Paris Paralympics; ಭಾರತದ ಕ್ರೀಡಾಳುಗಳಿಗೆ ಬೀಳ್ಕೊಡುಗೆ
ಆ. 28ರಿಂದ ಸೆ. 8ರ ತನಕ ಪ್ಯಾರಿಸ್ನಲ್ಲಿ ಕ್ರೀಡಾಕೂಟ, ಭಾರತದಿಂದ 84 ಆ್ಯತ್ಲೀಟ್ಸ್ , 12 ವಿಭಾಗಗಳಲ್ಲಿ ಸ್ಪರ್ಧೆ
Team Udayavani, Aug 17, 2024, 6:00 AM IST
ಹೊಸದಿಲ್ಲಿ: ಪ್ಯಾರಿಸ್ ಪ್ಯಾರಾ ಲಿಂಪಿಕ್ಸ್ನಲ್ಲಿ ಪ್ರತಿನಿಧಿಸಲಿರುವ ಭಾರತದ ಕ್ರೀಡಾಪಟುಗಳನ್ನು ಶುಕ್ರವಾರ ಬೀಳ್ಕೊಡ ಲಾಯಿತು. ಪ್ಯಾರಾಲಿಂಪಿಕ್ ಕಮಿಟಿ ಆಫ್ ಇಂಡಿಯಾ (ಪಿಸಿಐ) ಮತ್ತು ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ (ಎಸ್ಎಐ) ಸೇರಿಕೊಂಡು ರಾಜಧಾನಿಯಲ್ಲಿ ಈ ಸಮಾರಂಭವನ್ನು ಏರ್ಪಡಿಸಿದ್ದವು.
“ನಮ್ಮ ಪ್ಯಾರಾ ಆ್ಯತ್ಲೀಟ್ಗಳು ಅಡೆತಡೆ ಗಳನ್ನೆಲ್ಲ ಮೀರಿ ಗೆಲುವು ಸಾಧಿಸುವ, ಸವಾಲುಗಳನ್ನು ಅವಕಾಶಗಳಾಗಿ ಪರಿವರ್ತಿ ಸುವ ಸಾಮರ್ಥ್ಯ ಹೊಂದಿದ್ದಾರೆ. 2024ರ ಕ್ರೀಡಾಕೂಟದ ತಯಾರಿಯ ವೇಳೆ ಉತ್ತಮ ದೃಢತೆ ಮತ್ತು ಪರಿಶ್ರಮ ವಹಿಸಿದ್ದಾರೆ. ಅನೇಕ ಕ್ರೀಡಾಪಟುಗಳು ಖೇಲೋ ಇಂಡಿಯಾದಿಂದ ಲಾಭ ಪಡೆದಿದ್ದಾರೆ. ಸರಕಾರ ಸರ್ವರೀತಿಯ ಸವಲತ್ತು ನೀಡುತ್ತ ಬಂದಿದೆ. ಇವರೆಲ್ಲರ ಪಾಲಿಗೆ ಇದೊಂದು ಮಹತ್ವದ ಪಯಣ. ದೇಶದ ಪ್ರತಿಷ್ಠೆ ಹಾಗೂ ಗೌರವವನ್ನು ಎತ್ತಿಹಿಡಿಯುವ ವಿಶ್ವಾಸವಿದೆ’ ಎಂದು ಕ್ರೀಡಾ ಸಚಿವ ಮನ್ಸುಖ್ ಮಾಂಡವೀಯ ಈ ಸಂದರ್ಭದಲ್ಲಿ ಹೇಳಿದರು.
ಈ ಬಾರಿ 84 ಮಂದಿ
ಟೋಕಿಯೊ ಪ್ಯಾರಾಲಿಂಪಿಕ್ಸ್ಗಾಗಿ ಭಾರತ 54 ಕ್ರೀಡಾಳುಗಳನ್ನು ಕಳುಹಿಸಿತ್ತು. ಅಲ್ಲಿ 19 ಪದಕ ಒಲಿದಿತ್ತು. ಈ ಬಾರಿ 84 ಕ್ರೀಡಾಪಟುಗಳ ತಂಡ ಪ್ಯಾರಿಸ್ಗೆ ತೆರಳಲಿದೆ. ಆದರೆ ಬ್ಯಾಡ್ಮಿಂಟನ್ ತಾರೆ, ಟೋಕಿಯೊದಲ್ಲಿ ಚಿನ್ನ ಜಯಿಸಿದ್ದ ಪ್ರಮೋದ್ ಭಗತ್ ಅಮಾನತಿಗೊಳಗಾದದ್ದೊಂದು ಹಿನ್ನಡೆ.
