Ranji; ಅಗರ್ವಾಲ್‌ ಶತಕ: 144 ರನ್‌ ಮುನ್ನಡೆಯಲ್ಲಿ ಕರ್ನಾಟಕ


Team Udayavani, Oct 29, 2024, 2:06 AM IST

1-weewq

ಪಾಟ್ನಾ: ಒಂದು ದಿನದ “ಮಳೆ ಬ್ರೇಕ್‌’ ಬಳಿಕ ಪುನರಾರಂಭಗೊಂಡ ಬಿಹಾರ ವಿರುದ್ಧದ ರಣಜಿ ಪಂದ್ಯದಲ್ಲಿ ಕರ್ನಾಟಕ ಮೇಲುಗೈ ಸಾಧಿಸಿದೆ. ನಾಯಕ ಮಾಯಾಂಕ್‌ ಅಗರ್ವಾಲ್‌ ಅವರ ಶತಕ ಸಾಹಸದಿಂದ 7 ವಿಕೆಟಿಗೆ 287 ರನ್‌ ಗಳಿಸಿದ್ದು, 144 ರನ್‌ ಮುನ್ನಡೆಯಲ್ಲಿದೆ.

ಕರ್ನಾಟಕ ವಿಕೆಟ್‌ ನಷ್ಟವಿಲ್ಲದೆ 16 ರನ್‌ ಮಾಡಿದಲ್ಲಿಂದ ದಿನದಾಟ ಮುಂದುವರಿಸಿತು. ಆದರೆ ಆರಂಭಿಕರಾದ ನಿಕಿನ್‌ ಜೋಸ್‌ (16) ಮತ್ತು ಸುಜಯ್‌ ಸಾತೇರಿ (10) ಬೇಗನೇ ಪೆವಿಲಿಯನ್‌ ಸೇರಿಕೊಂಡರು. ಈ ಹಂತದಲ್ಲಿ ಕ್ರೀಸ್‌ ಇಳಿದ ಮಾಯಾಂಕ್‌ ಅಗರ್ವಾಲ್‌ ಕಪ್ತಾನನ ಆಟದ ಮೂಲಕ ತಂಡವನ್ನು ಆಧರಿಸಿ ನಿಂತರು. 51ನೇ ಓವರ್‌ ತನಕ ಕ್ರೀಸ್‌ ಆಕ್ರಮಿಸಿಕೊಂಡ ಅವರು 105 ರನ್ನುಗಳ ಅಮೋಘ ಕೊಡುಗೆ ಸಲ್ಲಿಸಿದರು. 131 ಎಸೆತಗಳ ಈ ಆಟದಲ್ಲಿ 12 ಬೌಂಡರಿ ಒಳಗೊಂಡಿತ್ತು.

ಅಗರ್ವಾಲ್‌ ಅವರಿಗೆ ಸ್ಮರಣ್‌ ಆರ್‌. (37) ಮತ್ತು ಮನೀಷ್‌ ಪಾಂಡೆ (56) ಉತ್ತಮ ಬೆಂಬಲವಿತ್ತರು. ಇವರಿಬ್ಬರೊಂದಿಗೆ 3ನೇ ವಿಕೆಟಿಗೆ 80 ರನ್‌, 4ನೇ ವಿಕೆಟಿಗೆ ಭರ್ತಿ 100 ರನ್‌ ಜತೆಯಾಟ ನಿಭಾಯಿಸಿದರು. ಅಭಿನವ್‌ ಮನೋಹರ್‌ ಕೂಡ 37 ರನ್‌ ಕೊಡುಗೆ ಸಲ್ಲಿಸಿದರು. ಇವರಲ್ಲಿ ಪಾಂಡೆ ಆಟ ಅತ್ಯಂತ ಆಕ್ರಮಣಕಾರಿಯಾಗಿತ್ತು. 56 ರನ್ನಿಗೆ ಕೇವಲ 55 ಎಸೆತ ತೆಗೆದುಕೊಂಡರು. ಸಿಡಿಸಿದ್ದು 5 ಬೌಂಡರಿ ಹಾಗೂ 2 ಸಿಕ್ಸರ್‌.

ದಿನದ ಕೊನೆಯ ಓವರ್‌ನಲ್ಲಿ ಅಭಿನವ್‌ ಮನೋಹರ್‌, ಮಾಯಾಂಕ್‌ ಅಗರ್ವಾಲ್‌ ಮತ್ತು ವಿಜಯ್‌ಕುಮಾರ್‌ ವೈಶಾಖ್‌ ವಿಕೆಟ್‌ ಉರುಳಿಸಿದ ಹಿಮಾಂಶು ಸಿಂಗ್‌ ಕರ್ನಾಟಕದ ಬೃಹತ್‌ ಮುನ್ನಡೆಯ ಯೋಜನೆಗೆ ದೊಡ್ಡದೊಂದು ಬ್ರೇಕ್‌ ಹಾಕಿದರು. ಹಿಮಾಂಶು ಸಾಧನೆ 51ಕ್ಕೆ 4 ವಿಕೆಟ್‌. ಶಕಿಬ್‌ ಹುಸೇನ್‌ 2, ವೈಭವ್‌ ಸೂರ್ಯವಂಶಿ ಒಂದು ವಿಕೆಟ್‌ ಕೆಡವಿದರು.

