Ranji Trophy semi-final:ವಿದರ್ಭ, ಮಧ್ಯಪ್ರದೇಶ ಗೆಲುವಿಗೆ ಪೈಪೋಟಿ


Team Udayavani, Mar 6, 2024, 12:45 AM IST

Ranji Trophy semi-final:ವಿದರ್ಭ, ಮಧ್ಯಪ್ರದೇಶ ಗೆಲುವಿಗೆ ಪೈಪೋಟಿ

ನಾಗ್ಪುರ: ಆತಿಥೇಯ ವಿದರ್ಭ ಮತ್ತು ಮಧ್ಯ ಪ್ರದೇಶ ನಡುವಿನ ರಣಜಿ ಟ್ರೋಫಿ ಸೆಮಿಫೈನಲ್‌ ಪಂದ್ಯ ರೋಚಕ ಘಟ್ಟ ತಲುಪಿದೆ. ಗೆಲುವಿಗೆ ಎರಡೂ ತಂಡಗಳ ಪೈಪೋಟಿ ತೀವ್ರಗೊಂಡಿದೆ. ಮುಂಬಯಿ ಯನ್ನು ಎದುರಿಸಲಿರುವ ಅದೃಷ್ಟ ಯಾರಿಗಿದೆ ಎಂಬುದು ಬುಧವಾರ ಇತ್ಯರ್ಥವಾಗಲಿದೆ.

ಗೆಲುವಿಗೆ 321 ರನ್‌ ಗುರಿ ಪಡೆದಿರುವ ಮಧ್ಯ ಪ್ರದೇಶ 4ನೇ ದಿನದಾಟದ ಅಂತ್ಯಕ್ಕೆ 6 ವಿಕೆಟ್‌ ಕಳೆದುಕೊಂಡು 228 ರನ್‌ ಗಳಿಸಿದೆ. ಇನ್ನೂ 93 ರನ್‌ ಅಗತ್ಯವಿದೆ. ಆದರೆ ಸ್ಪೆಷಲಿಸ್ಟ್‌ ಬ್ಯಾಟ್ಸ್‌ಮನ್‌ಗಳೆಲ್ಲ ಪೆವಿಲಿಯನ್‌ ಸೇರಿರುವ ಕಾರಣ ಮಧ್ಯ ಪ್ರದೇಶದ ಹಾದಿ ಕಠಿನ ಎಂದೇ ಹೇಳಬೇಕಾಗುತ್ತದೆ.

ದುಬೆ ವಿಕೆಟ್‌ ಟರ್ನಿಂಗ್‌ ಪಾಯಿಂಟ್‌
ಆರಂಭಕಾರ ಯಶ್‌ ದುಬೆ ಒಂದೆಡೆ ಕ್ರೀಸ್‌ ಆಕ್ರಮಿಸಿಕೊಂಡು ಮಧ್ಯ ಪ್ರದೇಶದ ಗೆಲುವಿನ ಆಸೆಗೆ ನೀರೆರೆಯುತ್ತಲೇ ಇದ್ದರು. ಆದರೆ ದಿನದಾಟದ ಮುಕ್ತಾಯಕ್ಕೆ ಒಂದು ಓವರ್‌ ಉಳಿದಿರುವಾಗ ಆದಿತ್ಯ ಸರ್ವಟೆ ಈ ಬಹುಮೂಲ್ಯ ವಿಕೆಟ್‌ ಉಡಾಯಿಸುವುದರೊಂದಿಗೆ ವಿದರ್ಭದ ಕೈ ಮೇಲಾಗಿದೆ. ಅಲ್ಲದೇ ಮಧ್ಯ ಪ್ರದೇಶದ ಕೆಳ ಕ್ರಮಾಂಕದ ಆಟಗಾರರ್ಯಾರೂ ಬ್ಯಾಟಿಂಗ್‌ನಲ್ಲಿ ಹಿಡಿತ ಹೊಂದಿರುವವರಲ್ಲ. ಪ್ರಥಮ ಇನ್ನಿಂಗ್ಸ್‌ ನಲ್ಲಿ ಕೊನೆಯ ನಾಲ್ವರು ಆಟಗಾರರು ಒಟ್ಟು ಸೇರಿ ಗಳಿಸಿದ್ದು 25 ರನ್‌ ಮಾತ್ರ. ಹೀಗಾಗಿ ವಿದರ್ಭಕ್ಕೆ ಫೈನಲ್‌ ಅವಕಾಶ ಜಾಸ್ತಿ ಎಂದೇ ವಿಶ್ಲೇಷಿಸಲಾಗುತ್ತಿದೆ.

