Ranji Trophy; ಮುಂಬಯಿ ಗೆಲುವಿಗೆ 262 ರನ್‌ ಗುರಿ


Team Udayavani, Oct 14, 2024, 12:58 AM IST

1-aee-ddd

ವಡೋದರ: ಬರೋಡ ತಂಡದೆದುರಿನ ರಣಜಿ ಟ್ರೋಫಿಯ ಎಲೈಟ್‌ “ಎ’ ಬಣದ ಮೊದಲ ಪಂದ್ಯದಲ್ಲಿ ಗೆಲುವು ಸಾಧಿಸಲು ಹಾಲಿ ಚಾಂಪಿಯನ್‌ ಮುಂಬಯಿ ತಂಡವು 262 ರನ್‌ ಗಳಿಸುವ ಗುರಿ ಪಡೆದಿದೆ.

ಪಂದ್ಯದ ನಾಲ್ಕನೇ ದಿನ ಮುಂಬಯಿ ತನ್ನ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಎರಡು ವಿಕೆಟ್‌ ಕಳೆದುಕೊಂಡಿದ್ದು 42 ರನ್‌ ಗಳಿಸಿದೆ. ಅಂತಿಮ ದಿನವಾದ ಸೋಮ ವಾರ ಇನ್ನುಳಿದ 8 ವಿಕೆಟ್‌ ನೆರವಿನಿಂದ ತಂಡ ಇನ್ನೂ 220 ರನ್‌ ಗಳಿಸಬೇಕಾಗಿದೆ.

ಈ ಮೊದಲು ವಿಕೆಟ್‌ ನಷ್ಟವಿಲ್ಲದೇ 9 ರನ್ನಿನಿಂದ ದಿನದಾಟ ಆರಂಭಿಸಿದ ಬರೋಡ ತಂಡವು ತನುಷ್‌ ಕೋಟ್ಯಾನ್‌ ಅವರ ದಾಳಿಗೆ ಕುಸಿದು 185 ರನ್ನಿಗೆ ಆಲೌಟಾಯಿತು. ಒಂದು ಹಂತದಲ್ಲಿ 41 ರನ್ನಿಗೆ ಆರು ವಿಕೆಟ್‌ ಕಳೆದು ಕೊಂಡು ಒದ್ದಾಡುತ್ತಿದ್ದ ತಂಡ ವನ್ನು ಕೃಣಾಲ್‌ ಪಾಂಡ್ಯ ಆಧರಿಸಿ ದರು. ಅವರ ತಾಳ್ಮೆಯ 55 ರನ್‌ ಹಾಗೂ ಅತಿತ್‌ ಸೇಥ್‌ ಮತ್ತು ಮಹೇಶ್‌ ಪಿಥಿಯ ಅವರೊಂದಿಗೆ ಉತ್ತಮ ಜತೆ ಯಾಟ ದಿಂದಾಗಿ ಬರೋಡ ಸಾಧಾರಣ ಮೊತ್ತ ಪೇರಿಸಲು ಯಶಸ್ವಿಯಾಯಿತು. ತನುಷ್‌ ಕೋಟ್ಯಾನ್‌ 61 ರನ್ನಿಗೆ 5 ವಿಕೆಟ್‌ ಕಿತ್ತರು.
ಸಂಕ್ಷಿಪ್ತ ಸ್ಕೋರು: ಬರೋಡ 290 ಮತ್ತು 185 (ಕೃಣಾಲ್‌ ಪಾಂಡ್ಯ 55, ಅತಿತ್‌ ಸೇಥ್‌ 26, ಮಹೇಶ್‌ ಪಿಥಿಯ 40, ತನುಷ್‌ ಕೋಟ್ಯಾನ್‌ 61ಕ್ಕೆ 6); ಮುಂಬಯಿ 214 ಮತ್ತು 2 ವಿಕೆಟಿಗೆ 42 (ಆಯುಷ್‌ ಮಾತ್ರೆ 19 ಬ್ಯಾಟಿಂಗ್‌).

