ಪದಕಪಟ್ಟಿ: 1962ರ ಇತಿಹಾಸ ಪುನರಾವರ್ತನೆ ?


Team Udayavani, Aug 13, 2018, 6:10 AM IST

10asiad.jpg

ಹೊಸದಿಲ್ಲಿ: ಏಶ್ಯನ್‌ ಗೇಮ್ಸ್‌ನ ಆರಂಭಿಕ ಹಂತದಲ್ಲಿ ಭಾರತವು ಪದಕ ಪಟ್ಟಿಯಲ್ಲಿ ಉನ್ನನ ಸಾಧನೆ ಮಾಡುತ್ತಿತ್ತು. ಹೊಸದಿಲ್ಲಿಯಲ್ಲಿ ನಡೆದ ಉದ್ಘಾಟನಾ ಏಶ್ಯನ್‌ ಗೇಮ್ಸ್‌ನಲ್ಲಿ ಭಾರತ ದ್ವಿತೀಯ ಸ್ಥಾನ ಪಡೆದಿತ್ತು. ಜಪಾನ್‌ ಅಗ್ರಸ್ಥಾನ ಪಡೆದಿತ್ತು. ಜಕಾರ್ತದಲ್ಲಿ ನಡೆದ 1962ರ ಏಶ್ಯನ್‌ ಗೇಮ್ಸ್‌ನಲ್ಲಿ ಭಾರತ ಮೂರನೇ ಸ್ಥಾನ ಪಡೆದಿತ್ತು.

1980ರ ವರೆಗೆ ಭಾರತ ಸ್ಥಿರ ನಿರ್ವಹಣೆ ನೀಡುತ್ತ ಬಂದಿದ್ದು ಅಗ್ರ ಐದರೊಳಗಿನ ಸ್ಥಾನ ಅಲಂಕರಿಸುತ್ತಿತ್ತು. ಆದರೆ ಕ್ರೀಡೆಯಲ್ಲಿ ಸೂಪರ್‌ ಶಕ್ತಿಯಾಗಿ ಚೀನ ಮತ್ತು ಕೊರಿಯ ಉದಯಿಸಿದ ಬಳಿಕ ಮತ್ತು ಕಜಾಕ್‌ಸ್ಥಾನ, ಉಜ್ಬೆಕಿಸ್ಥಾನದಂತಹ ರಾಷ್ಟ್ರಗಳ ಸೇರ್ಪಡೆಯಾದ ಬಳಿಕ ಭಾರತ ತನ್ನ ಅಗ್ರ ಐದರೊಳಗಿನ ಸ್ಥಾನ ಕಳೆದುಕೊಳ್ಳುತ್ತ ಬಂತು. 

ಕಳೆದೆರಡು ದಶಕದಲ್ಲಿ ಉತ್ತಮ ಆಟ
1990ರ ಬೀಜಿಂಗ್‌ ಗೇಮ್ಸ್‌ನಲ್ಲಿ ಭಾರತ ನಿರ್ವಹಣೆ ನಿಕೃಷ್ಟ ವಾಗಿತ್ತು. ಮೊದಲ ಬಾರಿ ಅಗ್ರ ಹತ್ತರೊಳಗಿನ ಸ್ಥಾನ ಪಡೆಯಲು ವಿಫ‌ಲವಾಗಿತ್ತು. ಭಾರತ ಈ ಗೇಮ್ಸ್‌ನಲ್ಲಿ ಕಬಡ್ಡಿಯಲ್ಲಿ ಮಾತ್ರ ಚಿನ್ನ ಜಯಿಸಿತ್ತು. ಆ ಬಳಿಕ ಕಳೆದ ಎರಡು ದಶಕದಲ್ಲಿ ಭಾರತ ಏಶ್ಯನ್‌ ಗೇಮ್ಸ್‌ನಲ್ಲಿ ಉತ್ತಮ ನಿರ್ವಹಣೆ ನೀಡುತ್ತ ಬಂದಿದೆ.

