Ranji Trophy: ಕರ್ನಾಟಕಕ್ಕೆ ಮತ್ತೆ ಮಳೆ ಕಾಟ
Team Udayavani, Oct 22, 2024, 12:58 AM IST
ಆಲೂರು: ಸತತವಾಗಿ ಸುರಿದ ಭಾರೀ ಮಳೆಯಿಂದಾಗಿ ಕರ್ನಾಟಕ-ಕೇರಳ ನಡುವಿನ ರಣಜಿ ಪಂದ್ಯದ ಅಂತಿಮ ದಿನದಾಟವೂ ರದ್ದುಗೊಂಡಿತು. ಇದರೊಂದಿಗೆ ಪಂದ್ಯ ಡ್ರಾದಲ್ಲಿ ಕೊನೆಗೊಂಡಿತು.
ಇಂದೋರ್ನಲ್ಲಿ ನಡೆದ ಕರ್ನಾಟಕ-ಮಧ್ಯಪ್ರದೇಶ ನಡುವಿನ ಮೊದಲ ಪಂದ್ಯವೂ ಮಳೆಯ ಹೊಡೆತಕ್ಕೆ ಸಿಲುಕಿ ಡ್ರಾಗೊಂಡಿತ್ತು. ಕರ್ನಾಟಕವೀಗ ಅಂಕಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದ್ದು, ನಾಕೌಟ್ ಪ್ರವೇಶಕ್ಕೆ ಭಾರೀ ಹೋರಾಟ ನಡೆಸಬೇಕಾದ ಸ್ಥಿತಿಯಲ್ಲಿದೆ.
ಈ ಪಂದ್ಯದಲ್ಲಿ ಮೊದಲ ದಿನ ಕೆಲವು ಓವರ್ ಹಾಗೂ ದ್ವಿತೀಯ ದಿನದ ಭೋಜನ ವಿರಾಮ ತನಕ ಸ್ವಲ್ಪ ಹೊತ್ತು ಆಟ ನಡೆದಿತ್ತು. ಅನಂತರದ ಎರಡೂವರೆ ದಿನಗಳ ಆಟ ಸಂಪೂರ್ಣವಾಗಿ ಮಳೆಯಿಂದ ಕೊಚ್ಚಿ ಹೋಯಿತು. ಈ ಸೀಮಿತ ಅವಧಿಯ ಆಟದಲ್ಲಿ ಕೇರಳ 50 ಓವರ್ಗಳಲ್ಲಿ 3 ವಿಕೆಟಿಗೆ 161 ರನ್ ಮಾಡಿತ್ತು.
ಕರ್ನಾಟಕದ ಮುಂದಿನ ಎದುರಾಳಿ ಬಿಹಾರ. ಈ ಪಂದ್ಯ ಪಾಟ್ನಾದಲ್ಲಿ ನಡೆಯಲಿದೆ (ಅ. 26-29).
ಮಹಾರಾಷ್ಟ್ರವನ್ನು ಮಣಿಸಿದ ಮುಂಬಯಿ
ಮುಂಬಯಿ: ಹಾಲಿ ಚಾಂಪಿಯನ್ ಮುಂಬಯಿ ಪ್ರಸಕ್ತ ರಣಜಿ ಋತುವಿನಲ್ಲಿ ಗೆಲುವಿನ ಖಾತೆ ತೆರೆದಿದೆ. ಮಹಾರಾಷ್ಟ್ರವನ್ನು 9 ವಿಕೆಟ್ಗಳಿಂದ ಮಣಿಸಿ ಹಳಿಯೇರಿದೆ. ಆರಂಭಿಕ ಪಂದ್ಯದಲ್ಲಿ ಅಜಿಂಕ್ಯ ರಹಾನೆ ಪಡೆ ಬರೋಡಕ್ಕೆ 84 ರನ್ನುಗಳಿಂದ ಶರಣಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Dakshina Kannada: ಮಂಗಳೂರು ಸೇರಿ ಇತರೆಡೆ ಮಳೆ, ಬೆಳ್ತಂಗಡಿಯಲ್ಲಿ ಗುಡುಗು ಸಹಿತ ವರ್ಷಧಾರೆ
Vaccination Campaign: 6ನೇ ಸುತ್ತಿನ ಕಾಲುಬಾಯಿ ಜ್ವರ ಲಸಿಕಾ ಅಭಿಯಾನ ಆರಂಭ: ಜಿಪಂ ಸಿಇಒ
Police Martyrs Day: ದೇಶದ ಅಖಂಡತೆಗೆ ಹುತಾತ್ಮರ ತ್ಯಾಗ ಸಹಾಯಕ: ನ್ಯಾಯಾಧೀಶ
Mangaluru: ಹುತಾತ್ಮ ಪೊಲೀಸರ ಸ್ಮರಣೆ ನಮ್ಮ ಕರ್ತವ್ಯ: ಕುಲಪತಿ ಪ್ರೊ. ಪಿ.ಎಲ್.ಧರ್ಮ
Council By Poll: ಉಡುಪಿ ಜಿಲ್ಲೆಯಲ್ಲಿ ಶೇ. 96.57 ಮತದಾನ; ಎಲ್ಲೂ ಶೇ.100 ಇಲ್ಲ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.