ರಣಜಿ ಟ್ರೋಫಿ ಫೈನಲ್‌: ಇನ್ನಿಂಗ್ಸ್‌ ಮುನ್ನಡೆಯ ಗಡಿಯಲ್ಲಿ ಮಧ್ಯಪ್ರದೇಶ

ಮುಂಬಯಿ-374; ಮಧ್ಯ ಪ್ರದೇಶ-368/3

Team Udayavani, Jun 24, 2022, 11:22 PM IST

ರಣಜಿ ಟ್ರೋಫಿ ಫೈನಲ್‌: ಇನ್ನಿಂಗ್ಸ್‌ ಮುನ್ನಡೆಯ ಗಡಿಯಲ್ಲಿ ಮಧ್ಯಪ್ರದೇಶ

ಬೆಂಗಳೂರು: ಮಧ್ಯ ಪ್ರದೇಶ ಚೊಚ್ಚಲ ರಣಜಿ ಟ್ರೋಫಿ ಗೆಲುವಿನ ಸಾಧ್ಯತೆಯನ್ನು ಹೆಚ್ಚಿಸಿಕೊಂಡಿದೆ. “ರಣಜಿ ಕಿಂಗ್‌’ ಮುಂಬಯಿ ಎದುರಿನ ಫೈನಲ್‌ ಹಣಾಹಣಿಯಲ್ಲಿ ಇನ್ನಿಂಗ್ಸ್‌ ಮುನ್ನಡೆಯ ಹಾದಿಯಲ್ಲಿದ್ದು, ಇತಿಹಾಸದ ಬಾಗಿಲಲ್ಲಿ ನಿಂತಿದೆ.

ಮುಂಬಯಿಯ 374 ರನ್ನುಗಳ ಮೊದಲ ಇನ್ನಿಂಗ್ಸ್‌ಗೆ ಉತ್ತರವಾಗಿ 3ನೇ ದಿನದಾಟದ ಅಂತ್ಯಕ್ಕೆ ಮಧ್ಯ ಪ್ರದೇಶ ಮೂರೇ ವಿಕೆಟಿಗೆ 368 ರನ್‌ ಪೇರಿಸಿದೆ. ಆರಂಭಕಾರ ಯಶ್‌ ದುಬೆ 133 ಮತ್ತು ವನ್‌ಡೌನ್‌ ಬ್ಯಾಟರ್‌ ಶುಭಂ ಶರ್ಮ 116 ರನ್‌ ಬಾರಿಸಿ ತಂಡದ ಮೇಲುಗೈಯಲ್ಲಿ ಮಹತ್ತರ ಪಾತ್ರ ನಿಭಾಯಿಸಿದರು. ಇಬ್ಬರಿಂದ 2ನೇ ವಿಕೆಟಿಗೆ 222 ರನ್‌ ಒಟ್ಟುಗೂಡಿತು.

ರಜತ್‌ ಪಾಟೀದಾರ್‌ ಮತ್ತೋರ್ವ ಬ್ಯಾಟಿಂಗ್‌ ಹೀರೋ. ಕಳೆದ ಐಪಿಎಲ್‌ನಲ್ಲಿ ಆರ್‌ಸಿಬಿ ಪರ ಮಿಂಚಿನ ಬ್ಯಾಟಿಂಗ್‌ ಪ್ರದರ್ಶಿಸಿದ್ದ ಪಾಟೀದಾರ್‌ 67 ರನ್‌ ಮಾಡಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ.

ಇನ್ನಿಂಗ್ಸ್‌ ಲೀಡ್‌ ರಣಜಿ ಗೆಲುವಿಗೆ ಮೊದಲ ಮಾನದಂಡ. ಇದಕ್ಕೆ ಮಧ್ಯ ಪ್ರದೇಶ ತೀರಾ ಸನಿಹದಲ್ಲಿದೆ. 4ನೇ ದಿನದಾಟದಲ್ಲಿ ದೊಡ್ಡ ಮೊತ್ತದ ಲೀಡ್‌ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಇದು ಮುಂಬಯಿಯ ಹಾದಿಯನ್ನು ಸಂಪೂರ್ಣ ಮುಚ್ಚಲಿದೆ. ಸ್ಪಷ್ಟ ಗೆಲುವೊಂದೇ ಮುಂಬಯಿಗೆ 42ನೇ ಕಪ್‌ ತಂದುಕೊಡಬಲ್ಲದು. ಆದರೆ ಈಗಿನ ಪರಿಸ್ಥಿತಿಯಲ್ಲಿ ಇದು ಕಷ್ಟ.

