Ranji; ಕರ್ನಾಟಕದ ಸೆಮಿ ಆಸೆಗೆ ಮರುಜೀವ : ವಿದರ್ಭ ನಾಟಕೀಯ ಕುಸಿತ


Team Udayavani, Feb 26, 2024, 11:38 PM IST

1-wewqewqeqw

ನಾಗ್ಪುರ: ಪೇಸ್‌ ಬೌಲರ್‌ಗಳಾದ ವಿದ್ವತ್‌ ಕಾವೇರಪ್ಪ, ವಿಜಯ್‌ಕುಮಾರ್‌ ವೈಶಾಖ್‌ ಮತ್ತು ನಾಯಕ ಮಾಯಾಂಕ್‌ ಅಗರ್ವಾಲ್‌ ಸೇರಿಕೊಂಡು ಕರ್ನಾಟಕದ ರಣಜಿ ಸೆಮಿಫೈನಲ್‌ ಆಸೆಗೆ ಮರುಜೀವ ನೀಡಿದ್ದಾರೆ. ಗೆಲುವಿಗೆ 371 ರನ್ನುಗಳ ಕಠಿನ ಗುರಿ ಪಡೆದಿರುವ ಕರ್ನಾಟಕ 4ನೇ ದಿನದಾಟದ ಅಂತ್ಯಕ್ಕೆ ಒಂದು ವಿಕೆಟಿಗೆ 103 ರನ್‌ ಗಳಿಸಿ ಹೋರಾಟ ಜಾರಿಯಲ್ಲಿರಿಸಿದೆ.

ಅಂತಿಮ ದಿನದ ಬ್ಯಾಟಿಂಗ್‌ ಯಶಸ್ಸಿನಲ್ಲಿ ಕರ್ನಾಟಕದ ಯಶಸ್ಸು ಕೂಡ ಅಡಗಿದೆ. ಮೊದಲ ಇನ್ನಿಂಗ್ಸ್‌ ಹಿನ್ನಡೆಗೆ ಸಿಲುಕಿದ ಕಾರಣ ರಾಜ್ಯ ತಂಡದ ಮುನ್ನಡೆಗೆ ಸ್ಪಷ್ಟ ಗೆಲುವೊಂದೇ ಉಳಿದಿರುವ ಏಕೈಕ ಮಾರ್ಗವಾಗಿದೆ. ಪಂದ್ಯ ಡ್ರಾಗೊಂಡರೂ ಅಗರ್ವಾಲ್‌ ಪಡೆ ಹೊರಬೀಳಲಿದೆ. ಅಂತಿಮ ದಿನದಾಟದಲ್ಲಿ ಕರ್ನಾಟಕ 9 ವಿಕೆಟ್‌ಗಳಿಂದ 268 ರನ್‌ ಗಳಿಸಬೇಕಿದೆ.

ದಿನದಾಟದ ಅಂತ್ಯಕ್ಕೆ ಇನ್ನೇನು 3 ಓವರ್‌ ಉಳಿದಿರುವಾಗ 40 ರನ್‌ ಮಾಡಿದ ಆರ್‌. ಸಮರ್ಥ್ ವಿಕೆಟ್‌ ಬಿತ್ತು (69 ಎಸೆತ, 5 ಬೌಂಡರಿ). ಅಗರ್ವಾಲ್‌ 61 ರನ್‌ ಮಾಡಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ (77 ಎಸೆತ, 9 ಬೌಂಡರಿ, 1 ಸಿಕ್ಸರ್‌). ಇವರೊಂದಿಗೆ ಕೆ.ವಿ. ಅನೀಶ್‌ ಇದ್ದಾರೆ (1). ಕರ್ನಾಟಕ ಓವರಿಗೆ ಸರಾಸರಿ ಐದರಂತೆ ರನ್‌ ಬಾರಿಸಿದೆ. ಮಂಗಳವಾರವೂ ಇದೇ ವೇಗವನ್ನು ಕಾಯ್ದುಕೊಳ್ಳಬೇಕಿದೆ. ಅಗರ್ವಾಲ್‌-ಸಮರ್ಥ್ ಮೊದಲ ವಿಕೆಟಿಗೆ 101 ರನ್‌ ಪೇರಿಸುವಲ್ಲಿ ಯಶಸ್ವಿಯಾದರು.