ಗ್ವಾಂಗ್‌ಝೂ: ಸರ್ವಶ್ರೇಷ್ಠ ನಿರ್ವಹಣೆ
ಕಳೆದ ಮೂರು ದಶಕದಲ್ಲಿ ಪದಕಪಟ್ಟಿಯಲ್ಲಿ ಭಾರತದ ಸಾಧನೆ ಆರರಿಂದ ಎಂಟನೇ ಸ್ಥಾನದ ನಡುವೆ ಇತ್ತು. 2010ರ ಗ್ವಾಂಗ್‌ಝೂ ಗೇಮ್ಸ್‌ನಲ್ಲಿ ಭಾರತ ಸರ್ವಶ್ರೇಷ್ಠ ನಿರ್ವಹಣೆ ನೀಡಿತ್ತು. ಒಟ್ಟಾರೆ ಪದಕ ಪಟ್ಟಿಯಲ್ಲಿ ಆರನೇ ಸ್ಥಾನ ಪಡೆದ ಭಾರತ 14 ಚಿನ್ನ ಸಹಿತ ಒಟ್ಟು 65 ಪದಕ ಗೆದ್ದ ಸಾಧನೆ ಮಾಡಿತ್ತು. ಇಂಚಿಯಾನ್‌ನಲ್ಲಿ ನಡೆದ 2014ರ ಗೇಮ್ಸ್‌ನಲ್ಲಿ ಭಾರತ ಎಂಟನೇ ಸ್ಥಾನಕ್ಕೆ ಕುಸಿದಿತ್ತು. ಥಾçಲಂಡ್‌ ಮತ್ತು ಉತ್ತರ ಕೊರಿಯವು ಭಾರತಕ್ಕಿಂತ ಹೆಚ್ಚಿನ ಚಿನ್ನದ ಪದಕ ಗೆದ್ದ ಕಾರಣ ಭಾರತ ಎಂಟನೇ ಸ್ಥಾನಕ್ಕೆ ಕುಸಿಯಬೇಕಾಯಿತು. ಒಟ್ಟು ಪದಕ ಗಳಿಕೆಯಲ್ಲಿ ಭಾರತ ಈ ಎರಡು ದೇಶಗಳಿಗಿಂತ ಹೆಚ್ಚು ಪಡೆದಿತ್ತು.

ಆದರೆ ಈ ಎಲ್ಲ ರಾಷ್ಟ್ರಗಳಿಗೆ ಬಲವಾದ ಸ್ಪರ್ಧೆಯನ್ನು ಭಾರತ ನೀಡುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಯಾಕೆಂದರೆ ಕಳೆದ ಕೆಲವು ವರ್ಷಗಳಲ್ಲಿ ಭಾರತೀಯ ಆಟಗಾರರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನಾರ್ಹ ನಿರ್ವಹಣೆ ನೀಡುತ್ತಿದ್ದಾರೆ. 

ಶೂಟಿಂಗ್‌, ಆ್ಯತ್ಲೆಟಿಕ್ಸ್‌, ಬ್ಯಾಡ್ಮಿಂಟನ್‌, ಸ್ಕ್ವಾಷ್‌, ಟೆನಿಸ್‌, ಆರ್ಚರಿ ಮುಂತಾದ ಸ್ಪರ್ಧೆಗಳಲ್ಲಿ ಭಾರತ ಬಲಿಷ್ಠವಾಗಿದೆ ಮತ್ತು ವಿಶ್ವ ಖ್ಯಾತಿಯ ಆಟಗಾರರನ್ನು ಕೂಡ ಒಳಗೊಂಡಿದೆ.  

ಹಾಕಿ ಮತ್ತು ಕಬಡ್ಡಿಯಲ್ಲಿ ಭಾರತ ಚಿನ್ನ ಗೆಲ್ಲುವ ಫೇವರಿಟ್‌ ತಂಡವಾಗಿ ಕಣಕ್ಕೆ ಇಳಿಯುತ್ತಿದೆ. ಸಾಮರ್ಥ್ಯಕ್ಕೆ ತಕ್ಕ ರೀತಿಯಲ್ಲಿ ಭಾರತೀಯ ಆಟಗಾರರು ನಿರ್ವಹಣೆ ನೀಡಿದಲ್ಲಿ ಭಾರತ ಅಗ್ರ ಐದರೊಳಗಿನ ಸ್ಥಾನ ಪಡೆಯುವುದರಲ್ಲಿ ಸಂಶಯವಿಲ್ಲ.