ಹರಿಯಾಣ, ರೈಲ್ವೇಸ್‌ಗೆ ಜಯ
ರೋಹ್ಟಕ್ ನಲ್ಲಿ ನಡೆದ ಎಲೈಟ್‌ “ಸಿ’ ಬಣದಲ್ಲಿ ಹರಿಯಾಣ ಮತ್ತು ಬಿಹಾರ ನಡುವಿನ ಪಂದ್ಯ ಮೂರನೇ ದಿನ ಮುಕ್ತಾಯ

ಗೊಂಡಿದೆ. ಹರಿಯಾಣ ತಂಡ ಇನ್ನಿಂಗ್ಸ್‌ ಮತ್ತು 43 ರನ್ನುಗಳಿಂದ ಜಯ ಗಳಿಸಿದೆ. ಬಿಹಾರ 78 ಮತ್ತು 133 ರನ್‌ ಗಳಿಸಿದ್ದರೆ, ಹರಿಯಾಣ 254 ರನ್‌ ಬಾರಿಸಿತ್ತು. ಎಲೈಟ್‌ “ಡಿ’ ಬಣದ ಚಂಡೀಗಢ ಮತ್ತು ರೈಲ್ವೇಸ್‌ ನಡುವಿನ ಪಂದ್ಯದಲ್ಲಿ ರೈಲ್ವೇಸ್‌ 181 ರನ್ನಿನಿಂದ ಗೆದ್ದಿದೆ. ರೈಲ್ವೇಸ್‌ 142 ಮತ್ತು 307 ರನ್‌ ಬಾರಿಸಿದ್ದರೆ, ಚಂಡೀಗಢ 109 ಮತ್ತು 159 ರನ್‌ ಬಾರಿಸಿತ್ತು.

ಸಿ.ಕೆ.ನಾಯ್ಡು ಕೂಟ ಕರ್ನಾಟಕ, ತಮಿಳುನಾಡು ಮೊದಲ ದಿನದಾಟ ರದ್ದು
ಹುಬ್ಬಳ್ಳಿ: ಮಳೆಯಿಂದ ರಾಜನಗರ ಕೆಎಸ್‌ಸಿಎ ಮೈದಾನ ತೇವಗೊಂಡಿದ್ದರಿಂದ ಕರ್ನಾಟಕ ಮತ್ತು ತಮಿಳುನಾಡು ನಡುವಿನ ಕರ್ನಲ್‌ ಸಿ. ಕೆ. ನಾಯ್ಡು ಕೂಟದ ಮೊದಲನೇ (ರವಿವಾರ) ದಿನದಾಟ ರದ್ದಾಗಿದೆ.
ತೀರ್ಪುಗಾರರಾದ ಸಂಜಯ ಕುಮಾರ್‌ಸಿಂಗ್‌, ಸೌರಭ್‌ ಧೋತೆ ಮತ್ತು ರೆಫರಿ ಸಂಜತ್‌ ರಾವುಲ್‌ ಮೈದಾನವನ್ನು ಪರಿಶೀಲಿಸಿದ ಬಳಿಕ ಮೊದಲ ದಿನದಾಟ ರದ್ದುಗೊಳಿಸಲಾಗಿದೆ.

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ-63: ಕುಲದ ಕೀರ್ತಿಗಾಗಿ ಹೋರಾಡಿದ ಪಾಂಡವರು

Udupi: ಗೀತಾರ್ಥ ಚಿಂತನೆ-63: ಕುಲದ ಕೀರ್ತಿಗಾಗಿ ಹೋರಾಡಿದ ಪಾಂಡವರು

Sullia: ಮಹಿಳೆಗೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿದ!

Sullia: ಮಹಿಳೆಗೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿದ!

