ಇಕ್ವಾಡೋರ್, ಜಪಾನ್ಗೆ ಹೃದಯಾಘಾತ; ಪರಗ್ವೆ ಕ್ವಾ. ಫೈನಲಿಗೆ
Team Udayavani, Jun 26, 2019, 5:28 AM IST
ಬೆಲೊ ಹಾರಿಝಾಂಟೆ: ಕೊಪಾ ಅಮೆರಿಕ ಫುಟ್ಬಾಲ್ ಪಂದ್ಯಾಟದ ಅಂತಿಮ ಲೀಗ್ ಪಂದ್ಯ ಡ್ರಾಗೊಳ್ಳುವ ಮೂಲಕ ಜಪಾನ್ ಮತ್ತು ಇಕ್ವಾಡೋರ್ಗೆ ಹೃದಯಾಘಾತವಾಗಿದೆ. ಈ ಪಂದ್ಯದ ವಿಜೇತ ತಂಡಕ್ಕೆ ಕೊಪಾ ಅಮೆರಿಕ ಫುಟ್ಬಾಲ್ ಕೂಟದ ಕ್ವಾರ್ಟರ್ಫೈನಲಿಗೇರುವ ಅವಕಾಶವಿತ್ತು. ಆದರೆ ಪಂದ್ಯ ಡ್ರಾಗೊಂಡ ಕಾರಣ ಎರಡೂ ತಂಡಗಳು ಹೊರಬಿದ್ದಿವೆ. ಪರಗ್ವೆ ಕೊನೆಯ ತಂಡವಾಗಿ ಕ್ವಾರ್ಟರ್ಫೈನಲಿಗೇರಿದೆ.
ಕ್ವಾರ್ಟರ್ಫೈನಲಿಗೇರಬೇಕಾದರೆ ಜಪಾನ್ ಮತ್ತು ಇಕ್ವಾಡೋರ್ಗೆ ಗೆಲುವು ಅನಿವಾರ್ಯವಾಗಿತ್ತು. ಹಾಗಾಗಿ ತೀವ್ರ ಹೋರಾಟ ನಡೆಸಿದ್ದವು. ಆದರೆ ಪಂದ್ಯ 1-1ರಿಂದ ಡ್ರಾ ಗೊಂಡು ಉಭಯ ತಂಡಗಳು ಆಘಾತಕ್ಕೆ ಒಳಗಾದವು. 15ನೇ ನಿಮಿಷದಲ್ಲಿ ಶೋಯ ನಕಜಿಮ ಗೋಲನ್ನು ಹೊಡೆಯುವ ಮೂಲಕ ಜಪಾನ್ ಮುನ್ನಡೆ ಸಾಧಿಸಿತ್ತು. ಆದರೆ ಇಕ್ವಾಡೋರ್ನ ಏಂಜೆಲ್ ಮೆನಾ ಗೋಲನ್ನು ಹೊಡೆದು ಸಮಬಲ ಸಾಧಿಸಿದ್ದರು.
ಕೊನೆ ಕ್ಷಣದಲ್ಲಿ ಜಪಾನಿನ ತಕೆಫುಸ ಕುಬೊ ಗೋಲನ್ನು ಹೊಡೆದರೂ ವಿಎ ಆರ್ ಸಲಹೆ ಪಡೆದ ಬಳಿಕ ಆಫ್ಸೈಡ್ ಕಾರಣಕ್ಕೆ ಗೋಲು ನಿರಾಕರಿಸಲಾ ಯಿತು. ಇದರಿಂದ ಜಪಾನ್ ಗೆಲ್ಲುವ ಅವಕಾಶ ಕಳೆದುಕೊಂಡು ನಿರಾಶೆಗೊಳಗಾಯಿತು.