2018ರ ಗೇಮ್ಸ್‌  ಹೇಗೆ ?
ವಿಶ್ವದ ಶ್ರೇಷ್ಠ ಮೂರು ಕ್ರೀಡಾ ದೇಶಗಳಲ್ಲಿ ಒಂದಾಗಿರುವ ಚೀನ 2018ರ ಏಶ್ಯನ್‌ ಗೇಮ್ಸ್‌ನ ಪದಕ ಪಟ್ಟಿಯಲ್ಲಿ ಮತ್ತೆ ಅಗ್ರಸ್ಥಾನ ಅಲಂಕರಿಸುವುದು ಖಚಿತ. ಈಜು, ಆ್ಯತ್ಲೆಟಿಕ್ಸ್‌, ಶೂಟಿಂಗ್‌, ಜಿಮ್ನಾಸ್ಟಿಕ್ಸ್‌, ಟೇಬಲ್‌ ಟೆನಿಸ್‌, ಬ್ಯಾಡ್ಮಿಂಟನ್‌, ವೇಟ್‌ಲಿಫ್ಟಿಂಗ್‌ ಸಹಿತ ಪ್ರಮುಖ ಕ್ರೀಡೆಗಳಲ್ಲಿ ಚೀನ ತಂಡದಲ್ಲಿ ಚಾಂಪಿಯನ್‌ ಆಟಗಾರರು ಇರುವುದು ಉನ್ನತ ಕ್ರೀಡಾ ಸಾಧನೆಗೆ ಕಾರಣವಾಗಿದೆ. ಎರಡನೇ ಮತ್ತು ಮೂರನೇ ಸ್ಥಾನಕ್ಕಾಗಿ ಜಪಾನ್‌ ಮತ್ತು ದಕ್ಷಿಣ ಕೊರಿಯ ದೇಶಗಳ ನಡುವೆ ತೀವ್ರ ಸ್ಪರ್ಧೆ ಸಾಗುವ ನಿರೀಕ್ಷೆಯಿದೆ. 

ಕಳೆದ ಗೇಮ್ಸ್‌ನಲ್ಲಿ ಕೊರಿಯ ದ್ವಿತೀಯ ಸ್ಥಾನ ಪಡೆದಿತ್ತು. ಆತಿಥ್ಯ ರಾಷ್ಟ್ರವಾದ ಕಾರಣ ಕೊರಿಯಕ್ಕೆ ತವರಿನ ಅಭಿಮಾನಿಗಳ ಬೆಂಬಲವೂ ಸಿಕ್ಕಿತ್ತು. ಆದರೆ ಈ ಬಾರಿ ಕೊರಿಯಕ್ಕೆ ತವರಿನ ಲಾಭವಿಲ್ಲ. ಹಾಗಾಗಿ ದ್ವಿತೀಯ ಸ್ಥಾನ ಉಳಿಸಿಕೊಳ್ಳುವುದು ಅವರಿಗೆ ಅಷ್ಟೊಂದು ಸುಲಭವಲ್ಲ.

ಭಾರತಕ್ಕೆ ಯಾವ ಸ್ಥಾನ
ಪದಕ ಪಟ್ಟಿಯಲ್ಲಿ ಅಗ್ರ ಮೂರರೊಳಗಿನ ಸ್ಥಾನ ಪಡೆಯುವುದು ಭಾರತಕ್ಕೆ ಕನಸಿನ ಮಾತಾಗಿದೆ. ಆದರೆ 4 ಮತ್ತು 5ನೇ ಸ್ಥಾನಕ್ಕಾಗಿ ಭಾರತ ಪ್ರಯತ್ನ ಪಡಬಹುದು. ಆದರೆ ಅದು ಪ್ರಮುಖ ದೇಶಗಳಾದ ಕಜಾಕ್‌ಸ್ಥಾನ, ಇರಾನ್‌, ಥಾçಲಂಡ್‌, ಉತ್ತರ ಕೊರಿಯ, ಕತಾರ್‌, ಚೈನೀಸ್‌ ತೈಪೆ, ಮಲೇಶ್ಯ, ಆತಿಥೇಯ ಇಂಡೋನೇಶ್ಯ ರಾಷ್ಟ್ರಗಳ ಸವಾಲನ್ನು ಎದುರಿಸಬೇಕಾಗಿದೆ. ಕಳೆದ ಎರಡು ಗೇಮ್ಸ್‌ನಲ್ಲಿ ಇರಾನ್‌ ಮತ್ತು ಕಜಾಕ್‌ಸ್ಥಾನ ಅನುಕ್ರಮವಾಗಿ 4 ಮತ್ತು 5ನೇ ಸ್ಥಾನ ಪಡೆದಿತ್ತು. ವೇಟ್‌ಲಿಫ್ಟಿಂಗ್‌, ಕುಸ್ತಿ, ಶೂಟಿಂಗ್‌ ಮುಂತಾದ ಕ್ರೀಡೆಗಳಲ್ಲಿ ಈ ಎರಡು ರಾಷ್ಟ್ರಗಳ ಆಟಗಾರರು ಉತ್ಕೃಷ್ಟ ನಿರ್ವಹಣೆ ನೀಡುತ್ತಿದ್ದಾರೆ. ಹಾಗಾಗಿ ಈ ಬಾರಿಯೂ ಆ ಸ್ಥಾನ ಉಳಿಸಿಕೊಳ್ಳಲು ಅವರು ಫೇವರಿಟ್‌ಗಳಾಗಿದ್ದಾರೆ.

