Singapore Open Super 750; ಸಿಂಗಾಪುರದಲ್ಲಿ ಮಿಂಚಬೇಕಿದೆ ಸಿಂಧು
Team Udayavani, Jun 6, 2023, 7:55 AM IST
ಸಿಂಗಾಪುರ: ಕಳೆದ ವಾರದ “ಥಾಯ್ಲೆಂಡ್ ಓಪನ್’ನಲ್ಲಿ ಮೊದಲ ಸುತ್ತಿನಲ್ಲೇ ಸೋಲನುಭವಿಸಿ ನಿರ್ಗಮಿಸಿದ ಪಿ.ವಿ. ಸಿಂಧು ಅವರಿಗೆ ತಿರುಗೇಟು ನೀಡಲು ಮತ್ತೊಂದು ಅವಕಾಶ ಎದುರಾಗಿದೆ. ಮಂಗಳವಾರ ದಿಂದ “ಸಿಂಗಾಪುರ್ ಓಪನ್ ಸೂಪರ್ 750 ಟೂರ್ನಿ’ ಆರಂಭವಾಗಲಿದ್ದು, ಹಾಲಿ ಚಾಂಪಿಯನ್ ಕೂಡ ಆಗಿರುವ ಸಿಂಧು ಇಲ್ಲಿ ಪ್ರಶಸ್ತಿ ಉಳಿಸಿಕೊಳ್ಳಲು ಯಶಸ್ವಿಯಾಗಬೇಕಿದೆ.
ಈ ಋತುವಿನಲ್ಲಿ ಸಿಂಧು ಗಮ ನಾರ್ಹ ಪ್ರದರ್ಶನ ನೀಡಿದ್ದು 2 ಪಂದ್ಯಾವಳಿಗಳಲ್ಲಿ ಮಾತ್ರ. ಮ್ಯಾಡ್ರಿಡ್ ಸ್ಪೇನ್ ಮಾಸ್ಟರ್ನಲ್ಲಿ ಫೈನಲ್ ಹಾಗೂ ಮಲೇಷ್ಯಾ ಮಾಸ್ಟರ್ನಲ್ಲಿ ಸೆಮಿಫೈನಲ್ ತಲುಪಿದ್ದರು. ಆದರೆ ಥಾಯ್ಲೆಂಡ್ ಓಪನ್ನಲ್ಲಿ ಕೆನಡಾದ ಮೈಕಲ್ ಲೀ ವಿರುದ್ಧ ಅನುಭವಿಸಿದ ಮೊದಲ ಸುತ್ತಿನ ಸೋಲು ಸಿಂಧು ಅವರನ್ನು ಕಂಗೆಡಿಸಿದೆ. ಹೀಗಿರುವಾಗಲೇ ಸಿಂಗಾಪುರಲ್ಲಿ ಮೊದಲ ಸುತ್ತಿನಲ್ಲೇ ವಿಶ್ವದ ನಂ.1 ಆಟಗಾರ್ತಿ, ಜಪಾನ್ನ ಅಕಾನೆ ಯಮಾಗುಚಿ ಅವರನ್ನು ಎದುರಿಸಬೇಕಾದ ಒತ್ತಡಕ್ಕೆ ಸಿಲುಕಿದ್ದಾರೆ.
ಕಾಗದದಲ್ಲೇನೋ ಸಿಂಧು 14-9ರ ಮುನ್ನಡೆಯಲ್ಲಿದ್ದಾರೆ. ಆದರೆ ಅವರ ಫಾರ್ಮ್ ಮತ್ತು ಮನಃಸ್ಥಿತಿ ಈ ಫಲಿತಾಂಶಕ್ಕೆ ತದ್ವಿರುದ್ಧವಾಗಿದೆ. ಈಗಾಗಲೇ ಒಲಿಂಪಿಕ್ಸ್ ಅರ್ಹತಾ ಸುತ್ತು ಆರಂಭವಾಗಿರುವುದರಿಂದ ವಿಶ್ವ ರ್ಯಾಂಕಿಂಗ್ನಲ್ಲಿ 13ರಿಂದ ಟಾಪ್-10ರಲ್ಲಿ ಕಾಣಿಸಿಕೊಳ್ಳಬೇಕಾದ ಸವಾಲು ಸಿಂಧು ಮುಂದಿದೆ.
