![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Jan 11, 2023, 12:11 AM IST
ಆಲೂರು: “ಸಿ’ ವಿಭಾಗದ ಮೊದಲೆರಡು ಸ್ಥಾನಿಗಳಾದ ಕರ್ನಾ ಟಕ ಮತ್ತು ರಾಜಸ್ಥಾನ ನಡುವಿನ ರಣಜಿ ಮುಖಾಮುಖಿ ಮಂಗಳವಾರ ಇಲ್ಲಿನ “ಕೆಎಸ್ಸಿಎ ಕ್ರಿಕೆಟ್ ಗ್ರೌಂಡ್’ ನಲ್ಲಿ ಆರಂಭಗೊಂಡಿದ್ದು, ಮೊದಲ ದಿನವೇ ಮಾಯಾಂಕ್ ಅಗರ್ವಾಲ್ ಪಡೆ ಮೇಲುಗೈ ಸಾಧಿಸಿದೆ.
ಮೊದಲು ಬ್ಯಾಟಿಂಗ್ ನಡೆಸಿದ ರಾಜಸ್ಥಾನ ತಂಡ ಕರ್ನಾಟಕದ ದಾಳಿಗೆ ತತ್ತರಿಸಿ 129 ರನ್ನಿಗೆ ಕುಸಿದಿದೆ. ರಾಜ್ಯ ತಂಡ 2 ವಿಕೆಟಿಗೆ 106 ರನ್ ಗಳಿಸಿ ಮೊದಲ ದಿನದಾಟ ಮುಗಿಸಿದೆ. ಪ್ರಸಕ್ತ ಋತುವಿನಲ್ಲಿ ಮೊದಲ ಸಲ ಬ್ಯಾಟಿಂಗ್ ವೈಫಲ್ಯ ಕಂಡ ಆರ್. ಸಮರ್ಥ್ 8 ರನ್ ಹಾಗೂ ದೇವದತ್ತ ಪಡಿಕ್ಕಲ್ 32 ರನ್ ಮಾಡಿ ಪೆವಿಲಿಯನ್ ಸೇರಿಕೊಂಡಿದ್ದಾರೆ. ನಾಯಕ ಮಾಯಾಂಕ್ ಅಗರ್ವಾಲ್ 49 ಹಾಗೂ ನಿಕಿನ್ ಜೋಸ್ 10 ರನ್ ಮಾಡಿ ಆಡುತ್ತಿದ್ದಾರೆ.
ರಾಜಸ್ಥಾನವನ್ನು ಉರುಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದವರೆಂದರೆ “ತ್ರಿವಳಿ ವಿ’ಗಳಾದ ವಾಸುಕಿ ಕೌಶಿಕ್, ವಿಜಯಕುಮಾರ್ ವೈಶಾಖ್ ಮತ್ತು ವಿದ್ವತ್ ಕಾವೇರಪ್ಪ. ಇವರಲ್ಲಿ ಕೌಶಿಕ್ ಮತ್ತು ವೈಶಾಖ್ ತಲಾ 4, ಕಾವೇರಪ್ಪ 2 ವಿಕೆಟ್ ಕಿತ್ತರು.
ದ್ವಿತೀಯ ಎಸೆತದಲ್ಲೇ ರಾಜಸ್ಥಾನ್ ಕುಸಿತ ಮೊದಲ್ಗೊಂಡಿತು. ಆರಂಭ ಕಾರ ಕುಣಾಲ್ ಸಿಂಗ್ ರಾಥೋಡ್ 33, ಕರಣ್ ಲಾಂಬಾ 31 ರನ್ ಮಾಡಿದರು.
