ಭಾರತ-ಆಸ್ಟ್ರೇಲಿಯ ಬಿಗ್‌ ಮ್ಯಾಚ್‌


Team Udayavani, Jan 14, 2018, 6:00 AM IST

U-19-IND-AUS.jpg

ಮೌಂಟ್‌ ಮಾಂಗನೂಯಿ: ಕಿರಿಯರ ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿಯ ಕಾವು ರವಿವಾರ ಒಮ್ಮೆಲೇ ಏರಲಿದೆ. ಕಾರಣ, ಅತಿ ಹೆಚ್ಚು 3 ಸಲ ಪ್ರಶಸ್ತಿ ಜಯಿಸಿದ, ಈ ಕೂಟದ ಹಾಟ್‌ ಫೇವರೆಟ್‌ ತಂಡಗಳಾದ ಭಾರತ ಮತ್ತು ಆಸ್ಟ್ರೇಲಿಯ ತಮ್ಮ ಮೊದಲ ಲೀಗ್‌ ಪಂದ್ಯದಲ್ಲಿ ಪರಸ್ಪರ ಎದುರಾಗಲಿವೆ. ಇದು ಕ್ರಿಕೆಟ್‌ ಪಂಡಿತರ ದೃಷ್ಟಿಯಲ್ಲಿಮ ಲೀಗ್‌ ಹಂತದ “ಬಿಗ್‌ ಮ್ಯಾಚ್‌’ ಆಗಿದೆ.

ಮುಂಬಯಿಯ ಪ್ರತಿಭಾನ್ವಿತ ಆರಂಭಕಾರ ಪೃಥ್ವಿ ಶಾ ನಾಯಕತ್ವ ಹೊಂದಿರುವ ಭಾರತ ತಂಡ, “ಗೋಡೆ’ ರಾಹುಲ್‌ ದ್ರಾವಿಡ್‌ ಮಾರ್ಗದರ್ಶನದಲ್ಲಿ ಪಳಗಿದೆ. ಕಳೆದ ಸಲ ಫೈನಲ್‌ನಲ್ಲಿ ವೆಸ್ಟ್‌ ಇಂಡೀಸಿಗೆ ಶರಣಾಗಿದ್ದ ಭಾರತ, ಈ ಬಾರಿ ಉತ್ತಮ ಪ್ರದರ್ಶನ ನೀಡಲಿದೆ ಎಂಬ ವಿಶ್ವಾಸ ದ್ರಾವಿಡ್‌ ಅವರದು.

ಪೃಥ್ವಿ ಶಾ ಜತೆಗೆ ಹಿಮಾಂಶು ರಾಣ, ಶುಭಂ ಗಿಲ್‌ ತಂಡದ ಅಗ್ರ ಕ್ರಮಾಂಕದ ಬ್ಯಾಟಿಂಗನ್ನು ಆಧರಿಸಬೇಕಿದೆ. ಮಧ್ಯಮ ಸರದಿಯಲ್ಲಿ ಅನುಕೂಲ್‌ ರಾಯ್‌, ಅಭಿಷೇಕ್‌ ಶರ್ಮ ಅವರ ಬಲವಿದೆ. ಬೌಲಿಂಗ್‌ ವಿಭಾಗದಲ್ಲಿ ಬಂಗಾಲದ ಪೇಸರ್‌ ಇಶಾನ್‌ ಪೊರೆಲ್‌ ಮೇಲೆ ಹೆಚ್ಚಿನ ನಿರೀಕ್ಷೆ ಇರಿಸಿಕೊಳ್ಳಲಾಗಿದೆ. ನ್ಯೂಜಿಲ್ಯಾಂಡಿನ ಸೀಮಿಂಗ್‌ ಟ್ರ್ಯಾಕ್‌ಗಳಲ್ಲಿ ಶಿವಂ ಮಾವಿ ಅಪಾಯಕಾರಿಯಾಗುವ ಸಾಧ್ಯತೆ ಇದೆ. ತಂಡದ ಸಿದ್ಧತೆ ಬಗ್ಗೆ ನಾಯಕ ಪೃಥ್ವಿ ಶಾ ಸಂತಸ ವ್ಯಕ್ತಪಡಿಸಿದ್ದಾರೆ.

