ಸಿಲಿಂಡರ್‌ ವಿತರಕನ ಮಗ ಸಿಕ್ಸರ್‌ ಸ್ಟಾರ್‌! Rinku Singh ಕುಟುಂಬದ ಬಡತನದ ಕಹಾನಿ

ಟ್ಯೂಷನ್‌ ಸೆಂಟರ್‌ನ ಕಸ ಗುಡಿಸಿ ಕ್ರಿಕೆಟರ್‌ ಆದ ಸಾಹಸಿ

Team Udayavani, Apr 11, 2023, 7:45 AM IST

ಸಿಲಿಂಡರ್‌ ವಿತರಕನ ಮಗ ಸಿಕ್ಸರ್‌ ಸ್ಟಾರ್‌! Rinku Singh ಕುಟುಂಬದ ಬಡತನದ ಕಹಾನಿ

ಹೊಸದಿಲ್ಲಿ: “ನೀನು ಟ್ಯೂಷನ್‌ ಸೆಂಟರ್‌ನ ಕಸ ಗುಡಿಸಿ ನೆಲ ಸ್ವತ್ಛಗೊಳಿಸುವುದನ್ನು ಯಾರಿಗೂ ಹೇಳುವ ಅಗತ್ಯವಿಲ್ಲ. ಬೆಳಗ್ಗೆ ಬೇಗ ಬಂದು ಕೆಲಸ ಪೂರೈಸಿ ಹೋಗು. ಯಾರಿಗೂ ಇದು ತಿಳಿಯದು…’

ಹೀಗೆಂದು ತಮ್ಮ ಅಂಡರ್‌-16 ಪೂರ್ವದ ಪರಿಸ್ಥಿತಿಯನ್ನು ಹೇಳಿದವರು, ಕೆಕೆಆರ್‌ ತಂಡದ ಸಿಕ್ಸರ್‌ ಹೀರೋ ರಿಂಕು ಸಿಂಗ್‌. ಇದು ರಿಂಕು ತಂದೆ ಖಾನ್‌ಚಂದ್‌ ಸಿಂಗ್‌ ಮಗನಿಗೆ ಅಂದು ಹೇಳಿದ ದುಡಿಮೆಯ ಮಾರ್ಗೋಪಾಯ.
ಅವರದು 7 ಮಕ್ಕಳ ದೊಡ್ಡ ಕುಟುಂಬ. ಕಿತ್ತು ತಿನ್ನುವ ಬಡತನ. ಖಾನ್‌ಚಂದ್‌ ಅವರದು ಮನೆ ಮನೆಗೆ ಗ್ಯಾಸ್‌ ಸಿಲಿಂಡರ್‌ ವಿತರಿಸುವ ಉದ್ಯೋಗ. ತಿಂಗಳ ಆದಾಯ ಸುಮಾರು 10 ಸಾವಿರ ರೂ. ತಮ್ಮ ಮುಕುಲ್‌ ಕೂಡ ಗ್ಯಾಸ್‌ ಏಜೆನ್ಸಿ ಹೊಂದಿದ್ದಾರೆ. ಹಿರಿಯಣ್ಣ ಸೋನು ಇ-ರಿಕ್ಷಾ ಓಡಿಸುತ್ತಿದ್ದಾರೆ. ಅಮ್ಮನದು ಕೃಷಿ ಚಟುವಟಿಕೆ. ಇಂದಿಗೂ ಎರಡು ಕೋಣೆಯ ಮನೆಯಲ್ಲಿ ಇಷ್ಟೂ ಮಂದಿಯ ವಾಸ.

ಉತ್ತರಪ್ರದೇಶದ ಅಲೀಗಢದಲ್ಲಿ ಜನಿಸಿದ ರಿಂಕು ಸಿಂಗ್‌ಗೆ ಕ್ರಿಕೆಟ್‌ ಮೇಲೆ ವಿಪರೀತ ಸೆಳೆತ. ಆದರೆ ಆರ್ಥಿಕ ಸ್ಥಿತಿ ಶೋಚನೀಯ. ಹೀಗಾಗಿಯೇ ಟ್ಯೂಷನ್‌ ಸೆಂಟರ್‌ನ ನೆಲ ಒರೆಸುವ ಕೆಲಸಕ್ಕೆ ಹೋಗಬೇಕಾದ ಅನಿವಾರ್ಯತೆ. ಇದನ್ನು ತಿರಸ್ಕರಿಸಿದಾಗ ತಂದೆಯಿಂದ ತಿಂದ ಏಟುಗಳೆಷ್ಟೋ!

