![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Feb 22, 2023, 8:15 AM IST
ಹೊಸದಿಲ್ಲಿ: ಭಾರತದ ಸ್ಪಿನ್ ದಾಳಿಯನ್ನು ಎದುರಿಸಲಾಗದೆ ಬೋರ್ಡರ್-ಗಾವಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಮೊದಲೆರಡೂ ಪಂದ್ಯಗಳಲ್ಲಿ ಆಸ್ಟ್ರೇಲಿಯ ಹೀನಾಯ ಸೋಲು ಕಂಡಿದೆ. ಮೂರೇ ದಿನಗಳಲ್ಲಿ ಶರಣಾಗತಿ ಸಾರಿದೆ. ಕಮಿನ್ಸ್ ಪಡೆಯ ಈ ಕಳಪೆ ಆಟಕ್ಕೆ ಕಾಂಗರೂ ನಾಡಿನ ಮಾಜಿಗಳು ತೀವ್ರ ಟೀಕೆ ವ್ಯಕ್ತಪಡಿಸಿದ್ದಾರೆ.
ಈ ನಡುವೆ, ತಂಡದ ನೆರವಿಗೆ ತಾನು ಸಿದ್ಧನಿದ್ದೇನೆ ಎಂಬುದಾಗಿ ಆಸೀಸ್ ಮಾಜಿ ಆರಂಭಕಾರ ಮ್ಯಾಥ್ಯೂ ಹೇಡನ್ ಹೇಳಿದ್ದಾರೆ.
“ಆಸ್ಟ್ರೇಲಿಯ ಆಟಗಾರರ ನೆರವಿಗೆ ನಾನು ಯಾವ ಸಂದರ್ಭದಲ್ಲೂ ಸಿದ್ಧನಿದ್ದೇನೆ. ಭಾರತದ ಸ್ಪಿನ್ನರ್ಗಳನ್ನು ನಿಭಾಯಿಸಲು, ಭಾರತದ ಪಿಚ್ಗಳ ಬಗ್ಗೆ ಮನವರಿಕೆ ಮಾಡಿಕೊಡಲು ನನ್ನಿಂದಾಗುವ ಸಹಾಯ ಮಾಡಬಲ್ಲೆ. ಭಾರತದ ವಾತಾವರಣದ ಬಗ್ಗೆ ನನಗೆ ಹೆಚ್ಚಿನ ಅರಿವು ಇರುವುದರಿಂದ ತಂಡಕ್ಕೆ ನೆರವಾಗಬಲ್ಲದು ಎಂಬ ನಂಬಿಕೆ ನನ್ನದು’ ಎಂದಿದ್ದಾರೆ ಮ್ಯಾಥ್ಯೂ ಹೇಡನ್.
“ರಾತ್ರಿ, ಹಗಲು ಎಂದು ಕಾಯುವ ಅಗತ್ಯವಿಲ್ಲ. ಯಾವ ಹೊತ್ತಿನಲ್ಲಾದರೂ ನಾನು ತಂಡದ ನೆರವಿಗೆ ನಿಲ್ಲಬಲ್ಲೆ. ಆಸೀಸ್ ಕ್ರಿಕೆಟಿಗರು ಯಾವುದೇ ವೇಳೆ ನನ್ನೊಡನೆ ಚರ್ಚಿಸಬಹುದು’ ಎಂದಿದ್ದಾರೆ. ಸರಣಿಯ ವೀಕ್ಷಕ ವಿವರಣೆ ನೀಡುತ್ತಿರುವ ಹೇಡನ್ ಸದ್ಯ ಭಾರತದಲ್ಲೇ ಇದ್ದಾರೆ.
ಮ್ಯಾಥ್ಯೂ ಹೇಡನ್ 2004ರ ಭಾರತ ಪ್ರವಾಸದ ವೇಳೆ ಬೋರ್ಡರ್-ಗಾವಸ್ಕರ್ ಟ್ರೋಫಿ ಗೆದ್ದ ಆಸ್ಟ್ರೇಲಿಯ ತಂಡದ ಸದಸ್ಯರಾಗಿದ್ದರು.
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Team India: ಪಂತ್-ರಾಹುಲ್ ವಿಚಾರದಲ್ಲಿ ಗಂಭೀರ್- ಅಗರ್ಕರ್ ನಡುವೆ ಭಿನ್ನಾಭಿಪ್ರಾಯ
IPL 2025: ಮತ್ತೊಬ್ಬ ಅಫ್ಘಾನಿ ಬೌಲರ್ ಬದಲು ಮುಂಬೈ ಇಂಡಿಯನ್ಸ್ ತಂಡದ ಸೇರಿದ ಮುಜೀಬ್
ODI Ranking: ನಂ.1 ಸ್ಥಾನದಲ್ಲೇ ಉಳಿದ ಭಾರತ, 4ಕ್ಕೆ ಜಿಗಿದ ನ್ಯೂಜಿಲೆಂಡ್
Team India: ʼನಾವು ನಟರಲ್ಲ..ʼ: ಟೀಂ ಇಂಡಿಯಾದ ಸೂಪರ್ಸ್ಟಾರ್ ಸಂಸ್ಕೃತಿ ಟೀಕಿಸಿದ ಅಶ್ವಿನ್
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
You seem to have an Ad Blocker on.
To continue reading, please turn it off or whitelist Udayavani.