ಮಧ್ಯ ಪ್ರದೇಶ 23 ವರ್ಷಗಳ ಬಳಿಕ ರಣಜಿ ಫೈನಲ್‌ಗೆ ಲಗ್ಗೆ ಇಟ್ಟಿದೆ. ಕೊನೆಯ ಸಲ ಪ್ರಶಸ್ತಿ ಸುತ್ತು ಪ್ರವೇಶಿಸಿದ್ದು 1998-99ರಲ್ಲಿ. ಅಂದು ಕರ್ನಾಟಕಕ್ಕೆ ಶರಣಾಗಿತ್ತು. ಈಗ ಕರ್ನಾಟಕದ ನೆಲದಲ್ಲೇ ಚೊಚ್ಚಲ ರಣಜಿ ಕಪ್‌ ಎತ್ತುವ ಸಾಧ್ಯತೆಯನ್ನು ಉಜ್ವಲಗೊಳಿಸಿದೆ.

ಯಶ್‌-ಶುಭಂ ಬ್ಯಾಟಿಂಗ್‌ ಶೌರ್ಯ
ಯಶ್‌ ದುಬೆ ಮತ್ತು ಶುಭಂ ಶರ್ಮ ಸಾಹಸ ದಿಂದಲೇ ಮಧ್ಯ ಪ್ರದೇಶ ಫೈನಲ್‌ ತನಕ ಅಭಿಯಾನ ಮುಂದುವರಿಸಿದ್ದನ್ನು ಮರೆಯುವಂತಿಲ್ಲ. ಇಬ್ಬರ ಬ್ಯಾಟ್‌ನಿಂದಲೂ ಕ್ರಮವಾಗಿ 613 ರನ್‌ ಹಾಗೂ 578 ರನ್‌ ಹರಿದು ಬಂದಿದೆ. ಫೈನಲ್‌ನಲ್ಲೂ ಇವರು ಪರಿಣಮಿಸಿದರು.

ದುಬೆ-ಶರ್ಮ ಅವರ ಜತೆಯಾಟ 73 ಓವರ್‌ ತನಕ ವಿಸ್ತರಿಸಲ್ಪಟ್ಟಿತು. ಎಚ್ಚರಿಕೆ ಹಾಗೂ ಅತ್ಯಂತ ತಾಳ್ಮೆಯ ಆಟವಾಡಿದ ದುಬೆ 336 ಎಸೆತ ನಿಭಾಯಿಸಿ 133 ರನ್ನುಗಳ ಅಮೋಘ ಕೊಡುಗೆ ಸಲ್ಲಿಸಿದರು. ಹೊಡೆದದ್ದು 14 ಬೌಂಡರಿ. ಶುಭಂ ಶರ್ಮ 116 ರನ್ನಿಗೆ 215 ಎಸೆತ ಎದುರಿಸಿದರು. 15 ಬೌಂಡರಿ ಜತೆಗೆ ಒಂದು ಸಿಕ್ಸರ್‌ ಬಾರಿಸಿದರು.
ಸ್ಕೋರ್‌ 269ಕ್ಕೆ ಏರಿದಾಗ ಮೋಹಿತ್‌ ಅವಸ್ಥಿ ಈ ಜೋಡಿಯನ್ನು ಬೇರ್ಪಡಿಸಲು ಯಶಸ್ವಿಯಾದರು.

