Ranji Trophy: ಅಗರ್ವಾಲ್‌, ಪಡಿಕ್ಕಲ್‌ ಆಕರ್ಷಕ ಶತಕ; ಕರ್ನಾಟಕ ನಾಲ್ಕು ವಿಕೆಟಿಗೆ 251


Team Udayavani, Jan 20, 2024, 11:37 PM IST

1-sadsadd

ಮೈಸೂರು: ಆರಂಭಿಕ ಆಟಗಾರ ಮಾಯಾಂಕ್‌ ಅಗರ್ವಾಲ್‌ ಮತ್ತು ದೇವದತ್ತ ಪಡಿಕ್ಕಲ್‌ ಅವರ ಆಕರ್ಷಕ ಶತಕದಿಂದಾಗಿ ಕರ್ನಾಟಕ ತಂಡವು ಗೋವಾ ತಂಡದೆದುರಿನ ರಣಜಿ ಟ್ರೋಫಿ ಕ್ರಿಕೆಟ್‌ ಪಂದ್ಯದಲ್ಲಿ ಉತ್ತಮ ಸ್ಥಿತಿಯಲ್ಲಿದೆ.

ಗೋವಾ ತಂಡದ 321 ರನ್ನಿಗೆ ಉತ್ತರವಾಗಿ ಕರ್ನಾಟಕ ತಂಡವು ಎರಡನೇ ದಿನದಾಟದ ಅಂತ್ಯಕ್ಕೆ ನಾಲ್ಕು ವಿಕೆಟಿಗೆ 251 ರನ್‌ ಗಳಿಸಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಮುನ್ನಡೆ ಗಳಿಸಲು ಕರ್ನಾಟಕ ಇನ್ನೂ 70 ರನ್‌ ಗಳಿಸಬೇಕಾಗಿದೆ.
ಈ ಮೊದಲು ಎಂಟು ವಿಕೆಟಿಗೆ 228 ರನ್ನುಗಳಿಂದ ದಿನದಾಟ ಆರಂಭಿಸಿದ್ದ ಗೋವಾ ತಂಡವು ಅರ್ಜುನ್‌ ತೆಂಡುಲ್ಕರ್‌ ಮತ್ತು ಸ್ನೇಹಲ್‌ ಕೌಥಂಕರ್‌ ಅವರ ಉತ್ತಮ ಆಟದಿಂದಾಗಿ 321 ರನ್‌ ಗಳಿಸಿ ಆಲೌಟಾಯಿತು. ಕೊನೆಯವರಾಗಿ ಔಟಾಗುವ ಮೊದಲು ಅರ್ಜುನ್‌ ತೆಂಡುಲ್ಕರ್‌ ಅವರು 53 ರನ್‌ ಗಳಿಸಿದ್ದರು. 83 ರನ್‌ ಗಳಿಸಿದ ಕೌಥಂಕರ್‌ ತಂಡದ ಗರಿಷ್ಠ ಸ್ಕೋರರ್‌ ಎನಿಸಿಕೊಂಡರು. ವಿಜಯ ಕುಮಾರ್‌ ವೈಶಾಖ್‌, ಎಂ. ವೆಂಕಟೇಶ್‌ ಮತ್ತು ರೋಹಿತ್‌ ಕುಮಾರ್‌ ತಲಾ 3 ವಿಕೆಟ್‌ ಕಿತ್ತರು.

ದ್ವಿಶತಕ ಜತೆಯಾಟ
ನಿಶ್ಚಲ್‌ ಔಟಾದ ಬಳಿಕ ಮಾಯಾಂಕ್‌ ಅಗರ್ವಾಲ್‌ ಅವರನ್ನು ಸೇರಿಕೊಂಡ ದೇವದತ್ತ ಪಡಿಕ್ಕಲ್‌ ಗೋವಾ ದಾಳಿಯನ್ನು ಸಮರ್ಥ ವಾಗಿ ಎದುರಿಸಿ ದ್ವಿತೀಯ ವಿಕೆಟಿಗೆ 209 ರನ್ನುಗಳ ಜತೆಯಾಟ ನಡೆಸಿ ತಂಡವನ್ನು ಆಧರಿಸಿದರು.