“ನಾನು ಹೆಚ್ಚು ಓದಿದವನಲ್ಲ. ನಮ್ಮದು ಕೃಷಿ ಕುಟುಂಬ. ಬದುಕಿನಲ್ಲಿ ಮುಂದೆ ಬರಬೇಕಾದರೆ ನಾನು ಕ್ರಿಕೆಟ್‌ ಒಂದನ್ನೇ ಅವಲಂಬಿಸಬೇಕಿತ್ತು. ಇಂದು ಸಾರ್ಥಕಭಾವ ಕಾಣುತ್ತಿದ್ದೇನೆ. ನಾನು ಬಾರಿಸಿದ ಒಂದೊಂದು ಸಿಕ್ಸರ್‌ ಕೂಡ ನನ್ನ ಏಳಿಗೆಗಾಗಿ ತ್ಯಾಗ ಮಾಡಿದವರಿಗೆ ಅರ್ಪಿಸುತ್ತಿದ್ದೇನೆ’ ಎನ್ನುವಾಗ ರಿಂಕು ಕಣ್ಣಲ್ಲೇನೋ ಮಿಂಚು. ಇದಕ್ಕೂ ಹಿಂದಿನ ಆರ್‌ಸಿಬಿ ಎದುರಿನ ಪಂದ್ಯದಲ್ಲಿ 33 ಎಸೆತಗಳಿಂದ 46 ರನ್‌ ಬಾರಿಸಿದ ರಿಂಕು ಆಗಲೇ ಅಪಾಯದ ಸೂಚನೆ ನೀಡಿದ್ದರು.

ಅಂಡರ್‌-16, ಕಾಲೇಜು ಮಟ್ಟದಲ್ಲಿ ಉತ್ತಮ ಬ್ಯಾಟಿಂಗ್‌ ಪ್ರದರ್ಶನ ನೀಡಿದ ರಿಂಕು ರಣಜಿಗೆ ಆಯ್ಕೆಯಾದರು. ಇಲ್ಲಿನ ಯಶಸ್ಸು ಐಪಿಎಲ್‌ ಬಾಗಿಲು ತೆರೆಯಿತು. 2017ರಲ್ಲಿ ಕಿಂಗ್ಸ್‌ ಇಲೆವೆನ್‌ ಪಂಜಾಬ್‌ 10 ಲಕ್ಷ ರೂ.ಗೆ ಇವರನ್ನು ಖರೀದಿಸಿತು. ಮುಂದಿನ ವರ್ಷ 80 ಲಕ್ಷ ರೂ.ಗೆ ಕೆಕೆಆರ್‌ ಪಾಲಾದರು. ಆದರೆ ಬಳಿಕ ಬಿಡುಗಡೆ ಮಾಡಿತು. 2022ರಲ್ಲಿ ಮತ್ತೆ 55 ಲಕ್ಷ ರೂ.ಗೆ ಖರೀದಿಸಿತು. ಈಗ ಕೆಕೆಆರ್‌ನ ಕೀ ಪ್ಲೇಯರ್‌.
ನಿಷೇಧವೂ ಎದುರಾಗಿತ್ತು!

ಹಾಂ… 2019ರಲ್ಲೊಮ್ಮೆ ರಿಂಕು ಸಿಂಗ್‌ ಬಿಸಿಸಿಐನಿಂದ ನಿಷೇಧಕ್ಕೂ ಒಳಗಾಗಿದ್ದರು. ಕಾರಣ, ಬಿಸಿಸಿಐ ಅನುಮತಿ ಪಡೆಯದೆ ವಿದೇಶಿ ಟಿ20 ಲೀಗ್‌ ಒಂದರಲ್ಲಿ ಆಡಿದ್ದು. ಈ 3 ತಿಂಗಳ ನಿಷೇಧದ ಬಳಿಕ ರಿಂಕು ಅವರಲ್ಲಿ ಇನ್ನಷ್ಟು ಹಠ ಮನೆಮಾಡಿಕೊಂಡಿತು. ಇದು ಅಹ್ಮದಾಬಾದ್‌ ಅಂಗಳದಲ್ಲಿ ಸ್ಫೋಟಗೊಂಡಿತು. ಈವರೆಗೆ 18 ಐಪಿಎಲ್‌ ಪಂದ್ಯಗಳಿಂದ 24.93ರ ಸರಾಸರಿಯಲ್ಲಿ 349 ರನ್‌ ಗಳಿಸಿದ್ದಾರೆ.

