![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Aug 20, 2023, 11:44 PM IST
ಬೆಂಗಳೂರು: ಮಹಾರಾಜ ಟ್ರೋಫಿ ಕೆಎಸ್ಸಿಎ ಟಿ20 ಲೀಗ್ ಪಂದ್ಯಾವಳಿಯಲ್ಲಿ ಸತತ 5 ಜಯದೊಂದಿಗೆ ಮುನ್ನುಗ್ಗಿದ ಹುಬ್ಬಳ್ಳಿ ಟೈಗರ್ ಮೊದಲ ಸಲ ಸೋಲಿನ ಆಘಾತಕ್ಕೆ ಸಿಲುಕಿದೆ. ರವಿವಾರದ ಮುಖಾಮುಖೀಯಲ್ಲಿ ಅದು ಮೈಸೂರು ವಾರಿಯರ್ ಕೈಯಲ್ಲಿ 6 ವಿಕೆಟ್ಗಳ ಸೋಲನುಭವಿಸಿತು.
ಮೊದಲು ಬ್ಯಾಟಿಂಗ್ ನಡೆಸಿದ ಹುಬ್ಬಳ್ಳಿ, ಆರಂಭಕಾರ ಲವ್ನೀತ್ ಸಿಸೋಡಿಯಾ ಅವರ ಶತಕ ಸಾಹಸ ದಿಂದ 7 ವಿಕೆಟಿಗೆ 185 ರನ್ ಬಾರಿಸಿತು. ಜವಾಬಿತ್ತ ಮೈಸೂರು 18.5 ಓವರ್ಗಳಲ್ಲಿ 4 ವಿಕೆಟಿಗೆ 188 ರನ್ ಹೊಡೆದು ಜಯ ಸಾಧಿಸಿತು. ಇದು 5 ಪಂದ್ಯಗಳಲ್ಲಿ ಮೈಸೂರಿಗೆ ಒಲಿದ 4ನೇ ಜಯ.
ಪ್ರಚಂಡ ಬ್ಯಾಟಿಂಗ್ ಪ್ರದರ್ಶನ ವಿತ್ತ ಲವ್ನೀತ್ ಸಿಸೋಡಿಯಾ 62 ಎಸೆತಗಳಿಂದ 105 ರನ್ ಸಿಡಿಸಿ ಮೈಸೂರು ಬೌಲರ್ಗಳನ್ನು ಕಾಡಿದರು. ಅವರ ಬ್ಯಾಟಿಂಗ್ ಅಬ್ಬರದ ವೇಳೆ 7 ಸಿಕ್ಸರ್, 7 ಬೌಂಡರಿ ಸಿಡಿಯಲ್ಪಟ್ಟಿತು. ನಾಯಕ ಮನೀಷ್ ಪಾಂಡೆ 33 ರನ್ ಮಾಡಿದರು.
ಚೇಸಿಂಗ್ ವೇಳೆ ಮೈಸೂರು ವಾರಿಯರ್ ಆರಂಭಿಕರಾದ ರವಿ ಕುಮಾರ್ ಸಮರ್ಥ್ ಮತ್ತು ಅಜಿತ್ ಕಾರ್ತಿಕ್ ಗಟ್ಟಿಮುಟ್ಟಾದ ಬುನಾದಿ ನಿರ್ಮಿಸಿದರು. ಪವರ್ ಪ್ಲೇಯಲ್ಲಿ 68 ರನ್ ರಾಶಿ ಹಾಕಿದರು. ಸಮರ್ಥ್ 42 ಎಸೆತಗಳಿಂದ ಸರ್ವಾಧಿಕ 73 ರನ್ ಹೊಡೆದರೆ (6 ಬೌಂಡರಿ, 3 ಸಿಕ್ಸರ್), ಅಜಿತ್ ಕಾರ್ತಿಕ್ 29 ರನ್ ಮಾಡಿದರು.
