Paris; ದುರದೃಷ್ಟದ ಒಲಿಂಪಿಕ್ಸ್‌; ರಿತಿಕಾ, ವಿನೇಶ್‌ಗೆ ಕಾಡಿದ ನಿಯಮಗಳು

ನಿಶಾ ಕುಸ್ತಿ ಪದಕಕ್ಕೆ "ಕೈ'ಕೊಟ್ಟ ಭುಜನೋವು;ಆರು ಸ್ಪರ್ಧೆಗಳಲ್ಲಿ 4ನೇ ಸ್ಥಾನ, ಗರಿಷ್ಠ 4ನೇ ಸ್ಥಾನಿಗಳ ದೇಶಗಳ ಪೈಕಿ ಭಾರತ ನಂಬರ್‌ 5!

Team Udayavani, Aug 12, 2024, 7:05 AM IST

Paris; ದುರದೃಷ್ಟದ ಒಲಿಂಪಿಕ್ಸ್‌; ರಿತಿಕಾ, ವಿನೇಶ್‌ಗೆ ಕಾಡಿದ ನಿಯಮಗಳು

ಪ್ಯಾರಿಸ್‌: ಭಾರತದ ಪಾಲಿಗೆ ಭಾರೀ ನಿರೀಕ್ಷೆ ಮೂಡಿಸಿದ್ದ ಪ್ಯಾರಿಸ್‌ ಒಲಿಂಪಿಕ್ಸ್‌ ಮುಕ್ತಾಯಗೊಂಡಿದೆ. ಕಳೆದ ಬಾರಿಯ ಒಲಿಂಪಿಕ್ಸ್‌ನಲ್ಲಿ ತನ್ನ ಸಾರ್ವಕಾಲಿಕ ಗರಿಷ್ಠ 7 ಪದಕ ಗಳಿಸಿದ್ದ ಭಾರತವು ಈ ಬಾರಿ 1 ಬೆಳ್ಳಿ, 5 ಕಂಚು ಸೇರಿ 6 ಪದಕಗಳೊಂದಿಗೆ ತನ್ನ ಅಭಿಯಾನ ಮುಕ್ತಾಯಗೊಳಿಸಿದೆ. ದಾಖಲೆಯ ಲೆಕ್ಕದಲ್ಲಿ ಭಾರತ ತನ್ನ 2ನೇ ಗರಿಷ್ಠ ಪದಕ ಗಳಿಕೆ
ದಾಖಲಿಸಿದೆ.

ಆದರೆ ಕೆಲವು ನಿಯಮಗಳು ಹಾಗೂ ದುರದೃಷ್ಟಗಳಿಂದಾಗಿ ಏನಿಲ್ಲವೆಂದರೂ 7-8 ಪದಕಗಳನ್ನು ಸ್ವಲ್ಪದರಲ್ಲಿ ತಪ್ಪಿಸಿಕೊಂಡಿದೆ.ದೇಶದ 6 ಮಂದಿ 4ನೇ ಸ್ಥಾನ ಪಡೆದಿದ್ದಾರೆ. ಅರ್ಜುನ್‌ ಬಬುತಾ, ಅಂಕಿತಾ, ಧೀರಜ್‌, ಮನು ಭಾಕರ್‌, ಅನಂತ್‌ ಜೀತ್‌, ಮಹೇಶ್ವರಿ, ಲಕ್ಷ್ಯ ಸೇನ್‌, ಮೀರಾಬಾಯಿ ಚಾನು 4ನೇ ಸ್ಥಾನಿಗಳಾಗಿ ಸ್ಪರ್ಧೆ ಮುಗಿಸಿದರು.

ಇವರೆಲ್ಲರ ಸಾಧನೆ ಪದಕಗಳಾಗಿ ಪರಿವರ್ತನೆಯಾಗಿದ್ದರೆ ಭಾರತದಪದಕ ಗಳಿಕೆ ಸುಲಭವಾಗಿ ಎರಡಂಕಿ ದಾಟುತ್ತಿತ್ತು. ಕುಸ್ತಿಪಟುಗಳಾದ ವಿನೇಶ್‌ ಫೋಗಾಟ್‌, ನಿಶಾ ದಹಿಯಾ, ರಿತಿಕಾ ಹೂಡಾ ದುರದೃಷ್ಟವಶಾತ್‌ ಪದಕ ತಪ್ಪಿಸಿಕೊಂಡಿದ್ದಾರೆ. ಇದೆಲ್ಲ ಕಾರಣಕ್ಕೆ ಭಾರತಕ್ಕೆ ಈ ಬಾರಿ 15 ಪದಕ ಗಳಿಸುವ ಅವಕಾಶ ತಪ್ಪಿ ಹೋಗಿದೆ.

