ಲಂಕಾಗೆ ಆಘಾತ: ಟಿ20 ವಿಶ್ವಕಪ್ ಆರಂಭಿಕ ಪಂದ್ಯದಲ್ಲೇ ನಮೀಬಿಯಾ ವಿರುದ್ಧ ಸೋಲು


Team Udayavani, Oct 16, 2022, 12:53 PM IST

ಲಂಕಾಗೆ ಆಘಾತ: ಟಿ20 ವಿಶ್ವಕಪ್ ಆರಂಭಿಕ ಪಂದ್ಯದಲ್ಲೇ ನಮೀಬಿಯಾ ವಿರುದ್ಧ ಸೋಲು

ಗೀಲಾಂಗ್: ಬಹುನಿರೀಕ್ಷಿತ ಐಸಿಸಿ ಟಿ20 ವಿಶ್ವಕಪ್ 2022 ಇಂದು ಆರಂಭವಾಗಿದೆ. ಗ್ರೂಪ್ ಹಂತದ ಪಂದ್ಯಗಳು ಈ ವಾರ ನಡೆಯುತ್ತಿದ್ದು, ಇಂದಿನ ಮೊದಲ ಪಂದ್ಯದಲ್ಲಿ ಶ್ರೀಲಂಕಾ ಮತ್ತು ನಮೀಬಿಯಾ ತಂಡಗಳು ಮುಖಾಮುಖಿಯಾಗಿದೆ. ಆದರೆ ಅಚ್ಚರಿಯೆಂಬಂತೆ ದ್ವೀಪ ರಾಷ್ಟ್ರ ಲಂಕಾ ವಿರುದ್ಧ ನಮೀಬಿಯಾ ಭರ್ಜರಿ ಜಯ ಸಾಧಿಸಿದೆ.

ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ನಮೀಬಿಯಾ ಏಳು ವಿಕೆಟ್ ನಷ್ಟಕ್ಕೆ 163 ರನ್ ಗಳಿಸಿದರೆ, ಉತ್ತರವಾಗಿ ಲಂಕಾ 19 ಓವರ್ ಗಳಲ್ಲಿ 108 ರನ್ ಗೆ ಆಲೌಟಾಯಿತು.

ಇಲ್ಲಿನ ಸೈಮಂಡ್ಸ್ ಸ್ಟೇಡಿಯಂನಲ್ಲಿ ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ನಮೀಬಿಯಾಗೆ ಲಂಕಾ ಬೌಲರ್ ಗಳು ಕಾಡಿದರು. ಸತತ ವಿಕೆಟ್ ಕಳೆದುಕೊಂಡ ನಮೀಬಿಯಾ ರನ್ ಗಳಿಸಲು ಪರದಾಡಿತು. 14.2 ಓವರ್ ಗಳಲ್ಲಿ ಆರು ವಿಕೆಟ್ ಕಳೆದುಕೊಂಡು ತಂಡ 93 ರನ್ ಮಾತ್ರ ಮಾಡಿತ್ತು. ಆದರೆ ನಂತರ ಜೊತೆಯಾದ ಜಾನ್ ಫ್ರಯ್ಲಿನ್ಕ್ ಮತ್ತು ಜೆಜೆ ಸ್ಮಿತ್ 70 ರನ್ ಜೊತೆಯಾಟವಾಡಿದರು. ಜಾನ್ ಫ್ರಯ್ಲಿನ್ಕ್ 28 ಎಸೆತಗಳಲ್ಲಿ 44 ರನ್ ಮಾಡಿದರೆ, 16 ಎಸೆತಗಳಲ್ಲಿ ಎರಡು ಸಿಕ್ಸರ್ ನೆರವಿನಿಂದ ಜೆಜೆ ಸ್ಮಿತ್ 31 ರನ್ ಚಚ್ಚಿದರು. ಲಂಕಾ ಪರ ಮಧುಶಾನ್ ಎರಡು ವಿಕೆಟ್ ಮತ್ತು, ತೀಕ್ಷಣ, ಚಮೀರಾ, ಕರುಣರತ್ಯೆ, ಹಸರಂಗ ತಲಾ ಒಂದು ವಿಕೆಟ್ ಪಡೆದರು.