“ತಂಡದಲ್ಲಿ ಅತ್ಯುತ್ತಮ ಆಟಗಾರರಿದ್ದಾರೆ. ಆದರೆ ನಾವು ವೈಯಕ್ತಿಕವಾಗಿ ಯಾವುದೇ ಆಟಗಾರನನ್ನು ಫೋಕಸ್‌ ಮಾಡಿಲ್ಲ. ತಂಡವಾಗಿ ಉತ್ತಮ ಪ್ರದರ್ಶನ ನೀಡಬೇಕಾದುದು ಮುಖ್ಯ’ ಎಂಬುದು ಕೋಚ್‌ ದ್ರಾವಿಡ್‌ ಅಭಿಪ್ರಾಯ.

ಆಸೀಸ್‌ ಬಲಿಷ್ಠ ಪಡೆ
ಜಾಸನ್‌ ಸಂಗ ನೇತೃತ್ವ ಹೊಂದಿರುವ ಆಸ್ಟ್ರೇಲಿಯ ಕೂಡ ಬಲಿಷ್ಠ ತಂಡ. ಮಾಜಿ ಕ್ರಿಕೆಟಿಗ ಸ್ಟೀವ್‌ ವೋ ಪುತ್ರ ಆಸ್ಟಿನ್‌ ವೋ, “ಕ್ರಿಕೆಟ್‌ ಆಸ್ಟ್ರೇಲಿಯ’ದ ಸಿಇಒ ಜೇಮ್ಸ್‌ ಸದರ್‌ಲ್ಯಾಂಡ್‌ ಅವರ ಪುತ್ರ ವಿಲ್‌ ಸದರ್‌ಲ್ಯಾಂಡ್‌ ಅವರೆಲ್ಲ ತಂಡದ ಆಕರ್ಷಣೆಗಳಾಗಿದ್ದಾರೆ. ಚಂಡೀಗಢ ಮೂಲದ ಆಲ್‌ರೌಂಡರ್‌ ಪರಮ್‌ ಉಪ್ಪಲ್‌ ಭಾರತದೆದುರು ಆಡುವುದನ್ನು ಕಾತರದಿಂದ ಕಾಯುತ್ತಿದ್ದಾರೆ.

ಭಾರತ 3 ಸಲ ಚಾಂಪಿಯನ್‌
ಅಂಡರ್‌-19 ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಭಾರತ ಈವರೆಗೆ 3 ಸಲ ಚಾಂಪಿಯನ್‌ ಆಗಿದೆ. ಈ ಫೈನಲ್‌ ಪಂದ್ಯಗಳತ್ತ ಇಣುಕು ನೋಟ…

2008: ಲಂಕೆಗೆ ತವರಲ್ಲೇ ಆಘಾತ
ಭಾರತ ಮೊದಲ ಸಲ ಕಿರಿಯರ ವಿಶ್ವಕಪ್‌ ಚಾಂಪಿಯನ್‌ ಆಗಿ ಮೂಡಿಬಂದದ್ದು 2000ದ 3ನೇ ಪಂದ್ಯಾವಳಿಯಲ್ಲಿ. ಕೊಲಂಬೊದಲ್ಲಿ ನಡೆದ ಈ ಪ್ರಶಸ್ತಿ ಕಾಳಗದಲ್ಲಿ ಮೊಹಮ್ಮದ್‌ ಕೈಫ್ ಸಾರಥ್ಯದ ಭಾರತ ಆತಿಥೇಯ ಶ್ರೀಲಂಕಾವನ್ನೇ ಉರುಳಿಸಿ ಟ್ರೋಫಿ ಎತ್ತಿದ್ದು ವಿಶೇಷ. ಭಾರತದ ಗೆಲುವಿನ ಅಂತರ 6 ವಿಕೆಟ್‌.

ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ನಡೆಸಿದ ಶ್ರೀಲಂಕಾ 48.1 ಓವರ್‌ಗಳಲ್ಲಿ 178 ರನ್ನಿಗೆ ಸರ್ವಪತನ ಕಂಡಿತು. ಜೆಹಾನ್‌ ಮುಬಾರಕ್‌ ಅವರಿಂದ ಏಕೈಕ ಅರ್ಧ ಶತಕ ದಾಖಲಾಯಿತು (58). ಶಲಭ್‌ ಶ್ರೀವಾಸ್ತವ 3 ವಿಕೆಟ್‌ ಕಿತ್ತರು. ಜವಾಬಿತ್ತ ಭಾರತ 40.4 ಓವರ್‌ಗಳಲ್ಲಿ 4 ವಿಕೆಟಿಗೆ 180 ರನ್‌ ಬಾರಿಸಿ ಇತಿಹಾಸ ನಿರ್ಮಿಸಿತು. ಅಜೇಯ 39 ರನ್‌ ಮಾಡಿದ ರಿತೀಂದರ್‌ ಸೋಧಿ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು. ಅವರು ನೀರಜ್‌ ಪಟೇಲ್‌ (ಅಜೇಯ 34) ಜತೆ ಮುರಿಯದ 5ನೇ ವಿಕೆಟಿಗೆ 64 ರನ್‌ ಪೇರಿಸಿ ಭಾರತದ ಜಯದಲ್ಲಿ ಮಹತ್ವದ ಪಾತ್ರ ವಹಿಸಿದರು. ಯುವರಾಜ್‌ ಸಿಂಗ್‌ ಸರಣಿಶ್ರೇಷ್ಠರೆನಿಸಿದರು.

2008: ಕೊಹ್ಲಿ ಪಡೆಯ ಕಾರುಬಾರು
ಭಾರತ 2ನೇ ಸಲ ಚಾಂಪಿಯನ್‌ ಎನಿಸಿದ್ದು 2008ರ ಮಲೇಶ್ಯ ಪಂದ್ಯಾವಳಿಯಲ್ಲಿ. ತಂಡದ ನಾಯಕರಾಗಿದ್ದವರು ವಿರಾಟ್‌ ಕೊಹ್ಲಿ. ಫೈನಲಿಗೆ ಬಂದ ತಂಡ “ಚೋಕರ್’ ದಕ್ಷಿಣ ಆಫ್ರಿಕಾ. ಚೇಸಿಂಗ್‌ ವೇಳೆ ಮಳೆ ಸುರಿದುದರಿಂದ ಡಿ-ಎಲ್‌ ನಿಯಮ ಅಳವಡಿಸಲಾಯಿತು. ಆಫ್ರಿಕಾ 12 ರನ್ನುಗಳಿಂದ ಲಾಗ ಹಾಕಿತು!

ಮೊದಲು ಬ್ಯಾಟಿಂಗ್‌ ಮಾಡಿದ ಭಾರತ 45.4 ಓವರ್‌ಗಳಲ್ಲಿ 159 ರನ್ನುಗಳ ಸಾಮಾನ್ಯ ಮೊತ್ತಕ್ಕೆ ಕುಸಿಯಿತು. ಪಾರ್ನೆಲ್‌, ಅರ್ನಾಲ್ಡ್‌, ಆ್ಯಡಮ್ಸ್‌ ತಲಾ 2 ವಿಕೆಟ್‌ ಹಾರಿಸಿದರು. ಭಾರತದ ಪರ ತನ್ಮಯ್‌ ಶ್ರೀವಾಸ್ತವ ಸರ್ವಾಧಿಕ 46 ರನ್‌ ಹೊಡೆದರು. ಮಳೆಯಿಂದ ದಕ್ಷಿಣ ಆಫ್ರಿಕಾ ಗುರಿಯನ್ನು 25 ಓವರ್‌ಗಳಲ್ಲಿ 116 ರನ್ನಿಗೆ ಪುನರ್‌ ನಿಗದಿಗೊಳಿಸಲಾಯಿತು. ವೇನ್‌ ಪಾರ್ನೆಲ್‌ ಪಡೆಗೆ ಗಳಿಸಲು ಸಾಧ್ಯವಾದದ್ದು 8ಕ್ಕೆ 103 ರನ್‌ ಮಾತ್ರ. 7 ರನ್ನಿಗೆ 2 ವಿಕೆಟ್‌ ಕಿತ್ತ ಅಜಿತೇಶ್‌ ಅರ್ಗಾಲ್‌ ಪಂದ್ಯಶ್ರೇಷ್ಠ, ನ್ಯೂಜಿಲ್ಯಾಂಡಿನ ಟಿಮ್‌ ಸೌಥಿ ಸರಣಿಶ್ರೇಷ್ಠ ಗೌರವಕ್ಕೆ ಪಾತ್ರರಾದರು.

