Rohit Sharma;ವಿಶ್ವಕಪ್ ಗೆದ್ದ ನಂತರ ಮತ್ತೆ ಬದುಕಿದ ಅನುಭವ: ನಾಯಕ ಹೇಳಿದ್ದೇನು?
Team Udayavani, Oct 3, 2024, 10:30 PM IST
ಮುಂಬೈ: ಈ ವರ್ಷದ ಆರಂಭದಲ್ಲಿ ಟಿ20 ವಿಶ್ವಕಪ್ ಗೆದ್ದಿರುವುದು ತನಗೆ ‘ಮತ್ತೆ ಬದುಕಿದ ಅನುಭವ’ ನೀಡಿತು ಎಂದು ಭಾರತ ತಂಡದ ನಾಯಕ ರೋಹಿತ್ ಶರ್ಮ ಗುರುವಾರ(ಅ3) ಹೇಳಿಕೊಂಡಿದ್ದಾರೆ.
ಅಹ್ಮದ್ನಗರ ಜಿಲ್ಲೆಯ ಕರ್ಜತ್ನ ರಶಿನ್ನಲ್ಲಿ ತಮ್ಮ ಕ್ರಿಕೆಟ್ ಅಕಾಡೆಮಿಯನ್ನು ಪ್ರಾರಂಭಿಸುವ ಸಂದರ್ಭದಲ್ಲಿ, ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷ ರೋಹಿತ್ ಪವಾರ್ ಅವರ ಉಪಸ್ಥಿತಿಯಲ್ಲಿ ರೋಹಿತ್ ಅಭಿಮಾನಿಗಳನ್ನು ಉದ್ದೇಶಿಸಿ ಸಂಕ್ಷಿಪ್ತ ಭಾಷಣ ಮಾಡಿದರು.
“ನಾನು ಮರಾಠಿ ಚೆನ್ನಾಗಿ ಮಾತನಾಡುವುದಿಲ್ಲ ಆದರೆ ನಾನು ಪ್ರಯತ್ನಿಸುತ್ತೇನೆ” ಎಂದು ರೋಹಿತ್ ಆಟೋಗ್ರಾಫ್ಗಳಿಗೆ ಸಹಿ ಮಾಡಿದ ನಂತರ ಪ್ರೇಕ್ಷಕರಿಗೆ ಹೇಳಿದರು.
“ನಮಗೆ ವಿಶ್ವಕಪ್ ಗೆಲ್ಲುವುದು 3-4 ತಿಂಗಳಗಳ ಕಾಲ ದೊಡ್ಡ ಗುರಿಯಾಗಿತ್ತು. ವಿಶ್ವಕಪ್ ಗೆದ್ದ ನಂತರ ನಾನು ಮತ್ತೆ ಜೀವಂತವಾಗಿದ್ದೇನೆ ಎಂದು ಅನಿಸಿತು. ನಾವು ಇಲ್ಲಿ ನಮ್ಮ ಕ್ರಿಕೆಟ್ ಅಕಾಡೆಮಿಯನ್ನು ಪ್ರಾರಂಭಿಸುತ್ತಿದ್ದೇವೆ. ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್ ಮತ್ತು ಜಸ್ಪ್ರೀತ್ ಬುಮ್ರಾ (ಅವರಂತಹ ಆಟಗಾರರು)ಇಲ್ಲಿಂದ ಹೊರ ಬರಲಿದ್ದಾರೆ ಎಂದು ನಾನು ಭಾವಿಸುತ್ತೇನೆ” ಎಂದರು.
ಕಳೆದ ನವೆಂಬರ್ನಲ್ಲಿ ನಡೆದ ಏಕದಿನ ವಿಶ್ವಕಪ್ ಫೈನಲ್ನಲ್ಲಿ ಭಾರತ ತಂಡ ಆಸ್ಟ್ರೇಲಿಯ ವಿರುದ್ಧ ಹೃದಯವಿದ್ರಾವಕ ಸೋಲು ತಂಡಕ್ಕೆ ಆಘಾತ ನೀಡಿತ್ತು. ದಕ್ಷಿಣ ಆಫ್ರಿಕಾ ವಿರುದ್ಧ ಟಿ20 ವಿಶ್ವಕಪ್ ಹೋರಾಟದ ರೋಮಾಂಚಕ ಗೆಲುವು ತಂಡದ ಮತ್ತೊಂದು ಪರಿಪೂರ್ಣ ಅಭಿಯಾನವನ್ನು ತೋರಿಸಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Irani Cup:ಅಭಿಮನ್ಯು ಅಜೇಯ 151 ರನ್: 102 ಡಿಗ್ರಿ ಜ್ವರವಿದ್ದೂ ಶಾರ್ದೂಲ್ ಬ್ಯಾಟಿಂಗ್
Money Laundering Case: ಮಾಜಿ ಕ್ರಿಕೆಟಿಗ ಮೊಹಮ್ಮದ್ ಅಜರುದ್ದೀನ್ ಗೆ ಇ.ಡಿ ಸಮನ್ಸ್
Womens T20 World Cup: ಪುರುಷರು ಆಯ್ತು ಈಗ ವನಿತಾ ಕ್ರಿಕೆಟ್ ಸಮರ
Women’s T20 World Cup: ಇಂದಿನಿಂದ ಅರಬ್ ನಾಡಲ್ಲಿ ವನಿತಾ ಟಿ20 ವಿಶ್ವಕಪ್ ಹವಾ
Test Bowling Rankings: ಟೆಸ್ಟ್ ಬೌಲಿಂಗ್ ರ್ಯಾಂಕಿಂಗ್… ಬುಮ್ರಾ ಮರಳಿ ನಂಬರ್ 1
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Irani Cup:ಅಭಿಮನ್ಯು ಅಜೇಯ 151 ರನ್: 102 ಡಿಗ್ರಿ ಜ್ವರವಿದ್ದೂ ಶಾರ್ದೂಲ್ ಬ್ಯಾಟಿಂಗ್
Kasturirangan Report: ರಾಜ್ಯ, ಕೇಂದ್ರ ಸರಕಾರ ಜನರ ಆತಂಕ ದೂರ ಮಾಡಬೇಕು: ಕೋಟ
Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು
Jigani:ಪೊಲೀಸರಿಂದ ಕಾರ್ಯಾಚರಣೆ: ಹಿಂದೂ ಹೆಸರಲ್ಲಿ ವಾಸವಿದ್ದ ಮತ್ತೆ 3 ಪಾಕ್ ಪ್ರಜೆಗಳ ಸೆರೆ
By Election: ಬಿಜೆಪಿ ಉಸ್ತುವಾರಿಯಾಗಿ ಕೋಟ ಶ್ರೀನಿವಾಸ ಪೂಜಾರಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.