ಜಪಾನ್ ಮತ್ತು ಇಕ್ವಾಡೋರ್ ನಡು ವಣ ಪಂದ್ಯ ಡ್ರಾಗೊಂಡ ಹಿನ್ನೆಲೆಯಲ್ಲಿ ಪರಗ್ವೆ ಕ್ವಾರ್ಟರ್ಫೈನಲ್ನಲ್ಲಿ ಆಡುವ ಅದೃಷ್ಟ ಪಡೆಯಿತು. “ಬಿ’ ಬಣದಲ್ಲಿ ಆಡಿದ್ದ ಪರಗ್ವೆ ಮೂರು ಪಂದ್ಯಗಳಿಂದ ಕೇವಲ ಎರಡಂಕ ಪಡೆದಿತ್ತು.
ಕ್ವಾರ್ಟರ್ಫೈನಲ್ಸ್
ಪರಗ್ವೆ ಎಂಟನೇ ತಂಡವಾಗಿ ಮುನ್ನಡೆಯುವ ಮೂಕ ಕ್ವಾರ್ಟರ್ಫೈನಲ್ಸ್ ಸೆಣಸಾಟಕ್ಕೆ ವೇದಿಕೆ ಸಿದ್ಧಗೊಂಡಿತು. ಜೂ. 28ರಿಂದ ಕ್ವಾರ್ಟರ್ಫೈನಲ್ಸ್ ನಡೆಯಲಿದ್ದು ಮೊದಲ ಪಂದ್ಯವು ಬ್ರಝಿಲ್ ಮತ್ತು ಪರಗ್ವೆ ನಡುವೆ ನಡೆಯ ಲಿದೆ. ಇನ್ನುಳಿದ ಪಂದ್ಯಗಳು ವೆನೆಜುವೆಲ -ಆರ್ಜೆಂಟೀನಾ, ಕೊಲಂಬಿಯ-ಚಿಲಿ ಮತ್ತು ಉರುಗ್ವೆ -ಪೆರು ನಡುವೆ ಜರಗಲಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gwalior T20: ಬಾಂಗ್ಲಾ ವಿರುದ್ಧ ಭರ್ಜರಿ ಜಯ ಸಾಧಿಸಿದ ಟೀಮ್ ಇಂಡಿಯಾ
ICC Womens T20 World Cup; ಪಾಕಿಸ್ಥಾನ ವಿರುದ್ಧ ಗೆಲುವಿನ ನಗೆ ಬೀರಿದ ಭಾರತ
Womens T20 World Cup: ಪಾಕ್ ವಿರುದ್ದದ ಗೆಲ್ಲಲೇ ಬೇಕಾದ ಪಂದ್ಯದಲ್ಲಿ ಟಾಸ್ ಸೋತ ಭಾರತ
INDvsBAN: ಟಿ20ಯಲ್ಲಿ ಭಾರತಕ್ಕೆ ಹೊಸ ಆರಂಭಿಕರು; ಶರ್ಮಾ ಜತೆ ಓಪನರ್ ಯಾರು?
T20 series: ಬಾಂಗ್ಲಾ ವಿರುದ್ಧ ಯುವ ದರ್ಬಾರ್
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Sulya: ಅವಾಚ್ಯ ಮಾತು: ಮಹಿಳೆಯಿಂದ ಪೊಲೀಸರಿಗೆ ದೂರು
Udupi; ಗೀತಾರ್ಥ ಚಿಂತನೆ 57: ದುರ್ಯೋಧನನಲ್ಲಿ ಮಾನಸಿಕ ಸ್ಥೈರ್ಯ ಕುಸಿತ
Gwalior T20: ಬಾಂಗ್ಲಾ ವಿರುದ್ಧ ಭರ್ಜರಿ ಜಯ ಸಾಧಿಸಿದ ಟೀಮ್ ಇಂಡಿಯಾ
BBK11: ಮೊದಲ ವಾರದಲ್ಲೇ ಬಿಗ್ ಬಾಸ್ ಆಟ ಮುಗಿಸಿದ ಯಮುನಾ ಶ್ರೀನಿಧಿ!
By Polls Fight: ಡಿಸಿಎಂ ಪದೇ ಪದೇ ಬರ್ತಿರೋದು ಕುರ್ಚಿಗಾಗಿ ಅಲ್ವಾ?: ಎಚ್.ಡಿ.ಕುಮಾರಸ್ವಾಮಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.