2012: ಆಸೀಸ್‌ಗೆ ಮುಖಭಂಗ
ಭಾರತದ 3ನೇ ವಿಶ್ವ ಕಿರೀಟ ಪಟ್ಟ ಹೆಚ್ಚು ಸ್ಮರಣೀಯ. ಕಾರಣ, 2012ರ ಈ ಕೂಟದಲ್ಲಿ ಉನ್ಮುಕ್‌¤ ಚಂದ್‌ ಪಡೆ ಆಸ್ಟ್ರೇಲಿಯವನ್ನು ಅವರ ತವರಿನಲ್ಲೇ ಸದೆಬಡಿದಿತ್ತು. ಟೌನ್ಸ್‌ವಿಲ್ಲೆಯಲ್ಲಿ ನಡೆದ ಈ ಫೈನಲ್‌ನಲ್ಲಿ ಭಾರತದ ಗೆಲುವಿನ ಅಂತರ 6 ವಿಕೆಟ್‌.

ಆಸ್ಟ್ರೇಲಿಯ 8 ವಿಕೆಟಿಗೆ 225 ರನ್‌ ಗಳಿಸಿದರೆ, ಕಪ್ತಾನ ಉನ್ಮುಕ್‌¤ ಚಂದ್‌ ಅವರ ಅಜೇಯ 111 ರನ್‌ ಸಾಹಸದಿಂದ ಭಾರತ 47.4 ಓವರ್‌ಗಳಲ್ಲಿ 4 ವಿಕೆಟಿಗೆ 227 ರನ್‌ ಬಾರಿಸಿ ಜಯಭೇರಿ ಮೊಳಗಿಸಿತು. ಆರಂಭಿಕನಾಗಿ ಇಳಿದ ಚಂದ್‌ 130 ಎಸೆತಗಳನ್ನೆದುರಿಸಿ 7 ಬೌಂಡರಿ ಹಾಗೂ 6 ಸಿಕ್ಸರ್‌ ಬಾರಿಸಿ ಕಾಂಗರೂ ದಾಳಿಯನ್ನು ಧೂಳೀಪಟ ಮಾಡಿದರು. ಈ ಸಾಹಸಕ್ಕಾಗಿ ಅವರಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಒಲಿಯಿತು. ಭಾರತದ ಪರ ಸಂದೀಪ್‌ ಶರ್ಮ 4 ವಿಕೆಟ್‌ ಉಡಾಯಿಸಿದರು. ಸರಣಿಶ್ರೇಷ್ಠ ಗೌರವ ಆಸ್ಟ್ರೇಲಿಯದ ಸ್ಪಿನ್ನರ್‌ ವೊಲಿಯಂ ಬೊಸಿಸ್ಟೊ ಪಾಲಾಯಿತು.