Cherkady: ರಾಷ್ಟ್ರೋತ್ಥಾನ ಪ.ಪೂ. ಕಾಲೇಜು: ಸಮಗ್ರ ಶಿಕ್ಷಣ, ಸಾಂಸ್ಕೃತಿಕ ಜಾಗೃತಿಗೆ ಸಿದ್ಧ

Cherkady: ರಾಷ್ಟ್ರೋತ್ಥಾನ ಪ.ಪೂ. ಕಾಲೇಜು: ಸಮಗ್ರ ಶಿಕ್ಷಣ, ಸಾಂಸ್ಕೃತಿಕ ಜಾಗೃತಿಗೆ ಸಿದ್ಧ

MAHE: 2ನೇ ರಾಷ್ಟ್ರೀಯ ಸಿಜಿಎಂಪಿ ದಿನಾಚರಣೆ; ಔಷಧ ಗುಣಮಟ್ಟ ಚರ್ಚೆ

MAHE: 2ನೇ ರಾಷ್ಟ್ರೀಯ ಸಿಜಿಎಂಪಿ ದಿನಾಚರಣೆ; ಔಷಧ ಗುಣಮಟ್ಟ ಚರ್ಚೆ

Mangaluru: ಮಂಗಳಾದೇವಿ ಮಹಾ ರಥೋತ್ಸವ

Mangaluru: ಮಂಗಳಾದೇವಿ ಮಹಾ ರಥೋತ್ಸವ

Road Mishap ಹೊಸಮಠ; ಕಾರುಗಳ ನಡುವೆ ಅಪಘಾತ: ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯ

Road Mishap ಹೊಸಮಠ; ಕಾರುಗಳ ನಡುವೆ ಅಪಘಾತ: ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯ

Manjeshwar: ದೇಶ ಸೇವೆಗೆ ಸಮಯ ಮೀಸಲಿಡಿ: ಡಾ| ಪ್ರಭಾಕರ ಭಟ್‌ ಕಲ್ಲಡ್ಕ

Manjeshwar: ದೇಶ ಸೇವೆಗೆ ಸಮಯ ಮೀಸಲಿಡಿ: ಡಾ| ಪ್ರಭಾಕರ ಭಟ್‌ ಕಲ್ಲಡ್ಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-M-J

IPL; ಮುಂಬೈಗೆ ಮತ್ತೆ ಜಯವರ್ಧನ ಕೋಚ್‌

TT

Asian Table Tennis: ಭಾರತಕ್ಕೆ ಮೂರು ಕಂಚು

1-aee

Ranji Trophy;ಮಧ್ಯಪ್ರದೇಶ ಬೃಹತ್‌ ಮೊತ್ತ:ನಾಯಕ ಶುಭಂ ಶರ್ಮ 143, ಹರ್‌ಪ್ರೀತ್‌ 91 ರನ್‌

1-tennis-bg

Shanghai Masters Tennis; ಜೊಕೋವಿಕ್‌ಗೆ ಸೋಲು : ಜಾನ್ನಿಕ್‌ ಸಿನ್ನರ್‌ಗೆ ಪ್ರಶಸ್ತಿ

1-engg

Womens T20 World Cup; ಇಂಗ್ಲೆಂಡಿಗೆ 10 ವಿಕೆಟ್‌ ಭರ್ಜರಿ ಗೆಲುವು :ಯಾವ ತಂಡ ಸೆಮಿಗೆ?

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Udupi: ಗೀತಾರ್ಥ ಚಿಂತನೆ-63: ಕುಲದ ಕೀರ್ತಿಗಾಗಿ ಹೋರಾಡಿದ ಪಾಂಡವರು

Udupi: ಗೀತಾರ್ಥ ಚಿಂತನೆ-63: ಕುಲದ ಕೀರ್ತಿಗಾಗಿ ಹೋರಾಡಿದ ಪಾಂಡವರು

gold

ಪುರಿ ರತ್ನ ಭಂಡಾರದ ಸಮೀಕ್ಷಾ ವರದಿ ಶೀಘ್ರ ಲಭ್ಯ: ಸಚಿವ

police crime

Durga ಪೆಂಡಾಲ್‌ ಮೇಲೆ ಗುಂಡಿನ ದಾಳಿ: ನಾಲ್ವರಿಗೆ ಗಾಯ

train-track

Train; ಮತ್ತೊಂದು ಅವಘಡ: ಗೀತಾ ಜಯಂತಿ ಎಕ್ಸ್‌ಪ್ರೆಸ್‌ನಲ್ಲಿ ಬೆಂಕಿ

Pak 2

Pakistan; ದೌರ್ಜನ್ಯ ನಿಲ್ಲಿಸದಿದ್ದರೆ ಪಾಕಿಸ್ಥಾನಕ್ಕೆ ಮುತ್ತಿಗೆ: ಪಶ್ತೂನ್‌ ತಾಕೀತು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.