ಗುರಿ ಬೆನ್ನತ್ತಿ ಲಂಕಾ 40 ರನ್ ಆಗುವಷ್ಟರಲ್ಲಿ ನಾಲ್ಕು ವಿಕೆಟ್ ಕಳೆದುಕೊಂಡಿತ್ತು. ನಮೀಬಿಯಾ ಬೌಲಿಂಗ್ ದಾಳಿಗೆ ಲಂಕಾ ಬ್ಯಾಟರ್ ಗಳು ಉತ್ತರಿಸಲು ಪರದಾಡಿದರು. ನಾಯಕ ಶನಕಾ 29 ರನ್ ಗಳಿಸಿದರೆ, ರಾಜಪಕ್ಸಾ 20 ರನ್ ಮಾಡಿದರು. ನಮೀಬಿಯಾ ಪರ ವೀಸೆ, ಬರ್ನಾರ್ಡ್, ಶಿಕೊಂಗೋ ಮತ್ತು ಜಾನ್ ಫ್ರಯ್ಲಿನ್ಕ್ ತಲಾ ಎರಡು ವಿಕೆಟ್ ಕಿತ್ತು ಮಿಂಚಿದರು. ಲಂಕಾ ತಂಡವು 108 ರನ್ ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 55 ರನ್ ಅಂತರದ ಸೋಲನುಭವಿಸಿತು.

ಟಾಪ್ ನ್ಯೂಸ್

Tax

Tax ಸ್ಟಾಂಡರ್ಡ್‌ ಡಿಡಕ್ಷನ್‌ ಒಂದು ಲಕ್ಷ ರೂ.ಗೆ ಏರಿಕೆ?

Goverment-school

Government Scheme; “ನಾವು- ಮನುಜರು’: ಶಾಲೆಗಳಲ್ಲಿ ವಾರಕ್ಕೆ 2 ಗಂಟೆ ಕಾರ್ಯಕ್ರಮ

Mangaluru ಜಮೀನು ಮಾರಾಟ ವಂಚನೆ: ವಕೀಲ ಸಹಿತ 14 ಮಂದಿ ವಿರುದ್ಧ ಪ್ರಕರಣ ದಾಖಲು

Mangaluru ಜಮೀನು ಮಾರಾಟ ವಂಚನೆ: ವಕೀಲ ಸಹಿತ 14 ಮಂದಿ ವಿರುದ್ಧ ಪ್ರಕರಣ ದಾಖಲು

Kasaragod ಅಪಾರ್ಟ್‌ಮೆಂಟ್‌ನಲ್ಲಿ ಮಹಿಳೆಯ ಸಾವು: ಕೊಲೆ ಪ್ರಕರಣ ದಾಖಲು

Kasaragod ಅಪಾರ್ಟ್‌ಮೆಂಟ್‌ನಲ್ಲಿ ಮಹಿಳೆಯ ಸಾವು: ಕೊಲೆ ಪ್ರಕರಣ ದಾಖಲು

Snake ಕುಂಬಳೆ: ನಾಗರ ಹಾವು ಕಡಿತ; ಮಹಿಳೆ ಸಾವು

Snake ಕುಂಬಳೆ: ನಾಗರ ಹಾವು ಕಡಿತ; ಮಹಿಳೆ ಸಾವು

Manipal ಷೇರು ಹೂಡಿಕೆ ಹೆಸರಲ್ಲಿ ವಂಚನೆ: ದೂರು ದಾಖಲು

Manipal ಷೇರು ಹೂಡಿಕೆ ಹೆಸರಲ್ಲಿ ವಂಚನೆ: ದೂರು ದಾಖಲು

Belve ಕೆನರಾ ಬ್ಯಾಂಕ್‌ ಪ್ರಬಂಧಕರಿಂದ ವಂಚನೆ: ದೂರು ದಾಖಲು

Belve ಕೆನರಾ ಬ್ಯಾಂಕ್‌ ಪ್ರಬಂಧಕರಿಂದ ವಂಚನೆ: ದೂರು ದಾಖಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

INdia-team

Team India: ಮುಂಬೈಯಲ್ಲಿ ಮುಗಿಲು ಮುಟ್ಟಿದ ಅಭಿಮಾನಿಗಳ ಸಂಭ್ರಮ!

