TeamIndia; ರೋಹಿತ್ ಗೆ ವಿಶ್ರಾಂತಿರಜೆ ನೀಡದ ಗಂಭೀರ್; ಪಾಂಡ್ಯ ಕೈತಪ್ಪುತ್ತಾ ಟಿ20 ನಾಯಕತ್ವ?


Team Udayavani, Jul 18, 2024, 12:20 PM IST

TeamIndia; ರೋಹಿತ್ ಗೆ ವಿಶ್ರಾಂತಿರಜೆ ನೀಡದ ಗಂಭೀರ್; ಪಾಂಡ್ಯ ಕೈತಪ್ಪುತ್ತಾ ಟಿ20 ನಾಯಕತ್ವ?

ಮುಂಬೈ: ಇನ್ನು ಕೆಲವೇ ದಿನಗಳಲ್ಲಿ ಭಾರತ ಪುರುಷರ ಕ್ರಿಕೆಟ್ ತಂಡದ ಶ್ರೀಲಂಕಾ ಪ್ರವಾಸ (Sri Lanka Tour) ಆರಂಭವಾಗಲಿದೆ. ಪ್ರವಾಸದಲ್ಲಿ ಭಾರತವು ಮೂರು ಟಿ20 ಮತ್ತು ಮೂರು ಏಕದಿನ ಪಂದ್ಯಗಳ ಸರಣಿ ನಡೆಯಲಿದೆ. ಇನ್ನು ಕೆಲವೇ ದಿನಗಳಲ್ಲಿ ಉಭಯ ತಂಡಗಳನ್ನು ಬಿಸಿಸಿಐ (BCCI) ಪ್ರಕಟಿಸಲಿದೆ.

ಟೀಂ ಇಂಡಿಯಾದ ಟೆಸ್ಟ್ ಮತ್ತು ಏಕದಿನ ತಂಡಗಳ ನಾಯಕ ರೋಹಿತ್ ಶರ್ಮಾ (Rohit Sharma) ಅವರು ಲಂಕಾ ಸರಣಿಯ ಭಾಗವಾಗುವುದಿಲ್ಲ ಎನ್ನಲಾಗಿತ್ತು. ಸತತ ಕ್ರಿಕೆಟ್ ಆಡುತ್ತಿರುವ ಸೀನಿಯರ್ ಆಟಗಾರರಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಜಸ್ಪ್ರೀತ್ ಬುಮ್ರಾ ಅವರು ಲಂಕಾ ಪ್ರವಾಸದಿಂದ ಹೊರಗುಳಿಯಲಿದ್ದಾರೆ. ಕನ್ನಡಿಗ ಕೆಎಲ್ ರಾಹುಲ್ ಅವರು ಏಕದಿನ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ಈ ಹಿಂದೆ ವರದಿಯಾಗಿತ್ತು. ಆದರೆ ಇದೀಗ ರೋಹಿತ್ ಶರ್ಮಾ ಅವರು ಏಕದಿನ ಸರಣಿಯ ಭಾಗವಾಗಲಿದ್ದಾರೆ ಎನ್ನಲಾಗಿದೆ.

2025ರ ಚಾಂಪಿಯನ್ಸ್ ಟ್ರೋಫಿಗೆ ಮೊದಲು ಭಾರತ ಕೇವಲ ಆರು ಏಕದಿನ ಪಂದ್ಯಗಳನ್ನು ಆಡಲಿದೆ. ಹೀಗಾಗಿ ರೋಹಿತ್ ಅವರು ಲಂಕಾ ಸರಣಿಯಲ್ಲಿ ಆಡುವಂತೆ ಬಿಸಿಸಿಐ ಸೂಚಿಸಿದೆ ಎನ್ನಲಾಗಿದೆ. ಆದರೆ ವಿರಾಟ್ ಕೊಹ್ಲಿ ಮತ್ತು ಬುಮ್ರಾ ಅವರ ವಿಶ್ರಾಂತಿ ಮುಂದುವರಿಯಲಿದೆ.

