ಶ್ರೀಕಾಂತ್ಗೆ ಆಘಾತ; ಪ್ರಣಯ್ಗೆ ಪ್ರಶಸ್ತಿ
Team Udayavani, Nov 9, 2017, 7:20 AM IST
ನಾಗ್ಪುರ: ವಿಶ್ವದ ಎರಡನೇ ರ್ಯಾಂಕಿನ ಕಿದಂಬಿ ಶ್ರೀಕಾಂತ್ ಅವರನ್ನು ಮೂರು ಗೇಮ್ಗಳ ಹೋರಾಟದಲ್ಲಿ ಸೋಲಿಸಿದ ಎಚ್ಎಸ್ ಪ್ರಣಯ್ ಅವರು ರಾಷ್ಟ್ರೀಯ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ನ ಸಿಂಗಲ್ಸ್ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.
ಈ ವರ್ಷ ನಾಲ್ಕು ಸೂಪರ್ ಸೀರೀಸ್ ಬ್ಯಾಡ್ಮಿಂಟನ್ ಕೂಟದ ಪ್ರಶಸ್ತಿ ಗೆದ್ದ ಸಂಭ್ರಮದಲ್ಲಿದ್ದ ಶ್ರೀಕಾಂತ್ ಅವರನ್ನು 21-15, 16-21, 21-7 ಗೇಮ್ಗಳಿಂದ ಆಘಾತಗೊಳಿಸಿದ ವಿಶ್ವದ 11ನೇ ರ್ಯಾಂಕಿನ ಪ್ರಣಯ್ ಪ್ರಶಸ್ತಿ ಜಯಿಸಿದ ಸಾಧನೆ ಮಾಡಿದರು.
ಮೊದಲ ಗೇಮ್ನಲ್ಲಿ 3-0 ಮುನ್ನಡೆ ಸಾಧಿಸುವ ಮೂಲಕ ಶ್ರೀಕಾಂತ್ ಉತ್ತಮ ಆರಂಭ ಪಡೆದಿದ್ದರು. ಆದರೆ ಆಬಳಿಕ ಪಂದ್ಯದಲ್ಲಿ ಹಿಡಿತ ಸಾಧಿಸಿದ ಪ್ರಣಯ್ ತೀವ್ರ ಪೈಪೋಟಿಯಿಂದ ಹೋರಾಡಿ 7-7 ಸಮಬಲ ಸಾಧಿಸಿ ಮುನ್ನಡೆದರು.
ಅಂತಿಮವಾಗಿ 21-15ರಿಂದ ಮೊದಲ ಗೇಮ್ ವಶಪಡಿಸಿಕೊಂಡರು. ದ್ವಿತೀಯ ಗೇಮ್ನಲ್ಲಿ ಶ್ರೀಕಾಂತ್ ವೀರೋಚಿತ ಆಟ ಆಡಿದರು. ಆದರೂ ಪ್ರಣಯ್ 13-13 ಅಂಕಗಳ ತನಕ ಸಮಬಲದ ಹೋರಾಟ ನೀಡಿದ್ದರು. ನಿರ್ಣಾಯಕ ತೃತೀಯ ಗೇಮ್ನಲ್ಲಿ ಮತ್ತೆ ಮೇಲುಗೈ ಸಾಧಿಸಿದ ಪ್ರಣಯ್ ಸುಲಭವಾಗಿ ಗೆದ್ದು ಸಂಭ್ರಮಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Glasgow Commonwealth Games: ಹಾಕಿ, ಕ್ರಿಕೆಟ್, ಕುಸ್ತಿ, ಬ್ಯಾಡ್ಮಿಂಟನ್ಗೆ ಖೋ
Mangaluru: ಹಳೆಯ ಹೆಲ್ಮೆಟ್ ಇಟ್ಟು ಹೊಸ ಹೆಲ್ಮೆಟ್ ಕಳವು!
Channapatna By-Election: ಯೋಗೇಶ್ವರ್ ಎನ್ಡಿಎ ಅಭ್ಯರ್ಥಿ?
Belagavi:ಅಧಿವೇಶನ ವೇಳೆ 10 ಲಕ್ಷ ಜನರ ಜತೆ ಸುವರ್ಣವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ…
Gujarat: ನಕಲಿ ಪೊಲೀಸ್ ಆಯ್ತು, ಅರೆಸ್ಟ್ ಆಯ್ತು.. ಈಗ ನಕಲಿ ಕೋರ್ಟ್!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.