Maharaja Trophy:ಮಳೆ ಪಂದ್ಯದಲ್ಲಿ ಮಂಗಳೂರಿಗೆ ಸೋಲು
Team Udayavani, Aug 17, 2024, 12:26 AM IST
ಬೆಂಗಳೂರು: “ಮಹಾರಾಜ ಟ್ರೋಫಿ’ ಕ್ರಿಕೆಟ್ ಪಂದ್ಯಾವಳಿಗೆ ಮಳೆ ಕಾಟ ಮುಂದುವರಿದಿದೆ. ಶುಕ್ರವಾರದ ಮೊದಲ “ಮಳೆ ಪಂದ್ಯ’ದಲ್ಲಿ ಹುಬ್ಬಳ್ಳಿ ಟೈಗರ್ ವಿಜೆಡಿ ನಿಯಮದಂತೆ ಮಂಗಳೂರು ಡ್ರ್ಯಾಗನ್ಸ್ಗೆ 15 ರನ್ನುಗಳ ಸೋಲುಣಿಸಿತು.
16 ಓವರ್ಗಳಿಗೆ ಇಳಿಸಲ್ಪಟ್ಟ ಪಂದ್ಯ ದಲ್ಲಿ ಮಂಗಳೂರು 7 ವಿಕೆಟಿಗೆ 143 ರನ್ ಗಳಿಸಿತು. ಹುಬ್ಬಳ್ಳಿಗೆ 7 ಓವರ್ಗಳಲ್ಲಿ 80 ರನ್ ಗುರಿ ನಿಗದಿಯಾಯಿತು. ಅದು 5.1 ಓವರ್ಗಳಲ್ಲಿ ಒಂದು ವಿಕೆಟಿಗೆ 69 ರನ್ ಮಾಡಿದಾಗ ಮತ್ತೆ ಮಳೆ ಸುರಿದ ಕಾರಣ ಪಂದ್ಯ ಮುಂದುವರಿಯಲಿಲ್ಲ. ಈ ಹಂತದಲ್ಲಿ ಹುಬ್ಬಳ್ಳಿ ಟೈಗರ್ 15 ರನ್ ಮುನ್ನಡೆಯಲ್ಲಿತ್ತು.
ಹುಬ್ಬಳ್ಳಿ ಪರ ನಾಯಕ ಮನೀಷ್ ಪಾಂಡೆ ಅಜೇಯ 24, ತಿಪ್ಪಾ ರೆಡ್ಡಿ ಅಜೇಯ 19 ರನ್ ಮಾಡಿದರು. ಮಂಗಳೂರು ತಂಡದ ಅಗ್ರ ಕ್ರಮಾಂಕದ ಬ್ಯಾಟರ್ ಉತ್ತಮ ಪ್ರದರ್ಶನವಿತ್ತರು. ಸಿದ್ಧಾರ್ಥ್ 44, ನಿಕಿನ್ ಜೋಸ್ 33, ರೋಹನ್ ಪಾಟೀಲ್ 24 ಮತ್ತು ಮೈಕಲ್ ನೊರೋನ್ಹಾ 23 ರನ್ ಮಾಡಿದರು. 30ಕ್ಕೆ 3 ವಿಕೆಟ್ ಉರುಳಿಸಿದ ಎಲ್.ಆರ್. ಕುಮಾರ್ ಹುಬ್ಬಳ್ಳಿಯ ಯಶಸ್ವಿ ಬೌಲರ್.
ಮೈಸೂರಿಗೆ ಜಯ
ಗುರುವಾರ ರಾತ್ರಿಯ ಮೈಸೂರು ವಾರಿಯರ್-ಶಿವಮೊಗ್ಗ ಲಯನ್ಸ್ ನಡುವಿನ ಪಂದ್ಯದ ಫಲಿತಾಂಶವೂ ವಿಜೆಡಿ ನಿಯಮದಂತೆ ನಿರ್ಧಾರಗೊಂಡಿತು. ಇದನ್ನು ಮೈಸೂರು 7 ರನ್ನುಗಳಿಂದ ಜಯಿಸಿತು. ಮೈಸೂರು 8 ವಿಕೆಟಿಗೆ 159 ರನ್ ಗಳಿಸಿದರೆ, ಶಿವಮೊಗ್ಗ 9 ಓವರ್ಗಳಲ್ಲಿ 5 ವಿಕೆಟಿಗೆ 80 ರನ್ ಮಾಡಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
INDvsBAN: ಕುಸಿದ ಭಾರತಕ್ಕೆ ಆಸರೆಯಾದ ಅಶ್ವಿನ್, ಜಡೇಜಾ; ಶತಕ ಬಾರಿಸಿದ ಲೋಕಲ್ ಬಾಯ್
INDvsBAN: ”ಈತ ಭಾರತದ ಬಾಬರ್ ಅಜಂ..”: ಟೀಂ ಇಂಡಿಯಾ ಆಟಗಾರನಿಗೆ ನೆಟ್ಟಿಗರ ತರಾಟೆ
Cricket: ಲಂಕಾ ಕ್ರಿಕೆಟಿಗನನ್ನು 20 ವರ್ಷಗಳ ಕಾಲ ಬ್ಯಾನ್ ಮಾಡಿದ ಕ್ರಿಕೆಟ್ ಆಸ್ಟ್ರೇಲಿಯಾ
Ricky Ponting: ಡೆಲ್ಲಿಯಿಂದ ಪಂಜಾಬ್ ಗೆ ಬಂದ ರಿಕಿ ಪಾಂಟಿಂಗ್
Test Series: ಭಾರತ-ಬಾಂಗ್ಲಾ ತಂಡಗಳಿಗೆ ರಿಯಲ್ ಟೆಸ್ಟ್
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.