ಇದಲ್ಲದೆ ರೋಹಿತ್ ಶರ್ಮಾ ಅವರು ಟಿ20 ಕ್ರಿಕೆಟ್ ತ್ಯಜಿಸಿದ ಕಾರಣದಿಂದ ಹೊಸ ನಾಯಕನ ನೇಮಕವೂ ಆಗಬೇಕಿದೆ. ಇದುವರೆಗೆ ಟಿ20 ತಂಡದ ಉಪನಾಯಕನಾಗಿದ್ದ ಹಾರ್ದಿಕ್ ಪಾಂಡ್ಯ ಅವರಿಗೆ ಪದೋನ್ನತಿ ನೀಡಲಾಗುತ್ತದೆ ಎನ್ನಲಾಗಿತ್ತು. ಆದರೆ ಸದ್ಯದ ವರದಿಗಳ ಪ್ರಕಾರ ಮುಂಬೈ ಇಂಡಿಯನ್ಸ್ ನ ಮತ್ತೊಬ್ಬ ಬ್ಯಾಟರ್ ಸೂರ್ಯಕುಮಾರ್ ಯಾದವ್ ಅವರು ನಾಯಕತ್ವ ರೇಸ್ ನಲ್ಲಿ ಮುಂಚೂಣಿಯಲ್ಲಿದ್ದಾರೆ.

ಫಿಟ್ನೆಸ್ ಕಾರಣದಿಂದ ಹಾರ್ದಿಕ್ ಪಾಂಡ್ಯ ಅವರನ್ನು ನಾಯಕನಾಗಿ ನೇಮಿಸಲು ಬಿಸಿಸಿಐ ಹಿಂದೇಟು ಹಾಕುತ್ತಿದೆ ಎನ್ನಲಾಗಿದೆ. ಹೀಗಾಗಿ 2026ರ ಟಿ20 ವಿಶ್ವಕಪ್ ವರೆಗೆ ಸೂರ್ಯಕುಮಾರ್ ಗೆ ಪಟ್ಟ ಕಟ್ಟಲು ಉದ್ದೇಶಿಸಲಾಗಿದೆ.

ನೂತನ ಕೋಚ್ ಗೌತಮ್ ಗಂಭೀರ್ ಮತ್ತು ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ಇಬ್ಬರೂ ಯೋಜನೆಯ ಬದಲಾವಣೆಯ ಬಗ್ಗೆ ಪಾಂಡ್ಯ ಅವರೊಂದಿಗೆ ಮಾತನಾಡಿದ್ದಾರೆ. ಸ್ಥಿರತೆಯನ್ನು ಖಚಿತಪಡಿಸಿಕೊಳ್ಳಲು ದೀರ್ಘಾವಧಿಯ ಆಯ್ಕೆಯನ್ನು (ಸೂರ್ಯ) ಅಂತಿಮಗೊಳಿಸಲಾಗುತ್ತಿದೆ ಎಂದು ಪಾಂಡ್ಯಗೆ  ವಿವರಿಸಿದ್ದಾರೆ ಎನ್ನಲಾಗಿದೆ.

ಟಾಪ್ ನ್ಯೂಸ್

balaparadha

Juvenile delinquency: ರಾಜ್ಯದಲ್ಲಿ ಬಾಲಾಪರಾಧ ಪ್ರಕರಣ ಹೆಚ್ಚಳ!