1983ರ ಕಥೆ! ಅಂದು ಅವಮಾನದಿಂದ ಬಿಸಿಸಿಐಯನ್ನು ಕಾಪಾಡಿದ್ದು ಲತಾ ಮಂಗೇಶ್ಕರ್

1983ರ ಕಥೆ! ಅಂದು ಅವಮಾನದಿಂದ ಬಿಸಿಸಿಐಯನ್ನು ಕಾಪಾಡಿದ್ದು ಲತಾ ಮಂಗೇಶ್ಕರ್

1-sadsadas

Victory parade; ಮುಂಬೈ ನಲ್ಲಿ T20 ಚಾಂಪಿಯನ್ನರಿಗೆ ಸಂಭ್ರಮೋಲ್ಲಾಸದ ಸ್ವಾಗತ

Special tribute to Kohli-Rohit by Vistara airlines

Team India: ಕೊಹ್ಲಿ-ರೋಹಿತ್ ಗೆ ವಿಶೇಷ ಗೌರವ ನೀಡಿದ ವಿಸ್ತಾರ ವಿಮಾನ; ಇಲ್ಲಿದೆ ವಿವರ

Team India; ಹಾರ್ದಿಕ್ ಪಾಂಡ್ಯ ಬಳಿ ಕ್ಷಮೆಯಾಚಿಸಿದ ಮುಂಬೈ ಇಂಡಿಯನ್ಸ್ ಅಭಿಮಾನಿ

Team India; ಹಾರ್ದಿಕ್ ಪಾಂಡ್ಯ ಬಳಿ ಕ್ಷಮೆಯಾಚಿಸಿದ ಮುಂಬೈ ಇಂಡಿಯನ್ಸ್ ಅಭಿಮಾನಿ

MUST WATCH

udayavani youtube

ಹತ್ರಾಸ್‌ನಲ್ಲಿ ಸತ್ಸಂಗದ ವೇಳೆ ಕಾಲ್ತುಳಿತ ಸಾವಿನ ಸಂಖ್ಯೆ 121 ಕ್ಕೆ ಏರಿಕೆ

udayavani youtube

ಕರ್ನಾಟಕ ಪ್ರವಾಸೋದ್ಯಮದ ಕುರಿತು ರಾಜ್ಯಸಭೆಯಲ್ಲಿ ಸುಧಾಮೂರ್ತಿ ಹೇಳಿದ್ದೇನು

udayavani youtube

ಹದಗೆಟ್ಟ ರಸ್ತೆಯಲ್ಲಿ ಜೀವ ಕೈಯಲ್ಲಿ ಹಿಡಿದು ಓಡಾಡುವ ವಾಹನ ಸವಾರರು!|

udayavani youtube

ಎಕ್ರೆಗಟ್ಟಲೆ ಹಡಿಲು ಭೂಮಿಗೆ ಜೀವ ತುಂಬಿದ ರೈತ

udayavani youtube

ಶ್ರೀ ಕ್ಷೇ.ಧ.ಗ್ರಾ.ಯೋಜನೆ | ಅರಣ್ಯ ಸಚಿವರಿಂದ ದಶಲಕ್ಷ ಗಿಡಗಳ ನಾಟಿಗೆ ಚಾಲನೆ

ಹೊಸ ಸೇರ್ಪಡೆ

musk

Tesla; ಭಾರತದಲ್ಲಿ ಹೂಡಿಕೆ ಮಾಡಲು ಉದ್ಯಮಿ ಮಸ್ಕ್ ಹಿಂದೇಟು

rape

Hyderabad: ಮಹಿಳೆ ಮೇಲೆ ಕಾರಿನಲ್ಲಿ ರಾತ್ರಿಯಿಡೀ ಅತ್ಯಾಚಾರ

Tax

Tax ಸ್ಟಾಂಡರ್ಡ್‌ ಡಿಡಕ್ಷನ್‌ ಒಂದು ಲಕ್ಷ ರೂ.ಗೆ ಏರಿಕೆ?

Goverment-school

Government Scheme; “ನಾವು- ಮನುಜರು’: ಶಾಲೆಗಳಲ್ಲಿ ವಾರಕ್ಕೆ 2 ಗಂಟೆ ಕಾರ್ಯಕ್ರಮ

Mangaluru ಜಮೀನು ಮಾರಾಟ ವಂಚನೆ: ವಕೀಲ ಸಹಿತ 14 ಮಂದಿ ವಿರುದ್ಧ ಪ್ರಕರಣ ದಾಖಲು

Mangaluru ಜಮೀನು ಮಾರಾಟ ವಂಚನೆ: ವಕೀಲ ಸಹಿತ 14 ಮಂದಿ ವಿರುದ್ಧ ಪ್ರಕರಣ ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.