Paralympics;ಧರಂಬೀರ್‌ಗೆ ಚಿನ್ನ, ಪ್ರಣವ್‌ಗೆ ಬೆಳ್ಳಿಯ ಹಾರ: ಏನಿದು ಎಫ್ 51 ವಿಭಾಗ?


Team Udayavani, Sep 5, 2024, 11:59 PM IST

1-aaa

ಪ್ಯಾರಿಸ್‌: ಪ್ಯಾರಾಲಿಂಪಿಕ್ಸ್‌ ಪುರುಷರ ಕ್ಲಬ್‌ ತ್ರೋ ಎಫ್51 ವಿಭಾಗದಲ್ಲಿ ಭಾರತ ಮೊದಲ ಬಾರಿ ಚಿನ್ನ, ಬೆಳ್ಳಿಯ ಪದಕ ತನ್ನದಾಗಿಸಿಕೊಂಡಿದೆ. 34.92 ಮೀ. ಸಾಧನೆಯೊಂದಿಗೆ ಧರಂಬೀರ್‌ ನೈನ್‌ ಸ್ವರ್ಣ ಪದಕ ತನ್ನದಾಗಿಸಿಕೊಂಡರೆ, 34.59 ಮೀ. ಸಾಧನೆಯೊಂದಿಗೆ ಪ್ರಣವ್‌ ಸೂರ್ಮ ರಜತ ಪದಕ ಗೆದ್ದಿದ್ದಾರೆ. ಇದರೊಂದಿಗೆ ಈ ಪ್ಯಾರಾಲಿಂಪಿಕ್ಸ್‌ನ ಆ್ಯತ್ಲೆಟಿಕ್ಸ್‌ ವಿಭಾಗದಲ್ಲಿ ಮೊದಲ ಬಾರಿಗೆ ಪ್ರಥಮ, ದ್ವಿತೀಯ ಎರಡೂ ಸ್ಥಾನ ತನ್ನದಾಗಿಸಿಕೊಂಡ ಸಾಧನೆಗೆ ಭಾರತ ಪಾತ್ರವಾಗಿದೆ.

ಇದೇ ವಿಭಾಗದಲ್ಲಿ ಧರಂಬೀರ್‌ ಅವರ ಕೋಚ್‌, ಸಹ ಆಟಗಾರ ಅಮಿತ್‌ ಕುಮಾರ್‌ ಸರೋಹ ಕೂಡ ಸ್ಪರ್ಧಿಸಿದ್ದು, ಅವರು 23.96 ಮೀ. ಎಸೆತದೊಂದಿಗೆ 10ನೇ ಸ್ಥಾನದಲ್ಲಿ ಸ್ಪರ್ಧೆ ಮುಗಿಸಿದರು.

ಶಿಷ್ಯನಿಗೆ ಗುರು ಅಮಿತ್‌ ಶ್ಲಾಘನೆ
ಕ್ಲಬ್‌ ತ್ರೋ ಬಗ್ಗೆ ಮಾರ್ಗದರ್ಶನ, ತರಬೇತಿ ನೀಡಿದ ಅಮಿತ್‌ ಕುಮಾರ್‌ ಅವರನ್ನೇ ಶಿಷ್ಯ ಧರಂಬೀರ್‌ ಸೋಲಿಸಿ ಗಮನ ಸೆಳೆದಿದ್ದಾರೆ. ಗೆದ್ದ ಪದಕವನ್ನು ಧರಂಭೀರ್‌, ಗುರು ಅಮಿತ್‌ಗೆ ಅರ್ಪಿಸಿದ್ದಾರೆ. ಈ ಬಗ್ಗೆ ಖುಷಿ ವ್ಯಕ್ತಪಡಿಸಿರುವ ಅಮಿತ್‌ ಕುಮಾರ್‌, ದೇಶಕ್ಕೆ ಬಂಗಾರ ಗೆಲ್ಲುವ ಮೂಲಕ ಧರಂಬೀರ್‌ ಶಿಕ್ಷಕರ ದಿನದ ವೇಳೆ ಗುರುವಿಗೆ ಅರ್ಥಪೂರ್ಣ ಉಡುಗೊರೆ ನೀಡಿದ್ದಾರೆ ಎಂದಿದ್ದಾರೆ.