ಕಾಡಿದ ದುರದೃಷ್ಟ
ಪದಕ ಖಚಿತವಾಗಿದ್ದ ವಿನೇಶ್‌ ಫೋಗಾಟ್‌ ನಿಯಮದ ಸುಳಿಗೆ ಸಿಲುಕಿ ಪದಕ ಕಳೆದುಕೊಂಡರು. 50 ಕೆ.ಜಿ. ವಿಭಾಗದಲ್ಲಿ ವಿನೇಶ್‌ ಫೈನಲ್‌ ಪ್ರವೇಶಿಸುವ ಮೂಲಕ ಭಾರತಕ್ಕೆ ಒಂದು ಪದಕ ಖಚಿತಪಡಿಸಿದ್ದರು. ಆದರೆ ಫೈನಲ್‌ ಪಂದ್ಯಕ್ಕೆ ಮುನ್ನ ದೇಹದ ತೂಕ ನಿಗದಿಗಿಂತ 100 ಗ್ರಾಂ ಹೆಚ್ಚಾಗಿತ್ತು ಎಂಬ ಕಾರಣಕ್ಕೆ ಅನರ್ಹಗೊಂಡರು. 76 ಕೆ.ಜಿ. ವಿಭಾಗದಲ್ಲಿ ಸ್ಪರ್ಧಿಸಿದ್ದ ರಿತಿಕಾ ಹೂಡಾ ಸಮಬಲ ಸಾಧಿಸಿದ್ದರೂ “ಕೊನೆಯಲ್ಲಿ ಪದಕ ಗೆದ್ದವರು ವಿಜಯಿ’ ಎಂಬ ನಿಯಮಕ್ಕೆ ಸಿಲುಕಿ ಸೋಲನುಭವಿಸಿದರು.ಮತ್ತೊಂದೆಡೆ ಉತ್ತಮ ಆರಂಭ ಪಡೆದು 8-2 ಅಂಕಗಳ ಮುನ್ನಡೆಯಲ್ಲಿದ್ದ ನಿಶಾ ದಹಿಯಾ ಕಡೆಯ 30 ಸೆಕೆಂಡುಗಳಿ ದ್ದಾಗ ಬಲಭುಜದ ಗಾಯಕ್ಕೆ ತುತ್ತಾಗಿ 10 ಅಂಕ ಬಿಟ್ಟುಕೊಟ್ಟು ಸೋತರು. ಗಾಯದ ಕಾರಣದಿಂದ ನೀರಜ್‌ ಬೆಳ್ಳಿಗೆ ತೃಪ್ತಿಪಡಬೇಕಾಯಿತು.

ಉತ್ತಮ ಪ್ರದರ್ಶನ
ಇಲ್ಲಿಯವರೆಗಿನ ಒಲಿಂಪಿಕ್ಸ್‌ ಗಳನ್ನು ಗಮನಿಸಿದರೆ ಭಾರತದ ಕ್ರೀಡಾಪಟುಗಳು ಈ ಬಾರಿ ಉತ್ತಮ ಪ್ರದರ್ಶನ ತೋರಿದ್ದರು. ಬ್ಯಾಡ್ಮಿಂಟನ್‌ನಲ್ಲಿ ಲಕ್ಷ್ಯ ಸೇನ್‌ ಸೆಮಿಫೈನಲ್‌ಗೇರಿ ಮೊದಲ ಕ್ರೀಡಾಪಟು ಎನಿಸಿಕೊಂಡರೆ, ಟೇಬಲ್‌ ಟೆನಿಸ್‌ನಲ್ಲಿ ವೈಯಕ್ತಿಕವಾಗಿ ಹಾಗೂ ತಂಡವಾಗಿ ಮಹಿಳೆಯರು ಕ್ವಾರ್ಟರ್‌ಫೈನಲ್‌ ಪ್ರವೇಶಿಸಿ ದಾಖಲೆ ಬರೆದರು. ಮೊದಲ ಬಾರಿ ಭಾರತ ಬಿಲ್ಗಾರರು ಸೆಮಿಫೈನಲ್‌ ಪ್ರವೇಶಿಸಿ ಇತಿಹಾಸ ಬರೆದರು.

