ಓವರ್ಗಳಲ್ಲಿ ಮನೋಜ್ ಭಾಂಡಗೆ (12 ಎಸೆತಗಳಿಂದ 28 ರನ್) ಮತ್ತು ಜಗದೀಶ್ ಸುಚಿತ್ (14 ಎಸೆತಗಳಿಂದ ಅಜೇಯ 31 ರನ್) ಸಿಡಿದು ನಿಂತರು. ಇವರು 3.4 ಓವರ್ಗಳಿಂದ 54 ರನ್ ರಾಶಿ ಹಾಕಿದ್ದರಿಂದ ತಂಡದ ಮೊತ್ತ ಬೆಳೆಯಿತು. ಕರುಣ್ ನಾಯರ್ ನಾಯಕತ್ವದ ಮೈಸೂರು ತಂಡ 5 ಪಂದ್ಯಗಳಲ್ಲಿ ಸಾಧಿಸಿದ 3ನೇ ಜಯ ಇದಾಗಿದೆ.
ಚೇಸಿಂಗ್ ವೇಳೆ ಬೆಂಗಳೂರು ಬ್ಲಾಸ್ಟರ್ ತೀವ್ರ ಕುಸಿತಕ್ಕೆ ಸಿಲುಕಿತು. 23 ರನ್ನಿಗೆ 3 ವಿಕೆಟ್ ಬಿತ್ತು. ಕೀಪರ್ ಸೂರಜ್ ಅಹುಜ 31 ರನ್ ಹೊಡೆದರು.
ಶಿವಮೊಗ್ಗ ವಿರುದ್ಧ ಹುಬ್ಬಳ್ಳಿಗೆ ಜಯ
ದ್ವಿತೀಯ ಪಂದ್ಯದಲ್ಲಿ ಶಿವಮೊಗ್ಗ ಲಯನ್ಸ್ ವಿರುದ್ಧ ಹುಬ್ಬಳ್ಳಿ ಟೈಗರ್ 8 ವಿಕೆಟ್ಗಳ ಗೆಲುವು ಸಾಧಿಸಿತು. ಮೊದಲು ಬ್ಯಾಟ್ ಮಾಡಿದ ಶಿವಮೊಗ್ಗ 8 ವಿಕೆಟ್ ನಷ್ಟಕ್ಕೆ ಕೇವಲ 138 ರನ್ ಗಳಿಸಿತು. ಹುಬ್ಬಳ್ಳಿ 16.4 ಓವರ್ಗಳಲ್ಲಿ ಎರಡೇ ವಿಕೆಟಿಗೆ 139 ರನ್ ಗಳಿಸಿತು. ಹುಬ್ಬಳ್ಳಿ ಪರ ಲವ್ನೀತ್ ಸಿಸೋಡಿಯ 69 ರನ್ ಬಾರಿಸಿದರು.
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Team India: ಪಂತ್-ರಾಹುಲ್ ವಿಚಾರದಲ್ಲಿ ಗಂಭೀರ್- ಅಗರ್ಕರ್ ನಡುವೆ ಭಿನ್ನಾಭಿಪ್ರಾಯ
IPL 2025: ಮತ್ತೊಬ್ಬ ಅಫ್ಘಾನಿ ಬೌಲರ್ ಬದಲು ಮುಂಬೈ ಇಂಡಿಯನ್ಸ್ ತಂಡದ ಸೇರಿದ ಮುಜೀಬ್
ODI Ranking: ನಂ.1 ಸ್ಥಾನದಲ್ಲೇ ಉಳಿದ ಭಾರತ, 4ಕ್ಕೆ ಜಿಗಿದ ನ್ಯೂಜಿಲೆಂಡ್
Team India: ʼನಾವು ನಟರಲ್ಲ..ʼ: ಟೀಂ ಇಂಡಿಯಾದ ಸೂಪರ್ಸ್ಟಾರ್ ಸಂಸ್ಕೃತಿ ಟೀಕಿಸಿದ ಅಶ್ವಿನ್
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Pariksha Pe Charcha: ಸ್ಮಾರ್ಟ್ ಫೋನ್ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
You seem to have an Ad Blocker on.
To continue reading, please turn it off or whitelist Udayavani.