ನೀರಿಗೆ ಧುಮುಕುವಾಗ ಅವಘಢ
35 ವರ್ಷದ ಧರಂಬೀರ್‌ ಹುಟ್ಟಿದ್ದು 1989ರಲ್ಲಿ ಹರಿಯಾಣದ ರೋಹ¤ಕ್‌ನಲ್ಲಿ. ಹುಟ್ಟುವಾಗ ಸಾಮಾನ್ಯರಂತೆಯೇ ಇದ್ದರು. ಆದರೆ ಯುವಕರಾಗಿದ್ದಾಗ ನಡೆದ ದುರ್ಘ‌ಟನೆಯೊಂದರಲ್ಲಿ ಧರಂಬೀರ್‌ ಅಂಗವೈಕಲ್ಯಕ್ಕೆ ಒಳಗಾಗಬೇಕಾಯಿತು. ತಮ್ಮ ಊರಿನಲ್ಲಿ ಕಾಲುವೆಯೊಂದರಲ್ಲಿ ಈಜಲು ತೆರಳಿದ್ದ ಧರಂಬೀರ್‌, ನೀರಿನ ಆಳದ ಅರಿವಿ ಲ್ಲದೆ ನೀರಿಗೆ ಧುಮುಕಿದರು. ಈ ವೇಳೆ ಅವರ ದೇಹ ಕೆಳಗಿದ್ದ ಬಂಡೆಯೊಂದಕ್ಕೆ ಬಡಿಯಿತು. ಈ ವೇಳೆ ಬೆನ್ನುಮೂಳೆಗೆ ಗಾಯವಾಗಿ ಪಾರ್ಶ್ವವಾಯುಗೆ ತುತ್ತಾದ ಧರಂಬೀರ್‌, ಕೆಳ ದೇಹದ ಸ್ವಾಧೀನ ಕಳೆದುಕೊಂಡರು.

ಧರಂಬೀರ್‌ ಸಾಧನೆ
ಧರಂಬೀರ್‌ ವೃತ್ತಿಪರ ಪ್ಯಾರಾ ಆ್ಯತ್ಲೆಟಿಕ್ಸ್‌ಗೆ ಅಡಿಯಿಟ್ಟಿದ್ದು 2014ರಲ್ಲಿ. ಆಗ ಅಮಿತ್‌ ಕುಮಾರ್‌ ಸರೋಹ ಅವರೇ ಧರಂಬೀರ್‌ಗೆ ಡಿಸ್ಕಸ್‌ನ ಕೌಶಲಗಳನ್ನು ಹೇಳಿಕೊಟ್ಟರು. ಅಲ್ಲಿಂದ ಆಸಕ್ತಿ ಹೆಚ್ಚಿಸಿಕೊಂಡ ಧರಂಬೀರ್‌, 2016ರ ರಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಪಾಲ್ಗೊಂಡು 9ನೇ ಸ್ಥಾನ ಪಡೆದರು. ಕಳೆದ ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲೂ ಪಾಲ್ಗೊಂಡಿದ್ದ ಅವರು 8ನೇ ಸ್ಥಾನ ಪಡೆದಿದ್ದರು. ಇನ್ನು, 2018ರ ಏಷ್ಯನ್‌ ಪ್ಯಾರಾಗೇಮ್ಸ್‌ ಬೆಳ್ಳಿ ಗೆದ್ದ ಸಾಧನೆ ಧರಂಬೀರ್‌ ಅವರದ್ದಾಗಿದೆ.

ಸಿಮೆಂಟ್‌ ಶೀಟ್‌ ಬಿದ್ದು ಅಂಗ ಸ್ವಾಧೀನ ಕಳೆದುಕೊಂಡ ಪ್ರಣವ್‌
1994ರಲ್ಲಿ ಹರಿಯಾಣದ ಫ‌ರಿದಾಬಾದ್‌ನಲ್ಲಿ ಜನಿಸಿದ ಪ್ರಣವ್‌ ಸೂರ್ಮ ಕೂಡ ಅವಘಢದಿಂದಲೇ ದೇಹದ ಅಂಗ ಸ್ವಾಧೀನ ಕಳೆದುಕೊಂಡರು. 16 ವಯಸ್ಸಿನವರಾಗಿದ್ದ ವೇಳೆ ತಲೆ ಮೇಲೆ ಸಿಮೆಂಟ್‌ ಶೀಟೊಂದು ಬಿದ್ದು ಪ್ರಣವ್‌ ಅವರ ಬೆನ್ನು ಮೂಳೆಗೆ ಗಂಭೀರ ಗಾಯವಾಯಿತು. ಪಾರ್ಶ್ವವಾಯು ಬಡಿಯಿತು. 6 ತಿಂಗಳು ಆಸ್ಪತ್ರೆಯಲ್ಲೇ ಕಳೆದಿದ್ದ ಪ್ರಣವ್‌ ಎದ್ದು ನಡೆಯೋದೇ ಅನುಮಾನ ಎಂದು ವೈದ್ಯರು ಹೇಳಿದ್ದರು. ಅಂಥ ಪ್ರಣವ್‌ ಈಗ ಸಾಧಿಸಿ ನಮ್ಮ ಮುಂದೆ ನಿಂತಿದ್ದಾರೆ.

