ಮೊಹಾಲಿಯಲ್ಲಿ ಪಂಜಾಬ್ ಮ್ಯಾಚ್: ಸೇಡಿಗೆ ಕಾದಿದೆ ಮುಂಬೈ ಇಂಡಿಯನ್ಸ್
Team Udayavani, May 3, 2023, 8:00 AM IST
ಮೊಹಾಲಿ: ಐದು ಬಾರಿಯ ಚಾಂಪಿಯನ್ ಆಗುವುದರ ಜತೆಗೆ ಕಳೆದ ಸಲ 10ನೇ ಸ್ಥಾನಕ್ಕೆ ಕುಸಿದಿದ್ದ ಮುಂಬೈ ಇಂಡಿಯನ್ಸ್ ಪಾಲಿಗೆ ಬುಧವಾರ ನಿರ್ಣಾಯಕ ಪಂದ್ಯವೊಂದು ಎದುರಾಗಲಿದೆ.
ಪಂಜಾಬ್ ಕಿಂಗ್ಸ್ ತಂಡವನ್ನು ಅವರದೇ ಮೊಹಾಲಿ ಅಂಗಳದಲ್ಲಿ ಎದುರಿಸಬೇಕಿದೆ. ಮುಂಬಯಿಯಲ್ಲಿ ಅನುಭವಿಸಿದ 13 ರನ್ ಸೋಲಿಗೆ ಸೇಡು ತೀರಿಸಿಕೊಳ್ಳಬೇಕಾದ ಒತ್ತಡ ರೋಹಿತ್ ಪಡೆಯ ಮೇಲಿದೆ.
ಮುಂಬೈ ಎಂಟರಲ್ಲಿ 4 ಪಂದ್ಯಗಳನ್ನು ಜಯಿಸಿದರೆ, ಪಂಜಾಬ್ 9 ಪಂದ್ಯಗಳಲ್ಲಿ ಐದನ್ನು ಗೆದ್ದು ಒಂದು ಮೆಟ್ಟಿಲು ಮೇಲಿದೆ. ಎ. 30ರಂದು ವಾಂಖೇಡೆ ಸ್ಟೇಡಿಯಂನಲ್ಲಿ ಐಪಿಎಲ್ ಇತಿಹಾ ಸದ 1,000ದ ಪಂದ್ಯದಲ್ಲಿ ಪಾಲ್ಗೊಂಡು, ರಾಜಸ್ಥಾನ್ ವಿರುದ್ಧ 6 ವಿಕೆಟ್ಗಳ ಅಮೋಘ ಗೆಲುವು ಸಾಧಿಸಿದ ಹೆಗ್ಗಳಿಕೆ ಮುಂಬೈ ತಂಡದ್ದು, ಇಲ್ಲಿನ ಆತ್ಮವಿಶ್ವಾಸ ವನ್ನು ಅದು ಮೊಹಾಲಿಗೂ ಕೊಂಡೊಯ್ಯಬೇಕಿದೆ.
ಇನ್ನೊಂದೆಡೆ ಪಂಜಾಬ್ ಕೂಡ ಚೆನ್ನೈ ಅಂಗಳದಲ್ಲಿ 4 ವಿಕೆಟ್ಗಳ ಜಯ ಸಾಧಿಸಿದ ಉತ್ಸಾಹದಲ್ಲಿದೆ. ಇದಕ್ಕೂ ಮುನ್ನ ಪಂಜಾಬ್ ಪಡೆ ಮೊಹಾಲಿ ಅಂಗಳದಲ್ಲಿ ಲಕ್ನೋಗೆ 257 ರನ್ ಬಿಟ್ಟು ಕೊಟ್ಟು ಎಲ್ಲ ದಿಕ್ಕುಗಳಿಂದಲೂ ಟೀಕೆಗೊಳಗಾಗಿತ್ತು. ಈಗ ಮತ್ತೆ ಮೊಹಾಲಿ ಅಂಗಳದಲ್ಲಿ ಮ್ಯಾಚ್ ನಡೆಯುತ್ತದೆ. ಟ್ರ್ಯಾಕ್ ಹೇಗೆ ವರ್ತಿಸಬಹುದು ಎಂಬ ಕುತೂಹಲ ಇದ್ದೇ ಇದೆ.
ಬೌಲಿಂಗ್ ಸಮಸ್ಯೆ
ರಾಜಸ್ಥಾನ್ ಎದುರಿನ ತವರಿನ ಪಂದ್ಯದಲ್ಲಿ ಮುಂಬೈ ತಂಡದ ಬೌಲಿಂಗ್ ದೌರ್ಬಲ್ಯ ಎದ್ದು ಕಂಡಿತ್ತು. ಈ ಸಮಸ್ಯೆಯನ್ನು ಬ್ಯಾಟಿಂಗ್ ಮೂಲಕ ಹೋಗಲಾಡಿಸಿಕೊಂಡಿತು. ಆದರೆ ನಾಯಕ ರೋಹಿತ್ ಶರ್ಮ (3) ವಿಫಲರಾಗಿದ್ದರು. ಇಶಾನ್ ಕಿಶನ್ ಸಾಮಾನ್ಯ ಪ್ರದರ್ಶನ ನೀಡಿದ್ದರು. ಗ್ರೀನ್, ಸೂರ್ಯಕುಮಾರ್, ತಿಲಕ್ ವರ್ಮ, ಕೊನೆಯಲ್ಲಿ ಹ್ಯಾಟ್ರಿಕ್ ಸಿಕ್ಸರ್ ಸಿಡಿಸಿದ ಸಿಂಗಾಪುರ ಮೂಲದ ಆಸೀಸ್ ಆಟಗಾರ ಟಿಮ್ ಡೇವಿಡ್ ಸಾಹಸದಿಂದ ಮುಂಬೈಗೆ ಗೆಲುವು ಒಲಿದಿತ್ತು. ಪಂಜಾಬ್ ವಿರುದ್ಧವೂ ಮುಂಬೈ ಇಂಥದೇ ಬ್ಯಾಟಿಂಗ್ ಪ್ರದರ್ಶನ ನೀಡಬೇಕಿದೆ. ಹಾಗೆಯೇ ಮುಂಬೈ ಬೌಲಿಂಗ್ ಘಾತಕವಾಗಿ ಪರಿಣಮಿಸುವ ಅಗತ್ಯ ಹೆಚ್ಚಿದೆ.