ಸಂಕ್ಷಿಪ್ತ ಸ್ಕೋರ್
ರಾಜಸ್ಥಾನ-129 (ಕುಣಾಲ್ ಸಿಂಗ್ ರಾಥೋಡ್ 33, ಕರಣ್ ಲಾಂಬಾ 31, ವಿ. ಕೌಶಿಕ್ 37ಕ್ಕೆ 4, ವಿ. ವೈಶಾಖ್ 56ಕ್ಕೆ 4, ವಿ. ಕಾವೇರಪ್ಪ 12ಕ್ಕೆ 2). ಕರ್ನಾಟಕ-2 ವಿಕೆಟಿಗೆ 106 (ಅಗರ್ವಾಲ್ ಬ್ಯಾಟಿಂಗ್
49, ಪಡಿಕ್ಕಲ್ 32, ಜೋಸ್ ಬ್ಯಾಟಿಂಗ್ 10, ಸಮರ್ಥ್ 8, ಅನಿಕೇತ್ ಚೌಧರಿ 40ಕ್ಕೆ 2).
ಪೃಥ್ವಿ ಶಾ ಜೀವನಶ್ರೇಷ್ಠ 240
ಗುವಾಹಟಿ: ಮುಂಬಯಿಯ ಆರಂಭಕಾರ ಪೃಥ್ವಿ ಶಾ ಮಂಗಳವಾರ ತಮ್ಮ ಜೀವನಶ್ರೇಷ್ಠ ಸ್ಕೋರ್ ದಾಖಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಸ್ಸಾಂ ಎದುರಿನ “ಬಿ’ ವಿಭಾಗದ ರಣಜಿ ಪಂದ್ಯದ ಮೊದಲ ದಿನ 240 ರನ್ ಬಾರಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಮುಂಬಯಿ 2 ವಿಕೆಟ್ ನಷ್ಟಕ್ಕೆ 397 ರನ್ ಪೇರಿಸಿದೆ.
283 ಎಸೆತಗಳನ್ನು ನಿಭಾಯಿಸಿರುವ ಪೃಥ್ವಿ ಶಾ 33 ಬೌಂಡರಿ ಹಾಗೂ ಒಂದು ಸಿಕ್ಸರ್ ಸಿಡಿಸಿ ಆತಿಥೇಯ ಬೌಲರ್ಗಳಿಗೆ ಬೆವರಿಳಿಸಿದ್ದಾರೆ. ಇವರೊಂದಿಗೆ ಕ್ರೀಸ್ನಲ್ಲಿರುವವರು 73 ರನ್ ಮಾಡಿರುವ ನಾಯಕ ಅಜಿಂಕ್ಯ ರಹಾನೆ. ಈ ಜೋಡಿಯಿಂದ ಈಗಾಗಲೇ 3ನೇ ವಿಕೆಟಿಗೆ ಭರ್ತಿ 200 ರನ್ ಹರಿದು ಬಂದಿದೆ. ಔಟಾದವರೆಂದರೆ ಮುನ್ಶಿàರ್ ಖಾನ್ (42) ಮತ್ತು ಅರ್ಮಾನ್ ಜಾಫರ್ (27).
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Team India: ಪಂತ್-ರಾಹುಲ್ ವಿಚಾರದಲ್ಲಿ ಗಂಭೀರ್- ಅಗರ್ಕರ್ ನಡುವೆ ಭಿನ್ನಾಭಿಪ್ರಾಯ
IPL 2025: ಮತ್ತೊಬ್ಬ ಅಫ್ಘಾನಿ ಬೌಲರ್ ಬದಲು ಮುಂಬೈ ಇಂಡಿಯನ್ಸ್ ತಂಡದ ಸೇರಿದ ಮುಜೀಬ್
ODI Ranking: ನಂ.1 ಸ್ಥಾನದಲ್ಲೇ ಉಳಿದ ಭಾರತ, 4ಕ್ಕೆ ಜಿಗಿದ ನ್ಯೂಜಿಲೆಂಡ್
Team India: ʼನಾವು ನಟರಲ್ಲ..ʼ: ಟೀಂ ಇಂಡಿಯಾದ ಸೂಪರ್ಸ್ಟಾರ್ ಸಂಸ್ಕೃತಿ ಟೀಕಿಸಿದ ಅಶ್ವಿನ್
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
You seem to have an Ad Blocker on.
To continue reading, please turn it off or whitelist Udayavani.