ಏಷ್ಯನ್‌ ಪ್ಯಾರಾ ಗೇಮ್ಸ್‌ ನಲ್ಲಿ ಚಿನ್ನದ ಸಾಧನೆ
2019ರ ಬೀಜಿಂಗ್‌ ಗ್ರ್ಯಾನ್‌ಪ್ರಿ ಆ್ಯತ್ಲೆಟಿಕ್ಸ್‌ ನಲ್ಲಿ ಬೆಳ್ಳಿ, 2022ರಲ್ಲಿ ಟ್ಯುನಿಶಿಯಾದಲ್ಲಿ ನಡೆದ ಗ್ರ್ಯಾನ್‌ಪ್ರಿ ಆ್ಯತ್ಲೆಟಿಕ್ಸ್‌ನಲ್ಲಿ ಬೆಳ್ಳಿ, 2022ರ ಹ್ಯಾಂಗ್‌ಝೂ ಏಷ್ಯನ್‌ ಪ್ಯಾರಾ ಗೇಮ್ಸ್‌ನಲ್ಲಿ ಬಂಗಾರ ಗೆದ್ದ ಹಿರಿಮೆ ಪ್ರಣವ್‌ ಅವರದ್ದಾಗಿದೆ.

ಏನಿದು ಎಫ್ 51 ವಿಭಾಗ?
ದೇಹದ ನಡುಭಾಗ, ಕಾಲು, ಕೈಗಳ ಚಲನೆಯ ದೌರ್ಬಲ್ಯ ಹೊಂದಿರುವ ಆ್ಯತ್ಲೀಟ್‌ಗಳು ಈ ವಿಭಾಗದಲ್ಲಿ ಸ್ಪರ್ಧಿಸುತ್ತಾರೆ. ಇಲ್ಲಿ “ಎಫ್’ ಎಂದರೆ ಫೀಲ್ಡ್‌ ಅಥವಾ ಓಟದ ಸ್ಪರ್ಧೆಗಳಿಗೆ ಹೊರತಾಗಿರುವ ವಿಭಾಗ ಎಂದು ಅರ್ಥೈಸಿಕೊಳ್ಳಬಹುದು.

ಟಾಪ್ ನ್ಯೂಸ್

Surathkal: ಕಾಟಿಪಳ್ಳ ಮಸೀದಿ ಕಲ್ಲು ತೂರಾಟ ವಿಚಾರ; ನಾಲ್ವರನ್ನು ಬಂಧಿಸಿದ ಪೊಲೀಸರು

Surathkal: ಕಾಟಿಪಳ್ಳ ಮಸೀದಿ ಕಲ್ಲು ತೂರಾಟ ವಿಚಾರ; ನಾಲ್ವರನ್ನು ಬಂಧಿಸಿದ ಪೊಲೀಸರು

Delhi Govt: ದೆಹಲಿ ಸಿಎಂ ರೇಸ್‌ ನಲ್ಲಿದ್ದಾರೆ ಹಲವರು..: ಇಲ್ಲಿದೆ ವಿವರ

Delhi Govt: ದೆಹಲಿ ಸಿಎಂ ರೇಸ್‌ ನಲ್ಲಿದ್ದಾರೆ ಹಲವರು..: ಇಲ್ಲಿದೆ ವಿವರ

Uttar Pradesh: ಭಾರೀ ಮಳೆಗೆ 14 ಮಂದಿ ಮೃತ್ಯು… ಅಪಾಯದ ಮಟ್ಟ ಮೀರಿ ಹರಿಯುವ ನದಿ

Uttar Pradesh: ಭಾರೀ ಮಳೆಗೆ 14 ಮಂದಿ ಮೃತ್ಯು… ಅಪಾಯದ ಮಟ್ಟ ಮೀರಿ ಹರಿಯುವ ನದಿ

Jani Master: ಲೈಂಗಿಕ ಕಿರುಕುಳ ಆರೋಪ; ಖ್ಯಾತ ನೃತ್ಯ ಸಂಯೋಜಕ ಜಾನಿ ಮಾಸ್ಟರ್‌ ವಿರುದ್ಧ FIR

Jani Master: ಲೈಂಗಿಕ ಕಿರುಕುಳ ಆರೋಪ; ಖ್ಯಾತ ನೃತ್ಯ ಸಂಯೋಜಕ ಜಾನಿ ಮಾಸ್ಟರ್‌ ವಿರುದ್ಧ FIR

4

Kadambari Jethwani: ನಟಿಯನ್ನು ಅಕ್ರಮವಾಗಿ ಬಂಧಿಸಿದ ಆರೋಪ; 3 ಐಪಿಎಸ್ ಅಧಿಕಾರಿಗಳು ಅಮಾನತು

1-vaya-big

Wayanad; ಲಯನಾಡಿನಲ್ಲಿ ಕಣ್ಣೀರಿನ ಓಣಂ, ಈದ್‌!