ಯಶ್‌ ದುಬೆ 212 ಎಸೆತಗಳನ್ನು ಎದುರಿಸಿ 94 ರನ್‌ ಕೊಡುಗೆ ಸಲ್ಲಿಸಿದರು (10 ಬೌಂಡರಿ). ವನ್‌ಡೌನ್‌ ಬ್ಯಾಟರ್‌ ಹರ್ಷ ಗಾವಿÛ ಗಳಿಕೆ 67 ರನ್‌ (80 ಎಸೆತ, 11 ಬೌಂಡರಿ). ದುಬೆ-ಗಾವಿÛ ದ್ವಿತೀಯ ವಿಕೆಟಿಗೆ 106 ರನ್‌ ಪೇರಿಸುವ ಮೂಲಕ ಮಧ್ಯ ಪ್ರದೇಶದ ಗೆಲುವಿನ ಅವಕಾಶವನ್ನು ತೆರೆದಿರಿಸಿದರು. ಆದರೆ ಈ ಜೋಡಿಯನ್ನು ಬೇರ್ಪಡಿಸಿದ ಯಶ್‌ ಠಾಕೂರ್‌ ವಿದರ್ಭಕ್ಕೆ ದೊಡ್ಡ ಯಶಸ್ಸು ತಂದಿತ್ತರು; ತಂಡವನ್ನು ಹಳಿಗೆ ತಂದು ನಿಲ್ಲಿಸಿದರು. 100 ರನ್‌ ಅಂತರದಲ್ಲಿ ಮಧ್ಯ ಪ್ರದೇಶದ 5 ವಿಕೆಟ್‌ ಉರುಳಿತು.

ಸಾಗರ್‌ ಸೋಲಂಕಿ (12), ನಾಯಕ ಶುಭಂ ಶರ್ಮ (6), ವೆಂಕಟೇಶ್‌ ಅಯ್ಯರ್‌ (19) ವಿಫ‌ಲರಾದರು. ಮೊದಲ ಇನ್ನಿಂಗ್ಸ್‌ ನಲ್ಲಿ ಶತಕ ಬಾರಿಸಿದ್ದ ಹಿಮಾಂಶು ಮಂತ್ರಿ ಎಂಟೇ ರನ್ನಿಗೆ ಆಟ ಮುಗಿಸಿದರು. ಸಾರಾಂಶ್‌ ಜೈನ್‌ 16 ರನ್‌ ಗಳಿಸಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ.ವಿದರ್ಭ ಪರ ಅಕ್ಷಯ್‌ ವಖಾರೆ 3, ಆದಿತ್ಯ ಸರ್ವಟೆ 2 ಹಾಗೂ ಯಶ್‌ ಠಾಕೂರ್‌ ಒಂದು ವಿಕೆಟ್‌ ಉರುಳಿಸಿದರು.

ಯಶ್‌ ರಾಥೋಡ್‌ ಶತಕ
ಇದಕ್ಕೂ ಮುನ್ನ 6ಕ್ಕೆ 343 ರನ್‌ ಮಾಡಿದಲ್ಲಿಂದ ದಿನದಾಟ ಮುಂದುವರಿಸಿದ ವಿದರ್ಭ, 402ರ ತನಕ ಸಾಗಿತು. ಯಶ್‌ ರಾಥೋಡ್‌ ಅವರ ಶತಕ ವಿದರ್ಭ ಸರದಿಯ ಆಕರ್ಷಣೆ ಆಗಿತ್ತು. ರಾಥೋಡ್‌ 97 ರನ್‌ ಗಳಿಸಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದರು. ಭರ್ತಿ 200 ಎಸೆತಗಳನ್ನು ಎದುರಿಸಿದ ರಾಥೋಡ್‌ 141 ರನ್‌ ಹೊಡೆದರು (18 ಬೌಂಡರಿ, 2 ಸಿಕ್ಸರ್‌).

ಸಂಕ್ಷಿಪ್ತ ಸ್ಕೋರ್‌: ವಿದರ್ಭ 170 ಮತ್ತು 402 (ಯಶ್‌ ರಾಥೋಡ್‌ 141, ಅಮನ್‌ ಮೋಖಡೆ 59, ಅಕ್ಷಯ್‌ ವಾಡ್ಕರ್‌ 77, ಧ್ರುವ ಶೋರಿ 40, ಅನುಭವ್‌ ಅಗರ್ವಾಲ್‌ 92ಕ್ಕೆ 5, ಕುಲ್ವಂತ್‌ ಖೆಜೊÅàಲಿಯ 64ಕ್ಕೆ 2, ಕುಮಾರ ಕಾರ್ತಿಕೇಯ 76ಕ್ಕೆ 2). ಮಧ್ಯ ಪ್ರದೇಶ-252 ಮತ್ತು 6 ವಿಕೆಟಿಗೆ 228 (ಯಶ್‌ ದುಬೆ 97, ಹರ್ಷ ಗಾವಿÛ 67, ವೆಂಕಟೇಶ್‌ ಅಯ್ಯರ್‌ 19, ಅಕ್ಷಯ್‌ ವಖಾರೆ 38ಕ್ಕೆ 3, ಆದಿತ್ಯ ಸರ್ವಟೆ 51ಕ್ಕೆ 2, ಯಶ್‌ ಠಾಕೂರ್‌ 48ಕ್ಕೆ 1).

