![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Oct 6, 2020, 11:45 AM IST
ಪ್ಯಾರಿಸ್: ಮೂರನೇ ಶ್ರೇಯಾಂಕದ ಎಲಿನಾ ಸ್ವಿಟೋಲಿನಾ ಮತ್ತು ಅನುಭವಿ ಪೆಟ್ರಾ ಕ್ವಿಟೋವಾ ಅವರು ಫ್ರೆಂಚ್ ಓಪನ್ ಟೆನಿಸ್ ಕೂಟದಲ್ಲಿ ಕ್ವಾರ್ಟರ್ ಫೈನಲ್ ತಲುಪಿದ್ದಾರೆ.
ಪುರುಷರ ವಿಭಾಗದಲ್ಲಿ ಡೊಮಿನಿಕ್ ಥೀಮ್ ಕೂಡ ಅಂತಿಮ ಎಂಟರ ಸುತ್ತಿಗೇರಿದ್ದಾರೆ. ಥೀಮ್ ಕ್ವಾರ್ಟರ್ಫೈನಲಿಗೆ ಆಸ್ಟ್ರೀಯಾದ ಡೊಮಿನಿಕ್ ಥೀಮ್ ಐದು ಸೆಟ್ಗಳ ಮ್ಯಾರಥಾನ್ ಹೋರಾಟದಲ್ಲಿ ಫ್ರಾನ್ಸಿನ ಹುಗೊ ಗ್ಯಾಸ್ಟನ್ ಅವರ ಕನಸನ್ನು ನುಚ್ಚುನೂರು ಮಾಡಿ ಕ್ವಾರ್ಟರ್ಫೈನಲ್ ತಲುಪಿದ್ದಾರೆ.
ಮೂರನೇ ಶ್ರೇಯಾಂಕದ ಥೀಮ್ 6-4, 6-4, 5-7, 3-6, 6-3 ಸೆಟ್ಗಳಿಂದ ವಿಜಯ ಸಾಧಿಸಿದರು. ಮುಂದಿನ ಸುತ್ತಿನಲ್ಲಿ ಅವರು 12ನೇ ಶ್ರೇಯಾಂಕದ ಡೀಗೊ ಚ್ವಾರ್ಟ್ಸಮನ್ ಅವರ ಸವಾಲನ್ನು ಎದುರಿಸಲಿದ್ದಾರೆ.
ಇನ್ನೊಂದು ಪಂದ್ಯದಲ್ಲಿ ಚ್ವಾರ್ಟ್ಸಮನ್ ಅವರು ಇಟೆಲಿಯ ಲೊರೆಂಜೊ ಸೊನೆಗೊ ಅವರನ್ನು 6-1, 6-3, 6-4 ಸೆಟ್ಗಳಿಂದ ಕೆಡಹಿ ಸುಲಭವಾಗಿ ಕ್ವಾರ್ಟರ್ಫೈನಲ್ ತಲುಪಿದರು.
ಕ್ವಿಟೋವಾ ಮುನ್ನಡೆ: ಜೆಕ್ನ ಎಡಗೈ ಆಟಗಾರ್ತಿ ಪೆಟ್ರಾ ಕ್ವಿಟೋವಾ ಕಳೆದ ಎಂಟು ವರ್ಷಗಳಲ್ಲಿ ಮೊದಲ ಬಾರಿ ಫ್ರೆಂಚ್ ಓಪನ್ನ ಕ್ವಾರ್ಟರ್ ಫೈನಲಿಗೇರಿದ ಸಾಧನೆ ಮಾಡಿದ್ದಾರೆ. ಸೋಮವಾರ ನಡೆದ ಪಂದ್ಯದಲ್ಲಿ ಅವರು ಚೀನದ ಝಾಂಗ್ ಶುಯಿ ಅವರನ್ನು 6-2, 6-4 ನೇರ ಸೆಟ್ಗಳಿಂದ ಉರುಳಿಸಿ ಮುನ್ನಡೆದರು. ಪಂದ್ಯದುದ್ದಕ್ಕೂ ಅಮೋಘವಾಗಿ ಆಡಿದ ಕ್ವಿಟೋವಾ ಸತತ ನಾಲ್ಕನೇ ಬಾರಿ ನೇರ ಸೆಟ್ಗಳ ಜಯ ಸಾಧಿಸಿ ಅಂತಿಮ ಎಂಟರ ಸುತ್ತಿಗೆ ತಲುಪಿದ್ದಾರೆ.