ಟ್ರಂಪ್ ಮೇಲೆ ಮತ್ತೆ ಗುಂಡಿನ ದಾಳಿ… ಫ್ಲೋರಿಡಾ ಗಾಲ್ಫ್ ಕ್ಲಬ್‌ನಲ್ಲಿ ಘಟನೆ, ಆರೋಪಿ ಬಂಧನ

ಟ್ರಂಪ್ ಮೇಲೆ ಮತ್ತೆ ಗುಂಡಿನ ದಾಳಿ… ಫ್ಲೋರಿಡಾ ಗಾಲ್ಫ್ ಕ್ಲಬ್‌ನಲ್ಲಿ ಘಟನೆ, ಆರೋಪಿ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-trrr

Asian Champions Trophy ಸೆಮಿಫೈನಲ್‌ : ಕೊರಿಯಾ ವಿರುದ್ಧ ಭಾರತ ಫೇವರಿಟ್‌

1-qe-weqeqqe

Bangla T20; ಶುಭಮನ್‌ ಗಿಲ್‌ ಸೇರಿದಂತೆ ಕೆಲವರಿಗೆ ವಿಶ್ರಾಂತಿ

tennis

Davis Cup: ಸ್ವೀಡನ್‌ ವಿರುದ್ಧ ಭಾರತಕ್ಕೆ 6ನೇ ಸೋಲು

1-reee

Test; ಹೆಚ್ಚುವರಿ ಆತ್ಮವಿಶ್ವಾಸದೊಂದಿಗೆ ಚೆನ್ನೈಗೆ ಬಂದ ಬಾಂಗ್ಲಾ ತಂಡ

1-acd

Duleep Trophy ಕ್ರಿಕೆಟ್‌ : ಅಗರ್ವಾಲ್‌ ಬಳಗಕ್ಕೆ ಜಯ

MUST WATCH

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

udayavani youtube

ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

udayavani youtube

ಉಡುಪಿ ಕೃಷ್ಣ ಮಠದಲ್ಲಿರುವ ಸುಬ್ರಹ್ಮಣ್ಯ ಸನ್ನಿಧಿ

ಹೊಸ ಸೇರ್ಪಡೆ

Surathkal: ಕಾಟಿಪಳ್ಳ ಮಸೀದಿ ಕಲ್ಲು ತೂರಾಟ ವಿಚಾರ; ನಾಲ್ವರನ್ನು ಬಂಧಿಸಿದ ಪೊಲೀಸರು

Surathkal: ಕಾಟಿಪಳ್ಳ ಮಸೀದಿ ಕಲ್ಲು ತೂರಾಟ ವಿಚಾರ; ನಾಲ್ವರನ್ನು ಬಂಧಿಸಿದ ಪೊಲೀಸರು

Delhi Govt: ದೆಹಲಿ ಸಿಎಂ ರೇಸ್‌ ನಲ್ಲಿದ್ದಾರೆ ಹಲವರು..: ಇಲ್ಲಿದೆ ವಿವರ

Delhi Govt: ದೆಹಲಿ ಸಿಎಂ ರೇಸ್‌ ನಲ್ಲಿದ್ದಾರೆ ಹಲವರು..: ಇಲ್ಲಿದೆ ವಿವರ

Uttar Pradesh: ಭಾರೀ ಮಳೆಗೆ 14 ಮಂದಿ ಮೃತ್ಯು… ಅಪಾಯದ ಮಟ್ಟ ಮೀರಿ ಹರಿಯುವ ನದಿ

Uttar Pradesh: ಭಾರೀ ಮಳೆಗೆ 14 ಮಂದಿ ಮೃತ್ಯು… ಅಪಾಯದ ಮಟ್ಟ ಮೀರಿ ಹರಿಯುವ ನದಿ

Jani Master: ಲೈಂಗಿಕ ಕಿರುಕುಳ ಆರೋಪ; ಖ್ಯಾತ ನೃತ್ಯ ಸಂಯೋಜಕ ಜಾನಿ ಮಾಸ್ಟರ್‌ ವಿರುದ್ಧ FIR

Jani Master: ಲೈಂಗಿಕ ಕಿರುಕುಳ ಆರೋಪ; ಖ್ಯಾತ ನೃತ್ಯ ಸಂಯೋಜಕ ಜಾನಿ ಮಾಸ್ಟರ್‌ ವಿರುದ್ಧ FIR

4

Kadambari Jethwani: ನಟಿಯನ್ನು ಅಕ್ರಮವಾಗಿ ಬಂಧಿಸಿದ ಆರೋಪ; 3 ಐಪಿಎಸ್ ಅಧಿಕಾರಿಗಳು ಅಮಾನತು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.