![belagavi](https://www.udayavani.com/wp-content/uploads/2024/07/belagavi-415x249.jpg)
Maharaja Trophy ಕ್ರಿಕೆಟ್: ಹುಬ್ಬಳ್ಳಿಗೆ ಅಗ್ರಸ್ಥಾನದ ಗೌರವ
Team Udayavani, Aug 26, 2023, 11:50 PM IST
![1-asda](https://www.udayavani.com/wp-content/uploads/2023/08/1-asda-620x409.jpg)
ಬೆಂಗಳೂರು: ಹುಬ್ಬಳ್ಳಿ ಟೈಗರ್ ಅಗ್ರಸ್ಥಾನದ ಗೌರವದೊಂದಿಗೆ “ಮಹಾರಾಜ ಟ್ರೋಫಿ’ ಕೆಎಸ್ಸಿಎ ಟಿ20 ಪಂದ್ಯಾವಳಿಯ ಸೆಮಿಫೈನಲ್ಗೆ ಲಗ್ಗೆ ಇರಿಸಿದೆ. ಶನಿವಾರದ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಅದು ಮಂಗಳೂರು ಡ್ರ್ಯಾಗನ್ಸ್ ವಿರುದ್ಧ 5 ವಿಕೆಟ್ಗಳ ಜಯ ಸಾಧಿಸಿತು.
ಮೊದಲು ಬ್ಯಾಟಿಂಗ್ ನಡೆಸಿದ ಮಂಗಳೂರು ಡ್ರ್ಯಾಗನ್ಸ್ 9 ವಿಕೆಟಿಗೆ 167 ರನ್ ಹೊಡೆದರೆ, ಹುಬ್ಬಳ್ಳಿ ಟೈಗರ್ 18.2 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 170 ರನ್ ಬಾರಿಸಿತು. ಇದು 10 ಪಂದ್ಯಗಳಲ್ಲಿ ಹುಬ್ಬಳ್ಳಿ ಸಾಧಿಸಿದ 8ನೇ ಗೆಲುವು. ಮಂಗಳೂರು 9 ಪಂದ್ಯಗಳಲ್ಲಿ 5ನೇ ಸೋಲನುಭವಿಸಿ 4ನೇ ಸ್ಥಾನದಲ್ಲಿದೆ.
ಚೇಸಿಂಗ್ ವೇಳೆ ಹುಬ್ಬಳ್ಳಿ ಸರದಿಯಲ್ಲಿ ಮಿಂಚಿದವರೆಂದರೆ ಆರಂಭಕಾರ ಮೊಹಮ್ಮದ್ ತಾಹಾ ಮತ್ತು ನಾಯಕ ಮನೀಷ್ ಪಾಂಡೆ. ಇಬ್ಬರೂ ಅರ್ಧ ಶತಕ ಬಾರಿಸಿದರು. ತಾಹಾ ಗಳಿಕೆ 23 ಎಸೆತಗಳಿಂದ 51 ರನ್ (6 ಬೌಂಡರಿ, 3 ಸಿಕ್ಸರ್). ಪಾಂಡೆ 33 ಎಸೆತ ಎದುರಿಸಿ ಅಜೇಯ 56 ರನ್ ಬಾರಿಸಿದರು (1 ಬೌಂಡರಿ, 5 ಸಿಕ್ಸರ್).
ಮಂಗಳೂರು ತಂಡದ ಅಗ್ರ ಕ್ರಮಾಂಕದ ಬ್ಯಾಟಿಂಗ್ ಉತ್ತಮ ಮಟ್ಟದಲ್ಲಿತ್ತು. ಆದರೆ ಇನ್ನಷ್ಟು ಬಿರುಸು ಪಡೆಯಬೇಕಿತ್ತು. ಶರತ್ ಬಿ.ಆರ್. 40, ರೋಹನ್ ಪಾಟೀಲ್ 34, ಸಿದ್ಧಾರ್ಥ್ 53 ರನ್ ಕೊಡುಗೆಯಿತ್ತರು. 17 ಓವರ್ ಮುಕ್ತಾಯಕ್ಕೆ ಸ್ಕೋರ್ 2ಕ್ಕೆ 151 ರನ್ ಆಗಿತ್ತು. ಹುಬ್ಬಳ್ಳಿ ತಂಡದ ಮಧ್ಯಮ ವೇಗಿ ಮನ್ವಂತ್ ಕುಮಾರ್ 5 ವಿಕೆಟ್ ಉಡಾಯಿಸಿ ಮೆರೆದರು.