ಸ್ವಿಟೋಲನಾ ಅಂತಿಮ ಎಂಟರ ಸುತ್ತಿಗೆ: ಮೂರನೇ ಶ್ರೇಯಾಂಕದ ಎಲಿನಾ ಸ್ವಿಟೋಲಿನಾ ಅವರು ಸ್ಥಳೀಯ ಭರವಸೆ ಕ್ಯಾರೋಲಿನಾ ಗಾರ್ಸಿಯಾ ಅವರನ್ನು ನೇರ ಸೆಟ್ಗಳಿಂದ ಬದಿಗೊತ್ತಿ ಅಂತಿಮ ಎಂಟರ ಸುತ್ತಿಗೇರಿದ್ದಾರೆ. ಅವರು ಇಲ್ಲಿ ಕ್ವಾರ್ಟರ್ ಫೈನಲಿಗೇರುತ್ತಿರುವುದು ಇದು ಮೂರನೇ ಸಲವಾಗಿದೆ. 2015 ಮತ್ತು 2017ರಲ್ಲಿ ಇಲ್ಲಿ ಕ್ವಾರ್ಟರ್ಫೈನಲ್ ತಲುಪಿದ್ದ ಸ್ವಿಟೋಲಿನಾ 6-1, 6-3 ಸೆಟ್ಗಳಿಂದ ಗೆದ್ದು ಬಂದರು.
ಸಿಗ್ಮಂಡ್ಗೆ ಗೆಲುವು: ಜರ್ಮನಿಯ ಲಾರಾ ಸಿಗ್ಮಂಡ್ ಕಠಿಣ ಹೋರಾಟದಲ್ಲಿ ಸ್ಪೇನ್ನ ಪೌಲಾ ಬಡೋಸಾ ಅವರನ್ನು ಸೋಲಿಸಿ ಚೊಚ್ಚಲ ಬಾರಿ ಗ್ರ್ಯಾನ್ ಸ್ಲಾಮ್ ಕೂಟದ ಕ್ವಾರ್ಟರ್ಫೈನಲ್ ತಲುಪಿದ್ದಾರೆ.
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Team India: ಪಂತ್-ರಾಹುಲ್ ವಿಚಾರದಲ್ಲಿ ಗಂಭೀರ್- ಅಗರ್ಕರ್ ನಡುವೆ ಭಿನ್ನಾಭಿಪ್ರಾಯ
IPL 2025: ಮತ್ತೊಬ್ಬ ಅಫ್ಘಾನಿ ಬೌಲರ್ ಬದಲು ಮುಂಬೈ ಇಂಡಿಯನ್ಸ್ ತಂಡದ ಸೇರಿದ ಮುಜೀಬ್
ODI Ranking: ನಂ.1 ಸ್ಥಾನದಲ್ಲೇ ಉಳಿದ ಭಾರತ, 4ಕ್ಕೆ ಜಿಗಿದ ನ್ಯೂಜಿಲೆಂಡ್
Team India: ʼನಾವು ನಟರಲ್ಲ..ʼ: ಟೀಂ ಇಂಡಿಯಾದ ಸೂಪರ್ಸ್ಟಾರ್ ಸಂಸ್ಕೃತಿ ಟೀಕಿಸಿದ ಅಶ್ವಿನ್
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
Udayavani-MIC ನಮ್ಮ ಸಂತೆ:ಮಣ್ಣಿನಿಂದ ಮಾಡಿದ ನಾನಾ ಉತ್ಪನ್ನ
You seem to have an Ad Blocker on.
To continue reading, please turn it off or whitelist Udayavani.