Prithvi Shaw: ರಣಜಿ ತಂಡದಿಂದಲೂ ಪೃಥ್ವಿ ಔಟ್;‌ ಮುಗಿಯಿತಾ ಮುಂಬೈ ಆಟಗಾರನ ಕ್ರಿಕೆಟ್‌ ಜೀವನ?


Team Udayavani, Oct 22, 2024, 5:48 PM IST

Prithvi Shaw out of the Ranji team too; Is Mumbai player’s cricket life over

ಮುಂಬೈ: ಒಂದು ಕಾಲದಲ್ಲಿ ಮುಂದಿನ ಸಚಿನ್‌ ತೆಂಡೂಲ್ಕರ್‌ ಎಂದೇ ಕರೆಯಲ್ಪಡುತ್ತಿದ್ದ ಮುಂಬೈನ ಬ್ಯಾಟರ್‌ ಪೃಥ್ವಿ ಶಾ (Prithvi Shaw) ಕ್ರಿಕೆಟ್‌ ಭವಿಷ್ಯ ಇದೀಗ ಮತ್ತಷ್ಟು ಡೋಲಾಯಮಾನವಾಗಿದೆ. ಪ್ರತಿಭೆ ಇದ್ದರೂ ಇತರ ಕಾರಣಗಳಿಂದ ಟೀಂ ಇಂಡಿಯಾದಿಂದ ಹೊರಬಿದ್ದಿದ್ದ ಶಾ ಇದೀಗ ಮುಂಬೈ ರಣಜಿ ತಂಡದಿಂದಲೂ (Mumbai Ranji Team) ಹೊರ ಹಾಕಲ್ಪಟ್ಟಿದ್ದಾರೆ.

ಪೃಥ್ವಿ ಶಾ ಅವರ ಹೊರಗುಳುಯುವಿಕೆ ಬಗ್ಗೆ ತಂಡದ ಮ್ಯಾನೇಜ್‌ ಮೆಂಟ್‌ ಯಾವುದೇ ಮಾಹಿತಿ ನೀಡದಿದ್ದರೂ ಫಿಟ್ನೆಸ್ ಮತ್ತು ಶಿಸ್ತಿನ ಬಗೆಗಿನ ಅವರ ವರ್ತನೆಯಿಂದ ಕೋಚ್ ಸಂತೋಷವಾಗಿಲ್ಲ ಎಂದು ವರದಿ ಹೇಳಿದೆ.‌

ಸಂಜಯ್ ಪಾಟೀಲ್ (ಅಧ್ಯಕ್ಷ), ರವಿ ಠಾಕರ್, ಜೀತೇಂದ್ರ ಠಾಕ್ರೆ, ಕಿರಣ್ ಪೊವಾರ್ ಮತ್ತು ವಿಕ್ರಾಂತ್ ಯೆಲಿಗೇಟಿ ಅವರನ್ನೊಳಗೊಂಡ ಮುಂಬೈ ಕ್ರಿಕೆಟ್ ಅಸೋಸಿಯೇಷನ್ ​​(ಎಂಸಿಎ) ಆಯ್ಕೆ ಸಮಿತಿಯು ಶಾ ಅವರನ್ನು ಕನಿಷ್ಠ ಒಂದು ರಣಜಿ ಪಂದ್ಯಕ್ಕಾದರೂ ಹೊರಗಿಡಲು ನಿರ್ಧರಿಸಿದೆ ಎಂದು ವರದಿಯಾಗಿದೆ.

ಕ್ರಿಕ್‌ಬಜ್‌ ನ ವರದಿಯ ಪ್ರಕಾರ, ಶಾ ಅವರ ಅಶಿಸ್ತು ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ರಣಜಿ ಟ್ರೋಫಿ ತಂಡದಿಂದ ಶಾ ಅವರನ್ನು ಕೈಬಿಡುವ ಮೂಲಕ ಆಯ್ಕೆದಾರರು ಮತ್ತು ತಂಡದ ಆಡಳಿತ ಮಂಡಳಿ ಶಾ ಅವರಿಗೆ ತಕ್ಕ ಪಾಠ ಕಲಿಸಲು ಮುಂದಾಗಿದೆ.

ನೆಟ್ ಸೆಷನ್‌ಗಳಿಗೆ ತಡವಾಗಿ ವರದಿ ಮಾಡುವುದು ಶಾ ವಿಷಯಕ್ಕೆ ಬಂದಾಗ ತಂಡದ ಮ್ಯಾನೇಜ್‌ ಮೆಂಟ್ ಗೆ ಕಿರಿಕಿರಿ ತಂದಿದೆ. ಅವರು ನೆಟ್ ಸೆಷನ್‌ ಗಳನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ, ಅಲ್ಲದೆ ಸರಿಯಾಗಿ ಪ್ರ್ಯಾಕ್ಟೀಸ್‌ ಗೆ ಬರುವುದಿಲ್ಲ ಎಂದು ವರದಿ ಹೇಳುತ್ತದೆ. ಅನೇಕರು ಅವರನ್ನು ಅಧಿಕ ತೂಕ ಎಂದು ಪರಿಗಣಿಸುತ್ತಾರೆ. ಇದು ಅವರು ಇರುವ ವೃತ್ತಿಯ ಬಗ್ಗೆ ಶಿಸ್ತಿನ ಕೊರತೆಯನ್ನು ತೋರಿಸುತ್ತದೆ.