ಟಾಪ್ ನ್ಯೂಸ್
![belagavi](https://www.udayavani.com/wp-content/uploads/2024/07/belagavi-415x249.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![Potchefstroom ಪವರ್ ಲಿಫ್ಟಿಂಗ್ ಚಾಂಪಿಯನ್ ಶಿಪ್ ನಲ್ಲಿ ಚಿನ್ನ ಗೆದ್ದ ಬೋಳ ಅಕ್ಷತಾ ಪೂಜಾರಿ](https://www.udayavani.com/wp-content/uploads/2024/07/akshata-150x83.jpg)
Potchefstroom ಪವರ್ ಲಿಫ್ಟಿಂಗ್ ಚಾಂಪಿಯನ್ ಶಿಪ್ ನಲ್ಲಿ ಚಿನ್ನ ಗೆದ್ದ ಬೋಳ ಅಕ್ಷತಾ ಪೂಜಾರಿ
![john-cena](https://www.udayavani.com/wp-content/uploads/2024/07/john-cena-150x83.jpg)
John Cena; ರಸ್ಲಿಂಗ್ ವೃತ್ತಿಜೀವನಕ್ಕೆ ವಿದಾಯ ಘೋಷಿಸಿದ WWE ಸೂಪರ್ ಸ್ಟಾರ್ ಜಾನ್ ಸೀನ
![India W vs Sa W: ಗೆಲ್ಲಬೇಕಾದ ಒತ್ತಡದಲ್ಲಿ ಕೌರ್ ಬಳಗ](https://www.udayavani.com/wp-content/uploads/2024/07/18-1-150x90.jpg)
India W vs Sa W: ಗೆಲ್ಲಬೇಕಾದ ಒತ್ತಡದಲ್ಲಿ ಕೌರ್ ಬಳಗ
![Champions Trophy: ಚಾಂಪಿಯನ್ಸ್ ಟ್ರೋಫಿಗಾಗಿ ಪಾಕ್ಗೆ ಭಾರತ ಹೋಗಲ್ಲ; ವರದಿ](https://www.udayavani.com/wp-content/uploads/2024/07/16-2-150x90.jpg)
Champions Trophy: ಚಾಂಪಿಯನ್ಸ್ ಟ್ರೋಫಿಗಾಗಿ ಪಾಕ್ಗೆ ಭಾರತ ಹೋಗಲ್ಲ; ವರದಿ
![Wimbledon: ಜ್ವೆರೇವ್, ಶೆಲ್ಟನ್ ಮುನ್ನಡೆ](https://www.udayavani.com/wp-content/uploads/2024/07/20-150x90.jpg)
Wimbledon: ಜ್ವೆರೇವ್, ಶೆಲ್ಟನ್ ಮುನ್ನಡೆ
MUST WATCH
ಹೊಸ ಸೇರ್ಪಡೆ
![belagavi](https://www.udayavani.com/wp-content/uploads/2024/07/belagavi-150x90.jpg)
Belagavi; ಮಳೆಯ ನಡುವೆಯೂ ವಿವಾದಿತ ಕಳಸಾ ನಾಲಾ ಪ್ರದೇಶಕ್ಕೆ ಅಧಿಕಾರಿಗಳ ಭೇಟಿ
![Kalaburagi; ವ್ಯಕ್ತಿತ್ವ ನಿರ್ಮಾಣ ದಾಸ ಸಾಹಿತ್ಯದ ಧ್ಯೇಯ: ಡಾ.ಅಗ್ನಿಹೋತ್ರಿ](https://www.udayavani.com/wp-content/uploads/2024/07/sahitya-150x83.jpg)
Kalaburagi; ವ್ಯಕ್ತಿತ್ವ ನಿರ್ಮಾಣ ದಾಸ ಸಾಹಿತ್ಯದ ಧ್ಯೇಯ: ಡಾ.ಅಗ್ನಿಹೋತ್ರಿ
![6-kalburgi](https://www.udayavani.com/wp-content/uploads/2024/07/6-kalburgi-150x90.jpg)
Kalaburagi: ವೈದ್ಯಕೀಯ ದ್ರವ ಆಮ್ಲಜನಕ ಸೋರಿಕೆ ಬಗ್ಗೆ ಡಿ.ಎಚ್.ಓ ಸ್ಪಷ್ಟನೆ
![5-vitla](https://www.udayavani.com/wp-content/uploads/2024/07/5-vitla-150x90.jpg)
Vitla: ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಬಿದ್ದ ಕಾರು
![Hit & run: ದಂಪತಿಗೆ ಢಿಕ್ಕಿ ಹೊಡೆದ ಬಿಎಂಡಬ್ಲ್ಯು ಕಾರು; ಪತ್ನಿ ಸಾವು, ಪತಿಗೆ ಗಾಯ](https://www.udayavani.com/wp-content/uploads/2024/07/3-8-150x90.jpg)
Hit & run: ದಂಪತಿಗೆ ಢಿಕ್ಕಿ ಹೊಡೆದ ಬಿಎಂಡಬ್ಲ್ಯು ಕಾರು; ಪತ್ನಿ ಸಾವು, ಪತಿಗೆ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.