![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
Team Udayavani, May 9, 2017, 12:35 PM IST
ಮೊಹಾಲಿ: ಅಂಪಾಯರ್ ತೀರ್ಪಿನ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ, ವಾದಕ್ಕಿಳಿದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಪೇಸ್ ಬೌಲರ್ ಸಂದೀಪ್ ಶರ್ಮ ಅವರಿಗೆ ಪಂದ್ಯ ಸಂಭಾವನೆಯ ಅರ್ಧದಷ್ಟು ದಂಡ ವಿಧಿಸಲಾಗಿದೆ.
ರವಿವಾರ ರಾತ್ರಿ ಮೊಹಾಲಿಯಲ್ಲಿ ನಡೆದ ಪಂಜಾಬ್-ಗುಜರಾತ್ ನಡುವಿನ ಪಂದ್ಯದ ವೇಳೆ ಈ ಘಟನೆ ನಡೆದಿದೆ.
ಗುಜರಾತ್ ಇನ್ನಿಂಗ್ಸಿನ 5ನೇ ಓವರ್ ವೇಳೆ, ಸಂದೀಪ್ ಶರ್ಮ “ರೌಂಡ್ ದಿ ವಿಕೆಟ್’ ಬೌಲಿಂಗ್ ನಡೆಸಿದರು. ಆಗ ಅಂಪಾಯರ್ ಎ. ನಂದಕಿಶೋರ್ ಇದನ್ನು ನೋಬಾಲ್ ಎಂದು ಘೋಷಿಸಿದರು. ಬೌಲಿಂಗ್ ಬದಲಾವಣೆ ಕುರಿತು ಸಂದೀಪ್ ತನಗೆ ಸೂಚಿಸಲಿಲ್ಲ ಎಂಬ ಕಾರಣಕ್ಕಾಗಿ ನಂದಕಿಶೋರ್ ಇಂಥದೊಂದು ತೀರ್ಮಾನಕ್ಕೆ ಬಂದಿದ್ದರು.
ಇದು ಸಂದೀಪ್ ಶರ್ಮ ಅವರನ್ನು ಕೆರಳಿಸಿತು. ಅವರು ಅಂಪಾಯರ್ ಜತೆ ವಾದಕ್ಕಿಳಿದರು. ಬಿಸಿ ಬಿಸಿ ಚರ್ಚೆ ನಡೆಯಿತು. ಅಂಪಾಯರ್ ನಿರ್ಣಯ ಪಂಜಾಬ್ ನಾಯಕ ಮ್ಯಾಕ್ಸ್ವೆಲ್ ಅವರ ಅಸಮಾಧಾನಕ್ಕೂ ಕಾರಣವಾಯಿತು.
ಅಂಪಾಯರ್ ನೀಡಿದ ದೂರಿನನ್ವಯ ಮ್ಯಾಚ್ ರೆಫ್ರಿ ಜಾವಗಲ್ ಶ್ರೀನಾಥ್ ಯಾವುದೇ ವಿಚಾರಣೆ ನಡೆಸದೆ ಸಂದೀಪ್ ಶರ್ಮ ಅವರಿಗೆ ದಂಡ ವಿಧಿಸಿದರು.
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್ ವಿವಾದ
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Team India: ಪಂತ್-ರಾಹುಲ್ ವಿಚಾರದಲ್ಲಿ ಗಂಭೀರ್- ಅಗರ್ಕರ್ ನಡುವೆ ಭಿನ್ನಾಭಿಪ್ರಾಯ
IPL 2025: ಮತ್ತೊಬ್ಬ ಅಫ್ಘಾನಿ ಬೌಲರ್ ಬದಲು ಮುಂಬೈ ಇಂಡಿಯನ್ಸ್ ತಂಡದ ಸೇರಿದ ಮುಜೀಬ್
You seem to have an Ad Blocker on.
To continue reading, please turn it off or whitelist Udayavani.