ಟಾಪ್ ನ್ಯೂಸ್

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Gambhir-Agarkar have differences of opinion on Pant-Rahul issue

Team India: ಪಂತ್-ರಾಹುಲ್‌ ವಿಚಾರದಲ್ಲಿ ಗಂಭೀರ್-‌ ಅಗರ್ಕರ್‌ ನಡುವೆ ಭಿನ್ನಾಭಿಪ್ರಾಯ

15-monalisa

Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ

nagavalli bangale kannada movie

Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು

ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Namma Santhe: ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Tollywood: ಚಿತ್ರರಂಗಕ್ಕೆ N.T ರಾಮರಾವ್ ಪರಿಚಯಿಸಿದ್ದ ಹಿರಿಯ ನಟಿ ಕೃಷ್ಣವೇಣಿ ನಿಧನ

Tollywood: ಚಿತ್ರರಂಗಕ್ಕೆ N.T ರಾಮರಾವ್ ಪರಿಚಯಿಸಿದ್ದ ಹಿರಿಯ ನಟಿ ಕೃಷ್ಣವೇಣಿ ನಿಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Gambhir-Agarkar have differences of opinion on Pant-Rahul issue

Team India: ಪಂತ್-ರಾಹುಲ್‌ ವಿಚಾರದಲ್ಲಿ ಗಂಭೀರ್-‌ ಅಗರ್ಕರ್‌ ನಡುವೆ ಭಿನ್ನಾಭಿಪ್ರಾಯ

Mujeeb joins Mumbai Indians team in place of another Afghan bowler

‌IPL 2025: ಮತ್ತೊಬ್ಬ ಅಫ್ಘಾನಿ ಬೌಲರ್‌ ಬದಲು ಮುಂಬೈ ಇಂಡಿಯನ್ಸ್‌ ತಂಡದ ಸೇರಿದ ಮುಜೀಬ್

ODI Ranking: ನಂ.1 ಸ್ಥಾನದಲ್ಲೇ ಉಳಿದ ಭಾರತ, 4ಕ್ಕೆ ಜಿಗಿದ ನ್ಯೂಜಿಲೆಂಡ್‌

ODI Ranking: ನಂ.1 ಸ್ಥಾನದಲ್ಲೇ ಉಳಿದ ಭಾರತ, 4ಕ್ಕೆ ಜಿಗಿದ ನ್ಯೂಜಿಲೆಂಡ್‌

Team India: ‘We are not actors..’: Ashwin criticizes Team India’s superstar culture

Team India: ʼನಾವು ನಟರಲ್ಲ..ʼ: ಟೀಂ ಇಂಡಿಯಾದ ಸೂಪರ್‌ಸ್ಟಾರ್‌ ಸಂಸ್ಕೃತಿ ಟೀಕಿಸಿದ ಅಶ್ವಿನ್

Don’t hug players: ಭಾರತದ ಆಟಗಾರರ ಅಪ್ಪಿಕೊಳ್ಬೇಡಿ… ತಂಡಕ್ಕೆ ಪಾಕ್‌ ಅಭಿಮಾನಿಗಳು ಕರೆ

Don’t hug players: ಭಾರತದ ಆಟಗಾರರ ಅಪ್ಪಿಕೊಳ್ಬೇಡಿ… ತಂಡಕ್ಕೆ ಪಾಕ್‌ ಅಭಿಮಾನಿಗಳು ಕರೆ

MUST WATCH

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

udayavani youtube

ಮುಕೇಶ್ ಅಂಬಾನಿ ಕುಟುಂಬದ ನಾಲ್ಕು ತಲೆಮಾರು ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ

ಹೊಸ ಸೇರ್ಪಡೆ

18

Uv Fusion: ಗೆಳೆತನವೆಂಬ ನಿಸ್ವಾರ್ಥ ಬಾಂಧವ್ಯ

17

Uv Fusion: ಎಡವುದು ಕೂಡ ಒಳ್ಳೆಯದೇ ಒಮ್ಮೊಮ್ಮೆ…

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

16

Uv Fusion: ಪೆನ್ನಿಗೊಂದು ಕಥೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.