IPL; ಬೇರೆ ಫ್ರಾಂಚೈಸಿಯ ʼಬ್ಲ್ಯಾಂಕ್‌ ಚೆಕ್‌ʼ ಬದಿಗೆ ತಳ್ಳಿ ರಾಯಲ್ಸ್‌ ಸೇರಿದ ದ್ರಾವಿಡ್

ರಾಯಲ್ಸ್‌ ಗೆ ನಿಷ್ಠೆ ತೋರಿದ ದಿ ವಾಲ್

Team Udayavani, Sep 8, 2024, 11:52 AM IST

Rahul Dravid reject blank cheques to join Rajasthan Royal

ಮುಂಬೈ: ಟೀಂ ಇಂಡಿಯಾ ಜೊತೆಗಿನ ಕೋಚಿಂಗ್‌ ಅವಧಿ ಮುಗಿದ ಬಳಿಕ ರಾಹುಲ್‌ ದ್ರಾವಿಡ್‌ (Rahul Dravid) ಅವರು ಇದೀಗ ಮತ್ತೆ ರಾಜಸ್ಥಾನ ರಾಯಲ್ಸ್‌ ಗೆ ಮರಳಿದ್ದಾರೆ. ಈ ಹಿಂದೆ ರಾಜಸ್ಥಾನ ರಾಯಲ್ಸ್‌ (Rajasthan Royals) ತಂಡದಲ್ಲಿ ಆಟಗಾರನಾಗಿ, ಬಳಿಕ ಮೆಂಟರ್‌ ಆಗಿದ್ದ ರಾಹುಲ್‌ ಇದೀಗ ಮತ್ತೆ ಅದೇ ಫ್ರಾಂಚೈಸಿಗೆ ಮರಳಿದ್ದಾರೆ.

ದ್ರಾವಿಡ್ ಮೊದಲು 2011 ರಿಂದ 2013 ರವರೆಗೆ ಆಟಗಾರ ಮತ್ತು ನಾಯಕರಾಗಿ ರಾಯಲ್ಸ್‌ ಭಾಗವಾಗಿದ್ದರು. ಅವರ ನಿವೃತ್ತಿಯ ನಂತರ, ರಾಯಲ್ಸ್ 2 ವರ್ಷಗಳ ಅಮಾನತು ಎದುರಿಸುವ ಮೊದಲು ಅವರು 2014 ಮತ್ತು 2015 ರ ಸೀಸನ್‌ಗಳಿಗೆ ಮೆಂಟರ್ ಪಾತ್ರ ವಹಿಸಿಕೊಂಡಿದ್ದರು.

ಇದೀಗ ಟಿ20 ವಿಶ್ವಕಪ್‌ ಗೆಲುವಿನ ಮೂಲಕ ಟೀಂ ಇಂಡಿಯಾದ ಐಸಿಸಿ ಟ್ರೋಫಿ ಬರ ನೀಗಿಸಿದ ಯಶಸ್ವಿ ಕೋಚ್‌ ರಾಹುಲ್‌ ದ್ರಾವಿಡ್‌ ಅವರು ರಾಯಲ್ಸ್‌ ಸೆಟಪ್‌ ಗೆ ಮರಳಿದ್ದಾರೆ.

ಯಶಸ್ವಿ ಕೋಚ್‌ ಅವರನ್ನು ಸೇರಿಸಿಕೊಳ್ಳಲು ಹಲವು ಐಪಿಎಲ್‌ ಫ್ರಾಂಚೈಸಿಗಳು ಪ್ರಯತ್ನಿಸಿದೆ ಎಂದು ವರದಿಯಾಗಿದೆ. ಕ್ರಿಕ್‌ ಬಜ್‌ ವರದಿಯಂತೆ, ದ್ರಾವಿಡ್ ಅವರಿಗೆ ಕೆಲವು ಫ್ರಾಂಚೈಸಿಗಳಿಂದ ಖಾಲಿ ಚೆಕ್‌ ಒಳಗೊಂಡಂತೆ ಕೆಲವು ಉನ್ನತ-ಪ್ರೊಫೈಲ್ ಆಫರ್‌ ನೀಡಲಾಗಿದೆ. ಆದರೆ, ಅವರು ರಾಜಸ್ಥಾನ ರಾಯಲ್ಸ್‌ ಗೆ ನಿಷ್ಠರಾಗಿರಲು ನಿರ್ಧರಿಸಿದರು. ಅವರು ಹಿಂದೆ ಆಟಗಾರನಾಗಿ ದೀರ್ಘಕಾಲ ಕಳೆದಿದ್ದ ಫ್ರಾಂಚೈಸಿಗೆ ಮರಳಿದರು.

9 ವರ್ಷಗಳ ಬಳಿಕ ರಾಹುಲ್‌ ದ್ರಾವಿಡ್‌ ಅವರು ರಾಜಸ್ಥಾನ ತಂಡಕ್ಕೆ ಮರಳಿದ್ದಾರೆ. ಎರಡು ವರ್ಷಗಳ ಕಾಲ ರಾಜಸ್ತಾನ ತಂಡವು ಅಮಾನತಾದ ಬಳಿಕ ರಾಹುಲ್‌ ಡೆಲ್ಲಿ ಡೇರ್‌ ಡೆವಿಲ್ಸ್‌ (2016-17) ತಂಡದ ತರಬೇತುದಾರರಾಗಿ ಸೇರಿದ್ದರು. ಆ ಬಳಿಕ ಬಿಸಿಸಿಐ ಜತೆ ಸೇರಿದರು.

