Paris Olympics; ಇಂದು ಭಾರತದ ಅಭಿಯಾನ ಆರಂಭ; ಪದಕಕ್ಕೆ ಗುರಿ ಇಡಲಿ ಆರ್ಚರಿ ತಂಡ
Team Udayavani, Jul 25, 2024, 12:30 PM IST
ಪ್ಯಾರಿಸ್: 2024ನೇ ಸಾಲಿನ ಒಲಿಂಪಿಕ್ಸ್ಗೆ ಶುಕ್ರವಾರ ಅಧಿಕೃತ ಚಾಲನೆ ದೊರಕಲಿದ್ದರೂ ಭಾರತದ ಅಭಿಯಾನ ಗುರುವಾರವೇ ಆರಂಭವಾಗಲಿದೆ. ಆರ್ಚರಿಯ ವೈಯಕ್ತಿಕ ರ್ಯಾಂಕಿಂಗ್ನ ಸ್ಪರ್ಧೆಗಳು ಗುರುವಾರ ಆರಂಭವಾಗಲಿದ್ದು, ಭಾರತದ 6 ಮಂದಿ ಬಿಲ್ಲಾಳುಗಳು ಸ್ಪರ್ಧಿಸುತ್ತಿದ್ದಾರೆ.
ಆರ್ಚರಿ ಭಾರತದ ನೆಚ್ಚಿನ ಕ್ರೀಡೆಗಳಲ್ಲೊಂದು. ಆದರೆ 1988ರಲ್ಲಿ ಒಲಿಂಪಿಕ್ಸ್ನಲ್ಲಿ ಆರ್ಚರಿ ಸ್ಪರ್ಧೆಯನ್ನು ಆಯೋಜಿಸಿದ ಬಳಿಕ ಭಾರತಕ್ಕೆ ಇನ್ನೂ ಪದಕಕ್ಕೆ ಗುರಿ ಇರಿಸಲಾಗಲಿಲ್ಲ. 2000ದ ಸಿಡ್ನಿ ಕೂಟಕ್ಕೆ ಅರ್ಹತೆಯೇ ಲಭಿಸಿರಲಿಲ್ಲ. ಉಳಿದಂತೆ ಪ್ರತೀ ಸಲವೂ ಪದಕದ ನಿರೀಕ್ಷೆ ಗರಿಗೆದರುತ್ತದೆಯೇ ಹೊರತು ಯಶಸ್ಸು ಮಾತ್ರ ಮರೀಚಿಕೆಯೇ ಆಗುಳಿದಿದೆ. ಎಲ್ಲೂ ಕ್ವಾರ್ಟರ್ ಫೈನಲ್ನಾಚೆ ದಾಟಿಲ್ಲ. ಪ್ಯಾರಿಸ್ನಲ್ಲಾದರೂ ಪದಕಕ್ಕೆ ಮುತ್ತಿಡಬೇಕಿದೆ.
6 ಸದಸ್ಯರ ತಂಡ: 2012ರ ಲಂಡನ್ ಕೂಟದ ಬಳಿಕ ಭಾರತ ಮೊದಲ ಬಾರಿಗೆ ಪೂರ್ತಿ 6 ಸದಸ್ಯರ ತಂಡವನ್ನು ಒಲಿಂಪಿಕ್ಸ್ಗೆ ರವಾನಿಸಿದೆ. ವನಿತೆಯರ ವಿಭಾಗದಲ್ಲಿ ದೀಪಿಕಾ ಕುಮಾರಿ, ಅಂಕಿತಾ ಭಕತ್, ಭಜನ್ ಕೌರ್; ಪುರುಷರ ವಿಭಾಗದಲ್ಲಿ ಬಿ.ಧೀರಜ್, ತುರುಣ್ದೀಪ್ ರಾಯ್, ಪ್ರವೀಣ್ ಜಾಧವ್ ಸ್ಪರ್ಧೆಗೆ ಇಳಿಯಲಿದ್ದಾರೆ. ಇವರೆಲ್ಲರೂ ರ್ಯಾಂಕಿಂಗ್ ಅರ್ಹತೆಯ ಮೇಲೆ ಆಯ್ಕೆಯಾದ ಕಾರಣ ಎಲ್ಲ 5 ವಿಭಾಗಗಳಲ್ಲೂ ಸ್ಪರ್ಧಿಸಬಹುದಾಗಿದೆ.
