![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Jan 21, 2020, 6:55 AM IST
ಚೆನ್ನೈ: ರಣಜಿ ಮುಖಾಮುಖೀಯಲ್ಲಿ ಆತಿಥೇಯ ತಮಿಳುನಾಡು ಎರಡೇ ದಿನದಲ್ಲಿ ರೈಲ್ವೇಸ್ಗೆ ಇನ್ನಿಂಗ್ಸ್ ಹಾಗೂ 164 ರನ್ನುಗಳ ಸೋಲುಣಿಸಿದೆ. ದ್ವಿತೀಯ ಇನ್ನಿಂಗ್ಸ್ನಲ್ಲೂ ಬ್ಯಾಟಿಂಗ್ ಕುಸಿತಕ್ಕೆ ಸಿಲುಕಿದ ರೈಲ್ವೇಸ್ ತೀವ್ರ ಮುಖಭಂಗ ಅನುಭವಿಸಿತು.
ರೈಲ್ವೇಸ್ನ 76 ರನ್ನುಗಳ ಮೊದಲ ಇನ್ನಿಂಗ್ಸಿಗೆ ಉತ್ತರವಾಗಿ ತಮಿಳುನಾಡು 330 ರನ್ ಗಳಿಸಿತು. ಪುನಃ ಬ್ಯಾಟಿಂಗ್ ಬರಗಾಲ ಅನುಭವಿಸಿ ರೈಲ್ವೇಸ್ 90 ರನ್ನಿಗೆ ಸರ್ವಪತನ ಕಂಡಿತು. 22 ರನ್ ಮಾಡಿದ ನಾಯಕ ಅರಿಂದಮ್ ಘೋಷ್ ಅವರದೇ ಹೆಚ್ಚಿನ ಗಳಿಕೆ. ಆರ್. ಸಾಯಿಕಿಶೋರ್ 16ಕ್ಕೆ 5, ಆರ್. ಅಶ್ವಿನ್ 36ಕ್ಕೆ 3 ಹಾಗೂ ಟಿ. ನಟರಾಜನ್ 15ಕ್ಕೆ 2 ವಿಕೆಟ್ ಕಿತ್ತರು. ಸಂಕ್ಷಿಪ್ತ ಸ್ಕೋರ್: ರೈಲ್ವೇಸ್-76 ಮತ್ತು 90. ತಮಿಳುನಾಡು 330.
ಕೇರಳಕ್ಕೆ ಇನ್ನಿಂಗ್ಸ್ ಸೋಲು
ತಿರುವನಂತಪುರ: ರಾಜಸ್ಥಾನ ವಿರುದ್ಧದ ರಣಜಿ ಪಂದ್ಯದಲ್ಲಿ ಆತಿಥೇಯ ಕೇರಳ ಇನ್ನಿಂಗ್ಸ್ ಹಾಗೂ 96 ರನ್ನುಗಳ ಸೋಲಿಗೆ ಗುರಿಯಾಗಿದೆ. ಈ ಪಂದ್ಯ ಕೂಡ 2 ದಿನಗಳಲ್ಲಿ ಮುಗಿಯಿತು. ಕೇರಳ ಮೊದಲ ಸರದಿಯಲ್ಲಿ 90 ರನ್ನಿಗೆ ಕುಸಿಯಿತು. ರಾಜಸ್ಥಾನ 268 ರನ್ ಗಳಿಸಿತು. ದ್ವಿತೀಯ ಸರದಿಯಲ್ಲೂ ಮತ್ತೆ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ಕೇರಳ 82ಕ್ಕೆ ಆಲೌಟ್ ಆಯಿತು. ಸಂಕ್ಷಿಪ್ತ ಸ್ಕೋರ್: ಕೇರಳ-90 ಮತ್ತು 82. ರಾಜಸ್ಥಾನ-268.
ಮನೋಜ್ ತಿವಾರಿ ಅಜೇಯ 303
ಕೋಲ್ಕತಾ: ಹೈದರಾಬಾದ್ ಎದುರಿನ ರಣಜಿ ಪಂದ್ಯದಲ್ಲಿ ಬಂಗಾಲದ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಮನೋಜ್ ತಿವಾರಿ ಅಜೇಯ 303 ರನ್ ಬಾರಿಸಿ ಮೆರೆದಿದ್ದಾರೆ. ಬಂಗಾಲ 7 ವಿಕೆಟಿಗೆ 635 ರನ್ ಪೇರಿಸಿ ಡಿಕ್ಲೇರ್ ಮಾಡಿದೆ. ತಿವಾರಿ 414 ಎಸೆತ ನಿಭಾಯಿಸಿ ತ್ರಿಶತಕ ಪೂರೈಸಿದರು (30 ಬೌಂಡರಿ, 5 ಸಿಕ್ಸರ್). ಇದು ಬಂಗಾಲ ಪರ ರಣಜಿಯಲ್ಲಿ ದಾಖಲಾದ 2ನೇ ತ್ರಿಶತಕ. ಇದಕ್ಕೂ ಮೊದಲು 1998ರಲ್ಲಿ ಅಸ್ಸಾಮ್ ವಿರುದ್ಧ ದೇವಾಂಗ್ ಗಾಂಧಿ 323 ರನ್ ಬಾರಿಸಿದ್ದರು.
ಜವಾಬು ನೀಡುತ್ತಿರುವ ಹೈದರಾಬಾದ್ 83 ರನ್ನಿಗೆ 5 ವಿಕೆಟ್ ಕಳೆದುಕೊಂಡಿದೆ.
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Team India: ಪಂತ್-ರಾಹುಲ್ ವಿಚಾರದಲ್ಲಿ ಗಂಭೀರ್- ಅಗರ್ಕರ್ ನಡುವೆ ಭಿನ್ನಾಭಿಪ್ರಾಯ
IPL 2025: ಮತ್ತೊಬ್ಬ ಅಫ್ಘಾನಿ ಬೌಲರ್ ಬದಲು ಮುಂಬೈ ಇಂಡಿಯನ್ಸ್ ತಂಡದ ಸೇರಿದ ಮುಜೀಬ್
ODI Ranking: ನಂ.1 ಸ್ಥಾನದಲ್ಲೇ ಉಳಿದ ಭಾರತ, 4ಕ್ಕೆ ಜಿಗಿದ ನ್ಯೂಜಿಲೆಂಡ್
Team India: ʼನಾವು ನಟರಲ್ಲ..ʼ: ಟೀಂ ಇಂಡಿಯಾದ ಸೂಪರ್ಸ್ಟಾರ್ ಸಂಸ್ಕೃತಿ ಟೀಕಿಸಿದ ಅಶ್ವಿನ್
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
Udayavani-MIC ನಮ್ಮ ಸಂತೆ:ಮಣ್ಣಿನಿಂದ ಮಾಡಿದ ನಾನಾ ಉತ್ಪನ್ನ
You seem to have an Ad Blocker on.
To continue reading, please turn it off or whitelist Udayavani.