PAKvsBAN; ಬಾಂಗ್ಲಾ ವಿರುದ್ದ ಪಾಕ್‌ ಟೆಸ್ಟ್‌ ಸೋಲಿಗೆ ‘ಭಾರತ’ ಕಾರಣ ಎಂದ ರಮಿಜ್ ರಜಾ


Team Udayavani, Aug 26, 2024, 3:46 PM IST

PAKvsBAN; ಬಾಂಗ್ಲಾ ವಿರುದ್ದ ಪಾಕ್‌ ಟೆಸ್ಟ್‌ ಸೋಲಿಗೆ ಭಾರತ ಕಾರಣ ಎಂದ ರಮಿಜ್ ರಜಾ

ರಾವಲ್ಪಿಂಡಿ: ಪ್ರವಾಸಿ ಬಾಂಗ್ಲಾದೇಶ (Bangladesh) ವಿರುದ್ದದ ಮೊದಲ ಟೆಸ್ಟ್‌ ಪಂದ್ಯದಲ್ಲಿ ಸೋಲು ಕಂಡ ಪಾಕಿಸ್ತಾನ (Pakistan) ತವರಲ್ಲಿಯೇ ಅವಮಾನಕ್ಕೆ ಸಿಲುಕಿದೆ. ರಾವಲ್ಪಿಂಡಿಯಲ್ಲಿ ನಡೆದ ಪಂದ್ಯದಲ್ಲಿ ಬಾಂಗ್ಲಾದೇಶ ಹತ್ತು ವಿಕೆಟ್‌ ಅಂತರದ ಗೆಲುವು ಸಾಧಿಸಿದೆ.

ಪಾಕಿಸ್ತಾನದ ಮಾಜಿ ಆಟಗಾರ, ಕಾಮೆಂಟೇಟರ್ ರಮಿಜ್ ರಜಾ (Ramiz Raja), ಬಾಂಗ್ಲಾ ವಿರುದ್ಧದ ತಂಡದ ಸೋಲಿಗೆ ಭಾರತದ ಕಾರಣ ಎಂದು ವಿಶ್ಲೇಷಣೆ ಮಾಡಿದ್ದಾರೆ. ಅದಕ್ಕೆ ಕಾರಣವನ್ನೂ ಅವರು ನೀಡಿದ್ದಾರೆ.

ಪಾಕಿಸ್ತಾನದ ಸೋಲಿನ ಬಳಿಕ ಮಾತನಾಡಿರುವ ರಮಿಜ್‌ ರಜಾ, “ಮೊದಲನೆಯದಾಗಿ, ತಂಡದ ಆಯ್ಕೆಯಲ್ಲಿಯೇ ತಪ್ಪಾಗಿದೆ. ನೀವು (ಪಾಕಿಸ್ತಾನ) ಸ್ಪಿನ್ನರ್ ಇಲ್ಲದೆ ಆಡಿದ್ದೀರಿ. ಎರಡನೆಯದಾಗಿ, ನಾವು ನಮ್ಮ ವೇಗದ ಬೌಲರ್‌ ಗಳನ್ನು ಅವಲಂಬಿಸಿರುವ ಖ್ಯಾತಿಯು ಮುಗಿದಿದೆ. ಈ ಸೋಲು, ಒಂದು ರೀತಿಯ ಆತ್ಮವಿಶ್ವಾಸದ ಬಿಕ್ಕಟ್ಟು, ಏಷ್ಯಾ ಕಪ್‌ ನಲ್ಲಿ ಭಾರತವು ನಮ್ಮ ವೇಗಿಗಳಿಗೆ ಸೀಮಿಂಗ್ ಪಿಚ್‌ ನಲ್ಲಿ ಹೊಡೆದರು. ಅಲ್ಲಿಂದ ಇದು ಪ್ರಾರಂಭವಾಯಿತು. ನಂತರ ಈ ಲೈನ್-ಅಪ್ ಅನ್ನು ಎದುರಿಸುವ ವಿಧಾನವು ಜಗತ್ತಿನ ಎದುರು ಜಾಹೀರಾಯಿತು. ಈಗ ಅವರ ವೇಗವೂ ಕಡಿಮೆಯಾಗಿದೆ, ಅದರ ಜತೆಗೆ ಕೌಶಲ್ಯವೂ ಕೂಡಾ” ಎಂದರು.