ಮಂಗಳವಾರದ ಆಟದಲ್ಲಿ ಇನ್ನಷ್ಟು ಮುನ್ನಡೆ ಸಾಧಿಸಿ, ಘಾತಕ ಬೌಲಿಂಗ್‌ ಪ್ರದರ್ಶಿಸಿದರೆ ಕರ್ನಾಟಕ ಈ ಪಂದ್ಯವನ್ನು ಗೆಲ್ಲುವ ಸಾಧ್ಯತೆ ಇದೆ.
ಸಂಕ್ಷಿಪ್ತ ಸ್ಕೋರ್‌: ಬಿಹಾರ-143. ಕರ್ನಾಟಕ-7 ವಿಕೆಟಿಗೆ 287 (ಅಗರ್ವಾಲ್‌ 105, ಪಾಂಡೆ 56, ಸ್ಮರಣ್‌ 37, ಅಭಿನವ್‌ 37, ಹಿಮಾಂಶು 51ಕ್ಕೆ 4, ಶಕಿಬ್‌ 86ಕ್ಕೆ 2).

ತ್ರಿಪುರವನ್ನು ನಿಯಂತ್ರಿಸಿದ ಮುಂಬಯಿ
ಅಗರ್ತಲಾ: ಆರಂಭಕಾರ ಜೀವನ್‌ಜೋತ್‌ ಸಿಂಗ್‌ ಅವರ ಶತಕದ ಹೊರತಾಗಿಯೂ ಎಲೈಟ್‌ ಎ ರಣಜಿ ಪಂದ್ಯದಲ್ಲಿ ತ್ರಿಪುರವನ್ನು ನಿಯಂತ್ರಿಸುವಲ್ಲಿ ಮುಂಬಯಿ ಯಶಸ್ವಿಯಾಗಿದೆ.

ಮುಂಬಯಿಯ 450 ರನ್ನುಗಳ ದೊಡ್ಡ ಮೊತ್ತಕ್ಕೆ ಜವಾಬು ನೀಡಿದ ತ್ರಿಪುರ 302ಕ್ಕೆ ಆಲೌಟ್‌ ಆಯಿತು. 148 ರನ್‌ ಮುನ್ನಡೆ ಬಳಿಕ ದ್ವಿತೀಯ ಇನ್ನಿಂಗ್ಸ್‌ ಆರಂಭಿಸಿರುವ ಮುಂಬಯಿ 7 ರನ್ನಿಗೆ 2 ವಿಕೆಟ್‌ ಉದುರಿಸಿಕೊಂಡಿದೆ. ಒಟ್ಟು 155 ರನ್‌ ಮುನ್ನಡೆಯಲ್ಲಿದೆ.
ತ್ರಿಪುರ ಮೊತ್ತದಲ್ಲಿ ಜೀವನ್‌ಜೋತ್‌ ಸಿಂಗ್‌ ಗಳಿಕೆ 118 ರನ್‌ (188 ಎಸೆತ, 15 ಬೌಂಡರಿ). ಮಧ್ಯಮ ಸರದಿಯ ಶ್ರೀಧಾಮ್‌ ಪೌಲ್‌ 52 ಮತ್ತು ನಾಯಕ ಮನ್‌ದೀಪ್‌ ಸಿಂಗ್‌ ಅಜೇಯ 62 ರನ್‌ ಮಾಡಿದರು.

ಮುಂಬಯಿಯ ಆಫ್ಸ್ಪಿನ್ನರ್‌ ಹಿಮಾಂಶು ಸಿಂಗ್‌ 65 ರನ್ನಿಗೆ 6 ವಿಕೆಟ್‌ ಉರುಳಿಸಿ ಭರ್ಜರಿ ಯಶಸ್ಸು ಗಳಿಸಿದರು. ಶಮ್ಸ್‌ ಮುಲಾನಿ 88 ರನ್‌ ವೆಚ್ಚದಲ್ಲಿ 3 ವಿಕೆಟ್‌ ಉರುಳಿಸಿದರು.
ಸಂಕ್ಷಿಪ್ತ ಸ್ಕೋರ್‌: ಮುಂಬಯಿ-450 ಮತ್ತು 2 ವಿಕೆಟಿಗೆ 7. ತ್ರಿಪುರ-302 (ಜೀವನ್‌ಜೋತ್‌ 118, ಮನ್‌ದೀಪ್‌ ಅಜೇಯ 62, ಶ್ರೀಧಾಮ್‌ 52, ಹಿಮಾಂಶು 65ಕ್ಕೆ 6, ಮುಲಾನಿ 88ಕ್ಕೆ 3).

