ಸೌರಭ್‌ ಕುಮಾರ್‌ಗೆ 6 ವಿಕೆಟ್‌: ಬಾಂಗ್ಲಾ “ಎ’ ವಿರುದ್ಧ ಇನ್ನಿಂಗ್ಸ್‌  ಗೆಲುವು


Team Udayavani, Dec 9, 2022, 10:55 PM IST

ಸೌರಭ್‌ ಕುಮಾರ್‌ಗೆ 6 ವಿಕೆಟ್‌: ಬಾಂಗ್ಲಾ “ಎ’ ವಿರುದ್ಧ ಇನ್ನಿಂಗ್ಸ್‌  ಗೆಲುವು

ಶಿಲೆಟ್‌ (ಬಾಂಗ್ಲಾದೇಶ): ಒಂದೆಡೆ ಭಾರತದ ಸೀನಿಯರ್‌ ತಂಡ ಬಾಂಗ್ಲಾದೇಶದಲ್ಲಿ ಏಕದಿನ ಕ್ಲೀನ್‌ ಸ್ವೀಪ್‌ ಭೀತಿಯಲ್ಲಿದ್ದರೆ, ಇನ್ನೊಂದೆಡೆ ಭಾರತ “ಎ’ ತಂಡ ಆತಿಥೇಯ ಬಾಂಗ್ಲಾದೇಶ “ಎ’ ವಿರುದ್ಧದ ಅನ ಧಿಕೃತ ಟೆಸ್ಟ್‌ ಪಂದ್ಯದಲ್ಲಿ ಇನ್ನಿಂಗ್ಸ್‌ ಜಯಭೇರಿ ಮೊಳಗಿಸಿ ಸರಣಿಯನ್ನು ವಶಪಡಿಸಿಕೊಂಡಿದೆ.

ಶುಕ್ರವಾರ ಮುಗಿದ ದ್ವಿತೀಯ ಹಾಗೂ ಅಂತಿಮ ಮುಖಾ ಮುಖೀ ಯಲ್ಲಿ ಅಭಿಮನ್ಯು ಈಶ್ವರನ್‌ ನಾಯ ಕತ್ವದ ಭಾರತ “ಎ’ ತಂಡ ಇನ್ನಿಂಗ್‌, 123 ರನ್ನುಗಳಿಂದ ಗೆದ್ದು ಬಂದಿತು. ಮೊದಲ ಪಂದ್ಯ ಡ್ರಾಗೊಂಡಿತ್ತು.

ಬಾಂಗ್ಲಾದ 272ಕ್ಕೆ ಉತ್ತರವಾಗಿ ಭಾರತ 9 ವಿಕೆಟಿಗೆ 562 ರನ್‌ ಪೇರಿಸಿತು. ಇದರಲ್ಲಿ ಅಭಿಮನ್ಯು ಈಶ್ವರನ್‌ ಕೊಡುಗೆ 157 ರನ್‌. 310 ರನ್ನುಗಳ ಭಾರೀ ಹಿನ್ನಡೆಗೆ ಸಿಲುಕಿದ ಬಾಂಗ್ಲಾ ದ್ವಿತೀಯ ಸರದಿಯಲ್ಲಿ 187ಕ್ಕೆ ಕುಸಿಯಿತು. ಉತ್ತರಪ್ರದೇಶದ ಎಡಗೈ ಸ್ಪಿನ್ನರ್‌ ಸೌರಭ್‌ ಕುಮಾರ್‌ 74 ರನ್ನಿಗೆ 6 ವಿಕೆಟ್‌ ಉಡಾಯಿಸಿ ಆತಿಥೇಯರನ್ನು ಕಾಡಿದರು. ಉಮೇಶ್‌ ಯಾದವ್‌ ಮತ್ತು ನವದೀಪ್‌ ಸೈನಿ ತಲಾ 2 ವಿಕೆಟ್‌ ಉರುಳಿಸಿದರು. 2 ಪಂದ್ಯಗಳ ಸರಣಿಯಲ್ಲಿ ಸರ್ವಾಧಿಕ 15 ವಿಕೆಟ್‌ ಕೆಡವಿದದ್ದು ಸೌರಭ್‌ ಸಾಧನೆ.

