ರಣಜಿ  ಸೆಮಿಫೈನಲ್‌: ಮಾಯಾಂಕ್‌ ಅದ್ಭುತ, ಕರ್ನಾಟಕ ಬೃಹತ್‌ ಮೊತ್ತ


Team Udayavani, Feb 10, 2023, 6:45 AM IST

tdy-34

ಬೆಂಗಳೂರು: ಸೌರಾಷ್ಟ್ರ ವಿರುದ್ಧದ ರಣಜಿ ಸೆಮಿಫೈನಲ್‌ ಪಂದ್ಯದಲ್ಲಿ ಆತಿಥೇಯ ಕರ್ನಾಟಕ ಮೊದಲ ಇನಿಂಗ್ಸ್‌ನಲ್ಲಿ ಬೃಹತ್‌ ಮೊತ್ತ ಗಳಿಸಿದೆ.

ಬುಧವಾರ ಸಾಮಾನ್ಯ ಆಟವಾಡಿ 229 ರನ್‌ಗಳಿಗೆ 5 ವಿಕೆಟ್‌ ಕಳೆದುಕೊಂಡಿದ್ದ ಕರ್ನಾಟಕ, ಗುರುವಾರ  407 ರನ್‌ಗಳಿಗೆ ಆಲೌಟಾಗಿದೆ. ನಾಯಕ ಮಾಯಾಂಕ್‌ ಅಗರ್ವಾಲ್‌ ಅದ್ಭುತ ಆಟವಾಡಿ 249 ರನ್‌ ಗಳಿಸಿದ್ದಾರೆ. ಮಾತ್ರವಲ್ಲ ಭಾರತ ಟೆಸ್ಟ್‌ ತಂಡಕ್ಕೆ ಮರಳುವ ಬಲವಾದ ಸುಳಿವು ನೀಡಿದ್ದಾರೆ.

ಒಂದು ಕಾಲದಲ್ಲಿ ಮಾಯಾಂಕ್‌ ಭಾರತ ತಂಡದ ಆರಂಭಿಕರಾಗಿದ್ದರು. ಇತ್ತೀಚೆಗೆ ಸ್ಥಾನ ಕಳೆದುಕೊಂಡವರು, ತಂಡದಲ್ಲಿನ ಬಲವಾದ ಪೈಪೋಟಿಯಿಂದ ಮರಳಿ ಸ್ಥಾನ ಪಡೆಯಲಾಗದೇ ಒದ್ದಾಡುತ್ತಿದ್ದಾರೆ. ಈಗ ಮತ್ತೆ ಅತ್ಯುತ್ತಮ ಆಟವಾಡುವ ಮೂಲಕ ತಾನಿನ್ನೂ ಪೈಪೋಟಿಯಲ್ಲಿದ್ದೇನೆ ಎಂಬ ಖಚಿತ ಸಂದೇಶ ನೀಡಿದ್ದಾರೆ.

ಕರ್ನಾಟಕದ ಪೂರ್ಣ ಇನಿಂಗ್ಸ್‌ನಲ್ಲಿ ಉತ್ತಮವಾಗಿ ಆಡಿದ್ದು ಮಾಯಾಂಕ್‌ ಮಾತ್ರ. ಅವರನ್ನು ಹೊರತುಪಡಿಸಿದರೆ ಎಸ್‌.ಶರತ್‌ ಅರ್ಧಶತಕ ಬಾರಿಸಿದರು. ಬುಧವಾರ ಅಜೇಯ 110 ರನ್‌ ಗಳಿಸಿದ್ದ ಮಾಯಾಂಕ್‌ ಗುರುವಾರ ಅಮೋಘವಾಗಿ ಬೆಳೆದರು. ಅವರು ಒಟ್ಟು 429 ಎಸೆತಗಳನ್ನು ಎದುರಿಸಿ, 28 ಬೌಂಡರಿ, 6 ಸಿಕ್ಸರ್‌ಗಳನ್ನು ಬಾರಿಸಿದರು. ರಾಜ್ಯದ ಮೊತ್ತ 400 ರನ್‌ಗಳನ್ನು ತಲುಪಲು ಇದೇ ಮುಖ್ಯ ಕಾರಣ. 249 ರನ್‌ಗಳಿಗೆ ಕೊನೆಯವರಾಗಿ ಅವರು ರನೌಟಾದರು. ಅಷ್ಟರಲ್ಲಿ ತಂಡದ ಸ್ಥಿತಿ ಭದ್ರಗೊಂಡಿತ್ತು.

