![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Dec 31, 2021, 10:28 PM IST
ಬೆಂಗಳೂರು: ಎಂಟನೇ ಪ್ರೊ ಕಬಡ್ಡಿ ಆವೃತ್ತಿಯಲ್ಲಿ ತಮಿಳ್ ತಲೈವಾಸ್ ಮೊದಲ ಗೆಲುವು ಸಾಧಿಸಿದೆ. ದಿನದ ಮೊದಲ ಪಂದ್ಯದಲ್ಲಿ ಅದು ಪುನೇರಿ ಪಲ್ಟಾನ್ ವಿರುದ್ಧ 36-26 ಅಂಕಗಳಿಂದ ಗೆದ್ದು ಬಂದಿತು. ಪಾಟ್ನಾ ಪೈರೇಟ್ಸ್ ಮತ್ತು ಬೆಂಗಾಲ್ ವಾರಿಯರ್ ನಡುವಿನ ಇನ್ನೊಂದು ಪಂದ್ಯ ಜಿದ್ದಾಜಿದ್ದಿಯಿಂದ ಕೂಡಿತ್ತು. ಇದನ್ನು ಪಾಟ್ನಾ 44-30 ಅಂತರದಿಂದ ಜಯಿಸಿತು.
ಮನ್ಜೀತ್ ಸಾಹಸ
ಇದು ಈ ಕೂಟದಲ್ಲಿ ತಮಿಳ್ ತಲೈವಾಸ್ಗೆ ಒಲಿದ ಮೊದಲ ಜಯ. 4 ಪಂದ್ಯಗಳನ್ನಾಡಿರುವ ತಲೈವಾಸ್ ಎರಡನ್ನು ಟೈ ಮಾಡಿಕೊಂಡು, ಒಂದರಲ್ಲಿ ಸೋಲನುಭವಿಸಿತ್ತು. ಇನ್ನೊಂದೆಡೆ ಪುನೇರಿ 4 ಪಂದ್ಯಗಳಲ್ಲಿ 3 ಸೋಲನುಭವಿಸಿ ಕೊನೆಯ ಸ್ಥಾನಕ್ಕೆ ಅಂಟಿಕೊಂಡಿತು.
ತಲೈವಾಸ್ ಮೇಲುಗೈಯಲ್ಲಿ ರೈಡರ್ ಮನ್ಜೀತ್ ಸಾಹಸ ಮಹತ್ವದ್ದಾಗಿತ್ತು. ಅವರು 17 ರೈಡ್ ನಡೆಸಿ ಸರ್ವಾಧಿಕ 8 ಅಂಕ ತಂದಿತ್ತರು. 5 ಟಚ್ ಪಾಯಿಂಟ್ ಮತ್ತು 3 ಬೋನಸ್ ಪಾಯಿಂಟ್ ಇದರಲ್ಲಿ ಸೇರಿತ್ತು. 17ರಲ್ಲಿ 5 ರೈಡ್ ಯಶಸ್ವಿಯಾಗಿತ್ತು. ಮನ್ಜೀತ್ ಹೊರತುಪಡಿಸಿದರೆ ನಾಯಕನೂ ಆಗಿರುವ ಡಿಫೆಂಡರ್ ಸುರ್ಜೀತ್ ಸಿಂಗ್ 3 ಅಂಕ ಗಳಿಸಿದರು. ಡಿಫೆಂಡರ್ಗಳಾದ ಸಾಗರ್ ಮತ್ತು ಸಾಹಿಲ್ ತಲಾ 2 ಅಂಕ ಕೊಡಿಸಿದರು. ವಿರಾಮದ ವೇಳೆ 18-11 ಮುನ್ನಡೆಯಲ್ಲಿದ್ದ ತಮಿಳ್ ತಲೈವಾಸ್ ಆಗಲೇ ಗೆಲುವಿನ ಸೂಚನೆ ನೀಡಿತ್ತು.
ಇದನ್ನೂ ಓದಿ:ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಸರಣಿ : ರಾಹುಲ್ ಟೀಮ್ ಇಂಡಿಯಾ ನಾಯಕ
ಪುನೇರಿ ಹಿನ್ನಡೆಯಲ್ಲಿ ರಾಹುಲ್ ಚೌಧರಿ ಅವರ ವೈಫಲ್ಯ ಎದ್ದು ಕಂಡಿತು. ಅವರು ಕಳೆದ ವರ್ಷದ ಕಳಫೆ ಫಾರ್ಮನ್ನೇ ಮುಂದುವರಿಸಿದ್ದು ತಂಡದ ಪಾಲಿಗೆ ದೊಡ್ಡ ಆಘಾತವಾಗಿದೆ. ಈ ಪಂದ್ಯದಲ್ಲಿ ರಾಹುಲ್ ತಂದಿತ್ತದ್ದು ಕೇವಲ ಎರಡಂಕ. ಮತ್ತೋರ್ವ ರೈಡರ್ ಪಂಕಜ್ ಮೋಹಿತೆ ಸಾಹಸ ಗಮನಾರ್ಹ ಮಟ್ಟದಲ್ಲಿತ್ತು. ಅವರಿಂದ ತಂಡಕ್ಕೆ ಎಂಟಂಕಗಳ ಲಾಭವಾಯಿತು. ರೈಡರ್ ಅಸ್ಲಾಮ್ ಮತ್ತು ಡಿಫೆಂಡರ್ ವಿಶಾಲ್ ಭಾರದ್ವಾಜ್ ತಲಾ 4 ಅಂಕ ತಂದು ಕೊಟ್ಟರು.
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Team India: ಪಂತ್-ರಾಹುಲ್ ವಿಚಾರದಲ್ಲಿ ಗಂಭೀರ್- ಅಗರ್ಕರ್ ನಡುವೆ ಭಿನ್ನಾಭಿಪ್ರಾಯ
IPL 2025: ಮತ್ತೊಬ್ಬ ಅಫ್ಘಾನಿ ಬೌಲರ್ ಬದಲು ಮುಂಬೈ ಇಂಡಿಯನ್ಸ್ ತಂಡದ ಸೇರಿದ ಮುಜೀಬ್
ODI Ranking: ನಂ.1 ಸ್ಥಾನದಲ್ಲೇ ಉಳಿದ ಭಾರತ, 4ಕ್ಕೆ ಜಿಗಿದ ನ್ಯೂಜಿಲೆಂಡ್
Team India: ʼನಾವು ನಟರಲ್ಲ..ʼ: ಟೀಂ ಇಂಡಿಯಾದ ಸೂಪರ್ಸ್ಟಾರ್ ಸಂಸ್ಕೃತಿ ಟೀಕಿಸಿದ ಅಶ್ವಿನ್
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.