ಬಾಂಗ್ಲಾದ ದ್ವಿತೀಯ ಸರದಿಯಲ್ಲಿ ಬ್ಯಾಟಿಂಗ್‌ ಹೋರಾಟ ತೋರ್ಪ ಡಿಸಿದ್ದು ಓಪನರ್‌ ಶದ್ಮನ್‌ ಇಸ್ಲಾಂ ಮಾತ್ರ. ಅವರು ಕೊನೆಯ ತನಕ ಕ್ರೀಸ್‌ ಆಕ್ರಮಿಸಿಕೊಂಡು 93 ರನ್‌ ಮಾಡಿ ಅಜೇಯರಾಗಿ ಉಳಿದರು.

ಮೊದಲ ಇನ್ನಿಂಗ್ಸ್‌ನಲ್ಲಿ ಮುಕೇಶ್‌ ಕುಮಾರ್‌ 6 ವಿಕೆಟ್‌ ಕೆಡವಿದ್ದರು. ಆದರೆ ಸೌರಭ್‌ಗೆ ವಿಕೆಟ್‌ ಲಭಿಸಿ ರಲಿಲ್ಲ. ಇಲ್ಲಿ ಮುಕೇಶ್‌ ವಿಕೆಟ್‌ ಲೆಸ್‌ ಎನಿಸಿದರು. “ಟೆಸ್ಟ್‌ ಸ್ಪೆಷಲಿಸ್ಟ್‌’ ಖ್ಯಾತಿಯ ಚೇತೇಶ್ವರ್‌ ಪೂಜಾರ ಕೂಡ ಈ ಪಂದ್ಯದಲ್ಲಿ ಆಡಿದ್ದು, ಏಕೈಕ ಇನ್ನಿಂಗ್ಸ್‌ನಲ್ಲಿ 52 ರನ್‌ ಹೊಡೆದರು.

ಸಂಕ್ಷಿಪ್ತ ಸ್ಕೋರ್‌: ಬಾಂಗ್ಲಾದೇಶ “ಎ’-252 ಮತ್ತು 187 (ಶದ್ಮನ್‌ ಇಸ್ಲಾಂ ಔಟಾಗದೆ 93, ಶಹಾದತ್‌ ಹುಸೇನ್‌ 29, ಜಾಕರ್‌ ಅಲಿ 22, ಸೌರಭ್‌ ಕುಮಾರ್‌ 74ಕ್ಕೆ 6, ಉಮೇಶ್‌ ಯಾದವ್‌ 34ಕ್ಕೆ 2, ನವದೀಪ್‌ ಸೈನಿ 54ಕ್ಕೆ 2). ಭಾರತ-9 ವಿಕೆಟಿಗೆ 562 ಡಿಕ್ಲೇರ್‌ (ಅಭಿಮನ್ಯು ಈಶ್ವರನ್‌ 157, ಜಯಂತ್‌ ಯಾದವ್‌ 83, ಶಿಖರ್‌ ಭರತ್‌ 77, ಪೂಜಾರ 52, ಸೈನಿ ಔಟಾಗದೆ 50, ಹಸನ್‌ 129ಕ್ಕೆ 3, ಹಸನ್‌ ಮುರಾದ್‌ 145ಕ್ಕೆ 3).

ಟಾಪ್ ನ್ಯೂಸ್

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

16

Pro Hockey: ಇಂಗ್ಲೆಂಡ್‌ ವಿರುದ್ಧ ಭಾರತ ವನಿತೆಯರಿಗೆ ಸೋಲು

WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್‌ ವಿವಾದ

WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್‌ ವಿವಾದ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Gambhir-Agarkar have differences of opinion on Pant-Rahul issue

Team India: ಪಂತ್-ರಾಹುಲ್‌ ವಿಚಾರದಲ್ಲಿ ಗಂಭೀರ್-‌ ಅಗರ್ಕರ್‌ ನಡುವೆ ಭಿನ್ನಾಭಿಪ್ರಾಯ

Mujeeb joins Mumbai Indians team in place of another Afghan bowler

‌IPL 2025: ಮತ್ತೊಬ್ಬ ಅಫ್ಘಾನಿ ಬೌಲರ್‌ ಬದಲು ಮುಂಬೈ ಇಂಡಿಯನ್ಸ್‌ ತಂಡದ ಸೇರಿದ ಮುಜೀಬ್

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

16

Pro Hockey: ಇಂಗ್ಲೆಂಡ್‌ ವಿರುದ್ಧ ಭಾರತ ವನಿತೆಯರಿಗೆ ಸೋಲು

crimebb

Kasaragod: ಹಲ್ಲೆ ಪ್ರಕರಣ; ಕೇಸು ದಾಖಲು

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.