![IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ](https://www.udayavani.com/wp-content/uploads/2025/02/5-25-415x249.jpg)
![IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ](https://www.udayavani.com/wp-content/uploads/2025/02/5-25-415x249.jpg)
Team Udayavani, Aug 9, 2024, 11:00 AM IST
ಪ್ಯಾರಿಸ್: ಪ್ಯಾರಿಸ್ ಒಲಿಂಪಿಕ್ಸ್ 2024ರ (Paris Olympics 2024) ಜಾವೆಲಿನ್ ಥ್ರೋ (Javelin Throw) ಸ್ಪರ್ಧೆಯಲ್ಲಿ ಪಾಕಿಸ್ತಾನದ ಅರ್ಶದ್ ನದೀಂ (Arshad Nadeem) ಒಲಿಂಪಿಕ್ ದಾಖಲೆಯೊಂದಿಗೆ ಚಿನ್ನದ ಪದಕ ಗೆದ್ದಿದ್ದಾರೆ. ಟೋಕಿಯೊ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ (Neeraj Chopra) ಅವರು ಬೆಳ್ಳಿ ಗೆದ್ದಿದ್ದಾರೆ.
ಅರ್ಶದ್ ನದೀಂ ಅವರು 92.77 ಮೀಟರ್ ಜಾವೆಲಿನ್ ಎಸೆದು ದಾಖಲೆ ನಿರ್ಮಿಸಿದರು. ಕೇವಲ ಒಲಿಂಪಿಕ್ ದಾಖಲೆ ಮುರಿದಿದ್ದು ಮಾತ್ರವಲ್ಲದೆ, ಸಾರ್ವಕಾಲಿಕ ಜಾವೆಲಿನ್ ಎಸೆತದಲ್ಲಿ ಆರನೇ ಸ್ಥಾನಕ್ಕೇರಿದರು.
ಅರ್ಹತಾ ಸುತ್ತಿನಲ್ಲಿ ಮೊದಲ ಎಸೆತದಲ್ಲೇ ಭರ್ಜರಿ ಪ್ರದರ್ಶನ ನೀಡಿದ್ದ ನೀರಜ್, ಫೈನಲ್ ನಲ್ಲಿ ಕಷ್ಟಪಟ್ಟರು. ಆರು ಅವಕಾಶಗಳಲ್ಲಿ ನೀರಜ್ ಐದು ಬಾರಿ ಫೌಲ್ ಆದರು. ಎರಡನೇ ಪ್ರಯತ್ನದಲ್ಲಿ ಅವರು 89.45 ಮೀಟರ್ ದೂರ ಈಟಿ ಎಸೆದರು. ಗ್ರೆನೆಡಾದ ಆಂಡರ್ಸನ್ ಪೀಟರ್ಸ್ ಅವರು 88.54 ಮೀಟರ್ ಎಸೆದು ಮೂರನೇ ಸ್ಥಾನಕ್ಕೇರಿದರು.
ಪಂದ್ಯದ ಬಳಿಕ ಮಾತನಾಡಿದ ನೀರಜ್ ಚೋಪ್ರಾ ತಾಯಿ ಸರೋಜ್ ದೇವಿ ಭಾರತ ಮಾತ್ರವಲ್ಲದೆ ಪಾಕಿಸ್ತಾನದ ಅಭಿಮಾನಿಗಳ ಪ್ರೀತಿ ಪಡೆದರು.
“ನಾವು ಬೆಳ್ಳಿಯಿಂದ ಸಂತೋಷವಾಗಿದ್ದೇವೆ, ಚಿನ್ನ ಪಡೆದ ಅರ್ಶದ್ ನದೀಂ ಕೂಡಾ ನನ್ನ ಮಗ” ಎಂದು ಸರೋಜ್ ದೇವಿ ಹೇಳಿದರು.
ನೀರಜ್ ಅವರ ತಾಯಿಯ ಮಾತುಗಳನ್ನು ಭಾರತ ಮತ್ತು ಪಾಕಿಸ್ತಾನಿ ಅಭಿಮಾನಿಗಳು ಅವರ ಪ್ರೀತಿ ಮತ್ತು ಕ್ರೀಡಾ ಮನೋಭಾವಕ್ಕಾಗಿ ವ್ಯಾಪಕವಾಗಿ ಹೊಗಳಿದ್ದಾರೆ.
#WATCH | Haryana: On Neeraj Chopra winning a silver medal in men’s javelin throw at #ParisOlympics2024, his mother Saroj Devi says, “We are very happy, for us silver is also equal to gold…he was injured, so we are happy with his performance…” pic.twitter.com/6VxfMZD0rF
— ANI (@ANI) August 8, 2024
ಪಂದ್ಯದ ಬಳಿಕ ಮಾತನಾಡಿದ ನೀರಜ್ ಚೋಪ್ರಾ ಇಂದು ದೇವರ ಆಶೀರ್ವಾದ ಅರ್ಶದ್ ಮೇಲಿತ್ತು ಎಂದರು.
“ಅವರು ಅತ್ಯುತ್ತಮವಾಗಿ ಎಸೆದರು. ಕ್ರೀಡೆಯಲ್ಲಿ ಕೆಲವೊಮ್ಮೆ ನಿಮ್ಮ ದಿನ, ಕೆಲವೊಮ್ಮೆ ಬೇರೆಯವರ ದಿನವಿರುತ್ತದೆ. ಬಹುಶಃ ದೇವರ ಆಶೀರ್ವಾದವು ಇಂದು ಅರ್ಶದ್ ಗೆ ಹೆಚ್ಚಿತ್ತು. ನಾನು ನನ್ನ ಅತ್ಯುತ್ತಮ ಪ್ರಯತ್ನವನ್ನು ಮಾಡಿದ್ದೇನೆ, ನಾನು ಎಸೆಯಲು ನಿರ್ವಹಿಸಿದ ದೂರದಿಂದ ನನಗೆ ಸಂತೋಷವಾಗಿದೆ” ಎಂದು ನೀರಜ್ ಹೇಳಿದರು.
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Team India: ಪಂತ್-ರಾಹುಲ್ ವಿಚಾರದಲ್ಲಿ ಗಂಭೀರ್- ಅಗರ್ಕರ್ ನಡುವೆ ಭಿನ್ನಾಭಿಪ್ರಾಯ
IPL 2025: ಮತ್ತೊಬ್ಬ ಅಫ್ಘಾನಿ ಬೌಲರ್ ಬದಲು ಮುಂಬೈ ಇಂಡಿಯನ್ಸ್ ತಂಡದ ಸೇರಿದ ಮುಜೀಬ್
ODI Ranking: ನಂ.1 ಸ್ಥಾನದಲ್ಲೇ ಉಳಿದ ಭಾರತ, 4ಕ್ಕೆ ಜಿಗಿದ ನ್ಯೂಜಿಲೆಂಡ್
Team India: ʼನಾವು ನಟರಲ್ಲ..ʼ: ಟೀಂ ಇಂಡಿಯಾದ ಸೂಪರ್ಸ್ಟಾರ್ ಸಂಸ್ಕೃತಿ ಟೀಕಿಸಿದ ಅಶ್ವಿನ್
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಯಾನಿಯ ಪ್ರಾರ್ಥನೆ
Pariksha Pe Charcha: ಸ್ಮಾರ್ಟ್ ಫೋನ್ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ
You seem to have an Ad Blocker on.
To continue reading, please turn it off or whitelist Udayavani.