ಇನ್ನು ಶರತ್‌ ಬುಧವಾರ 58 ರನ್‌ ಗಳಿಸಿದ್ದವರು, ಗುರುವಾರ 66 ರನ್‌ಗಳಾಗುವಾಗ ಆಟ ಮುಗಿಸಿದರು. ಉಳಿದಂತೆ ಕೆ.ವಿದ್ವತ್‌ 15 ರನ್‌ ಗಳಿಸಿ ಮಾಯಾಂಕ್‌ಗೆ ನೆರವು ನೀಡಿದರು. ಉಳಿದ ಯಾರೂ ಕೈಹಿಡಿಯಲಿಲ್ಲ. ಉಳಿದೆಲ್ಲ ಆಟಗಾರರ ವೈಫ‌ಲ್ಯದ ನಡುವೆಯೂ ತಂಡ ಬೃಹತ್‌ ಮೊತ್ತ ಗಳಿಸಿದೆ ಎನ್ನುವುದೇ ಸಮಾಧಾನಕರ ಸಂಗತಿ. ಸೌರಾಷ್ಟ್ರ ಪರ ಚೇತನ್‌ ಸಕಾರಿಯ, ಕುಶಾಂಗ್‌ ಪಟೇಲ್‌ ತಲಾ 3 ವಿಕೆಟ್‌ ಪಡೆದರು.

ಸೌರಾಷ್ಟ್ರ 76ಕ್ಕೆ2: ಕರ್ನಾಟಕದ ಬೃಹತ್‌ ಮೊತ್ತಕ್ಕೆ ಪ್ರತಿಯಾಗಿ ತನ್ನ 1ನೇ ಇನಿಂಗ್ಸ್‌ ಆರಂಭಿಸಿರುವ ಸೌರಾಷ್ಟ್ರ 2 ವಿಕೆಟ್‌ಗಳ ನಷ್ಟಕ್ಕೆ 76 ರನ್‌ ಗಳಿಸಿದೆ. ಅದೂ ಕೂಡ ಆರಂಭಿಕ ಆಘಾತಕ್ಕೆ ಒಳಗಾಗಿದೆ. ಸದ್ಯ ತಲಾ 27 ರನ್‌ ಗಳಿಸಿರುವ ಹಾರ್ವಿಕ್‌ ದೇಸಾಯಿ, ಶೆಲ್ಡನ್‌ ಜಾಕ್ಸನ್‌ ಕ್ರೀಸ್‌ನಲ್ಲಿದ್ದಾರೆ. ಸ್ನೆಲ್‌ ಪಟೇಲ್‌, ವಿಶ್ವರಾಜ್‌ ಜಡೇಜ ಬೇಗನೆ ಔಟಾಗಿದ್ದಾರೆ. ಸದ್ಯ ಕ್ರೀಸ್‌ನಲ್ಲಿರುವ ಜಾಕ್ಸನ್‌-ದೇಸಾಯಿ ಮೇಲೆ ಸೌರಾಷ್ಟ್ರ ಭವಿಷ್ಯವಿದೆ.

ಸಂಕ್ಷಿಪ್ತ ಸ್ಕೋರ್‌: ಕರ್ನಾಟಕ 1ನೇ ಇನಿಂಗ್ಸ್‌ 407 ಆಲೌಟ್‌ (ಮಾಯಾಂಕ್‌ ಅಗರ್ವಾಲ್‌ 249, ಎಸ್‌.ಶರತ್‌ 66, ಚೇತನ್‌ ಸಕಾರಿಯ 73ಕ್ಕೆ 3, ಕುಶಾಂಗ್‌ ಪಟೇಲ್‌ 109ಕ್ಕೆ 3). ಸೌರಾಷ್ಟ್ರ 1ನೇ ಇನಿಂಗ್ಸ್‌ 76/2.

