Paris Games; ಟೋಕಿಯೊದಲ್ಲಿ ಕಣ್ಣೀರು-ಪ್ಯಾರಿಸ್ ನಲ್ಲಿ ಪದಕ ಮಾಲೆ; ಇದು ಮನು ಭಾಕರ್ ಯಶೋಗಾಥೆ
ಕಂಚು ಗೆದ್ದು ಐತಿಹಾಸಿಕ ದಾಖಲೆ ಬರೆದ 22 ವರ್ಷದ ಮನು ಭಾಕರ್
Team Udayavani, Jul 28, 2024, 4:47 PM IST
ಪ್ಯಾರಿಸ್: ಸಮ್ಮರ್ ಒಲಿಂಪಿಕ್ಸ್ ನ ವನಿತಾ ಶೂಟಿಂಗ್ ವಿಭಾಗದಲ್ಲಿ ಭಾರತದ ಪದಕದ ಬರ ಇಂದು ನೀಗಿದೆ. 22 ವರ್ಷದ ಭಾರತದ ಶೂಟರ್ ಮನು ಭಾಕರ್ ಅವರು ಪ್ಯಾರಿಸ್ ಒಲಿಂಪಿಕ್ಸ್ ನ 10 ಮೀಟರ್ ವನಿತಾ ಏರ್ ಪಿಸ್ತೂಲ್ ವಿಭಾಗದಲ್ಲಿ ಕಂಚು ಗೆದ್ದು ಮಿಂಚಿದ್ದಾರೆ. ಈ ಮೂಲಕ 2024ರ ಒಲಿಂಪಿಕ್ಸ್ ನಲ್ಲಿ ಭಾರತಕ್ಕೆ ಮೊದಲ ಪದಕ ಬಂದಿದೆ.
ಮನು ಭಾಕರ್ ಅವರು ಒಲಿಂಪಿಕ್ಸ್ನಲ್ಲಿ ಪದಕ ಗೆದ್ದ ಮೊದಲ ಮಹಿಳಾ ಶೂಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಭಾಕರ್ ಅವರು ಆರಂಭದಿಂದ ಅಂತ್ಯದವರೆಗೆ ಅತ್ಯುತ್ತಮ ಗುಣಮಟ್ಟವನ್ನು ಕಾಯ್ದುಕೊಂಡರು. ಅತ್ಯುತ್ತಮ ಕೌಶಲ್ಯ ಮತ್ತು ಹಿಡಿತವನ್ನು ತೋರಿಸಿದ ಭಾಕರ್ ಟಾಪ್ 3 ರಲ್ಲಿ ಮೂಡಿ ಬಂದರು.
ಅಂತಿಮ ಹೊಡೆತಕ್ಕೆ ಎರಡನೇ ಹೆಡ್ಡಿಂಗ್ನಲ್ಲಿ ಭಾಕರ್ 0.1 ಮುಂದಿದ್ದರು, ಆದರೆ ಅದರ ನಂತರ ಮೂರನೇ ಸ್ಥಾನಕ್ಕೆ ಜಾರಿದರು. ಭಾಕರ್ ಅವರು 221.7 ಅಂಕಗಳನ್ನು ಗಳಿಸಿದರು, ಅವರ ಅಂತಿಮ ಹೊಡೆತದಲ್ಲಿ 10.3 ಅನ್ನು ಹೊಡೆದರು, ಬೆಳ್ಳಿ ಪದಕ ವಿಜೇತ ಯೆಜಿ ಕಿಮ್ 10.5 ಗೆ ಹೊಡೆದಿದ್ದರಿಂದ ಭಾಕರ್ ಅಂತಿಮವಾಗಿ ಮೂರನೇ ಸ್ಥಾನ ಪಡೆದರು.
ಹರ್ಯಾಣದ ಮನು ಭಾಕರ್ ಒಲಿಂಪಿಕ್ಸ್ನಲ್ಲಿ ಪದಕ ಗೆದ್ದ ಮೊದಲ ಮಹಿಳಾ ಶೂಟರ್. ಒಟ್ಟಾರೆ ರಾಜ್ಯವರ್ಧನ್ ಸಿಂಗ್ ರಾಥೋಡ್ (2004), ಅಭಿನವ್ ಬಿಂದ್ರಾ (2008), ವಿಜಯ್ ಕುಮಾರ್ (2012) ಮತ್ತು ಗಗನ್ ನಾರಂಗ್ (2012) ನಂತರ ಒಲಿಂಪಿಕ್ಸ್ ನಲ್ಲಿ ಪದಕ ಗೆದ್ದ ಭಾರತದಿಂದ ಐದನೇ ಶೂಟರ್ ಆಗಿದ್ದಾರೆ.
ಟೋಕಿಯೊ ಒಲಿಂಪಿಕ್ಸ್ ನಲ್ಲಿ ಪಿಸ್ತೂಲ್ ಕೈಕೊಟ್ಟ ಕಾರಣದಿಂದ ಮನು ಭಾರಿ ನಿರಾಸೆ ಅನುಭವಿಸಿದ್ದರು. ಇದೀಗ ಪದಕ ಗೆದ್ದು ಮಿಂಚಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು, “ಟೋಕಿಯೊದ ನಂತರ ನಾನು ತುಂಬಾ ನಿರಾಶೆಗೊಂಡಿದ್ದೆ. ಅದರಿಂದ ಹೊರಬರಲು ನನಗೆ ಬಹಳ ಸಮಯ ಹಿಡಿಯಿತು. ಇಂದು ನಾನು ಎಷ್ಟು ಸಂತಸಗೊಂಡಿದ್ದೇನೆ ಎಂದು ನಾನು ವಿವರಿಸಲು ಸಾಧ್ಯವಿಲ್ಲ” ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Asian Champions Trophy: ಕೊರಿಯಾ ವಿರುದ್ದ ಗೆದ್ದು ಫೈನಲ್ ಪ್ರವೇಶಿಸಿದ ಭಾರತ ಹಾಕಿ ತಂಡ
International ಕರಾಟೆ ಚಾಂಪಿಯನ್ ಶಿಪ್; ಸುಜಲ್ ಜೆ ಶೆಟ್ಟಿಗೆ ಬೆಳ್ಳಿ,ಕಂಚು
ENGvsAUS: ಏಕದಿನ ಸರಣಿಗೂ ಬಟ್ಲರ್ ಅಲಭ್ಯ; ಎಸ್ಆರ್ಎಚ್ ಆಟಗಾರನಿಗೆ ನಾಯಕತ್ವ
B–G Trophy: ಈತನೇ ಭಾರತದ ಮುಂದಿನ ಸೂಪರ್ ಸ್ಟಾರ್ ಎಂದ ಸ್ಟೀವ್ ಸ್ಮಿತ್, ಸ್ಟಾರ್ಕ್
Asian Champions Trophy ಸೆಮಿಫೈನಲ್ : ಕೊರಿಯಾ ವಿರುದ್ಧ ಭಾರತ ಫೇವರಿಟ್
MUST WATCH
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.