ನಿಮ್ಮಿಂದಲೇ ಪ್ರೇರಣೆ ಪಡೆದೆ…
ರಿಂಕು ಸಿಂಗ್‌ ರಣಜಿಯಲ್ಲಿ ಉತ್ತರಪ್ರದೇಶವನ್ನು ಪ್ರತಿನಿಧಿಸು ತ್ತಾರೆ. ಅವರಿಂದ ಬೆಂಡೆತ್ತಿಕೊಂಡ ಯಶ್‌ ದಯಾಳ್‌ ಕೂಡ ಉತ್ತರಪ್ರದೇಶದವರೇ. ಸಿಕ್ಸರ್‌ ಸಾಹಸದ ಬಳಿಕ ದಯಾಳ್‌ ಅವರನ್ನು ಸಮಾಧಾನಪಡಿಸುವ ಕೆಲಸವನ್ನೂ ಮಾಡಿದ್ದಾರೆ ರಿಂಕು ಸಿಂಗ್‌. “ಕ್ರಿಕೆಟ್‌ನಲ್ಲಿ ಇಂಥದ್ದೆಲ್ಲ ಸಂಭವಿಸುತ್ತಲೇ ಇರುತ್ತದೆ. ಕಳೆದ ವರ್ಷ ನೀನು ಅಮೋಘ ಪ್ರದರ್ಶನ ನೀಡಿದ್ದಿ. ನಾನು ಇದರಿಂದಲೇ ಪ್ರೇರಣೆ ಪಡೆದೆ…’ ಎನ್ನುತ್ತ ಕ್ರೀಡಾಸ್ಫೂರ್ತಿ ಮೆರೆದಿದ್ದಾರೆ.
ಎಲ್ಲರಂತೆ ರಿಂಕು ಸಿಂಗ್‌ ಗುರಿಯೂ ಒಂದೇ-ಟೀಮ್‌ ಇಂಡಿಯಾವನ್ನು ಪ್ರತಿನಿಧಿಸುವುದು.

ರಿಂಕು ಬಳಸಿದ್ದು ರಾಣಾ ಬ್ಯಾಟ್‌!
ಪಂದ್ಯದ ಬಳಿಕ ಕೆಕೆಆರ್‌ ನಾಯಕ ನಿತೀಶ್‌ ರಾಣಾ ಸ್ವಾರಸ್ಯಕರ ಸಂಗತಿಯೊಂದನ್ನು ಬಿಚ್ಚಿಟ್ಟರು. ರಿಂಕು ಸಿಂಗ್‌ ರನ್‌ ಚೇಸ್‌ ವೇಳೆ ತನ್ನ ಬ್ಯಾಟ್‌ ಉಪಯೋಗಿಸಿದ್ದಾಗಿ ತಿಳಿಸಿದರು.

