![1-sidda](https://www.udayavani.com/wp-content/uploads/2025/02/1-sidda-415x281.jpg)
![1-sidda](https://www.udayavani.com/wp-content/uploads/2025/02/1-sidda-415x281.jpg)
Team Udayavani, Mar 26, 2024, 11:11 PM IST
ಬೆಂಗಳೂರು: “ಕ್ಯಾಚ್ ಬಿಟ್ಟು ಮ್ಯಾಚ್ ಸೋತೆವು’-ಇದು ಪಂಜಾಬ್ ನಾಯಕ ಶಿಖರ್ ಧವನ್ ಅವರ ಒಂದು ಸಾಲಿನ ಪ್ರತಿಕ್ರಿಯೆ. ಆರ್ಸಿಬಿ ಎದುರಿನ ಪಂದ್ಯವನ್ನು 4 ವಿಕೆಟ್ಗಳಿಂದ ಕಳೆದುಕೊಂಡ ಬಳಿಕ ಧವನ್ ಇಂಥದೊಂದು ಹೇಳಿಕೆ ನೀಡಿದ್ದಾರೆ.
177 ರನ್ ಗಳಿಸಲು ಹೊರಟಿದ್ದ ಆರ್ಸಿಬಿಗೆ ವಿರಾಟ್ ಕೊಹ್ಲಿ ಆಸರೆಯಾಗಿ ಪರಿಣಮಿಸಿದರು. ಇವರ 77 ರನ್ ಸಾಹಸದಿಂದ (49 ಎಸೆತ, 11 ಬೌಂಡರಿ, 2 ಸಿಕ್ಸರ್) ಆರ್ಸಿಬಿ ಪ್ರಸಕ್ತ ಐಪಿಎಲ್ನಲ್ಲಿ ಮೊದಲ ಗೆಲುವು ದಾಖಲಿಸಿತು. ಸ್ಯಾಮ್ ಕರನ್ ಎಸೆದ ಮೊದಲ ಓವರ್ನಲ್ಲೇ ಕೊಹ್ಲಿ 4 ಬೌಂಡರಿ ಬಾರಿಸಿ ಅಬ್ಬರಿಸಿದರು. ಆದರೆ 2ನೇ ಎಸೆತದಲ್ಲಿ ಬೌಂಡರಿ ಖಾತೆ ತೆರೆಯುವಾಗ ಚೆಂಡು ಎಜ್ ಆಗಿ ಜಾನಿ ಬೇರ್ಸ್ಟೊ ಕೈಯಿಂದ ಜಾರಿ ಹೋಗಿತ್ತು. ಥರ್ಡ್ ಮ್ಯಾನ್ನತ್ತ ಧಾವಿಸಿ ಬೌಂಡರಿ ತಲುಪಿತು. ಕೊಹ್ಲಿಗೆ ರನ್ ಖಾತೆ ತೆರೆಯುವ ಮೊದಲೇ ಜೀವದಾನವೊಂದು ಸಿಕ್ಕಿತು!
ಶಿಖರ್ ಧವನ್ ಇದನ್ನೇ ಉಲ್ಲೇಖೀಸಿ ತಂಡದ ದುರದೃಷ್ಟವನ್ನು ಹಳಿದರು. “ವಿರಾಟ್ 77 ರನ್ ಬಾರಿಸಿ ಆರ್ಸಿಬಿ ಗೆಲುವಿಗೆ ಕಾರಣರಾದರು. ನಾವು ಕ್ಲಾಸ್ ಪ್ಲೇಯರ್ಗೆ ಆರಂಭದಲ್ಲೇ ಜೀವದಾನವೊಂದನ್ನು ನೀಡಿ ಇದಕ್ಕೆ ತಕ್ಕ ಶಾಸ್ತಿ ಅನುಭವಿಸಿದೆವು. ಆ ಕ್ಯಾಚ್ ಪಡೆದದ್ದೇ ಆದಲ್ಲಿ ಪಂದ್ಯದ ಗತಿ ಬದಲಾಗುವ ಎಲ್ಲ ಸಾಧ್ಯತೆ ಇತ್ತು. ಈ ಹಂತದಿಂದಲೇ ನಾವು ಲಯ ಕಳೆದುಕೊಂಡೆವು’ ಎಂಬುದಾಗಿ ತುಸು ಬೇಸರದಿಂದಲೇ ಹೇಳಿದರು.
“ನಮ್ಮ ಬೌಲಿಂಗ್ ಉತ್ತಮ ಮಟ್ಟದಲ್ಲೇ ಇತ್ತು. ಹರ್ಪ್ರೀತ್ ಬ್ರಾರ್, ಕಾಗಿಸೊ ರಬಾಡ ಭಾರೀ ನಿಯಂತ್ರಣ ಸಾಧಿಸಿದ್ದರು. ಬ್ರಾರ್ 4 ಓವರ್ಗಳಲ್ಲಿ ನೀಡಿದ್ದು ಕೇವಲ 13 ರನ್. ಎಡಗೈ ಬ್ಯಾಟರ್ಗಳ ವಿರುದ್ಧ ಇವರು ಅಮೋಘ ಹಿಡಿತ ಸಾಧಿಸುತ್ತಾರೆ’ ಎಂದು ಪ್ರಶಂಸಿಸಿದರು.
Team India: ಪಂತ್-ರಾಹುಲ್ ವಿಚಾರದಲ್ಲಿ ಗಂಭೀರ್- ಅಗರ್ಕರ್ ನಡುವೆ ಭಿನ್ನಾಭಿಪ್ರಾಯ
IPL 2025: ಮತ್ತೊಬ್ಬ ಅಫ್ಘಾನಿ ಬೌಲರ್ ಬದಲು ಮುಂಬೈ ಇಂಡಿಯನ್ಸ್ ತಂಡದ ಸೇರಿದ ಮುಜೀಬ್
ODI Ranking: ನಂ.1 ಸ್ಥಾನದಲ್ಲೇ ಉಳಿದ ಭಾರತ, 4ಕ್ಕೆ ಜಿಗಿದ ನ್ಯೂಜಿಲೆಂಡ್
Team India: ʼನಾವು ನಟರಲ್ಲ..ʼ: ಟೀಂ ಇಂಡಿಯಾದ ಸೂಪರ್ಸ್ಟಾರ್ ಸಂಸ್ಕೃತಿ ಟೀಕಿಸಿದ ಅಶ್ವಿನ್
Don’t hug players: ಭಾರತದ ಆಟಗಾರರ ಅಪ್ಪಿಕೊಳ್ಬೇಡಿ… ತಂಡಕ್ಕೆ ಪಾಕ್ ಅಭಿಮಾನಿಗಳು ಕರೆ
You seem to have an Ad Blocker on.
To continue reading, please turn it off or whitelist Udayavani.