ಮೊದಲು ಭಾರತ ಅಂಡರ್‌ 19 ಮತ್ತು ಇಂಡಿಯಾ ಎ ತಂಡದ ಮುಖ್ಯ ಕೋಚ್‌ (2015-19) ಆಗಿದ್ದರು. ಬಳಿಕ ಎನ್‌ ಸಿಎ ಅಧ್ಯಕ್ಷರಾಗಿದ್ದರು. (2019-2021) ಆ ಬಳಿಕ ಟೀಂ ಇಂಡಿಯಾ ಮುಖ್ಯ ಕೋಚ್‌ ಆಗಿ ಕೆಲಸ ಮಾಡಿದ್ದಾರೆ.

ಟಾಪ್ ನ್ಯೂಸ್

PUNJALAKATTE

Punjalkatte: ಆರ್‌ಎಎಫ್ ಪೊಲೀಸರಿದ್ದ ಲಾರಿ ಪಲ್ಟಿ , ಇಬ್ಬರಿಗೆ ಗಾಯ

-archana-kamath

Liver transplant: ಲಿವರ್‌ ದಾನದ ಬಳಿಕ ಉಪನ್ಯಾಸಕಿ ಸಾವು

water

Mudubidire: 77 ಕೋ.ರೂ. ವೆಚ್ಚದ ಅಮೃತ್‌ 2.0 ನೀರಿನ ಯೋಜನೆಗೆ ಚಾಲನೆ

Belli

Movie Release: ಮಕ್ಕಳ ಚಲನಚಿತ್ರ “ದಿ ಜರ್ನಿ ಆಫ್‌ ಬೆಳ್ಳಿ’ ತೆರೆಗೆ

SUPER-MOON

Space Wonder: ಇಂದು ವಿಶೇಷ ಸೂಪರ್‌ಮೂನ್‌

Sunil-kumar

Investigation: ಬಂಟ್ವಾಳ, ಮಂಡ್ಯ ಘಟನೆ ತನಿಖೆ ಎನ್‌ಐಎಗೆ ವಹಿಸಲಿ: ಶಾಸಕ ಸುನಿಲ್‌ ಕುಮಾರ್‌

Cap-Brijesh-Chowta

Mangaluru: ಶಾಂತಿಭಂಗಕ್ಕೆ ಯತ್ನಿಸುವವರ ವಿರುದ್ಧ ಕಠಿನ ಕ್ರಮ: ಸಂಸದ ಚೌಟ ಆಗ್ರಹ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-asdadasd

Cricketer of the Month :ಎರಡೂ ಪ್ರಶಸ್ತಿ ಶ್ರೀಲಂಕಾ ಪಾಲು

1-HB

Harry Brook ಹೆಗಲಿಗೆ ಇಂಗ್ಲೆಂಡ್‌ ನಾಯಕತ್ವ

1-reasas

Americaದಲ್ಲಿ ಬಿಡುವಿನ ದಿನಗಳನ್ನು ಕಳೆಯುತ್ತಿರುವ ಧೋನಿ

1-ccrr-2

Team India ಮೂರನೇ ಸುತ್ತಿನ ಅಭ್ಯಾಸ

Asian Champions Trophy: ಕೊರಿಯಾ ವಿರುದ್ದ ಗೆದ್ದು ಫೈನಲ್‌ ಪ್ರವೇಶಿಸಿದ ಭಾರತ ಹಾಕಿ ತಂಡ

Asian Champions Trophy: ಕೊರಿಯಾ ವಿರುದ್ದ ಗೆದ್ದು ಫೈನಲ್‌ ಪ್ರವೇಶಿಸಿದ ಭಾರತ ಹಾಕಿ ತಂಡ

MUST WATCH

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

udayavani youtube

ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

ಹೊಸ ಸೇರ್ಪಡೆ

PUNJALAKATTE

Punjalkatte: ಆರ್‌ಎಎಫ್ ಪೊಲೀಸರಿದ್ದ ಲಾರಿ ಪಲ್ಟಿ , ಇಬ್ಬರಿಗೆ ಗಾಯ

-archana-kamath

Liver transplant: ಲಿವರ್‌ ದಾನದ ಬಳಿಕ ಉಪನ್ಯಾಸಕಿ ಸಾವು

1-asdadasd

Cricketer of the Month :ಎರಡೂ ಪ್ರಶಸ್ತಿ ಶ್ರೀಲಂಕಾ ಪಾಲು

1-HB

Harry Brook ಹೆಗಲಿಗೆ ಇಂಗ್ಲೆಂಡ್‌ ನಾಯಕತ್ವ

1-reasas

Americaದಲ್ಲಿ ಬಿಡುವಿನ ದಿನಗಳನ್ನು ಕಳೆಯುತ್ತಿರುವ ಧೋನಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.