Paris ಟಿಟಿ: ವನಿತಾ ತಂಡದ ಆಟ ಅಂತ್ಯ; ಗೆದ್ದದ್ದು ಅರ್ಚನಾ ಕಾಮತ್ ಮಾತ್ರ
ಜರ್ಮನಿ ವಿರುದ್ಧ 1-3 ಸೋಲು
Team Udayavani, Aug 8, 2024, 1:37 AM IST
ಪ್ಯಾರಿಸ್: ವನಿತಾ ಟೇಬಲ್ ಟೆನಿಸ್ ಪಂದ್ಯಾವಳಿಯಲ್ಲಿ ಭಾರತದ ಆಟ ಕ್ವಾರ್ಟರ್ ಫೈನಲ್ನಲ್ಲಿ ಕೊನೆಗೊಂಡಿದೆ. ಬುಧವಾರದ ಮುಖಾಮುಖೀಯಲ್ಲಿ ಜರ್ಮನಿ 3-1 ಅಂತರದಿಂದ ಭಾರತವನ್ನು ಪರಾಭವಗೊಳಿಸಿತು. ಭಾರತಕ್ಕೆ ಏಕೈಕ ಗೆಲುವು ತಂದಿತ್ತವರು ಕರಾವಳಿ ಮೂಲದ ಕನ್ನಡತಿ ಅರ್ಚನಾ ಕಾಮತ್ ಎಂಬುದಷ್ಟೇ ಸಮಾಧಾನದ ಸಂಗತಿ.
ಆರಂಭದ ಡಬಲ್ಸ್ನಲ್ಲಿ ಶ್ರೀಜಾ ಅಕುಲಾ-ಅರ್ಚನಾ ಕಾಮತ್ ಅವರನ್ನು ತುವಾನ್ ವಾನ್-ಕ್ಸಿಯೋನಾ ಶಾನ್ 11-5, 8-11, 12-10, 11-6ರಿಂದ ಪರಾಭವಗೊಳಿಸಿದರು. ಮೊದಲ ಸಿಂಗಲ್ಸ್ನಲ್ಲಿ ಅನುಭವಿ ಆಟಗಾರ್ತಿ ಮಣಿಕಾ ಬಾತ್ರಾ ಯಶಸ್ಸು ಕಾಣಲಿಲ್ಲ. ಅವರು ಆ್ಯನೆಟ್ ಕೌಫ್ಮ್ಯಾನ್ ವಿರುದ್ಧ 11-8, 5-11, 7-11, 5-11ರಿಂದ ಸೋಲನು ಭವಿಸಿದರು. ಜರ್ಮನಿ 2-0 ಮುನ್ನಡೆ ಸಾಧಿಸಿತು.
ಅರ್ಚನಾ ಕಾಮತ್ ಜಯ
ಭಾರತ ಉಳಿದ ಮೂರೂ ಪಂದ್ಯಗಳನ್ನು ಗೆಲ್ಲಬೇಕಾದ ಹಂತದಲ್ಲಿ ಅರ್ಚನಾ ಕಾಮತ್ ಭರವಸೆ ಮೂಡಿಸಿದರು. ಅವರು ಕ್ಸಿಯೋನಾ ಶಾನ್ಗೆ 11-6, 11-7, 11-7ರಿಂದ ಆಘಾತವಿಕ್ಕಿ ಭಾರತದ ಖಾತೆ ತೆರೆದರು.
ಆದರೆ ಮುಂದಿನ ಸಿಂಗಲ್ಸ್ನಲ್ಲಿ ಶ್ರೀಜಾ ಅಕುಲಾ ಎಡವಿದರು. ಆ್ಯನೆಟ್ ಕೌಫ್ಮ್ಯಾನ್ 11-6, 11-7, 11-7ರಿಂದ ಶ್ರೀಜಾಗೆ ಸೋಲುಣಿಸಿದರು. ಅಲ್ಲಿಗೆ ಭಾರತ ಒಲಿಂಪಿಕ್ಸ್ ಟಿಟಿ ಆಟ ಅಂತ್ಯಗೊಂಡಿತು.ಸೋಮವಾರ ವನಿತಾ ತಂಡ ತನಗಿಂತ ಉನ್ನತ ರ್ಯಾಂಕ್ನ ರೊಮೇನಿಯಾವನ್ನು 3-2ರಿಂದ ಹಿಮ್ಮೆಟ್ಟಿಸಿ ಕ್ವಾರ್ಟರ್ ಫೈನಲ್ಗೆ ಏರಿತ್ತು.
ಮಂಗಳೂರು ಮೂಲ
ಇಂದು ಜಯ ಸಾಧಿಸಿದ ಅರ್ಚನಾ ಕಾಮತ್ ಅವರು ಮಂಗಳೂರು ಕೊಂಚಾಡಿ ನಿವಾಸಿ ಡಾ| ಗಿರೀಶ್ ಕಾಮತ್ ಹಾಗೂ ಡಾ| ಅನುರಾಧ ಕಾಮತ್ ದಂಪತಿಯ ಪುತ್ರಿ.
ಮುಂದೆ ದೇಶಕ್ಕಾಗಿ ಒಲಿಂಪಿಕ್ಸ್ನಲ್ಲಿ ಪದಕ ಗೆಲ್ಲಲೇ ಬೇಕು ಎನ್ನುವ ಛಲವಿದೆ. ಇದಕ್ಕಾಗಿ ಸತತ ಅಭ್ಯಾಸ ಮಾಡುತ್ತೇನೆ, ಇನ್ನಷ್ಟು ಉತ್ತಮ ಪ್ರದರ್ಶನ ನೀಡುತ್ತೇನೆ.
-ಅರ್ಚನಾ ಕಾಮತ್
ಚಿಕ್ಕ ವಯಸ್ಸಿಂದಲೂ ಒಲಿಂಪಿಕ್ಸ್ ಪದಕ ಗೆಲ್ಲುವ ಆಸೆ ಇತ್ತು. ಪಾಲ್ಗೊಳ್ಳುವ ಕನಸು ಈ ಬಾರಿ ನನಸಾಗಿದೆ. ಆ ಕ್ಷೇತ್ರದ ದಿಗ್ಗಜರೊಂದಿಗೆ ಆಟವಾಡಿದ ಅನುಭವ ಪಡೆದಿದ್ದಾಳೆ. ಮುಂದೆ ದೇಶಕ್ಕಾಗಿ ಪದಕ ಗೆಲ್ಲುವ ನಿರೀಕ್ಷೆ ಇದೆ, ಈಗಿನ ಸಾಧನೆ ಬಗ್ಗೆ ಹೆಮ್ಮೆಯಿದೆ.
-ಡಾ| ಗಿರೀಶ್ ಕಾಮತ್, ತಂದೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.