ವೇಗದ ಬೌಲರ್‌ ಗಳನ್ನು ಟೀಕೆ ಮಾಡುವ ಜೊತೆಗೆ ಪಾಕಿಸ್ತಾನದ ನಾಯಕ ಶಾನ್‌ ಮಸೂದ್‌ ವಿರುದ್ದವೂ ರಮಿಜ್‌ ರಜಾ ಅವರು ಟೀಕೆ ಮಾಡಿದರು.

“ಶಾನ್‌ ಮಸೂದ್‌ ಅವರು ಸದ್ಯ ಸೋಲಿನ ಸರಣಿಯಲ್ಲಿದ್ದಾರೆ. ಆಸ್ಟ್ರೇಲಿಯಾದಲ್ಲಿ ಪರಿಸ್ಥತಿ ಕಷ್ಟಕರವಾಗಿತ್ತು. ಅಲ್ಲಿ ಟೆಸ್ಟ್‌ ಸರಣಿ ಗೆಲ್ಲುವುದು ಕಷ್ಟವಾಗಿತ್ತು. ಆದರೆ ಈಗ ನೀವು ತವರಿನಲ್ಲೇ ಸೋಲು ಕಾಣುತ್ತಿದ್ದೀರಿ, ಅದೂ ಬಾಂಗ್ಲಾದೇಶದಂತೆ ಸೋತಿದ್ದೀರಿ. ಯಾಕೆಂದರೆ ನೀವು ಪರಿಸ್ಥಿತಿಯನ್ನು ಸರಿಯಾಗಿ ಓದುತ್ತಿಲ್ಲ ಎಂದರ್ಥ” ಎಂದು ರಜಾ ಹೇಳಿದರು.

“ಬ್ಯಾಟರ್‌ಗಳು ತಮ್ಮನ್ನು ತಾವು ಅನ್ವಯಿಸಲಿಲ್ಲ. ಬೌಲರ್‌ ಗಳ ಪ್ರದರ್ಶನ ಭಯಾನಕವಾಗಿತ್ತು. ಮಸೂದ್ ಅವರ ಬ್ಯಾಟಿಂಗ್ ಅನ್ನು ಸುಧಾರಿಸಬೇಕಾಗಿದೆ. ಅಲ್ಲದೆ ನಿಮಗೆ ಆಟದ ಬಗ್ಗೆ ಸ್ವಲ್ಪ ಜ್ಞಾನವಿದೆ ಎಂದು ತೋರಿಸಬೇಕಾಗಿದೆ. ಅವರು ಅನುಭವಿ ನಾಯಕ, ಪಿಎಸ್‌ಎಲ್ ಮತ್ತು ಕೌಂಟಿ ಪಂದ್ಯಗಳಲ್ಲಿ ಮುನ್ನಡೆಸಿದ್ದಾರೆ. ಆಗಸ್ಟ್ ತಿಂಗಳಲ್ಲಿ ರಾವಲ್ಪಿಂಡಿ ಟ್ರ್ಯಾಕ್‌ಗೆ ಅವರು ಯಾವ ಆಧಾರದ ಮೇಲೆ ನಾಲ್ವರು ವೇಗಿಗಳನ್ನು ಆಯ್ಕೆ ಮಾಡಿದರು ಎಂದು ಅರ್ಥವಾಗಲಿಲ್ಲ ಅವರು ಟೀಕೆ ಮಾಡಿದರು.

ಟಾಪ್ ನ್ಯೂಸ್

1-bantwala-1

Bantwala: ಮಸೀದಿಗೆ ತೆರಳಿದ್ದ ವೇಳೆ ಮನೆಗೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ನಗನಗದು ಕಳವು

1-bus

Haveri; ಖಾಸಗಿ ಬಸ್ ಪಲ್ಟಿ: 15ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ

1-belgavi

Belagavi; ಗಣಪತಿ ಮೂರ್ತಿ ವಿಸರ್ಜನೆ ವೇಳೆ ಮೂವರಿಗೆ ಚಾಕು ಇರಿತ!!