ವಿದ್ವತ್‌ಗೆ 6 ವಿಕೆಟ್‌
3ನೇ ದಿನದ ಕೊನೆಯಲ್ಲಿ ನೋಲಾಸ್‌ 50 ರನ್‌ ಹಾಗೂ 224 ರನ್‌ ಮುನ್ನಡೆಯೊಂದಿಗೆ ಸುಸ್ಥಿತಿಯಲ್ಲಿದ್ದ ವಿದರ್ಭ, ಸೋಮವಾರ ನಾಟಕೀಯ ಕುಸಿತಕ್ಕೆ ಸಿಲುಕಿ 196ಕ್ಕೆ ಸರ್ವಪತನ ಕಂಡಿತು. ವಿದ್ವತ್‌ ಕಾವೇರಪ್ಪ (61ಕ್ಕೆ 6) ಹಾಗೂ ವಿಜಯ್‌ಕುಮಾರ್‌ ವೈಶಾಖ್‌ (81ಕ್ಕೆ 4) ಇಬ್ಬರೇ ಸೇರಿಕೊಂಡು ವಿದರ್ಭವನ್ನು ಕಾಡಿದರು.

ವಿದರ್ಭದ ಮೊದಲ ವಿಕೆಟ್‌ 68 ರನ್ನಿಗೆ ಬಿತ್ತು. ಆರಂಭಕಾರ ಧ್ರುವ ಶೋರಿ ಅರ್ಧ ಶತಕವೊಂದನ್ನು ಬಾರಿಸಿದರು (57). ಕರ್ನಾಟಕದ ಮಾಜಿ ಆಟಗಾರ ಕರುಣ್‌ ನಾಯರ್‌ 34 ರನ್‌ ಮಾಡಿದರು. ಶೋರಿ ವಿಕೆಟ್‌ 93 ರನ್‌ ಆದಾಗ ಬಿತ್ತು. ಇಲ್ಲಿಂದ ಮುಂದೆ ವಿದರ್ಭ ಕುಸಿತ ನಿಲ್ಲಲೇ ಇಲ್ಲ. 103 ರನ್‌ ಅಂತರದಲ್ಲಿ 8 ವಿಕೆಟ್‌ ಉರುಳಿತು.

ಸಂಕ್ಷಿಪ್ತ ಸ್ಕೋರ್‌: ವಿದರ್ಭ-460 ಮತ್ತು 196 (ಧ್ರುವ ಶೋರಿ 57, ಕರುಣ್‌ ನಾಯರ್‌ 34, ಆದಿತ್ಯ ಸರ್ವಟೆ 29, ಅಥರ್ವ ತೈಡೆ 25, ವಿದ್ವತ್‌ ಕಾವೇರಪ್ಪ 61ಕ್ಕೆ 6, ವೈಶಾಖ್‌ 81ಕ್ಕೆ 4). ಕರ್ನಾಟಕ-286 ಮತ್ತು ಒಂದು ವಿಕೆಟಿಗೆ 103 (ಅಗರ್ವಾಲ್‌ ಬ್ಯಾಟಿಂಗ್‌ 61, ಆರ್‌. ಸಮರ್ಥ್ 40).

415 ರನ್‌ ಮುನ್ನಡೆಯಲ್ಲಿ ಮುಂಬಯಿ
ಮುಂಬಯಿ: ಬರೋಡ ವಿರುದ್ಧ 415 ರನ್‌ ಮುನ್ನಡೆಯಲ್ಲಿರುವ ಮುಂಬಯಿಯ ಸೆಮಿಫೈನಲ್‌ ಕ್ಷಣಗಣನೆ ಆರಂಭಿಸಿದೆ.36 ರನ್ನುಗಳ ಮೊದಲ ಇನ್ನಿಂಗ್ಸ್‌ ಲೀಡ್‌ ಪಡೆದಿರುವ ಮುಂಬಯಿ, ದ್ವಿತೀಯ ಸರದಿಯಲ್ಲಿ 9 ವಿಕೆಟಿಗೆ 379 ರನ್‌ ಗಳಿಸಿ ಸುಸ್ಥಿತಿಯಲ್ಲಿದೆ. ಹಾರ್ದಿಕ್‌ ತಮೋರೆ 114, ಪೃಥ್ವಿ ಶಾ 87 ಹಾಗೂ ಶಮ್ಸ್‌ ಮುಲಾನಿ 54 ರನ್‌ ಹೊಡೆದರು. ಬರೋಡ ಪರ ಭಾರ್ಗವ್‌ ಭಟ್‌ 142 ರನ್‌ ವೆಚ್ಚದಲ್ಲಿ 7 ವಿಕೆಟ್‌ ಹಾರಿಸಿದ್ದಾರೆ. ಬರೋಡ 348 ರನ್‌ ಮಾಡಿತ್ತು.