ಭಾರತದ ಮತ್ತೋರ್ವ ಸಿಂಗಲ್ಸ್ ಆಟಗಾರ್ತಿ ಸೈನಾ ನೆಹ್ವಾಲ್ ಥಾಯ್ಲೆಂಡ್ನ ರಚನೋಕ್ ಇಂತಾ ನನ್ ವಿರುದ್ಧ ಫಸ್ಟ್ ರೌಂಡ್ ಮ್ಯಾಚ್ ಆಡಲಿದ್ದಾರೆ.
ಬ್ರೇಕ್ ಬಳಿಕ ಪ್ರಣಯ್
ಮಲೇಷ್ಯಾ ಮಾಸ್ಟರ್ ಚಾಂಪಿಯನ್ ಎಚ್.ಎಸ್. ಪ್ರಣಯ್ ಥಾಯ್ಲೆಂಡ್ ಬ್ರೇಕ್ ಬಳಿಕ ಸಿಂಗಾಪುರದಲ್ಲಿ ಆಡಲಿ ಳಿಯಲಿದ್ದಾರೆ. ಇವರಿಗೂ ಇಲ್ಲಿ ಮೊದಲ ಸುತ್ತಿನಲ್ಲೇ ಕಠಿನ ಸವಾಲು ಎದುರಾಗಿದೆ. ಜಪಾನ್ನ ತೃತೀಯ ಶ್ರೇಯಾಂಕಿತ ಆಟಗಾರ ಕೋಡೈ ನರವೋಕ ವಿರುದ್ಧ ಸೆಣಸಬೇಕಿದೆ.
ಥಾಯ್ಲೆಂಡ್ನಲ್ಲಿ ಸೆಮಿಫೈನಲ್ ತನಕ ಮುನ್ನಡೆದ ಲಕ್ಷ್ಯ ಸೇನ್ “ಮಿಸ್ಟರ್ ಕನ್ಸಿಸ್ಟೆಂಟ್’ ಖ್ಯಾತಿಯ, ಚೈನೀಸ್ ತೈಪೆಯ ಚೌ ಟೀನ್ ಚೆನ್ ವಿರುದ್ಧ ಮೊದಲ ಸುತ್ತಿನ ಪಂದ್ಯ ಆಡಲಿದ್ದಾರೆ. ಕೆ. ಶ್ರೀಕಾಂತ್ ಥಾಯ್ಲೆಂಡ್ನ ಕಾಂತಾ ಫೊನ್ ವಾಂಗ್ಶೆರೋನ್ ವಿರುದ್ಧ, ಪ್ರಿಯಾಂಶು ರಾಜಾವತ್ ಜಪಾನ್ನ ಕಾಂಟ ಸುನೆಯಾಮ ವಿರುದ್ಧ ಆಡುವರು. ಡಬಲ್ಸ್ನಲ್ಲಿ ಚಿರಾಗ್ ಶೆಟ್ಟಿ-ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ, ಎಂ.ಆರ್. ಅರ್ಜುನ್-ಧ್ರುವ ಕಪಿಲ, ಗಾಯತ್ರಿ ಗೋಪಿಚಂದ್-ಟ್ರೀಸಾ ಜಾಲಿ ಕಣದಲ್ಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Asian Champions Trophy: ಕೊರಿಯಾ ವಿರುದ್ದ ಗೆದ್ದು ಫೈನಲ್ ಪ್ರವೇಶಿಸಿದ ಭಾರತ ಹಾಕಿ ತಂಡ
International ಕರಾಟೆ ಚಾಂಪಿಯನ್ ಶಿಪ್; ಸುಜಲ್ ಜೆ ಶೆಟ್ಟಿಗೆ ಬೆಳ್ಳಿ,ಕಂಚು
ENGvsAUS: ಏಕದಿನ ಸರಣಿಗೂ ಬಟ್ಲರ್ ಅಲಭ್ಯ; ಎಸ್ಆರ್ಎಚ್ ಆಟಗಾರನಿಗೆ ನಾಯಕತ್ವ
B–G Trophy: ಈತನೇ ಭಾರತದ ಮುಂದಿನ ಸೂಪರ್ ಸ್ಟಾರ್ ಎಂದ ಸ್ಟೀವ್ ಸ್ಮಿತ್, ಸ್ಟಾರ್ಕ್
Asian Champions Trophy ಸೆಮಿಫೈನಲ್ : ಕೊರಿಯಾ ವಿರುದ್ಧ ಭಾರತ ಫೇವರಿಟ್
MUST WATCH
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.