National Swimming: ಕರ್ನಾಟಕ ಚಾಂಪಿಯನ್
17 ಚಿನ್ನ ಸೇರಿದಂತೆ 33 ಪದಕ ಗೆದ್ದ ಕರ್ನಾಟಕ
Team Udayavani, Sep 13, 2024, 10:50 PM IST
ಮಂಗಳೂರು: ಭಾರತೀಯ ಈಜು ಒಕ್ಕೂಟ (SFI) ಹಾಗೂ ಕರ್ನಾಟಕ ಈಜು ಸಂಸ್ಥೆಯ ಆಶ್ರಯದಲ್ಲಿ ಮಂಗಳೂರಿನ ಎಮ್ಮೆ ಕೆರೆ ಅಂತಾರಾಷ್ಟ್ರೀಯ ಈಜುಕೊಳ ದಲ್ಲಿ ಆಯೋಜಿಸಲಾದ 4 ದಿನಗಳ 77ನೇ ರಾಷ್ಟ್ರೀಯ ಹಿರಿಯರ ಈಜು ಚಾಂಪಿಯನ್ಶಿಪ್ನಲ್ಲಿ ಕರ್ನಾ ಟಕ ತಂಡ ಅಗ್ರಸ್ಥಾನದೊಂದಿಗೆ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಕರ್ನಾಟಕ 17 ಚಿನ್ನದ ಪದಕ ಸಹಿತ ಒಟ್ಟು 33 ಪದಕಗಳನ್ನು ಜಯಿಸಿತು. 6 ಚಿನ್ನ ಸಹಿತ 22 ಪದಕ ಗೆದ್ದ ಮಹಾರಾಷ್ಟ್ರ ದ್ವಿತೀಯ, 19 ಪದಕ ಗೆದ್ದ ಆರ್ಎಸ್ಪಿಬಿ ತೃತೀಯ, 14 ಪದಕ ಗೆದ್ದಿರುವ ತಮಿಳುನಾಡು ನಾಲ್ಕನೇ ಸ್ಥಾನ ಪಡೆಯಿತು. ಉಳಿದಂತೆ ಎಸ್ಎಸ್ಸಿಬಿ 7, ತೆಲಂಗಾಣ ಮತ್ತು ಒಡಿಶಾ 6; ಬಿಹಾರ, ಪಶ್ಚಿಮ ಬಂಗಾಲ, ಆಂಧ್ರ ಪ್ರದೇಶ, ಹೊಸದಿಲ್ಲಿ ತಲಾ 3; ಪಂಜಾಬ್ ಮತ್ತು ರಾಜಸ್ಥಾನ 2, ಹರಿಯಾಣ, ಗುಜರಾತ್, ಜಾರ್ಖಂಡ್ ತಲಾ ಒಂದು ಪದಕ ಪಡೆದಿವೆ.
ಪುರುಷರ ವಿಭಾಗದಲ್ಲಿ ಕರ್ನಾಟಕದ ಅನೀಶ್ ಎಸ್. ಗೌಡ (4 ಚಿನ್ನ) ಹಾಗೂ ಮಹಿಳಾ ವಿಭಾಗದಲ್ಲಿ ಕರ್ನಾಟಕದವರೇ ಆದ ಹಾಶಿಕಾ ರಾಮಚಂದ್ರ (3 ಚಿನ್ನ, 1 ಬೆಳ್ಳಿ) ವೈಯುಕ್ತಿಕ ಚಾಪಿಯನ್ ಪಡೆದುಕೊಂಡಿದ್ದಾರೆ.
4×100 ಫ್ರೀಸ್ಟೆ çಲ್ ವಿಭಾಗದಲ್ಲಿ ಕರ್ನಾಟಕ ತಂಡ ದಾಖಲೆ ನಿರ್ಮಿಸಿದೆ. ಪೃಥ್ವಿ ಎಂ., ಕಾರ್ತಿಕೇಯನ್ ನಾಯರ್, ಆಕಾಶ್ ಮಣಿ ಹಾಗೂ ಶ್ರೀಹರಿ ನಟರಾಜ್ ಅವರು 3:28.09 ನಿಮಿಷದಲ್ಲಿ ಪೂರ್ಣಗೊಳಿಸುವ ಮೂಲಕ 2023ರ ತಮ್ಮದೇ ದಾಖಲೆಯನ್ನು ಹಿಂದಿಕ್ಕಿದರು.
ಪುರುಷರ 400 ಮೀ. ಮೆಡ್ಲೆ ವಿಭಾಗದಲ್ಲಿ ರಾಜಸ್ಥಾನದ ಯುಗ್ ಚೆಲನಿ 4:36.39 ನಿಮಿಷಗಳ ಸಾಧನೆಯೊಂದಿಗೆ ಪ್ರಥಮ ಸ್ಥಾನಿಯಾದರು. ಪುರುಷರ 200 ಮೀ. ಫ್ರೀಸ್ಟೈಲ್ ವಿಭಾಗದಲ್ಲಿ ಕರ್ನಾಟಕದ ಅನೀಶ್ ಎಸ್. ಗೌಡ ಪ್ರಥಮ ಸ್ಥಾನ (1:52.09) ಪಡೆದರು. 100 ಮೀ. ಬ್ರೆಸ್ಟ್ಸ್ಟ್ರೋಕ್ನಲ್ಲಿ ಕರ್ನಾಟಕದ ವಿದಿತ್ ಎಸ್. ಶಂಕರ್ ಪ್ರಥಮ (1:02.75) ಸ್ಥಾನ ಪಡೆದುಕೊಂಡಿದ್ದಾರೆ.
ಮಹಿಳೆಯರ 400 ಮೀ. ಮೆಡ್ಲೆಯಲ್ಲಿ ಕರ್ನಾಟಕದ ತಾನ್ಯಾ ಷಡಕ್ಷರ್ ಪ್ರಥಮ ಸ್ಥಾನಿಯಾದರು (5:08.10). ಮಹಿಳೆಯರ 200 ಮೀ. ಫ್ರಿಸ್ಟೈಲ್ನಲ್ಲಿ ಹಶಿಕಾ ರಾಮಚಂದ್ರ ಪ್ರಥಮ ಸ್ಥಾನ (2:06.49) ಅಲಂಕರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Yellapur: ರಸ್ತೆಯಲ್ಲಿ ಭಾರೀ ಗಾತ್ರದ ಹೊಂಡ; ನಿಯಂತ್ರಣ ತಪ್ಪಿ ಲಾರಿ ಪಲ್ಟಿ
Bantwala: ಮಸೀದಿಗೆ ತೆರಳಿದ್ದ ವೇಳೆ ಮನೆಗೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ನಗನಗದು ಕಳವು
Haveri; ಖಾಸಗಿ ಬಸ್ ಪಲ್ಟಿ: 15ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ
Davanagere; ಪ್ಯಾಲೇಸ್ತೀನ್ ಬಾವುಟದ ಸ್ಟಿಕ್ಕರ್ ಅಂಟಿಸಿಕೊಂಡವರ ವಿರುದ್ಧ ಪ್ರಕರಣ ದಾಖಲು
Belagavi; ಗಣಪತಿ ಮೂರ್ತಿ ವಿಸರ್ಜನೆ ವೇಳೆ ಮೂವರಿಗೆ ಚಾಕು ಇರಿತ!!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.