ಅನುಭವಿ ಕ್ರಿಕೆಟಿಗರಾದ ಶ್ರೇಯಸ್ ಅಯ್ಯರ್, ಶಾರ್ದೂಲ್ ಠಾಕೂರ್ ಮತ್ತು ನಾಯಕ ಅಜಿಂಕ್ಯ ರಹಾನೆ ಕೂಡ ಅಭ್ಯಾಸಕ್ಕೆ ಸರಿಯಾಗಿ ಬರುತ್ತಾರೆ. ಮತ್ತೊಂದೆಡೆ, ಶಾ ಅವರು ಸ್ಥಿರ ಪ್ರದರ್ಶನ ನೀಡದ ಹೊರತಾಗಿಯೂ ಕೆಲವು ಸೆಷನ್‌ ಗಳನ್ನು ತಪ್ಪಿಸುತ್ತಾರೆ.

ಶಾ ಅವರನ್ನು ಕೈಬಿಡುವ ನಿರ್ಧಾರವು ಕೇವಲ ಮ್ಯಾನೇಜ್‌ಮೆಂಟ್ ಮತ್ತು ಆಯ್ಕೆಗಾರರದ್ದು ಮಾತ್ರವಲ್ಲ ಎಂದು ವರದಿ ಹೇಳುತ್ತದೆ. ನಾಯಕ ಮತ್ತು ಕೋಚ್ ಕೂಡ ಅವರನ್ನು ತಂಡದಿಂದ ಕೈಬಿಡಲು ಉತ್ಸುಕರಾಗಿದ್ದರು.

2018 ರಲ್ಲಿ ರಾಜ್‌ಕೋಟ್‌ ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಭಾರತ ಟೆಸ್ಟ್‌ಗೆ ಪಾದಾರ್ಪಣೆ ಮಾಡಿದ ಶಾ ಬಳಿಕ ವೃತ್ತಿಜೀವನದಲ್ಲಿ ಮೈದಾನದ ಹೊರಗಿನ ಸಮಸ್ಯೆಗಳಿಂದ ಇಳಿಮುಖ ಕಂಡಿದ್ದಾರೆ. ಈ ಋತುವಿನಲ್ಲಿ ಶಾ ಆಡಿದ ಎರಡು ರಣಜಿ ಪಂದ್ಯಗಳಲ್ಲಿ ಅವರು 7 ಮತ್ತು 12 (ಬರೋಡಾ ವಿರುದ್ಧ), 1 ಮತ್ತು 39 (ಮಹಾರಾಷ್ಟ್ರ ವಿರುದ್ಧ) ಸ್ಕೋರ್ ಮಾಡಿದ್ದಾರೆ.

ಟಾಪ್ ನ್ಯೂಸ್

Odisha-Dana

Cyclone: ಮುಂದಿನ 48 ಗಂಟೆಗಳಲ್ಲಿ ಒಡಿಶಾ, ಪ.ಬಂಗಾಳಕ್ಕೆ ಅಪ್ಪಳಿಸಲಿದೆ ʼಡಾನಾʼ ಚಂಡಮಾರುತ!