4ನೇ ಸ್ಥಾನಿಗಳಲ್ಲಿ ಭಾರತ ನಂ. 5
ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ಹೆಚ್ಚು 4ನೇ ಸ್ಥಾನ ಪಡೆದುಕೊಂಡ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ 5ನೇ ಸ್ಥಾನದಲ್ಲಿದೆ. ಭಾರತದಿಂದ 117 ಮಂದಿ ಆ್ಯತ್ಲೀಟ್‌ಗಳು 16 ಕ್ರೀಡೆಗಳಲ್ಲಿ ಭಾಗಿಯಾಗಿದ್ದರು. ಇದರಲ್ಲಿ 6 ಮಂದಿ 4ನೇ ಸ್ಥಾನ ಪಡೆದುಕೊಂಡಿದ್ದಾರೆ. ಬ್ರಿಟನ್‌ನ 12 ಮಂದಿ 4ನೇ ಸ್ಥಾನ ಪಡೆದುಕೊಂಡಿದ್ದು, 4ನೇ ಸ್ಥಾನ ಪಡೆದುಕೊಂಡ ರಾಷ್ಟ್ರಗಳ ಪಟ್ಟಿಯಲ್ಲಿ ಬ್ರಿಟನ್‌ ಮೊದಲ ಸ್ಥಾನದಲ್ಲಿದೆ. ಬ್ರಿಟನ್‌ನ 327 ಸ್ಪರ್ಧಿಗಳು 26 ಕ್ರೀಡೆಗಳಲ್ಲಿ ಭಾಗಿಯಾಗಿದ್ದರು. 9 ಮಂದಿ 4ನೇ ಸ್ಥಾನಿಗಳನ್ನು ಹೊಂದಿರುವ ಇಟಲಿ 2ನೇ ಸ್ಥಾನದಲ್ಲಿದ್ದು, ಇಲ್ಲಿಂದ 402 ಮಂದಿ ಆ್ಯತ್ಲೀಟ್‌ಗಳು 30 ಕ್ರೀಡೆಗಳಲ್ಲಿ ಭಾಗವಹಿಸಿದ್ದರು. ಕೆನಡಾ 3ನೇ ಸ್ಥಾನದಲ್ಲಿದ್ದು, 7 ಮಂದಿ 4ನೇ ಸ್ಥಾನಿಗಳಾಗಿ ಸ್ಪರ್ಧೆ ಮುಗಿಸಿದ್ದಾರೆ. ಕೆನಡಾದ 315 ಮಂದಿ ಆ್ಯತ್ಲೀಟ್‌ಗಳು 28 ಕ್ರೀಡೆಗಳಲ್ಲಿ ಭಾಗಿಯಾಗಿದ್ದರು. 4ನೇ ಸ್ಥಾನದಲ್ಲಿರುವ ಅತಿಥೇಯ ಫ್ರಾನ್ಸ್‌ನಿಂದ 7 ಮಂದಿ 4ನೇ ಸ್ಥಾನ ಪಡೆದುಕೊಂಡಿದ್ದಾರೆ. ಫ್ರಾನ್ಸ್‌ನಿಂದ ಗರಿಷ್ಠ 573 ಸ್ಪರ್ಧಿಗಳು 35 ಕ್ರೀಡೆಗಳಲ್ಲಿ ಭಾಗಿಯಾಗಿದ್ದರು.

ಪ್ಯಾರಿಸ್‌ಗೆ ವಿದಾಯ; ಲಾಸ್‌ ಏಂಜಲೀಸ್‌ ನಿರೀಕ್ಷೆ
ಪ್ಯಾರಿಸ್‌ನಲ್ಲಿ ಆಯೋಜನೆಗೊಂಡಿದ್ದ 33ನೇ ಒಲಿಂಪಿಕ್ಸ್‌ ಕ್ರೀಡಾಕೂಟಕ್ಕೆ ರವಿವಾರ ರಾತ್ರಿ ತೆರೆ ಬಿದ್ದಿದೆ. ಕ್ರೀಡಾಜಾತ್ರೆ ಮತ್ತೂಮ್ಮೆ ಜಾಗತಿಕ ಕ್ರೀಡಾಪ್ರೇಮಿಗಳನ್ನು ರಂಜಿಸಿದೆ. 17 ದಿನಗಳ ಕಾಲ ನಡೆದ ಕ್ರೀಡಾಕೂಟದಲ್ಲಿ 10,500 ಮಂದಿ ಆ್ಯತ್ಲೀಟ್‌ಗಳು ಭಾಗಿಯಾಗಿದ್ದರು. ಮುಂದಿನ 34ನೇ ಒಲಿಂಪಿಕ್ಸ್‌ 2028ರಲ್ಲಿ ಅಮೆರಿಕದ ಲಾಸ್‌ ಏಂಜಲೀಸ್‌ನಲ್ಲಿ ನಡೆಯಲಿದೆ.