1-trfff

PM Modi ಅವರನ್ನು ಭೇಟಿಯಾಗಿ ಮಾತುಕತೆ ನಡೆಸುವುದಾಗಿ ಘೋಷಿಸಿದ ಟ್ರಂಪ್

Auction of more than 600 gifts received by Modi has started

Auction; ಮೋದಿಗೆ ಸಿಕ್ಕ 600ಕ್ಕೂ ಅಧಿಕ ಉಡುಗೊರೆಗಳ ಹರಾಜು ಶುರು

Panamburu

Mangaluru: ಕಿರಿದಾಗುತ್ತಿದೆ‌ ಪಣಂಬೂರು ಬೀಚ್‌! ಇನ್ನೂ ಖಚಿತವಾಗದ ಕಾರಣ

Pililkula

Biological Park: ಪಿಲಿಕುಳಕ್ಕೆ ಪೆಂಗ್ವಿನ್‌, ಅನಕೊಂಡ ತರಿಸುವ ಮಹತ್ವದ ನಿರ್ಧಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

T20 world cup 2024; ವನಿತೆಯರ ವಿಶ್ವಕಪ್‌ ನಿಧಿಯಲ್ಲಿ ಭಾರೀ ಏರಿಕೆ, ಸಮಾನ ಬಹುಮಾನ: ಐಸಿಸಿ

T20 world cup 2024; ವನಿತೆಯರ ವಿಶ್ವಕಪ್‌ ನಿಧಿಯಲ್ಲಿ ಭಾರೀ ಏರಿಕೆ, ಸಮಾನ ಬಹುಮಾನ: ಐಸಿಸಿ

Ranji Trophy: Samit Dravid in possible squad

Ranji Trophy: ಸಂಭಾವ್ಯ ತಂಡದಲ್ಲಿ ಸಮಿತ್‌ ದ್ರಾವಿಡ್‌

Champions Trophy; ICC delegation to Karachi for security review

Champions Trophy; ಭದ್ರತೆ ಪರಿಶೀಲನೆಗೆ ಐಸಿಸಿ ನಿಯೋಗ ಕರಾಚಿಗೆ

China Open Badminton: Priyanshu Rajawat out

China Open Badminton: ಪ್ರಿಯಾಂಶು ರಾಜಾವತ್‌ ಹೊರಕ್ಕೆ

FIH: Harman, Sreejesh in award competition

FIH: ಪ್ರಶಸ್ತಿ ಸ್ಪರ್ಧೆಯಲ್ಲಿ ಹರ್ಮನ್‌, ಶ್ರೀಜೇಶ್‌

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

2-yellapur

Yellapur: ರಸ್ತೆಯಲ್ಲಿ ಭಾರೀ ಗಾತ್ರದ ಹೊಂಡ; ನಿಯಂತ್ರಣ ತಪ್ಪಿ ಲಾರಿ ಪಲ್ಟಿ

1-bantwala-1

Bantwala: ಮಸೀದಿಗೆ ತೆರಳಿದ್ದ ವೇಳೆ ಮನೆಗೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ನಗನಗದು ಕಳವು

1-bus

Haveri; ಖಾಸಗಿ ಬಸ್ ಪಲ್ಟಿ: 15ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ

police

Davanagere; ಪ್ಯಾಲೇಸ್ತೀನ್ ಬಾವುಟದ ಸ್ಟಿಕ್ಕರ್ ಅಂಟಿಸಿಕೊಂಡವರ ವಿರುದ್ಧ ಪ್ರಕರಣ ದಾಖಲು

1-belgavi

Belagavi; ಗಣಪತಿ ಮೂರ್ತಿ ವಿಸರ್ಜನೆ ವೇಳೆ ಮೂವರಿಗೆ ಚಾಕು ಇರಿತ!!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.