ಮಧ್ಯ ಪ್ರದೇಶಕ್ಕೆ 4 ರನ್‌ ರೋಚಕ ಜಯ
ಇಂದೋರ್‌: ಆಂಧ್ರ ಪ್ರದೇಶ ವಿರುದ್ಧ 4 ರನ್ನುಗಳ ರೋಚಕ ಜಯ ಸಾಧಿಸಿದ 2021-22ರ ಚಾಂಪಿಯನ್‌ ಮಧ್ಯ ಪ್ರದೇಶ ರಣಜಿ ಟ್ರೋಫಿ ಸೆಮಿಫೈನಲ್‌ ಪ್ರವೇಶಿಸಿದೆ.
ಗೆಲುವಿಗೆ 170 ರನ್‌ ಗಳಿಸಬೇಕಿದ್ದ ಆಂಧ್ರ 165ಕ್ಕೆ ಆಲೌಟ್‌ ಆಯಿತು. ಅನುಭವ್‌ ಅಗರ್ವಾಲ್‌ 52ಕ್ಕೆ 6 ವಿಕೆಟ್‌ ಉಡಾಯಿಸಿ ಮಧ್ಯ ಪ್ರದೇಶದ ಗೆಲುವಿನ ರೂವಾರಿ ಎನಿಸಿದರು. ಆಂಧ್ರ ಪರ ಹನುಮ ವಿಹಾರಿ 55 ರನ್‌ ಮಾಡಿದರು. ಮಧ್ಯ ಪ್ರದೇಶ ಪ್ರಸಕ್ತ ರಣಜಿ ಋತುವಿನಲ್ಲಿ ಉಪಾಂತ್ಯ ತಲುಪಿದ 2ನೇ ತಂಡ. ಇನ್ನೊಂದು ತಂಡ ತಮಿಳುನಾಡು.

ಟಾಪ್ ನ್ಯೂಸ್

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

2-vijayapura

Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ

Jaiswal

Canada Vs India: ನಿಜ್ಜರ್‌ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ

Bhagavath

Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್‌

ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

CJI-Ind

Recommendation: ನ್ಯಾ. ಸಂಜೀವ್‌ ಖನ್ನಾ ಸುಪ್ರೀಂಕೋರ್ಟ್‌ ಮುಂದಿನ ಮುಖ್ಯ ನ್ಯಾಯಮೂರ್ತಿ

Koppal: ಚಿಕನ್‌, ಮಟನ್‌ ಸೆಂಟರ್‌ಗೆ ಸಚಿವೆ ಶೋಭಾ ಕರಂದ್ಲಾಜೆ ಹೆಸರಿಟ್ಟ ಅಭಿಮಾನಿ

Koppal: ಚಿಕನ್‌, ಮಟನ್‌ ಸೆಂಟರ್‌ಗೆ ಸಚಿವೆ ಶೋಭಾ ಕರಂದ್ಲಾಜೆ ಹೆಸರಿಟ್ಟ ಅಭಿಮಾನಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Pro Kabaddi League: ಇಂದಿನಿಂದ ಕಬಡ್ಡಿ ಮಹಾಜಾತ್ರೆ

Pro Kabaddi League: ಇಂದಿನಿಂದ ಕಬಡ್ಡಿ ಮಹಾಜಾತ್ರೆ

Harman-Kuar

Womens Cricket: ನ್ಯೂಜಿಲ್ಯಾಂಡ್‌ ಎದುರಿನ ಏಕದಿನ ಸರಣಿಗೆ ನಾಯಕತ್ವ ಉಳಿಸಿಕೊಂಡ ಕೌರ್‌

Pro-kabbaddi

Pro Kabaddi League: ಇಂದಿನಿಂದ 11ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್‌ ಹವಾ

South-Affrica

Womens T20 World Cup: 6 ಬಾರಿ ಚಾಂಪಿಯನ್‌ ಆಸ್ಟ್ರೇಲಿಯಾ ಮಣಿಸಿ ಫೈನಲ್‌ಗೇರಿದ ದ.ಆಫ್ರಿಕಾ

1-wqewqew

Virat Kohli ಸಮಸ್ಯೆಗಳನ್ನು ಜಟಿಲಗೊಳಿಸಿದ್ದಾರೆ!; ಖ್ಯಾತ ಕ್ರಿಕೆಟ್ ವಿಶ್ಲೇಷಕ ಟೀಕೆ

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

udayavani youtube

ಮಕ್ಕಳ ಸ್ಕ್ರೀನ್ ಟೈಮಿಂಗ್ ಕುರಿತು ಎಚ್ಚರಿಕೆ ಅತ್ಯವಶ್ಯಕ.. ಇಲ್ಲಿದೆ ಅಗತ್ಯ ಮಾಹಿತಿ

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

ಹೊಸ ಸೇರ್ಪಡೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

2-vijayapura

Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ

Jaiswal

Canada Vs India: ನಿಜ್ಜರ್‌ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ

Bhagavath

Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್‌

ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.