![Actor Darshan: ಪ್ರೇಮ್ – ದರ್ಶನ್ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್ ಪೋಸ್ಟರ್ ಔಟ್](https://www.udayavani.com/wp-content/uploads/2025/02/4-26-415x249.jpg)
![Actor Darshan: ಪ್ರೇಮ್ – ದರ್ಶನ್ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್ ಪೋಸ್ಟರ್ ಔಟ್](https://www.udayavani.com/wp-content/uploads/2025/02/4-26-415x249.jpg)
Team Udayavani, Apr 9, 2024, 4:37 PM IST
ನವದೆಹಲಿ: ಐಒಎಯಲ್ಲಿನ (ಭಾರತೀಯ ಒಲಿಂಪಿಕ್ ಸಂಸ್ಥೆ) ಒಳಜಗಳ ತೀವ್ರಗೊಂಡಿದೆ. ಇದರ ವಿರುದ್ಧ ಅಧ್ಯಕ್ಷೆ,ಓಟದ ದಂತಕಥೆ ಪಿ.ಟಿ.ಉಷಾ ನೇರವಾಗಿ ತಿರುಗಿಬಿದ್ದಿದ್ದಾರೆ. ಕಾರ್ಯಕಾರಿ ಮಂಡಳಿ ಸದಸ್ಯರು ತಾನು ನೇಮಕ ಮಾಡಿರುವ ವ್ಯಕ್ತಿಗಳ ಗುತ್ತಿಗೆ ರದ್ದು ಮಾಡಿ, ತನ್ನನ್ನೇ ಮೂಲೆ ಗುಂಪು ಮಾಡಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಐಒಎಯ ಸಿಇಒ ಆಗಿ ರಘುರಾಮ್ ಅಯ್ಯರ್ರನ್ನು ನೇಮಕ ಮಾಡುವಾಗ ನಮ್ಮ ಒಪ್ಪಿಗೆ ಪಡೆದಿರಲಿಲ್ಲ ಎಂದು ಈ ಹಿಂದೆಯೇ ಕಾರ್ಯಕಾರಿ ಸದಸ್ಯರು ಆರೋಪಿಸಿದ್ದರು. ಹಾಗೆಯೇ ಅಯ್ಯರ್ರನ್ನು ಅಮಾನತು ಮಾಡುವ ಆದೇಶಕ್ಕೆ ಸಹಿ ಹಾಕಿದ್ದರು. ಇದೀಗ ಶುಕ್ರವಾರ ಉಷಾ ಅವರ ಕಾರ್ಯಕಾರಿ ಸಹಾಯಕ ಅಜಯ್ ನಾರಂಗ್ರ ನೇಮಕಾತಿಯನ್ನೇ ರದ್ದು ಮಾಡಿರುವುದಾಗಿ ಕಾರ್ಯಕಾರಿ ಸಮಿತಿ ಹೇಳಿಕೊಂಡಿದೆ!
ಮಾತ್ರವಲ್ಲ, ಅನಧಿಕೃತ ವ್ಯಕ್ತಿಗಳಿಗೆ ಕೇಂದ್ರ ಕಚೇರಿಗೆ ಪ್ರವೇಶವಿಲ್ಲ ಎಂಬ ನೋಟಿಸ್ ಅನ್ನು ಅಂಟಿಸಿದೆ! ಇದು ಉಷಾ ಅವರಿಗೆ ಬೇಸರ ಬರಿಸಿದೆ. ಕಾರ್ಯಕಾರಿ ಸದಸ್ಯರಿಗೆ ನೇಮಕ ಮಾಡುವ, ರದ್ದು ಮಾಡುವ ಅಧಿಕಾರವಿಲ್ಲ ಎನ್ನುವುದು ನೆನಪಿರಬೇಕು ಎಂದು ಉಷಾ ಹೇಳಿದ್ದಾರೆ.
Team India: ಪಂತ್-ರಾಹುಲ್ ವಿಚಾರದಲ್ಲಿ ಗಂಭೀರ್- ಅಗರ್ಕರ್ ನಡುವೆ ಭಿನ್ನಾಭಿಪ್ರಾಯ
IPL 2025: ಮತ್ತೊಬ್ಬ ಅಫ್ಘಾನಿ ಬೌಲರ್ ಬದಲು ಮುಂಬೈ ಇಂಡಿಯನ್ಸ್ ತಂಡದ ಸೇರಿದ ಮುಜೀಬ್
ODI Ranking: ನಂ.1 ಸ್ಥಾನದಲ್ಲೇ ಉಳಿದ ಭಾರತ, 4ಕ್ಕೆ ಜಿಗಿದ ನ್ಯೂಜಿಲೆಂಡ್
Team India: ʼನಾವು ನಟರಲ್ಲ..ʼ: ಟೀಂ ಇಂಡಿಯಾದ ಸೂಪರ್ಸ್ಟಾರ್ ಸಂಸ್ಕೃತಿ ಟೀಕಿಸಿದ ಅಶ್ವಿನ್
Don’t hug players: ಭಾರತದ ಆಟಗಾರರ ಅಪ್ಪಿಕೊಳ್ಬೇಡಿ… ತಂಡಕ್ಕೆ ಪಾಕ್ ಅಭಿಮಾನಿಗಳು ಕರೆ
You seem to have an Ad Blocker on.
To continue reading, please turn it off or whitelist Udayavani.