ಸಂಕ್ಷಿಪ್ತ ಸ್ಕೋರು: ಗೊವಾ 321 (ಸ್ನೇಹಲ್‌ ಕೌಥಂಕರ್‌ 83, ಅರ್ಜುನ್‌ ತೆಂಡುಲ್ಕರ್‌ 53, ಹೇರಂಬ್‌ ಪರಾಬ್‌ 53, ವೈಶಾಖ್‌ 76ಕ್ಕೆ 3, ವೆಂಕಟೇಶ್‌ 41ಕ್ಕೆ 3, ರೋಹಿತ್‌ 90ಕ್ಕೆ 3); ಕರ್ನಾಟಕ: ನಾಲ್ಕು ವಿಕೆಟಿಗೆ 251 (ಮಾಯಾಂಕ್‌ ಅಗರ್ವಾಲ್‌ 114, ದೇವದತ್ತ ಪಡಿಕ್ಕಲ್‌ 101, ಮೋಹಿತ್‌ ರೇಡ್ಕರ್‌ 65ಕ್ಕೆ 2).

ಉತ್ತಮ ಸ್ಥಿತಿಯಲ್ಲಿ ಮುಂಬಯಿ
ತಿರುವನಂತರಪುರ: ಕೇರಳ ತಂಡದೆದುರಿನ ರಣಜಿ ಪಂದ್ಯದಲ್ಲಿ ಮುಂಬಯಿ ತಂಡವು ಉತ್ತಮ ಸ್ಥಿತಿಯಲ್ಲಿದೆ.
ಮೊದಲ ಇನ್ನಿಂಗ್ಸ್‌ನಲ್ಲಿ 7 ರನ್‌ ಮುನ್ನಡೆ ಪಡೆದಿದ್ದ ಮುಂಬಯಿ ತಂಡವು ತನ್ನ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಎರಡನೇ ದಿನದಾಟದ ಅಂತ್ಯಕ್ಕೆ ಯಾವುದೇ ವಿಕೆಟ್‌ ನಷ್ಟವಿಲ್ಲದೇ 105 ರನ್‌ ಗಳಿಸಿದೆ. ಇದರಿಂದಾಗಿ ತಂಡ ಒಟ್ಟಾರೆ 112 ರನ್‌ ಮುನ್ನಡೆಯಲ್ಲಿದೆ.

ಪಂದ್ಯದ ಮೊದಲ ದಿನ ಮುಂಬಯಿ ತಂಡವು 251 ರನ್‌ ಗಳಿಸಿ ಆಲೌಟಾಗಿತ್ತು. ದ್ವಿತೀಯ ದಿನ ಆಡಿದ ಕೇರಳ ತಂಡವು ಮೋಹಿತ್‌ ಅವಸ್ತಿ ಅವರ ದಾಳಿಗೆ ಕುಸಿದು 244 ರನ್ನಿಗೆ ಆಲೌಟಾ ಯಿತು. ಸಚಿನ್‌ ಬೇಬಿ 65 ಮತ್ತು ರೋಹನ್‌ ಕುಣ್ಣುಮ್ಮಾಳ್‌ 56 ರನ್‌ ಗಳಿಸಿದರು. ಬಿಗು ದಾಳಿ ಸಂಘಟಿ ಸಿದ ಮೋಹಿತ್‌ ಅವಸ್ತಿ 57 ರನ್ನಿಗೆ 7 ವಿಕೆಟ್‌ ಕಿತ್ತು ಮುಂಬಯಿ ಮೇಲುಗೈ ಸಾಧಿಸುವಂತೆ ಮಾಡಿದರು.

ಆಬಳಿಕ ಆಟ ಮುಂದುವರಿಸಿದ ಮುಂಬಯಿಯ ಆರಂಭಿಕರಾದ ಜಯ್‌ ಬಿಸ್ತ ಮತ್ತು ಭೂಪೆನ್‌ ಲಾಲ್ವಾನಿ ಅವರು ಮುರಿಯದ ಮೊದಲ ವಿಕೆಟಿಗೆ ಈಗಾಗಾಲೇ 105 ರನ್‌ ಪೇರಿಸಿದ್ದಾರೆ. ಬಿಸ್ತ 59 ಮತ್ತು ಲಾಲ್ವಾನಿ 41 ರನ್ನುಗಳಿಂದ ಆಡುತ್ತಿದ್ದಾರೆ.