ಇದೇ ಸಂದರ್ಭದಲ್ಲಿ ಭಾರತದ ಪ್ಯಾರಾ ಲಿಂಪಿಕ್ಸ್ ಕ್ರೀಡಾಳುಗಳಿಗೆ ಸ್ಫೂರ್ತಿ ತುಂಬಬಲ್ಲ, ಅಭಿಷೇಕ್ ದುಬೆ ಮತ್ತು ಮಹಾವೀರ್ ರಾವತ್ ಬರೆದ “ಬ್ರೇಕಿಂಗ್ ಬ್ಯಾರಿಯರ್’ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.
12 ವಿಭಾಗಗಳಲ್ಲಿ ಸ್ಪರ್ಧೆ
ಭಾರತದ ಕ್ರೀಡಾಪಟುಗಳು 12 ಸ್ಪರ್ಧೆ ಗಳಲ್ಲಿ ಪದಕ ಬೇಟೆಗೆ ಇಳಿಯಲಿದ್ದಾರೆ. ಇವುಗಳೆಂದರೆ ಆರ್ಚರಿ, ಆ್ಯತ್ಲೆಟಿಕ್ಸ್, ಬ್ಯಾಡ್ಮಿಂಟನ್, ಕನೋಯಿಂಗ್, ಸೈಕ್ಲಿಂಗ್, ಬ್ಲೆ„ಂಡ್ ಜೂಡೋ, ಪವರ್ಲಿಫ್ಟಿಂಗ್, ರೋವಿಂಗ್, ಶೂಟಿಂಗ್, ಸ್ವಿಮ್ಮಿಂಗ್, ಟೇಬಲ್ ಟೆನಿಸ್ ಮತ್ತು ಟೇಕ್ವಾಂಡೊ.
ಸುಮಿತ್, ಭಾಗ್ಯಶ್ರೀ ಧ್ವಜಧಾರಿಗಳು
ಪ್ಯಾರಾಲಿಂಪಿಕ್ಸ್ ಉದ್ಘಾಟನ ಸಮಾರಂಭದಲ್ಲಿ ಜಾವೆಲಿನ್ ಎಸೆತಗಾರ ಸುಮಿತ್ ಆಂಟಿಲ್ ಮತ್ತು ಶಾಟ್ಪುಟ್ ತಾರೆ ಭಾಗ್ಯಶ್ರೀ ಜಾಧವ್ ಭಾರತದ ತ್ರಿವರ್ಣ ಧ್ವಜಧಾರಿಗಳಾಗಿ ಆಯ್ಕೆಯಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
INDvsBAN: ಕುಸಿದ ಭಾರತಕ್ಕೆ ಆಸರೆಯಾದ ಅಶ್ವಿನ್, ಜಡೇಜಾ; ಶತಕ ಬಾರಿಸಿದ ಲೋಕಲ್ ಬಾಯ್
INDvsBAN: ”ಈತ ಭಾರತದ ಬಾಬರ್ ಅಜಂ..”: ಟೀಂ ಇಂಡಿಯಾ ಆಟಗಾರನಿಗೆ ನೆಟ್ಟಿಗರ ತರಾಟೆ
Cricket: ಲಂಕಾ ಕ್ರಿಕೆಟಿಗನನ್ನು 20 ವರ್ಷಗಳ ಕಾಲ ಬ್ಯಾನ್ ಮಾಡಿದ ಕ್ರಿಕೆಟ್ ಆಸ್ಟ್ರೇಲಿಯಾ
Ricky Ponting: ಡೆಲ್ಲಿಯಿಂದ ಪಂಜಾಬ್ ಗೆ ಬಂದ ರಿಕಿ ಪಾಂಟಿಂಗ್
Test Series: ಭಾರತ-ಬಾಂಗ್ಲಾ ತಂಡಗಳಿಗೆ ರಿಯಲ್ ಟೆಸ್ಟ್
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.