![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Nov 24, 2023, 12:04 AM IST
ಮಣಿಪಾಲ: ರಾಜ್ಯಮಟ್ಟದ ಅಂಧ ಮಹಿಳೆಯರ ಟಿ-10 ಕ್ರಿಕೆಟ್ ಪಂದ್ಯಾಟವು ನ. 29 ಮತ್ತು 30ರಂದು ಮಾಹೆ ವಿ.ವಿ.ಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಇದೇ ವೇಳೆ ರಾಜ್ಯ ತಂಡದ ಆಯ್ಕೆ ಪ್ರಕ್ರಿಯೆ ಜರಗಲಿದೆ ಎಂದು ಸಹ ಕುಲಾಧಿಪತಿ ಡಾ| ಎಚ್.ಎಸ್.ಬಲ್ಲಾಳ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಮಾಹೆ ವಿ.ವಿ., ಸಮರ್ಥನಂ ಟ್ರಸ್ಟ್ ಫಾರ್ ದಿ ಡಿಸೇಬಲ್ಡ್, ಅಗ್ರಜ ಫೌಂಡೇಶನ್ ಮತ್ತು ಕರ್ನಾಟಕ ಅಂಧರ ಕ್ರಿಕೆಟ್ ಅಸೋಸಿಯೇಶನ್ ಸಹಯೋಗದಲ್ಲಿ ಈ ಕ್ರಿಕೆಟ್ ಪಂದ್ಯಾಟ ನಡೆಯಲಿದೆ. ರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸುವ ರಾಜ್ಯ ತಂಡದ ಆಯ್ಕೆ ಪ್ರಕ್ರಿಯೆ ಇಲ್ಲಿ ನಡೆಯಲಿದೆ ಎಂದರು.
ಕುಲಪತಿ ಲೆ| ಜ| ಡಾ| ಎಂ.ಡಿ. ವೆಂಕಟೇಶ್ ಮಾತನಾಡಿ, ಮಾಹೆ ವಿ.ವಿ.ಯು ಸಾಮಾಜಿಕ ಬದ್ಧತೆಯಡಿ ಆಗಮಿಸುವ ಕ್ರೀಡಾಳುಗಳಿಗೆ ಆಹಾರ, ವಸತಿ, ಸಮವಸ್ತ್ರ, ಶೂ ಸಹಿತ ವಿವಿಧ ಸವಲತ್ತು ನೀಡಲಿದೆ. ಹಾಗೆಯೇ ಹ್ಯಾಕಥಾನ್ ಕೂಡ ಆಯೋಜಿಸಲಿದ್ದೇವೆ ಎಂದರು.
ಅಸೋಸಿಯೇಶನ್ ಫಾರ್ ದಿ ಬ್ಲೆ„ಂಡ್ ಆಫ್ ಇಂಡಿಯಾ (ಸಿಎಬಿಐ) ಅಧ್ಯಕ್ಷ ಡಾ| ಮಹಾಂತೇಶ್ ಜಿ. ಕಿವಾದಾಸಣ್ಣವರ್ ಮಾತನಾಡಿ, ಕಾರವಾರ ಹಾಗೂ ಮೈಸೂರಿನ ತಲಾ ಒಂದು ತಂಡ ಮತ್ತು ಬೆಂಗಳೂರು ಸಮರ್ಥನಂ, ದೀಪಾ ಅಕಾಡೆಮಿಯಿಂದ ತಲಾ 1 ತಂಡ ಹೀಗೆ ನಾಲ್ಕು ತಂಡಗಳ 56 ಕ್ರೀಡಾಪಟುಗಳು ಆಗಮಿಸಲಿದ್ದಾರೆ. ಪೂರ್ಣ ಅಂಧರು, ಸ್ವಲ್ಪ ಅಂಧತ್ವ ಹೀಗೆ ಮೂರು ವಿಭಾಗದಲ್ಲಿ ಆಯ್ಕೆ ನಡೆಯಲಿದೆ. ರಾಜ್ಯ ತಂಡಕ್ಕೆ 14 ಕ್ರೀಡಾಪಟುಗಳನ್ನು ಅವರ ಪ್ರದರ್ಶನದ ಆಧಾರದಲ್ಲಿ ಆಯ್ಕೆ ಮಾಡಲಿದ್ದೇವೆ. ರಾಷ್ಟ್ರೀಯ ತಂಡ ಆಯ್ಕೆ ಪ್ರಕ್ರಿಯೆಗೆ ದೇಶದ ವಿವಿಧ ರಾಜ್ಯಗಳ 16 ತಂಡಗಳು ಆಗಮಿಸಲಿವೆ ಎಂದರು.
ಸಹ ಕುಲಪತಿ ಡಾ| ಶರತ್ ಕುಮಾರ್ ರಾವ್, ಕುಲಸಚಿವ ಡಾ| ಗಿರಿಧರ ಕಿಣಿ, ಕ್ರೀಡಾ ಮಂಡಳಿ ಕಾರ್ಯದರ್ಶಿ ಡಾ| ವಿನೋದ್ ನಾಯಕ್, ಹರೀಶ ಕುಮಾರ್, ಶಿಖಾ ಶೆಟ್ಟಿ ಉಪಸ್ಥಿತರಿದ್ದರು.
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Team India: ಪಂತ್-ರಾಹುಲ್ ವಿಚಾರದಲ್ಲಿ ಗಂಭೀರ್- ಅಗರ್ಕರ್ ನಡುವೆ ಭಿನ್ನಾಭಿಪ್ರಾಯ
IPL 2025: ಮತ್ತೊಬ್ಬ ಅಫ್ಘಾನಿ ಬೌಲರ್ ಬದಲು ಮುಂಬೈ ಇಂಡಿಯನ್ಸ್ ತಂಡದ ಸೇರಿದ ಮುಜೀಬ್
ODI Ranking: ನಂ.1 ಸ್ಥಾನದಲ್ಲೇ ಉಳಿದ ಭಾರತ, 4ಕ್ಕೆ ಜಿಗಿದ ನ್ಯೂಜಿಲೆಂಡ್
Team India: ʼನಾವು ನಟರಲ್ಲ..ʼ: ಟೀಂ ಇಂಡಿಯಾದ ಸೂಪರ್ಸ್ಟಾರ್ ಸಂಸ್ಕೃತಿ ಟೀಕಿಸಿದ ಅಶ್ವಿನ್
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.