“ಈ ಪಂದ್ಯಕ್ಕಾಗಿ ನಾನು ಬ್ಯಾಟ್‌ ಬದಲಿಸಿದೆ. ಹಾಗಾದರೆ ನಿಮ್ಮ ಬ್ಯಾಟ್‌ ನಾನು ಬಳಸುತ್ತೇನೆ ಎಂಬುದಾಗಿ ರಿಂಕು ತಿಳಿಸಿದರು. ಡ್ರೆಸ್ಸಿಂಗ್‌ ರೂಮ್‌ನಲ್ಲಿದ್ದ ಬ್ಯಾಟನ್ನು ಯಾರೋ ಈಚೆ ತಂದಿದ್ದರು. ನಿಜಕ್ಕಾದರೆ ಇದು ನನ್ನ ಲಕ್ಕಿ ಬ್ಯಾಟ್‌. ಯಾರಿಗೂ ನೀಡಲು ಇಷ್ಟ ಇರಲಿಲ್ಲ. ಮೊದಲೆರಡು ಪಂದ್ಯಗಳಲ್ಲಿ ಇದೇ ಬ್ಯಾಟ್‌ನಿಂದ ಆಡಿದ್ದೆ. ಕಳೆದ ಸೀಸನ್‌ನ ಸಯ್ಯದ್‌ ಮುಷ್ತಾಕ್‌ ಅಲಿ ಕೂಟದ ಎಲ್ಲ ಪಂದ್ಯಗಳಲ್ಲಿ, 4-5 ಐಪಿಎಲ್‌ ಪಂದ್ಯಗಳಲ್ಲಿ ಇದೇ ಬ್ಯಾಟ್‌ ಬಳಸಿದ್ದೆ…’ ಎಂದರು ನಿತೀಶ್‌ ರಾಣಾ. “ಕೊನೆಗೂ ರಿಂಕು ನನ್ನ ಬ್ಯಾಟ್‌ನಲ್ಲೇ ಆಡಿ ತಂಡಕ್ಕೆ ಅಸಾಮಾನ್ಯ ಜಯವೊಂದನ್ನು ತಂದಿತ್ತಿದ್ದಾರೆ. ಬ್ಯಾಟ್‌ ಲೈಟ್‌-ವೇಟ್‌ ಇದ್ದ ಕಾರಣ ರಿಂಕು ಇದನ್ನು ಬಯಸಿದ್ದರು. ಈ ಬ್ಯಾಟ್‌ ಇನ್ನು ನನ್ನದಲ್ಲ. ಇದು ರಿಂಕುಗೆ ನನ್ನ ಗಿಫ್ಟ್’ ಎಂಬುದಾಗಿ ರಾಣಾ ಹೇಳಿದರು.

ಗುಜರಾತ್‌-ಕೆಕೆಆರ್‌
– ಕೆಕೆಆರ್‌ ಅಂತಿಮ ಓವರ್‌ನಲ್ಲಿ ಅತ್ಯಧಿಕ ಮೊತ್ತದ ಗುರಿಯನ್ನು (29 ರನ್‌) ಯಶಸ್ವಿಯಾಗಿ ಬೆನ್ನಟ್ಟಿತು. ಹಿಂದಿನ ದಾಖಲೆ ರೈಸಿಂಗ್‌ ಪುಣೆ ಸೂಪರ್‌ಜೈಂಟ್ಸ್‌ ಹೆಸರಲ್ಲಿತ್ತು. 2016ರ ಪಂಜಾಬ್‌ ಎದುರಿನ ಪಂದ್ಯದಲ್ಲಿ ಅದು 23 ರನ್‌ ಗುರಿಯನ್ನು ಬೆನ್ನಟ್ಟಿತ್ತು.
– ಯಶ್‌ ದಯಾಳ್‌ ಐಪಿಎಲ್‌ನ 2ನೇ ದುಬಾರಿ ಸ್ಪೆಲ್‌ಗೆ ಸಾಕ್ಷಿಯಾದರು (69 ರನ್‌). ಆರ್‌ಸಿಬಿ ಎದುರಿನ 2018ರ ಪಂದ್ಯದಲ್ಲಿ ಹೈದರಾಬಾದ್‌ನ ಬಾಸಿಲ್‌ ಥಂಪಿ 70 ರನ್‌ ನೀಡಿದ್ದು ದಾಖಲೆ.
– ಗುಜರಾತ್‌ ಮೊದಲ ಬಾರಿಗೆ 200 ರನ್‌ ಪೇರಿಸಿತು. ಕಳೆದ ವರ್ಷ ಹೈದರಾಬಾದ್‌ ವಿರುದ್ಧ 199 ರನ್‌ ಗಳಿಸಿದ್ದು ಈವರೆಗಿನ ದಾಖಲೆ ಆಗಿತ್ತು. ಗುಜರಾತ್‌ ತವರಿನ ಅಂಗಳದಲ್ಲಿ ಮೊದಲ ಸೋಲನುಭವಿಸಿತು.