ಟಾಪ್ ನ್ಯೂಸ್

047

Gulveer Singh: ನೂತನ ರಾಷ್ಟ್ರೀಯ ದಾಖಲೆ ಸ್ಥಾಪಿಸಿದ ಗುಲ್ವೀರ್

04257

T20I series: ಬಾಂಗ್ಲಾದೇಶ ವಿರುದ್ಧದ ಟಿ20 ಸರಣಿ: ಸೂರ್ಯಕುಮಾರ್‌ ಯಾದವ್‌ ನಾಯಕ

1-stalin

Tamil Nadu; ಪುತ್ರ ಉದಯನಿಧಿಗೆ ಬಡ್ತಿ ನೀಡಿದ ಸ್ಟಾಲಿನ್: ನಾಳೆ ಪ್ರಮಾಣವಚನ

Car-Auto

Kaup: ರಿಕ್ಷಾ, ಕಾರು ಮುಖಾಮುಖಿ ಢಿಕ್ಕಿ: ಇಬ್ಬರಿಗೆ ಗಾಯ

BBK-11: ಬಿಗ್‌ ಬಾಸ್‌ ಮನೆಗೆ 4ನೇ ಸ್ಪರ್ಧಿ ಎಂಟ್ರಿ.. ಯಾರು ಈ ʼಗೋಲ್ಡ್‌ ಮ್ಯಾನ್‌ʼ?

BBK-11: ಬಿಗ್‌ ಬಾಸ್‌ ಮನೆಗೆ 4ನೇ ಸ್ಪರ್ಧಿ ಎಂಟ್ರಿ.. ಯಾರು ಈ ʼಗೋಲ್ಡ್‌ ಮ್ಯಾನ್‌ʼ?

1-PT

IOC ಗೆ ಪತ್ರ; ಪಿ.ಟಿ.ಉಷಾ ವಿರುದ್ಧ ಡಜನ್ ಗೂ ಹೆಚ್ಚು ಎಕ್ಸಿಕ್ಯೂಟಿವ್ ಕೌನ್ಸಿಲ್ ಸದಸ್ಯರು!

Ramalinga-Raeddy

Transport: ವಾಯವ್ಯ ಸಾರಿಗೆ ನಿಗಮಕ್ಕೆ 400 ಬಸ್‌ ಖರೀದಿಗೆ ಕ್ರಮ: ಸಚಿವ ರಾಮಲಿಂಗಾರೆಡ್ಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1242

SAFF U-17 Championship: ಭಾರತ-ಬಾಂಗ್ಲಾ ಫೈನಲ್‌

047

Gulveer Singh: ನೂತನ ರಾಷ್ಟ್ರೀಯ ದಾಖಲೆ ಸ್ಥಾಪಿಸಿದ ಗುಲ್ವೀರ್

025587

ICC Women’s T20 World Cup: ವನಿತಾ ಟಿ20 ವಿಶ್ವಕಪ್‌; ಅಂಪಾಯರ್ಸ್ ಆಯ್ಕೆ

04257

T20I series: ಬಾಂಗ್ಲಾದೇಶ ವಿರುದ್ಧದ ಟಿ20 ಸರಣಿ: ಸೂರ್ಯಕುಮಾರ್‌ ಯಾದವ್‌ ನಾಯಕ

042174

WFI: ಕುಸ್ತಿಪಟುಗಳಿಗೆ ಡಬ್ಲ್ಯುಎಫ್ಐ ತಡೆ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

1242

SAFF U-17 Championship: ಭಾರತ-ಬಾಂಗ್ಲಾ ಫೈನಲ್‌

047

Gulveer Singh: ನೂತನ ರಾಷ್ಟ್ರೀಯ ದಾಖಲೆ ಸ್ಥಾಪಿಸಿದ ಗುಲ್ವೀರ್

025587

ICC Women’s T20 World Cup: ವನಿತಾ ಟಿ20 ವಿಶ್ವಕಪ್‌; ಅಂಪಾಯರ್ಸ್ ಆಯ್ಕೆ

04257

T20I series: ಬಾಂಗ್ಲಾದೇಶ ವಿರುದ್ಧದ ಟಿ20 ಸರಣಿ: ಸೂರ್ಯಕುಮಾರ್‌ ಯಾದವ್‌ ನಾಯಕ

0888

Leopard: ಮೂಲ್ಕಿ ಕೊಯ್ಯಾರಿನಲ್ಲಿ ಚಿರತೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.