CM-Siddu

Revenge of BJP-JDS: ನನ್ನ ವಿರುದ್ಧದ ಹೊಟ್ಟೆಕಿಚ್ಚಿನ ಪಿತೂರಿ ಸಹಿಸಬೇಡಿ: ಸಿಎಂ

paPadubidri ಯೂಟ್ಯೂಬರ್‌ ಫೋಟೋಶೂಟ್‌ಗೆ ಬೀಚ್‌ನಲ್ಲಿ ಆಕ್ಷೇಪ: ಯುವತಿ ನಡೆಗೆ ಸ್ಥಳೀಯರ ಆಕ್ರೋಶ

Padubidri ಯೂಟ್ಯೂಬರ್‌ ಫೋಟೋಶೂಟ್‌ಗೆ ಬೀಚ್‌ನಲ್ಲಿ ಆಕ್ಷೇಪ: ಯುವತಿ ನಡೆಗೆ ಸ್ಥಳೀಯರ ಆಕ್ರೋಶ

1-aaallll

NEET ಪರೀಕ್ಷೆ ಗೆದ್ದು ಸಾಧಿಸಿದ ದಿಲ್ಲಿ ಸಮೋಸಾ ಮಾರಾಟಗಾರ

ದರ್ಶನ್‌ಗೆ ರಾಜಾತಿಥ್ಯ: ಕಾರಾಗೃಹ ಡಿಜಿಪಿಗೆ ವಿವರಣೆ ಕೇಳಿ ನೋಟಿಸ್‌ ಕಳುಹಿಸಿದ ಸರಕಾರ

Actor Darshan ರಾಜಾತಿಥ್ಯ: ಕಾರಾಗೃಹ ಡಿಜಿಪಿಗೆ ವಿವರಣೆ ಕೇಳಿ ನೋಟಿಸ್‌ ಕಳುಹಿಸಿದ ಸರಕಾರ

rape

shebox; ಮಹಿಳೆಯರ ರಕ್ಷಣೆಗೆ ಶೀ-ಬಾಕ್ಸ್‌ ಜಾಲತಾಣ: ದೂರು ದಾಖಲು ವಿಧಾನ ಹೇಗೆ ?

Moodbidri ಯುವತಿ ಮೈ ಮೇಲೆ ಕೈಹಾಕಿದ ಅನ್ಯಮತೀಯ: ಬಂಧನ

Moodbidri ಯುವತಿ ಮೈ ಮೇಲೆ ಕೈಹಾಕಿದ ಅನ್ಯಮತೀಯ: ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-aaaannn

Paralympics;ನಿರಾಶ್ರಿತ ತಂಡದ ಪರ ಮೊದಲ ಪದಕ ಗೆದ್ದ ಅಫ್ಘಾನ್‌ ಕ್ರೀಡಾಪಟು

1-aa-MT

Maharaja Trophy ಕ್ರಿಕೆಟ್‌: ಬೆಂಗಳೂರು ಫೈನಲ್‌ಗೆ

1-fff

U-20 ಹೈಜಂಪ್‌:ಪೂಜಾ ರಾಷ್ಟ್ರೀಯ ದಾಖಲೆ

1-aaaaaaa

US Open-2024; ಮೂರನೇ ಸುತ್ತಿಗೆ ಸಿನ್ನರ್‌, ಸ್ವಿಯಾಟೆಕ್‌: ಅಲ್ಕರಾಜ್‌ಗೆ ಸೋಲಿನ ಆಘಾತ

1-atki

Lord’s Test: ಎಂಟನೇ ಕ್ರಮಾಂಕದಲ್ಲಿ ಆಡಲಿಳಿದು ಅಟ್ಕಿನ್ಸನ್‌ ಶತಕ

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

balaparadha

Juvenile delinquency: ರಾಜ್ಯದಲ್ಲಿ ಬಾಲಾಪರಾಧ ಪ್ರಕರಣ ಹೆಚ್ಚಳ!

CM-Siddu

Revenge of BJP-JDS: ನನ್ನ ವಿರುದ್ಧದ ಹೊಟ್ಟೆಕಿಚ್ಚಿನ ಪಿತೂರಿ ಸಹಿಸಬೇಡಿ: ಸಿಎಂ

paPadubidri ಯೂಟ್ಯೂಬರ್‌ ಫೋಟೋಶೂಟ್‌ಗೆ ಬೀಚ್‌ನಲ್ಲಿ ಆಕ್ಷೇಪ: ಯುವತಿ ನಡೆಗೆ ಸ್ಥಳೀಯರ ಆಕ್ರೋಶ

Padubidri ಯೂಟ್ಯೂಬರ್‌ ಫೋಟೋಶೂಟ್‌ಗೆ ಬೀಚ್‌ನಲ್ಲಿ ಆಕ್ಷೇಪ: ಯುವತಿ ನಡೆಗೆ ಸ್ಥಳೀಯರ ಆಕ್ರೋಶ

1-aaallll

NEET ಪರೀಕ್ಷೆ ಗೆದ್ದು ಸಾಧಿಸಿದ ದಿಲ್ಲಿ ಸಮೋಸಾ ಮಾರಾಟಗಾರ

rape

shebox; ಮಹಿಳೆಯರ ರಕ್ಷಣೆಗೆ ಶೀ-ಬಾಕ್ಸ್‌ ಜಾಲತಾಣ: ದೂರು ದಾಖಲು ವಿಧಾನ ಹೇಗೆ ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.