ಶುಭಂ ಶರ್ಮ ಕೀಪರ್‌ ತಮೋರೆಗೆ ಕ್ಯಾಚ್‌ ನೀಡಿ ವಾಪಸಾದರು. ದಿನದ ಇನ್ನೊಂದು ಯಶಸ್ಸು ಶಮ್ಸ್‌ ಮುಲಾನಿ ಪಾಲಾಯಿತು. ಮೊತ್ತ 341ಕ್ಕೆ ತಲುಪಿದಾಗ ದುಬೆ ವಿಕೆಟ್‌ ಉರುಳಿತು. ಅವರೂ ಕೀಪರ್‌ ತಮೋರೆಗೆ ಕ್ಯಾಚಿತ್ತರು. ಇಬ್ಬರೂ ದೊಡ್ಡ ಹೊಡೆತಗಳಿಗೆ ಮುಂದಾಗದೆ ಇನ್ನಿಂಗ್ಸ್‌ ಕಟ್ಟಿದ್ದು ವಿಶೇಷ. 222 ರನ್‌ ಜತೆಯಾಟದಲ್ಲಿ 76 ಸಿಂಗಲ್ಸ್‌ ಒಳಗೊಂಡಿತ್ತು.

ರಜತ್‌ ಪಾಟೀದಾರ್‌ ಅವರ ಅಜೇಯ 67 ರನ್‌ 106 ಎಸೆತಗಳಿಂದ ದಾಖಲಾಗಿದೆ. ಬೀಸಿದ್ದು 13 ಫೋರ್‌. ಇವರೊಂದಿಗೆ 11 ರನ್‌ ಮಾಡಿರುವ ನಾಯಕ ಆದಿತ್ಯ ಶ್ರೀವಾಸ್ತವ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ.

ಸಂಕ್ಷಿಪ್ತ ಸ್ಕೋರ್‌: ಮುಂಬಯಿ-374. ಮಧ್ಯ ಪ್ರದೇಶ-3 ವಿಕೆಟಿಗೆ 368 (ಯಶ್‌ ದುಬೆ 133, ಶುಭಂ ಶರ್ಮ 116, ರಜತ್‌ ಪಾಟೀದಾರ್‌ ಬ್ಯಾಟಿಂಗ್‌ 67, ಹಿಮಾಂಶು ಮಂತ್ರಿ 31, ಶ್ರೀವಾಸ್ತವ ಬ್ಯಾಟಿಂಗ್‌ 11, ಅವಸ್ಥಿ 53ಕ್ಕೆ 1, ದೇಶಪಾಂಡೆ 73ಕ್ಕೆ 1, ಮುಲಾನಿ 117ಕ್ಕೆ 1).

ಟಾಪ್ ನ್ಯೂಸ್

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್‌ ವಿವಾದ

WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್‌ ವಿವಾದ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Gambhir-Agarkar have differences of opinion on Pant-Rahul issue

Team India: ಪಂತ್-ರಾಹುಲ್‌ ವಿಚಾರದಲ್ಲಿ ಗಂಭೀರ್-‌ ಅಗರ್ಕರ್‌ ನಡುವೆ ಭಿನ್ನಾಭಿಪ್ರಾಯ

Mujeeb joins Mumbai Indians team in place of another Afghan bowler

‌IPL 2025: ಮತ್ತೊಬ್ಬ ಅಫ್ಘಾನಿ ಬೌಲರ್‌ ಬದಲು ಮುಂಬೈ ಇಂಡಿಯನ್ಸ್‌ ತಂಡದ ಸೇರಿದ ಮುಜೀಬ್

ODI Ranking: ನಂ.1 ಸ್ಥಾನದಲ್ಲೇ ಉಳಿದ ಭಾರತ, 4ಕ್ಕೆ ಜಿಗಿದ ನ್ಯೂಜಿಲೆಂಡ್‌

ODI Ranking: ನಂ.1 ಸ್ಥಾನದಲ್ಲೇ ಉಳಿದ ಭಾರತ, 4ಕ್ಕೆ ಜಿಗಿದ ನ್ಯೂಜಿಲೆಂಡ್‌

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್‌ ವಿವಾದ

WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್‌ ವಿವಾದ

de

Vitla: ಕಾಲು ಜಾರಿ ಕೆರೆಗೆ ಬಿದ್ದು ಯುವಕ ಸಾವು

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.