ಬಂಗಾಳ-ಮ.ಪ್ರ.: ಇನಿಂಗ್ಸ್‌ ಮುನ್ನಡೆಗೆ ಪೈಪೋಟಿ :

ಇಂದೋರ್‌: ಹಾಲಿ ಚಾಂಪಿಯನ್‌ ಮಧ್ಯಪ್ರದೇಶ ಮತ್ತು ಬಂಗಾಳ ನಡುವಿನ ಮತ್ತೂಂದು ಸೆಮಿಫೈನಲ್‌ ಪಂದ್ಯದಲ್ಲಿ ಇನಿಂಗ್ಸ್‌ ಮುನ್ನಡೆಗಾಗಿ ಪೈಪೋಟಿ ಎದುರಾಗುವ ಸಾಧ್ಯತೆ ಕಂಡುಬಂದಿದೆ. 4ಕ್ಕೆ 307 ರನ್‌ ಮಾಡಿದಲ್ಲಿಂದ ದ್ವಿತೀಯ ದಿನದಾಟ ಮುಂದುವರಿಸಿದ ಬಂಗಾಳ 438ಕ್ಕೆ ಆಲೌಟ್‌ ಆಯಿತು. ಜವಾಬಿತ್ತ ಎಂಪಿ 2 ವಿಕೆಟಿಗೆ 56 ರನ್‌ ಗಳಿಸಿದೆ.

ಒಟ್ಟಾರೆಯಾಗಿ ದ್ವಿತೀಯ ದಿದನಾಟದಲ್ಲಿ ಮಧ್ಯಪ್ರದೇಶವೇ ಮೇಲುಗೈ ಸಾಧಿಸಿತು ಎನ್ನಲಡ್ಡಿಯಿಲ್ಲ. ಅದು ಬಂಗಾಳದ ಉಳಿದ 6 ವಿಕೆಟ್‌ಗಳನ್ನು ಕೇವಲ 131 ರನ್‌ ಅಂತರದಲ್ಲಿ ಉರುಳಿಸಿತು. ಕೀಪರ್‌ ಅಭಿಷೇಕ್‌ ಪೊರೆಲ್‌ (51) ಮತ್ತು ನಾಯಕ ಮನೋಜ್‌ ತಿವಾರಿ (42) 6ನೇ ವಿಕೆಟಿಗೆ 78 ರನ್‌ ಪೇರಿಸಿ ಬಂಗಾಳದ ಮೊತ್ತವನ್ನು 400ರ ಗಡಿ ದಾಟಿಸಿದರು. ಎಂಪಿ ಪರ ಕುಮಾರ ಕಾರ್ತಿಕೇಯ 3, ಗೌರವ್‌ ಯಾದವ್‌ ಮತ್ತು ಅನುಭವ್‌ ಅಗರ್ವಾಲ್‌ ತಲಾ 2 ವಿಕೆಟ್‌ ಕಿತ್ತರು. ಮಧ್ಯಪ್ರದೇಶ ಈಗಾಗಲೇ ಆರಂಭಿಕರಿಬ್ಬರನ್ನೂ ಕಳೆದುಕೊಂಡಿದೆ. ಯಶ್‌ ದುಬೆ (12) ಮತ್ತು ಹಿಮಾಂಶು ಮಂತ್ರಿ (23) ಪೆವಿಲಿಯನ್‌ ಸೇರಿದ್ದಾರೆ.

ಟಾಪ್ ನ್ಯೂಸ್

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

16

Pro Hockey: ಇಂಗ್ಲೆಂಡ್‌ ವಿರುದ್ಧ ಭಾರತ ವನಿತೆಯರಿಗೆ ಸೋಲು

WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್‌ ವಿವಾದ

WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್‌ ವಿವಾದ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Gambhir-Agarkar have differences of opinion on Pant-Rahul issue

Team India: ಪಂತ್-ರಾಹುಲ್‌ ವಿಚಾರದಲ್ಲಿ ಗಂಭೀರ್-‌ ಅಗರ್ಕರ್‌ ನಡುವೆ ಭಿನ್ನಾಭಿಪ್ರಾಯ

Mujeeb joins Mumbai Indians team in place of another Afghan bowler

‌IPL 2025: ಮತ್ತೊಬ್ಬ ಅಫ್ಘಾನಿ ಬೌಲರ್‌ ಬದಲು ಮುಂಬೈ ಇಂಡಿಯನ್ಸ್‌ ತಂಡದ ಸೇರಿದ ಮುಜೀಬ್

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

16

Pro Hockey: ಇಂಗ್ಲೆಂಡ್‌ ವಿರುದ್ಧ ಭಾರತ ವನಿತೆಯರಿಗೆ ಸೋಲು

crimebb

Kasaragod: ಹಲ್ಲೆ ಪ್ರಕರಣ; ಕೇಸು ದಾಖಲು

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.