ಗೌತಮ್‌ ಆಟ ಜೀವಿತಾವಧಿಯ ಅನುಭವ: ಸ್ಯಾಮ್ಸನ್‌


Team Udayavani, Apr 24, 2018, 6:15 AM IST

Sanju-Samson,.jpg

ಜೈಪುರ: ಮುಂಬೈ ಇಂಡಿಯನ್ಸ್‌ ತಂಡದ ವಿರುದ್ಧ ರವಿವಾರ ನಡೆದ ಪಂದ್ಯದಲ್ಲಿ ಕರ್ನಾಟಕದ ಕೃಷ್ಣಪ್ಪ ಗೌತಮ್‌ ಅವರ ಪ್ರಚಂಡ ಆಟವನ್ನು ಜೀವಿತಾವಧಿಯ ಅನುಭವ ಎಂದು ಸಂಜು ಸ್ಯಾಮ್ಸನ್‌ ಬಣ್ಣಿಸಿದ್ದಾರೆ. ಆದರೆ ತಂಡ ಪ್ರಯತ್ನದಿಂದಲೇ ರಾಜಸ್ಥಾನ್‌ ರಾಯಲ್ಸ್‌ ರೋಚಕ ಗೆಲುವು ಕಂಡಿದೆ ಎಂದವರು ಸ್ಪಷ್ಟಪಡಿಸಿದ್ದಾರೆ.

ಬಹಳಷ್ಟು ಒತ್ತಡದ ನಡುವೆಯೂ ಗೌತಮ್‌ ಕೇವಲ 11 ಎಸೆತಗಳಿಂದ 33 ರನ್‌ ಸಿಡಿಸಿದ್ದರಿಂದ ರಾಜಸ್ಥಾನ್‌ ಅಂತಿಮ ಓವರಿನಲ್ಲಿ ಜಯಭೇರಿ ಬಾರಿಸಿತ್ತು. ಎರಡು ಸಿಕ್ಸರ್‌ ಮತ್ತು ನಾಲ್ಕು ಬೌಂಡರಿ ಬಾರಿಸಿದ ಗೌತಮ್‌ ತಂಡಕ್ಕೆ 3 ವಿಕೆಟ್‌ಗಳ ಜಯ ತಂದುಕೊಟ್ಟರು. ಈ ಮೊದಲು ಸ್ಯಾಮ್ಸನ್‌ (52) ಮತ್ತು ಬೆನ್‌ ಸ್ಟೋಕ್ಸ್‌ (27 ಎಸೆತಗಳಲ್ಲಿ 40) ಮೂರನೇ ವಿಕೆಟಿಗೆ 72 ರನ್ನುಗಳ ಜತೆಯಾಟ ನಡೆಸಿ ತಂಡದ ಗೆಲುವಿಗೆ ಉತ್ತಮ ಅಡಿಪಾಯ ಹಾಕಿಕೊಟ್ಟಿದ್ದರು.

ಗೌತಮ್‌ ಅವರ ಆಟ ಆತ್ಯದ್ಭುತವಾಗಿತ್ತು. ಇದೊಂದು ಅವರಿಗೆ ಮತ್ತು ನಮ್ಮ ಪಾಲಿಗೆ ಜೀವಿತಾವಧಿಯ ಅನುಭವ ಎಂದು ಪಂದ್ಯದ ಬಳಿಕ ಸ್ಯಾಮ್ಸನ್‌ ತಿಳಿಸಿದರು.