 

ಟಾಪ್ ನ್ಯೂಸ್

Kota–Railway

Railway Connectivity: ಕರಾವಳಿಯಿಂದ ತಿರುಪತಿಗೆ ರೈಲು ಸಂಪರ್ಕ ಕಲ್ಪಿಸಿ

1-redd

Digital arrest ವಂಚನೆಗೆ ಬಲಿಯಾಗಬೇಡಿ: ಕೇಂದ್ರ ಎಚ್ಚರಿಕೆ ಸಂದೇಶ

Horoscope: ಈ ರಾಶಿಯವರು ಸಾಕಷ್ಟು ಎಚ್ಚರಿಕೆಯಿಂದ ಮುಂದುವರಿಯಿರಿ

Horoscope: ಈ ರಾಶಿಯವರು ಸಾಕಷ್ಟು ಎಚ್ಚರಿಕೆಯಿಂದ ಮುಂದುವರಿಯಿರಿ

1-weqwe

Lebanon ಪೇಜರ್‌ ಸ್ಫೋ*ಟಕ್ಕೆ ಮೊಸಾದ್‌ 2 ವರ್ಷದ ಯೋಜನೆ ಹೇಗಿತ್ತು?

Crime-2-Sulya

Sulya: ವಾರಂಟ್‌ ಆರೋಪಿ ಪರಾರಿ ಪ್ರಕರಣ; ಆರೋಪಿಯ ಮಾಹಿತಿಗೆ ಪೊಲೀಸರ ಮನವಿ

Shabarimale

Sabarimala;ಅಯ್ಯಪ್ಪ ದರ್ಶನಕ್ಕೆ ಇನ್ನು ಆನ್‌ಲೈನ್‌ ನೋಂದಣಿ ಕಡ್ಡಾಯ

1-canda

Canada: ವೇಟರ್‌ ಕೆಲಸಕ್ಕೆ 3,000 ಭಾರತೀಯ ವಿದ್ಯಾರ್ಥಿಗಳ ಕ್ಯೂ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Hockey

Bihar ಆತಿಥ್ಯದಲ್ಲಿ ಏಷ್ಯನ್‌ ಚಾಂಪಿಯನ್ಸ್‌ ಟ್ರೋಫಿ ಹಾಕಿ

12

Ben Stokes: ಇಂದಿನಿಂದ ಮುಲ್ತಾನ್‌ ಟೆಸ್ಟ್‌: ಗಾಯಾಳು ಸ್ಟೋಕ್ಸ್‌ ಹೊರಕ್ಕೆ

1-coco

China Open; ಕೊಕೊ ಗಾಫ್ ಗೆ ಚೀನ ಕಿರೀಟ

1-BCCI

Gwalior T20: ಬಾಂಗ್ಲಾ ವಿರುದ್ಧ ಭರ್ಜರಿ ಜಯ ಸಾಧಿಸಿದ ಟೀಮ್ ಇಂಡಿಯಾ

1-ind-a

ICC Womens T20 World Cup; ಪಾಕಿಸ್ಥಾನ ವಿರುದ್ಧ ಗೆಲುವಿನ ನಗೆ ಬೀರಿದ ಭಾರತ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

POlice

Gangolli: ಶ್ರೀ ಮಹಾಂಕಾಳಿ ದೇಗುಲದ ಅಡವಿರಿಸಿದ್ದ 256 ಗ್ರಾಂ ಚಿನ್ನಾಭರಣ ವಶ

Kota–Railway

Railway Connectivity: ಕರಾವಳಿಯಿಂದ ತಿರುಪತಿಗೆ ರೈಲು ಸಂಪರ್ಕ ಕಲ್ಪಿಸಿ

1-redd

Digital arrest ವಂಚನೆಗೆ ಬಲಿಯಾಗಬೇಡಿ: ಕೇಂದ್ರ ಎಚ್ಚರಿಕೆ ಸಂದೇಶ

Horoscope: ಈ ರಾಶಿಯವರು ಸಾಕಷ್ಟು ಎಚ್ಚರಿಕೆಯಿಂದ ಮುಂದುವರಿಯಿರಿ

Horoscope: ಈ ರಾಶಿಯವರು ಸಾಕಷ್ಟು ಎಚ್ಚರಿಕೆಯಿಂದ ಮುಂದುವರಿಯಿರಿ

1-weqwe

Lebanon ಪೇಜರ್‌ ಸ್ಫೋ*ಟಕ್ಕೆ ಮೊಸಾದ್‌ 2 ವರ್ಷದ ಯೋಜನೆ ಹೇಗಿತ್ತು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.