![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Aug 26, 2024, 1:04 AM IST
ಮುಂಬಯಿ: ರವಿವಾರ ನಡೆದ “ಮುಂಬೈ ಹಾಫ್ ಮ್ಯಾರಥಾನ್’ನಲ್ಲಿ ಉತ್ತರಪ್ರದೇಶದ ಚಂದನ್ ಯಾದವ್ ಮತ್ತು ನಾಶಿಕ್ನ ರವಿನಾ ಗಾಯಕ್ವಾಡ್ ಚಾಂಪಿಯನ್ ಆಗಿದ್ದಾರೆ. ಇವರಿಬ್ಬರೂ ಕಾಲೇಜು ವಿದ್ಯಾರ್ಥಿಗಳೆಂಬುದು ವಿಶೇಷ. ಎನ್ಇಬಿ ನ್ಪೋರ್ಟ್ಸ್ ಆಯೋಜಿಸಿದ ಈ ಕೂಟದಲ್ಲಿ 20 ಸಾವಿರಕ್ಕೂ ಹೆಚ್ಚಿನ ಓಟಗಾರರು ಪಾಲ್ಗೊಂಡಿದ್ದರು. ಲೆಜೆಂಡ್ರಿ ಕ್ರಿಕೆಟಿಗ ಸಚಿನ್ ತೆಂಡುಲ್ಕರ್ ಸ್ಪರ್ಧೆಗೆ ಚಾಲನೆ ನೀಡಿದರು. ಬಳಿಕ ವಿಜೇತರಿಗೆ ಬಹುಮಾನವನ್ನೂ ನೀಡಿದರು.
ಪುರುಷರ ವಿಭಾಗದಲ್ಲಿ 21 ವರ್ಷದ ಚಂದನ್ ಯಾದವ್ 1 ಗಂಟೆ, 11.01 ನಿಮಿಷಗಳಲ್ಲಿ ದೂರವನ್ನು ಕ್ರಮಿಸಿ ಮೊದಲಿಗರಾದರು. ನಿತೀಶ್ ಕುಮಾರ್ ದ್ವಿತೀಯ (1:11.54 ನಿಮಿಷ) ಮತ್ತು ಪೀಯೂಷ್ ಮಸಾನೆ ತೃತೀಯ ಸ್ಥಾನಿಯಾದರು (1:13.20 ನಿಮಿಷ).
ವನಿತಾ ವಿಭಾಗದಲ್ಲಿ 19 ವರ್ಷದ ರವಿನಾ ಗಾಯಕ್ವಾಡ್ಗೆ ಇದು 21ಕೆ ವಿಭಾಗದ ಪದಾರ್ಪಣ ಸ್ಪರ್ಧೆಯಾಗಿತ್ತು. ಅವರು ಮೊದಲ ಯತ್ನದಲ್ಲೇ ಚಾಂಪಿಯನ್ ಆದರು. 1 ಗಂಟೆ, 27.43 ನಿಮಿಷದಲ್ಲಿ ದೂರವನ್ನು ಕ್ರಮಿಸಿದರು. ಸೆನೇಟ್ ಲಿಶಾರ್ಜ್ (1:29.41) ದ್ವಿತೀಯ, ರುಕ್ಮಿಣಿ ಭೌರೆ ತೃತೀಯ ಸ್ಥಾನ ಪಡೆದರು (1:31.23).
ದೃಷ್ಟಿಹೀನ ಓಟಗಾರರ ತಂಡವೊಂದು “ಗೈಡ್ ಇಂಡಿಯಾ ರನ್ನರ್’ ನೆರವಿನಿಂದ ಈ ಮ್ಯಾರಥಾನ್ನಲ್ಲಿ ಪಾಲ್ಗೊಂಡಿದ್ದು ವಿಶೇಷ. ಅಂಗವಿಕಲರು, ಗಾಲಿಕುರ್ಚಿ ಕ್ರೀಡಾಪಟುಗಳು, ಮಿತ್ರಾಯನ ಎನ್ಜಿಒದ 150 ಮಕ್ಕಳು ಕೂಡ ಭಾಗವಹಿಸಿದರು.
ಕ್ರೀಡೆ ಜೀವನ ವಿಧಾನ
ಈ ಸಂದರ್ಭದಲ್ಲಿ ಮಾತಾಡಿದ ಸಚಿನ್ ತೆಂಡುಲ್ಕರ್, “ಭಾರತೀಯರಾದ ನಾವು ಕ್ರೀಡೆಯನ್ನು ಪ್ರೀತಿಸುತ್ತೇವೆ. ಮಾನಸಿಕ ಹಾಗೂ ದೈಹಿಕ ಪ್ರಯೋಜನೆಗಳಿಗಾಗಿ ವಿವಿಧ ಕ್ರೀಡೆಗಳಲ್ಲಿ ಭಾಗವಹಿಸುವುದು ಮುಖ್ಯ. ಈ ಮೂಲಕ ಕ್ರೀಡೆಗಳನ್ನು ಜೀವನ ವಿಧಾನವಾಗಿ ಸ್ವೀಕರಿಸುವ ಸಮಯ ಇದಾಗಿದೆ. ಭಾರತದಾದ್ಯಂತ ಮ್ಯಾರಥಾನ್ ಪಾಲುಗಾರಿಕೆಯಲ್ಲಿ ಎನ್ಎಬಿ ಪಾಲುದಾರಿಗೆ ಯಶಸ್ಸನ್ನು ಕಾಣುತ್ತ ಬಂದಿದೆ’ ಎಂದರು.
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Team India: ಪಂತ್-ರಾಹುಲ್ ವಿಚಾರದಲ್ಲಿ ಗಂಭೀರ್- ಅಗರ್ಕರ್ ನಡುವೆ ಭಿನ್ನಾಭಿಪ್ರಾಯ
IPL 2025: ಮತ್ತೊಬ್ಬ ಅಫ್ಘಾನಿ ಬೌಲರ್ ಬದಲು ಮುಂಬೈ ಇಂಡಿಯನ್ಸ್ ತಂಡದ ಸೇರಿದ ಮುಜೀಬ್
ODI Ranking: ನಂ.1 ಸ್ಥಾನದಲ್ಲೇ ಉಳಿದ ಭಾರತ, 4ಕ್ಕೆ ಜಿಗಿದ ನ್ಯೂಜಿಲೆಂಡ್
Team India: ʼನಾವು ನಟರಲ್ಲ..ʼ: ಟೀಂ ಇಂಡಿಯಾದ ಸೂಪರ್ಸ್ಟಾರ್ ಸಂಸ್ಕೃತಿ ಟೀಕಿಸಿದ ಅಶ್ವಿನ್
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.