22 ರನ್ನಿಗೆ 3 ವಿಕೆಟ್‌ ಕಿತ್ತು ಮುಂಬೈಯ ರನ್‌ವೇಗಕ್ಕೆ ಕಡಿವಾಣ ಹಾಕಿದ್ದ ರಾಜಸ್ಥಾನದ ವೆಸ್ಟ್‌ಇಂಡೀಸ್‌ನ ಆಟಗಾರ ಜೋಫ್ರಾ ಆರ್ಚರ್‌ಗೆ ಪಂದ್ಯಶ್ರೇಷ್ಠ ಪ್ರಶಸ್ತಿ ನೀಡಲಾಯಿತು. ಆರ್ಚರ್‌ ಅವರಿಗೆ ಪಂದ್ಯಶ್ರೇಷ್ಠ ನೀಡಿರುವುದಕ್ಕೆ ಪ್ರತಿಕ್ರಿಯೆ ನೀಡಲಾರೆ ಎಂದು ಸ್ಯಾಮ್ಸನ್‌ ಹೇಳಿದರು.

ಗೌತಮ್‌ ಕೂಡ ಪಂದ್ಯಶ್ರೇಷ್ಠನೇ ಆದರೆ ಪ್ರತಿಯೊಬ್ಬರ ಕೊಡುಗೆಯೂ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಆರ್ಚರ್‌ ಮೂರು ವಿಕೆಟ್‌ ಕಿತ್ತರಲ್ಲದೇ ಕೆಲವು ಬೌಂಡರಿ ಬಾರಿಸಿದ್ದಾರೆ. ಹಾಗಾಗಿ ಪಂದ್ಯಶ್ರೇಷ್ಠ ಪ್ರಶಸ್ತಿ ಆಯ್ಕೆಗೆ ಪ್ರತಿಕ್ರಿಯೆ ನೀಡಲಾರೆ ಎಂದರು ಸ್ಯಾಮ್ಸನ್‌.

ನನ್ನಿಂದ ಪಂದ್ಯ ಗೆಲ್ಲಿಸಿಕೊಡಲು ಸಾಧ್ಯವಾಗದಿರುವುದಕ್ಕೆ ಸ್ಯಾಮ್ಸನ್‌ ಬೇಸರ ವ್ಯಕ್ತಪಡಿಸಿದರು. 17ನೇ ಓವರಿನಲ್ಲಿ ಸ್ಯಾಮ್ಸನ್‌ ಮತ್ತು ಬಟ್ಲರ್‌ ಸತತ ಎರಡು ಎಸೆತಗಳಲ್ಲಿ ಬುಮ್ರಾ ದಾಳಿಗೆ ಔಟಾಗಿದ್ದರು. ಪಂದ್ಯ ಇನ್ನಿಂಗ್ಸ್‌ನ ಕೊನೆ ಹಂತದವರೆಗೆ ಸಾಗಿದ್ದಕ್ಕೆ ಪ್ರತಿಕ್ರಿಯೆ ನೀಡಿದ ಅವರು ಪಂದ್ಯ ವಿಳಂಬವಾಗಿಲ್ಲ. ಚೇಸಿಂಗ್‌ ವೇಳೆ ಬೌಲಿಂಗ್‌ ತಂಡ ಒತ್ತಡದಲ್ಲಿರುತ್ತದೆ. ಹಾಗಾಗಿ ಅಂತಿಮ ಓವರ್‌ತನಕ ಬ್ಯಾಟಿಂಗ್‌ ಮಾಡಲು ಬಯಸಿದ್ದೆ ಆದರೆ ದುರದೃಷ್ಟವಶಾತ್‌ ಔಟಾದೆ ಎಂದು ಸ್ಯಾಮ್ಸನ್‌ ವಿವರಿಸಿದರು.