ಅಂಡರ್‌-19 ವಿಶ್ವಕಪ್‌: ರವಿವಾರದ ಪಂದ್ಯಗಳು
ಪಂದ್ಯ    ಸ್ಥಳ    ಆರಂಭ
ಅಯರ್‌ಲ್ಯಾಂಡ್‌-ಶ್ರೀಲಂಕಾ    ವಾಂಗರಿ    ಬೆಳಗ್ಗೆ 3.00
ಕೀನ್ಯಾ-ದಕ್ಷಿಣ ಆಫ್ರಿಕಾ    ಲಿಂಕನ್‌    ಬೆಳಗ್ಗೆ 3.00
ಭಾರತ-ಆಸ್ಟ್ರೇಲಿಯ    ಮೌಂಟ್‌ ಮಾಂಗನೂಯಿ    ಬೆಳಗ್ಗೆ 5.30

ಟಾಪ್ ನ್ಯೂಸ್

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

1-ullala

Mangaluru; ನೇತ್ರಾವತಿ ಸೇತುವೆ ದುರಸ್ತಿ ಆರಂಭ: ಸಂಚಾರ ಸಲಹೆ ನೀಡಿದ ಪೊಲೀಸರು

1-aaammm

Jammu and Kashmir; ಉಗ್ರವಾದ ಪರಿಸರ ವ್ಯವಸ್ಥೆ ಬಹುತೇಕ ಕೊನೆಗೊಂಡಿದೆ: ಶಾ

1-lok-sabha

BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು

CT Ravi

Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BGT: ಆಸೀಸ್‌ ಮಾಧ್ಯಮದ ವಿರುದ್ದ ವಿರಾಟ್‌ ಗರಂ: ಏರ್‌ಪೋರ್ಟ್‌ ನಲ್ಲಿ ವರದಿಗಾರ್ತಿ ಜತೆ ಜಗಳ

BGT: ಆಸೀಸ್‌ ಮಾಧ್ಯಮದ ವಿರುದ್ದ ವಿರಾಟ್‌ ಗರಂ: ಏರ್‌ಪೋರ್ಟ್‌ ನಲ್ಲಿ ವರದಿಗಾರ್ತಿ ಜತೆ ಜಗಳ

28 cricketers who said goodbye in 2024; Here is the list

Warner-Ashwin; 2024ರಲ್ಲಿ ವಿದಾಯ ಹೇಳಿದ್ದು ಬರೋಬ್ಬರಿ 28 ಕ್ರಿಕೆಟಿಗರು; ಇಲ್ಲಿದೆ ಪಟ್ಟಿ

INDvAUS: Is captain Rohit Sharma standing against to Shami?; Aussie tour difficult for pacer!

INDvAUS: ಶಮಿ ವಿರುದ್ದ ನಿಂತರೇ ನಾಯಕ ರೋಹಿತ್?;‌ ವೇಗಿಗೆ ಆಸೀಸ್‌ ಪ್ರವಾಸ ಕಷ್ಟ!

WTC 25; India’s Test Championship finals road gets tough; Here’s the calculation

WTC 25; ಕಠಿಣವಾಯ್ತು ಭಾರತದ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಹಾದಿ; ಹೀಗಿದೆ ಲೆಕ್ಕಾಚಾರ

R.Ashwin retirement: ಅಶ್ವಿ‌ನ್‌ ವಿದಾಯದ ಸುತ್ತಮುತ್ತ…

R.Ashwin retirement: ಅಶ್ವಿ‌ನ್‌ ವಿದಾಯದ ಸುತ್ತಮುತ್ತ…

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Untitled-1

Kasaragod Crime News: ರಸ್ತೆಯಲ್ಲಿ ಬಿಯರ್‌ ಬಾಟ್ಲಿ ಒಡೆದ ಮೂವರ ಬಂಧನ

byndoor

Belthangady: ಬಸ್‌ ಬೈಕ್‌ ಢಿಕ್ಕಿ, ಸವಾರ ಗಂಭೀರ

5

Malpe: ಮೆಹಂದಿಯಲ್ಲಿ ತಡರಾತ್ರಿವರೆಗೆ ಡಿಜೆ ಬಳಕೆ; ಪ್ರಕರಣ ದಾಖಲು

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Brahmavar

Siddapura: ಇಲಿ ಪಾಷಾಣ ಸೇವಿಸಿ ವ್ಯಕ್ತಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.