72 ಬಾಣಗಳ ಗುರಿ: ಹಿರಿಯರಾದ ತುರುಣ್ ದೀಪ್ ರಾಯ್ ಮತ್ತು ದೀಪಿಕಾ ಕುಮಾರಿ ಅವರಿಗೆ ಇದು 4ನೇ ಒಲಿಂಪಿಕ್ಸ್. ಅರ್ಹತಾ ಸುತ್ತಿನಲ್ಲಿ 53 ದೇಶಗಳ 128 ಆರ್ಚರ್ ಸ್ಪರ್ಧಿಸಲಿದ್ದಾರೆ. ಒಬ್ಬೊಬ್ಬರಿಗೆ ತಲಾ 72 ಬಾಣಗಳ ಗುರಿ ಲಭಿಸಲಿದೆ. ಇಲ್ಲಿ ಟಾಪ್-10 ಸ್ಥಾನ ಸಂಪಾದಿಸಿದರೆ ನಾಕೌಟ್ ಸ್ಪರ್ಧೆ ಸುಲಭವಾಗಲಿದೆ.
ಪುರುಷರ ಮೇಲೆ ಭರವಸೆ: ಈ ಬಾರಿ ಭಾರತದ ಪುರುಷರ ವಿಭಾಗದ ಮೇಲೆ ಭಾರೀ ಭರವಸೆ ಇರಿಸಲಾಗಿದೆ. ಕಳೆದ ಶಾಂಘೈ ವಿಶ್ವಕಪ್ ನಲ್ಲಿ ಫೇವರಿಟ್ ಕೊರಿಯಾವನ್ನು ಬುಡಮೇಲು ಮಾಡಿ ಚಾಂಪಿಯನ್ ಆಗಿತ್ತು. ವನಿತಾ ವಿಭಾಗದಲ್ಲಿ ದೀಪಿಕಾ ಕುಮಾರಿ ಬೆಳ್ಳಿ ಪದಕ ಜಯಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pro Kabaddi League: ಇಂದಿನಿಂದ ಕಬಡ್ಡಿ ಮಹಾಜಾತ್ರೆ
Womens Cricket: ನ್ಯೂಜಿಲ್ಯಾಂಡ್ ಎದುರಿನ ಏಕದಿನ ಸರಣಿಗೆ ನಾಯಕತ್ವ ಉಳಿಸಿಕೊಂಡ ಕೌರ್
Pro Kabaddi League: ಇಂದಿನಿಂದ 11ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ಹವಾ
Womens T20 World Cup: 6 ಬಾರಿ ಚಾಂಪಿಯನ್ ಆಸ್ಟ್ರೇಲಿಯಾ ಮಣಿಸಿ ಫೈನಲ್ಗೇರಿದ ದ.ಆಫ್ರಿಕಾ
Virat Kohli ಸಮಸ್ಯೆಗಳನ್ನು ಜಟಿಲಗೊಳಿಸಿದ್ದಾರೆ!; ಖ್ಯಾತ ಕ್ರಿಕೆಟ್ ವಿಶ್ಲೇಷಕ ಟೀಕೆ
MUST WATCH
ಹೊಸ ಸೇರ್ಪಡೆ
Aranthodu: ಅರಮನೆಗಯ ಶಿಥಿಲಗೊಂಡ ತೂಗು ಸೇತುವೆಯಿಂದ ಕೆಳಗೆ ಬಿದ್ದು ಮೂವರಿಗೆ ಗಾಯ
Manipur: ಸಿಎಂ ಬಿರೇನ್ ಸಿಂಗ್ ಪದಚ್ಯುತಿಗೆ ಆಗ್ರಹಿಸಿ ಬಿಜೆಪಿ ಶಾಸಕರಿಂದ ಪ್ರಧಾನಿಗೆ ಪತ್ರ
Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ
Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ
Canada Vs India: ನಿಜ್ಜರ್ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.