ಟಾಪ್ ನ್ಯೂಸ್

MU-Univerasity

Virtual Meeting: ಮಂಗಳೂರು ವಿಶ್ವವಿದ್ಯಾನಿಲಯ ಶೈಕ್ಷಣಿಕ ಮಂಡಳಿ ಸಭೆ

Kapu2

ISPRL Programme: ಪಾದೂರು ಜಲ್ಲಿ ಕ್ರಷರ್‌: ಸರ್ವೆಗೆ ಬಂದ ಅಧಿಕಾರಿಗಳಿಗೆ ತಡೆ

THIRU

MAHE University: ವಾಗ್ಶಾ ವಿದ್ಯಾರ್ಥಿಗೆ ವಿಶ್ವ ಪಾಕಶಾಲೆ ಶ್ರೇಷ್ಠತೆ ಗರಿ

Tarpana

Konkani Movie: “ತರ್ಪಣ’ ಚಲನಚಿತ್ರಕ್ಕೆ ಅಂತಾರಾಷ್ಟ್ರೀಯ ಪ್ರಶಸ್ತಿ

Shourya

Dharmasthala: ಶೌರ್ಯ ಯೋಧರು ಆಪತ್ಕಾಲದ ಆಪ್ತ ರಕ್ಷಕರು: ಡಾ.ಡಿ.ವೀರೇಂದ್ರ ಹೆಗ್ಗಡೆ

Kapu-Kalahasti

Chaturmasya: ವಿಶ್ವಕರ್ಮ ಮ್ಯೂಸಿಯಂ ಸ್ಥಾಪನೆ ಗುರಿ: ಶ್ರೀ ಕಾಳಹಸ್ತೇಂದ್ರ ಸ್ವಾಮೀಜಿ

DC-CHILD

Child safety: ಮಕ್ಕಳ ರಕ್ಷಣ ಕಾಯ್ದೆಗಳ ಪರಿಣಾಮಕಾರಿ ಅನುಷ್ಠಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Duleep Trophy Cricket: ಇಂದಿನಿಂದ 3ನೇ ಸುತ್ತಿನ ಸ್ಪರ್ಧೆ

Duleep Trophy Cricket: ಇಂದಿನಿಂದ 3ನೇ ಸುತ್ತಿನ ಸ್ಪರ್ಧೆ

Athletics: ದ.ಕ. ಜಿಲ್ಲೆ ಸಮಗ್ರ ಚಾಂಪಿಯನ್‌

Athletics: ದ.ಕ. ಜಿಲ್ಲೆ ಸಮಗ್ರ ಚಾಂಪಿಯನ್‌

Cricket: ಒಂದೇ ಫ್ರೇಮ್‌ನಲ್ಲಿ ಗಂಭೀರ್‌- ಕೊಹ್ಲಿ; ಹಳೆ ದಿನಗಳನ್ನು ಸ್ಮರಿಸಿದ ಸ್ನೇಹಿತರು

Cricket: ಒಂದೇ ಫ್ರೇಮ್‌ನಲ್ಲಿ ಗಂಭೀರ್‌- ಕೊಹ್ಲಿ; ಹಳೆ ದಿನಗಳನ್ನು ಸ್ಮರಿಸಿದ ಸ್ನೇಹಿತರು

T20 world cup 2024; ವನಿತೆಯರ ವಿಶ್ವಕಪ್‌ ನಿಧಿಯಲ್ಲಿ ಭಾರೀ ಏರಿಕೆ, ಸಮಾನ ಬಹುಮಾನ: ಐಸಿಸಿ

T20 world cup 2024; ವನಿತೆಯರ ವಿಶ್ವಕಪ್‌ ನಿಧಿಯಲ್ಲಿ ಭಾರೀ ಏರಿಕೆ, ಸಮಾನ ಬಹುಮಾನ: ಐಸಿಸಿ

Ranji Trophy: Samit Dravid in possible squad

Ranji Trophy: ಸಂಭಾವ್ಯ ತಂಡದಲ್ಲಿ ಸಮಿತ್‌ ದ್ರಾವಿಡ್‌

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

MU-Univerasity

Virtual Meeting: ಮಂಗಳೂರು ವಿಶ್ವವಿದ್ಯಾನಿಲಯ ಶೈಕ್ಷಣಿಕ ಮಂಡಳಿ ಸಭೆ

Kapu2

ISPRL Programme: ಪಾದೂರು ಜಲ್ಲಿ ಕ್ರಷರ್‌: ಸರ್ವೆಗೆ ಬಂದ ಅಧಿಕಾರಿಗಳಿಗೆ ತಡೆ

THIRU

MAHE University: ವಾಗ್ಶಾ ವಿದ್ಯಾರ್ಥಿಗೆ ವಿಶ್ವ ಪಾಕಶಾಲೆ ಶ್ರೇಷ್ಠತೆ ಗರಿ

Tarpana

Konkani Movie: “ತರ್ಪಣ’ ಚಲನಚಿತ್ರಕ್ಕೆ ಅಂತಾರಾಷ್ಟ್ರೀಯ ಪ್ರಶಸ್ತಿ

Shourya

Dharmasthala: ಶೌರ್ಯ ಯೋಧರು ಆಪತ್ಕಾಲದ ಆಪ್ತ ರಕ್ಷಕರು: ಡಾ.ಡಿ.ವೀರೇಂದ್ರ ಹೆಗ್ಗಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.