ಟಾಪ್ ನ್ಯೂಸ್

DMK-AIDM

TVK Party: ವಿಜಯ್‌ ಪಕ್ಷದ ಸಿದ್ಧಾಂತಗಳು ನಕಲು: ಡಿಎಂಕೆ, ಎಐಡಿಎಂಕೆ

SDM-Gradute

SDM Ujire: ರಚನಾತ್ಮಕ ಚಿಂತನೆಯಿಂದ ನವ ಮನ್ವಂತರ: ಡಾ.ಡಿ.ವೀರೇಂದ್ರ ಹೆಗ್ಗಡೆ

Harish-Poonja

Cast Census: ಬಿ.ಕೆ.ಹರಿಪ್ರಸಾದರಿಂದ ಹಿಂದೂ ಭಾವನೆಗೆ ಧಕ್ಕೆ: ಶಾಸಕ ಹರೀಶ್‌ ಪೂಂಜ

1-weewq

Ranji; ಅಗರ್ವಾಲ್‌ ಶತಕ: 144 ರನ್‌ ಮುನ್ನಡೆಯಲ್ಲಿ ಕರ್ನಾಟಕ

1-salima

Asian Champions Trophy Hockey; ವನಿತಾ ತಂಡಕ್ಕೆ ಸಲೀಮಾ ಟೇಟೆ ನಾಯಕಿ

Wenlock

Wenlock Hospital: 50 ಹಾಸಿಗೆಗಳ ತೀವ್ರ ನಿಗಾ ಘಟಕಕ್ಕೆ ಇಂದು ಶಿಲಾನ್ಯಾಸ

1-kabba

Pro Kabaddi; ಡೆಲ್ಲಿಯನ್ನು ಕೆಡವಿದ ಹರಿಯಾಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-salima

Asian Champions Trophy Hockey; ವನಿತಾ ತಂಡಕ್ಕೆ ಸಲೀಮಾ ಟೇಟೆ ನಾಯಕಿ

1-kabba

Pro Kabaddi; ಡೆಲ್ಲಿಯನ್ನು ಕೆಡವಿದ ಹರಿಯಾಣ

Do you know why cricketers chew gum? Here’s the reason

Chewing Gum: ಕ್ರಿಕೆಟಿಗರು ಚೂಯಿಂಗ್ ಗಮ್ ಜಗಿಯುವುದು ಯಾಕೆ ಗೊತ್ತಾ? ಇಲ್ಲಿದೆ ಕಾರಣ

AUSvsPAK: Australia announces squad for Pak series: Team has no captain!

AUSvsPAK: ಪಾಕ್‌ ಸರಣಿಗೆ ತಂಡ ಪ್ರಕಟಿಸಿದ ಆಸ್ಟ್ರೇಲಿಯಾ: ತಂಡಕ್ಕೆ ನಾಯಕನೇ ಇಲ್ಲ!

PCB: ನಾಲ್ಕೇ ತಿಂಗಳಿಗೆ ಪಾಕ್‌ ಕೋಚ್‌ ಸ್ಥಾನ ತ್ಯಜಿಸಿದ ಗ್ಯಾರಿ ಕರ್ಸ್ಟನ್;‌ ಕಾರಣ ಇಲ್ಲಿದೆ

PCB: ನಾಲ್ಕೇ ತಿಂಗಳಿಗೆ ಪಾಕ್‌ ಕೋಚ್‌ ಸ್ಥಾನ ತ್ಯಜಿಸಿದ ಗ್ಯಾರಿ ಕರ್ಸ್ಟನ್;‌ ಕಾರಣ ಇಲ್ಲಿದೆ

MUST WATCH

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

udayavani youtube

ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಹ*ತ್ಯೆಗೈದ ಆರೋಪಿತೆ ಸಹೋದರನೊಂದಿಗೆ ಮಾತಾಡಿದ ಆಡಿಯೋ

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

ಹೊಸ ಸೇರ್ಪಡೆ

DMK-AIDM

TVK Party: ವಿಜಯ್‌ ಪಕ್ಷದ ಸಿದ್ಧಾಂತಗಳು ನಕಲು: ಡಿಎಂಕೆ, ಎಐಡಿಎಂಕೆ

puttige-2

Udupi; ಗೀತಾರ್ಥ ಚಿಂತನೆ 78: ಕಷ್ಟನಿವಾರಣೆಯೂ ಪುಣ್ಯ ಸಂಪಾದನೆಯೂ…

Rajahamsa

Deepavali Festival: ಕೆಎಸ್ಸಾರ್ಟಿಸಿಯಿಂದ ಹೆಚ್ಚುವರಿ ಬಸ್‌

SDM-Gradute

SDM Ujire: ರಚನಾತ್ಮಕ ಚಿಂತನೆಯಿಂದ ನವ ಮನ್ವಂತರ: ಡಾ.ಡಿ.ವೀರೇಂದ್ರ ಹೆಗ್ಗಡೆ

Harish-Poonja

Cast Census: ಬಿ.ಕೆ.ಹರಿಪ್ರಸಾದರಿಂದ ಹಿಂದೂ ಭಾವನೆಗೆ ಧಕ್ಕೆ: ಶಾಸಕ ಹರೀಶ್‌ ಪೂಂಜ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.