15 ರನ್‌ ಕಡಿಮೆ: ಕಿಶನ್‌
15 ರನ್‌ ಕಡಿಮೆಯಾಯಿತು ಆದರೆ ಟ್ವೆಂಟಿ20 ಪಂದ್ಯದಲ್ಲಿ ಇದು ಸಾಮಾನ್ಯ. ರಾಜಸ್ಥಾನ ಉತ್ತಮವಾಗಿ ಬೌಲಿಂಗ್‌ ನಡೆಸಿತ್ತು ಮತ್ತು ಪಂದ್ಯ ಸಾಗುತ್ತಿದ್ದಂತೆ ಈ ಪಿಚ್‌ನಲ್ಲಿ ಬ್ಯಾಟಿಂಗ್‌ ಮಾಡಲು ಕಷ್ಟವಾಗುತ್ತಿತ್ತು ಎಂದು ಇಶಾನ್‌ ಕಿಶನ್‌ ಹೇಳಿದರು. ಜೋಫ್ರಾ ಆರ್ಚರ್‌ ದಾಳಿಗೆ ಪ್ರತಿಕ್ರಿಯೆ ನೀಡಿದ ಕಿಶನ್‌ ಅವರು ಚೆನ್ನಾಗಿ ಬೌಲಿಂಗ್‌ ಮಾಡಿದ್ದಾರೆ. ಆದರೆ ಅವರ ದಾಳಿಯ ವೇಳೆ ನಾವು ಇನ್ನಷ್ಟು ರನ್‌ ಗಳಿಸಬಹುದಿತ್ತು ಎಂದರು. ಇದುವೇ ಆಟದ ಆಂದ. ಕೆಲವೊಮ್ಮೆ ನಮಗೆ ಭರ್ಜರಿ ಆಟವಾಡಲು ಸಾಧ್ಯವಾಗುತ್ತದೆ ಮತ್ತೆ ಕೆಲವೊಮ್ಮ ಸಾಧ್ಯವಾಗುವುದೇ ಇಲ್ಲ ಎಂದ ಕಿಶನ್‌ ಕೊನೆ ಹಂತದಲ್ಲಿ ಸಿಡಿದ ಗೌತಮ್‌ ಅವರ ಆಟಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಟಾಪ್ ನ್ಯೂಸ್

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Gambhir-Agarkar have differences of opinion on Pant-Rahul issue

Team India: ಪಂತ್-ರಾಹುಲ್‌ ವಿಚಾರದಲ್ಲಿ ಗಂಭೀರ್-‌ ಅಗರ್ಕರ್‌ ನಡುವೆ ಭಿನ್ನಾಭಿಪ್ರಾಯ

Mujeeb joins Mumbai Indians team in place of another Afghan bowler

‌IPL 2025: ಮತ್ತೊಬ್ಬ ಅಫ್ಘಾನಿ ಬೌಲರ್‌ ಬದಲು ಮುಂಬೈ ಇಂಡಿಯನ್ಸ್‌ ತಂಡದ ಸೇರಿದ ಮುಜೀಬ್

ODI Ranking: ನಂ.1 ಸ್ಥಾನದಲ್ಲೇ ಉಳಿದ ಭಾರತ, 4ಕ್ಕೆ ಜಿಗಿದ ನ್ಯೂಜಿಲೆಂಡ್‌

ODI Ranking: ನಂ.1 ಸ್ಥಾನದಲ್ಲೇ ಉಳಿದ ಭಾರತ, 4ಕ್ಕೆ ಜಿಗಿದ ನ್ಯೂಜಿಲೆಂಡ್‌

Team India: ‘We are not actors..’: Ashwin criticizes Team India’s superstar culture

Team India: ʼನಾವು ನಟರಲ್ಲ..ʼ: ಟೀಂ ಇಂಡಿಯಾದ ಸೂಪರ್‌ಸ್ಟಾರ್‌ ಸಂಸ್ಕೃತಿ ಟೀಕಿಸಿದ ಅಶ್ವಿನ್

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

1-namm-mannu-1

Udayavani-MIC ನಮ್ಮ ಸಂತೆ:ಮಣ್ಣಿನಿಂದ ಮಾಡಿದ ನಾನಾ ಉತ್ಪನ್ನ

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

1-neyge-1

Udayavani-MIC ನಮ್ಮ ಸಂತೆ:ಗಮನ ಸೆಳೆದ ನೇಯ್ಗೆ ಯಂತ್ರ

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.