ಏಶ್ಯನ್‌ ಗೇಮ್ಸ್‌ನಲ್ಲಿ ಭಾರತದ ಪದಕ ಸಾಧನೆ
ವರ್ಷ    ಸ್ಥಳ    ಚಿನ್ನ    ಬೆಳ್ಳಿ    ಕಂಚು    ಒಟ್ಟು     ಸ್ಥಾನ
1951    ಹೊಸದಿಲ್ಲಿ    15    16    20    51    ದ್ವಿತೀಯ
1954    ಮನಿಲಾ    4    4    5    13    ಐದನೇ
1958    ಟೋಕಿಯೊ    5    3    3    11    ಆರನೇ
1962    ಜಕಾರ್ತ    10    13    10    33    ಮೂರನೇ
1966    ಬ್ಯಾಂಕಾಂಕ್‌    7    4    11    22    ಐದನೇ
1970    ಬ್ಯಾಂಕಾಂಕ್‌    6    9    10    25    ಐದನೇ
1974    ಟೆಹ್ರಾನ್‌    4    12    12    28    ಏಳನೇ
1978    ಬ್ಯಾಂಕಾಂಕ್‌    11    11    6    28    ಆರನೇ
1982    ಹೊಸದಿಲ್ಲಿ    13    19    25    57    ಐದನೇ
1986    ಸೋಲ್‌    5    9    23    37    ಐದನೇ
1990    ಬೀಜಿಂಗ್‌    1    8    14    23    11ನೇ
1994    ಹಿರೋಶಿಮ    4    3    15    22    ಎಂಟನೇ
1998    ಬ್ಯಾಂಕಾಂಕ್‌    7    11    17    35    9ನೇ
2002    ಬೂಸಾನ್‌    10    12    13    35    ಎಂಟನೇ
2006    ದೋಹಾ    10    17    26    53    ಎಂಟನೇ
2010    ಗ್ವಾಂಗ್‌ಝೂ    14    17    34    65    ಆರನೇ
 

ಟಾಪ್ ನ್ಯೂಸ್

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

16

Pro Hockey: ಇಂಗ್ಲೆಂಡ್‌ ವಿರುದ್ಧ ಭಾರತ ವನಿತೆಯರಿಗೆ ಸೋಲು

WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್‌ ವಿವಾದ

WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್‌ ವಿವಾದ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Gambhir-Agarkar have differences of opinion on Pant-Rahul issue

Team India: ಪಂತ್-ರಾಹುಲ್‌ ವಿಚಾರದಲ್ಲಿ ಗಂಭೀರ್-‌ ಅಗರ್ಕರ್‌ ನಡುವೆ ಭಿನ್ನಾಭಿಪ್ರಾಯ

Mujeeb joins Mumbai Indians team in place of another Afghan bowler

‌IPL 2025: ಮತ್ತೊಬ್ಬ ಅಫ್ಘಾನಿ ಬೌಲರ್‌ ಬದಲು ಮುಂಬೈ ಇಂಡಿಯನ್ಸ್‌ ತಂಡದ ಸೇರಿದ ಮುಜೀಬ್

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.