Belagavi: ಕಿತ್ತೂರು ಉತ್ಸವ ಹಿನ್ನೆಲೆಯಲ್ಲಿ 2 ತಾಲೂಕಿನ ಶಾಲೆಗಳಿಗೆ 3 ದಿನ ರಜೆ ಘೋಷಣೆ

Belagavi: ಸಂತೋಷ ಪದ್ಮಣ್ಣವರ ಕೊಲೆ ಪ್ರಕರಣ: ನಾಲ್ಕಕ್ಕೇರಿದ ಬಂಧಿತರ ಸಂಖ್ಯೆ

Belagavi: ಸಂತೋಷ ಪದ್ಮಣ್ಣವರ ಕೊಲೆ ಪ್ರಕರಣ: ನಾಲ್ಕಕ್ಕೇರಿದ ಬಂಧಿತರ ಸಂಖ್ಯೆ

Rain-Kendriya

Cloud Burst: ಬೆಂಗಳೂರಿನ ಯಲಹಂಕದಲ್ಲಿ ದಾಖಲೆಯ ಮಳೆ; 10 ಬಡಾವಣೆ ಜಲಾವೃತ

Under construction building collapses in Bengaluru

Bengaluru: ಕುಸಿದ ನಿರ್ಮಾಣ ಹಂತದ ಕಟ್ಟಡ; ಮೂವರು ಸಾವು, ಹಲವರು ಸಿಲುಕಿರುವ ಶಂಕೆ

Stock Market: ಷೇರುಪೇಟೆ ಸೂಚ್ಯಂಕ 900ಕ್ಕೂ ಅಧಿಕ ಅಂಕ ಕುಸಿತ; 9 ಲಕ್ಷ ಕೋಟಿ ರೂ. ನಷ್ಟ

Stock Market: ಷೇರುಪೇಟೆ ಸೂಚ್ಯಂಕ 900ಕ್ಕೂ ಅಧಿಕ ಅಂಕ ಕುಸಿತ; 9 ಲಕ್ಷ ಕೋಟಿ ರೂ. ನಷ್ಟ

Prithvi Shaw out of the Ranji team too; Is Mumbai player’s cricket life over

Prithvi Shaw: ರಣಜಿ ತಂಡದಿಂದಲೂ ಪೃಥ್ವಿ ಔಟ್;‌ ಮುಗಿಯಿತಾ ಮುಂಬೈ ಆಟಗಾರನ ಕ್ರಿಕೆಟ್‌ ಜೀವನ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Shakib Fans: ಶಕೀಬ್‌ ಅಭಿಮಾನಿಗಳಿಗೆ ವಿರೋಧಿ ಗುಂಪಿನಿಂದ ಹಲ್ಲೆ

Shakib Fans: ಶಕೀಬ್‌ ಅಭಿಮಾನಿಗಳಿಗೆ ವಿರೋಧಿ ಗುಂಪಿನಿಂದ ಹಲ್ಲೆ

Glasgow: ಕಾಮನ್ವೆಲ್ತ್‌ ಗೇಮ್ಸ್‌: ಹಾಕಿಗೆ ಕತ್ತರಿ?

Glasgow: ಕಾಮನ್ವೆಲ್ತ್‌ ಗೇಮ್ಸ್‌: ಹಾಕಿಗೆ ಕತ್ತರಿ?

Cricket: ದೇಶಿ ಕ್ರಿಕೆಟ್‌ನಲ್ಲಿ ಆಡಲು ಮೊಹಮ್ಮದ್‌ ಶಮಿ ನಿರ್ಧಾರ

Cricket: ದೇಶಿ ಕ್ರಿಕೆಟ್‌ನಲ್ಲಿ ಆಡಲು ಮೊಹಮ್ಮದ್‌ ಶಮಿ ನಿರ್ಧಾರ

New Zealand: ಪರಾಕ್ರಮ; 5 ದಿನಗಳಲ್ಲಿ 5 ಕ್ರೀಡಾ ಸಾಧನೆ

New Zealand: ಪರಾಕ್ರಮ; 5 ದಿನಗಳಲ್ಲಿ 5 ಕ್ರೀಡಾ ಸಾಧನೆ

Ranji Trophy: ಕರ್ನಾಟಕಕ್ಕೆ ಮತ್ತೆ ಮಳೆ ಕಾಟ

Ranji Trophy: ಕರ್ನಾಟಕಕ್ಕೆ ಮತ್ತೆ ಮಳೆ ಕಾಟ

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

ಹೊಸ ಸೇರ್ಪಡೆ

15(1)

Manipal: ಮಲ್ಪೆಯ ಮರಳು ಭೂಮಿಯಲ್ಲೊಂದು ಸುಂದರ ಉದ್ಯಾನ!

Odisha-Dana

Cyclone: ಮುಂದಿನ 48 ಗಂಟೆಗಳಲ್ಲಿ ಒಡಿಶಾ, ಪ.ಬಂಗಾಳಕ್ಕೆ ಅಪ್ಪಳಿಸಲಿದೆ ʼಡಾನಾʼ ಚಂಡಮಾರುತ!

Belagavi: ಕಿತ್ತೂರು ಉತ್ಸವ ಹಿನ್ನೆಲೆಯಲ್ಲಿ 2 ತಾಲೂಕಿನ ಶಾಲೆಗಳಿಗೆ 3 ದಿನ ರಜೆ ಘೋಷಣೆ

12

Mangaluru: ಪಟಾಕಿ ಮಾರಾಟಕ್ಕೆ 13 ಸ್ಥಳ ನಿಗದಿ; ಬೆಳಕಿನ ಹಬ್ಬಕ್ಕೆ ಭರದ ಸಿದ್ಧತೆ

13(3)

Udupi: ಎರಡು ವರ್ಷಗಳಲ್ಲಿ ಚಿರತೆ ದಾಳಿಗೆ 122 ಜಾನುವಾರುಗಳು ಬಲಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.