ನಾಯಕ ಕರುಣ್ ನಾಯರ್ ಕೂಡ ಹಿಂದುಳಿಯಲಿಲ್ಲ. 25 ಎಸೆತ ಎದುರಿಸಿ 41 ರನ್ ಕೊಡುಗೆ ಸಲ್ಲಿಸಿದರು (3 ಸಿಕ್ಸರ್, 1 ಬೌಂಡರಿ). 15ನೇ ಓವರ್ನಲ್ಲಿ ನಾಯರ್, ಲಂಕೇಶ್ ಮತ್ತು ಸಮರ್ಥ್ ವಿಕೆಟ್ ಒಟ್ಟೊಟ್ಟಿಗೆ ಬಿದ್ದಾಗ ಹುಬ್ಬಳ್ಳಿ 6ನೇ ಜಯದ ನಿರೀಕ್ಷೆಯಲ್ಲಿದ್ದುದು ಸುಳ್ಳಲ್ಲ. ಆದರೆ 5ನೇ ವಿಕೆಟಿಗೆ ಜತೆ ಗೂಡಿದ ಶೋಯಿಮ್ ಮೆನೇ ಜರ್ (ಅಜೇಯ 21) ಮತ್ತು ಶಿವಕು ಮಾರ್ ರಕ್ಷಿತ್ (ಅಜೇಯ 22) 4.1 ಓವರ್ಗಳಲ್ಲಿ 45 ರನ್ ಒಟ್ಟುಗೂಡಿಸಿ ಹುಬ್ಬಳ್ಳಿ ಮೊತ್ತವನ್ನು ಹಿಂದಿಕ್ಕಿದರು.
ಸಂಕ್ಷಿಪ್ತ ಸ್ಕೋರ್: ಹುಬ್ಬಳ್ಳಿ ಟೈಗರ್ -7 ವಿಕೆಟಿಗೆ 185 (ಲವ್ನೀತ್ ಸಿಸೋಡಿಯಾ 105, ಮನೀಷ್ ಪಾಂಡೆ 33, ಕಾರ್ತಿಕ್ ಸಿ.ಎ. 50ಕ್ಕೆ 4). ಮೈಸೂರು ವಾರಿಯರ್-18.5 ಓವರ್ಗಳಲ್ಲಿ 4 ವಿಕೆಟಿಗೆ 188 (ಆರ್. ಸಮರ್ಥ್ 73, ಕರುಣ್ ನಾಯರ್ 41, ಅಜಿತ್ ಕಾರ್ತಿಕ್ 29, ಶಿವಕುಮಾರ್ ರಕ್ಷಿತ್ ಔಟಾಗದೆ 22, ಶೋಯಿಬ್ ಮೆನೇಜರ್ ಔಟಾಗದೆ 21, ಪ್ರವೀಣ್ ದುಬೆ 38ಕ್ಕೆ 3).
ಪಂದ್ಯಶ್ರೇಷ್ಠ: ಆರ್. ಸಮರ್ಥ್.
ಮಂಗಳೂರು ಪರಾಭವ
ದ್ವಿತೀಯ ಪಂದ್ಯದಲ್ಲಿ ಮಂಗ ಳೂರು ಡ್ರ್ಯಾಗನ್ಸ್ ಹಾಲಿ ಚಾಂಪಿ ಯನ್ ಗುಲ್ಬರ್ಗ ಮಿಸ್ಟಿಕ್ಸ್ ವಿರುದ್ಧ 5 ವಿಕೆಟ್ ಸೋಲನುಭವಿಸಿತು. ಬ್ಯಾಟಿಂಗ್ ವೈಫಲ್ಯ ಕಂಡ ಮಂಗಳೂರು 9 ವಿಕೆಟಿಗೆ ಕೇವಲ 120 ರನ್ ಗಳಿಸಿದರೆ, ಗುಲ್ಬರ್ಗ 17.1 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 121 ರನ್ ಬಾರಿಸಿತು.
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Team India: ಪಂತ್-ರಾಹುಲ್ ವಿಚಾರದಲ್ಲಿ ಗಂಭೀರ್- ಅಗರ್ಕರ್ ನಡುವೆ ಭಿನ್ನಾಭಿಪ್ರಾಯ
IPL 2025: ಮತ್ತೊಬ್ಬ ಅಫ್ಘಾನಿ ಬೌಲರ್ ಬದಲು ಮುಂಬೈ ಇಂಡಿಯನ್ಸ್ ತಂಡದ ಸೇರಿದ ಮುಜೀಬ್
ODI Ranking: ನಂ.1 ಸ್ಥಾನದಲ್ಲೇ ಉಳಿದ ಭಾರತ, 4ಕ್ಕೆ ಜಿಗಿದ ನ್ಯೂಜಿಲೆಂಡ್
Team India: ʼನಾವು ನಟರಲ್ಲ..ʼ: ಟೀಂ ಇಂಡಿಯಾದ ಸೂಪರ್ಸ್ಟಾರ್ ಸಂಸ್ಕೃತಿ ಟೀಕಿಸಿದ ಅಶ್ವಿನ್
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
Udayavani-MIC ನಮ್ಮ ಸಂತೆ:ಮಣ್ಣಿನಿಂದ ಮಾಡಿದ ನಾನಾ ಉತ್ಪನ್ನ
You seem to have an Ad Blocker on.
To continue reading, please turn it off or whitelist Udayavani.