![1-sidda](https://www.udayavani.com/wp-content/uploads/2025/02/1-sidda-415x281.jpg)
![1-sidda](https://www.udayavani.com/wp-content/uploads/2025/02/1-sidda-415x281.jpg)
Team Udayavani, Feb 29, 2024, 6:49 AM IST
ಮುಂಬಯಿ: ಮುಂಬಯಿ ಮತ್ತು ನಾಗ್ಪುರಕ್ಕೆ 2023-24ನೇ ಸಾಲಿನ ರಣಜಿ ಟ್ರೋಫಿ ಸೆಮಿಫೈನಲ್ ಪಂದ್ಯಗಳ ಆತಿಥ್ಯ ಲಭಿಸಿದೆ. ಬಿಸಿಸಿಐ ಬುಧವಾರ ಈ ತಾಣಗಳನ್ನು ಪ್ರಕಟಿಸಿತು. ಮಾ. 2ರಂದು ಎರಡೂ ಸೆಮಿಫೈನಲ್ ಸ್ಪರ್ಧೆಗಳು ಆರಂಭವಾಗಲಿವೆ.
ಮುಂಬಯಿಯ “ಬಾಂದ್ರಾ ಕುರ್ಲಾ ಕ್ರಿಕೆಟ್ ಗ್ರೌಂಡ್’ನಲ್ಲಿ ಆತಿಥೇಯ ಮುಂಬಯಿ ತಂಡ ತಮಿಳುನಾಡನ್ನು ಎದುರಿಸಲಿದೆ. ವಿದರ್ಭ ಮತ್ತು ಮಧ್ಯ ಪ್ರದೇಶ ನಡುವಿನ ಪಂದ್ಯ ನಾಗ್ಪುರದ “ವಿದರ್ಭ ಸ್ಟೇಟ್ ಕ್ರಿಕೆಟ್ ಅಸೋಸಿ ಯೇಶನ್ ಸ್ಟೇಡಿಯಂ’ನಲ್ಲಿ ನಡೆಯಲಿದೆ.
ವಿದರ್ಭ, ಎಂಪಿ ಜಯ
ಮಂಗಳವಾರ ಮುಗಿದ ಕ್ವಾರ್ಟರ್ ಫೈನಲ್ನಲ್ಲಿ ವಿದರ್ಭ 127 ರನ್ನುಗಳ ಅಂತರದಿಂದ ಕರ್ನಾಟಕವನ್ನು ಮಣಿಸಿತ್ತು. ಈ ಪಂದ್ಯ ಕೂಡ ನಾಗ್ಪುರದಲ್ಲೇ ನಡೆದಿತ್ತು. ವಿದರ್ಭಕ್ಕೆ ಮುಂಬಯಿಯ ಮಾಜಿ ಕ್ರಿಕೆಟಿಗ ಚಂದ್ರಕಾಂತ್ ಪಂಡಿತ್ ಕೋಚ್ ಆಗಿದ್ದಾರೆ. 2017-18 ಮತ್ತು 2018-19ರಲ್ಲಿ ಸತತವಾಗಿ ರಣಜಿ ಚಾಂಪಿ ಯನ್ ಎನಿಸಿಕೊಂಡ ಹೆಗ್ಗಳಿಕೆ ವಿದರ್ಭ ತಂಡ ದ್ದಾಗಿದೆ. ಇನ್ನೊಂದೆಡೆ ಮಧ್ಯ ಪ್ರದೇಶ ತಂಡ ಆಂಧ್ರ ಪ್ರದೇಶ ವಿರುದ್ಧ 4 ರನ್ನುಗಳ ರೋಚಕ ಜಯ ಸಾಧಿಸಿತ್ತು.
ಮುಂಬಯಿಗೆ ಲೀಡ್
41 ಬಾರಿಯ ಚಾಂಪಿಯನ್ ಆಗಿ ರುವ ಮುಂಬಯಿ ಕ್ವಾರ್ಟರ್ ಫೈನಲ್ನಲ್ಲಿ ಬರೋಡ ವಿರುದ್ಧ ಇನ್ನಿಂಗ್ಸ್ ಮುನ್ನಡೆಯ ಆಧಾರದಲ್ಲಿ ಸೆಮಿಫೈನಲ್ ಪ್ರವೇಶಿಸಿದೆ. ಕೊನೆಯ ಕ್ರಮಾಂಕದ ಆಟಗಾರರಾದ ತನುಷ್ ಕೋಟ್ಯಾನ್ ಮತ್ತು ತುಷಾರ್ ದೇಶಪಾಂಡೆ ಅವರ ಆಕರ್ಷಕ ಶತಕ ಪರಾಕ್ರಮದಿಂದ ಈ ಪಂದ್ಯ ನೂತನ ಇತಿಹಾಸಕ್ಕೆ ಸಾಕ್ಷಿಯಾಗಿತ್ತು. ತಮಿಳುನಾಡು ಹಾಲಿ ಚಾಂಪಿಯನ್ ಸೌರಾಷ್ಟ್ರಕ್ಕೆ ಇನ್ನಿಂಗ್ಸ್ ಹಾಗೂ 33 ರನ್ನುಗಳ ಭಾರೀ ಸೋಲುಣಿಸಿ ಬಂದಿದೆ.
Team India: ಪಂತ್-ರಾಹುಲ್ ವಿಚಾರದಲ್ಲಿ ಗಂಭೀರ್- ಅಗರ್ಕರ್ ನಡುವೆ ಭಿನ್ನಾಭಿಪ್ರಾಯ
IPL 2025: ಮತ್ತೊಬ್ಬ ಅಫ್ಘಾನಿ ಬೌಲರ್ ಬದಲು ಮುಂಬೈ ಇಂಡಿಯನ್ಸ್ ತಂಡದ ಸೇರಿದ ಮುಜೀಬ್
ODI Ranking: ನಂ.1 ಸ್ಥಾನದಲ್ಲೇ ಉಳಿದ ಭಾರತ, 4ಕ್ಕೆ ಜಿಗಿದ ನ್ಯೂಜಿಲೆಂಡ್
Team India: ʼನಾವು ನಟರಲ್ಲ..ʼ: ಟೀಂ ಇಂಡಿಯಾದ ಸೂಪರ್ಸ್ಟಾರ್ ಸಂಸ್ಕೃತಿ ಟೀಕಿಸಿದ ಅಶ್ವಿನ್
Don’t hug players: ಭಾರತದ ಆಟಗಾರರ ಅಪ್ಪಿಕೊಳ್ಬೇಡಿ… ತಂಡಕ್ಕೆ ಪಾಕ್ ಅಭಿಮಾನಿಗಳು ಕರೆ
You seem to have an Ad Blocker on.
To continue reading, please turn it off or whitelist Udayavani.