ಇತ್ತಂಡಗಳ ನಡುವಿನ ಮೊದಲ ಪಂದ್ಯ ಕೂಡ ಇನ್ನೂರರಾಚೆಯ ಹೋರಾಟವಾಗಿತ್ತು. ಪಂಜಾಬ್ 8 ವಿಕೆಟಿಗೆ 214 ರನ್ ಪೇರಿಸಿದರೆ, ಮುಂಬೈ 6 ವಿಕೆಟಿಗೆ 201 ರನ್ ಮಾಡಿ ಸೋಲು ಕಂಡಿತ್ತು.
ಮುಂಬೈಯಂತೆ ಪಂಜಾಬ್ ಕೂಡ ಅನಿಶ್ಚಿತ ಫಲಿತಾಂಶ ದಾಖಲಿಸುವ ತಂಡ. ಚೆನ್ನೈ ವಿರುದ್ಧ 200 ರನ್ ಚೇಸ್ ಮಾಡುವಾಗ ಪ್ರಭ್ಸಿಮ್ರಾನ್-ಶಿಖರ್ ಧವನ್ಉತ್ತಮ ಅಡಿಪಾಯ ನಿರ್ಮಿಸಿದ್ದರು. ಅಥರ್ವ ಟೈಡೆ, ಲಿವಿಂಗ್ಸ್ಟೋನ್, ಸ್ಯಾಮ್ ಕರನ್, ಸಿಕಂದರ್ ರಝ, ಜಿತೇಶ್ ಶರ್ಮ ಅವರಿಂದ ಬ್ಯಾಟಿಂಗ್ ಸರದಿ ಬೆಳೆಯುತ್ತದೆ.
ಬೌಲಿಂಗ್ ವಿಭಾಗದಲ್ಲಿ ಅರ್ಷ ದೀಪ್, ಕರನ್, ಚಹರ್ ಅವರನ್ನು ಹೆಚ್ಚು ನಂಬಿಕೊಂಡಿದೆ. ರಬಾಡ ಕ್ಲಿಕ್ ಆದರೆ ಪಂಜಾಬ್ ಬೌಲಿಂಗ್ ಸಮಸ್ಯೆ ಬಹುತೇಕ ಪರಿಹಾರಗೊಳ್ಳಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
INDvsBAN; ಬಸವಳಿದ ಬಾಂಗ್ಲಾ ಎದುರು ಪಂತ್-ಗಿಲ್ ಸೂಪರ್ ಶತಕ; ಡಿಕ್ಲೇರ್ ಘೋಷಿಸಿದ ಭಾರತ
AFGvsSA; ಐತಿಹಾಸಿಕ ಸರಣಿ ಗೆದ್ದ ಅಫ್ಘಾನ್: ದ.ಆಫ್ರಿಕಾಗೆ 177 ರನ್ ಅಂತರದ ಸೋಲು
147-year ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಹೊಸದೊಂದು ದಾಖಲೆ ಬರೆದ ಆರ್.ಅಶ್ವಿನ್
IPL 2025: ಮತ್ತೆ ರಾಹುಲ್ ದ್ರಾವಿಡ್ ಜತೆ ಸೇರಿದ ವಿಕ್ರಮ್ ರಾಥೋರ್
INDvsBAN: ಭಾರತದ ಬಿಗು ದಾಳಿಗೆ ಬೆದರಿದ ಬಾಂಗ್ಲಾ: 149 ರನ್ ಗೆ ಆಲೌಟ್
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Belagavi; ದರ್ಬಾರ್ ಗಲ್ಲಿಯಲ್ಲಿ ಪ್ಯಾಲೆಸ್ತೀನ್ ಧ್ವಜದ ಮಾದರಿಯ ಪೆಂಡಾಲ್!
Shimoga; ಹಿಂದೂ ಭಾವನೆ ಮೇಲೆ ಧಕ್ಕೆ ತರುವ ಕೆಲಸ ನಡೆಯುತ್ತಿದೆ: ವಿಜಯೇಂದ್ರ ಆಕ್ರೋಶ
Desi Swara: ಅಮೆರಿಕ ಕನ್ನಡತಿ ಕಲಾಶ್ರೀ, ನೃತ್ಯಗುರು ಸುಪ್ರಿಯಾ ದೇಸಾಯಿಗೆ ಸಮ್ಮಾನ
Shiruru; ನಾಪತ್ತೆಯಾಗಿದ್ದ ಕೇರಳದ ಅರ್ಜುನನ ಲಾರಿ ಪತ್ತೆ; ಈಶ್ವರ್ ಮಲ್ಪೆ ತಂಡದ ಕಾರ್ಯಾಚರಣೆ
World Rivers Day: ಸೆ.22 ವಿಶ್ವ ನದಿಗಳ ದಿನ- ನಿತ್ಯ ಬದುಕಿನ ಜೀವನಾಡಿಯ ಮೂಲ “ನದಿ’
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.