T20 WC; ನಿರ್ಣಾಯಕ ಹಂತದಲ್ಲಿ ಎಡವಿದ ಅಫ್ಘಾನ್; ಮೊದಲ ಬಾರಿಗೆ ಫೈನಲ್ ಪ್ರವೇಶಿಸಿದ ದ.ಆಫ್ರಿಕಾ


Team Udayavani, Jun 27, 2024, 8:08 AM IST

ನಿರ್ಣಾಯಕ ಹಂತದಲ್ಲಿ ಎಡವಿದ ಅಫ್ಘಾನ್; ಮೊದಲ ಬಾರಿಗೆ ಫೈನಲ್ ಪ್ರವೇಶಿಸಿದ ದ.ಆಫ್ರಿಕಾ

ಟರೋಬಾ: ಬಲಿಷ್ಠ ತಂಡಗಳನ್ನು ಮಣಿಸಿ ಇದೇ ಮೊದಲ ಬಾರಿಗೆ ಐಸಿಸಿ ಟಿ20 ವಿಶ್ವಕಪ್ ಸೆಮಿ ಫೈನಲ್ ಪ್ರವೇಶ ಮಾಡಿದ್ದ ಅಫ್ಘಾನಿಸ್ತಾನ ತಂಡವು ನಿರ್ಣಾಯಕ ಹಂತದಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲವಾಗಿದೆ. ಟರೋಬಾದ ಬ್ರಿಯಾನ್ ಲಾರಾ ಸ್ಟೇಡಿಯಂನಲ್ಲಿ ನಡೆದ ಸೆಮಿ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವು 9 ವಿಕೆಟ್ ಅಂತರದ ಗೆಲುವು ಸಾಧಿಸಿದೆ. ಈ ಮೂಲಕ ಮೊದಲ ಬಾರಿಗೆ ಐಸಿಸಿ ಕೂಟವೊಂದರ ಫೈನಲ್ ತಲುಪಿದೆ.

ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನ್ 11.5 ಓವರ್ ಗಳಲ್ಲಿ 56 ರನ್ ಗೆ ಆಲೌಟಾಯಿತು. ದಕ್ಷಿಣ ಆಫ್ರಿಕಾ ತಂಡವು 1 ವಿಕೆಟ್ ನಷ್ಟಕ್ಕೆ 8.5 ಓವರ್ ಗಳಲ್ಲಿ 60 ರನ್ ಗಳಿಸಿ ವಿಜಯಿಯಾಯಿತು.

ಇಡೀ ಪಂದ್ಯದಲ್ಲಿ ಅಫ್ಘಾನ್ ಪರವಾಗಿದ್ದು ಟಾಸ್ ಮಾತ್ರ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿದ ರಶೀದ್ ಖಾನ್ ಗೆ ಯಾವುದೂ ಎಣಿಸಿದಂತೆ ನಡೆಯಲಿಲ್ಲ. ಕೂಟದ ಅತಿ ಹೆಚ್ಚಿನ ರನ್ ಸ್ಕೋರರ್ ಗುರ್ಬಾಜ್ ಮೊದಲ ಓವರ್ ನಲ್ಲಿಯೇ ಔಟಾದರು. ಆಫ್ರಿಕಾದ ವೇಗಿಗಳ ಎದುರು ನಿಲ್ಲಲಾಗದೆ ತರಗೆಲೆಗಳಂತೆ ವಿಕೆಟ್ ಉದುರುತ್ತಾ ಹೋಯಿತು. ಅತಿ ಹೆಚ್ಚಿನ ಸ್ಕೋರ್ ಬಂದಿದ್ದು ಎಕ್ಸ್ಟ್ರಾ ಮೂಲಕ. ಅದು 13 ರನ್. 11 ಆಟಗಾರರಲ್ಲಿ ಎರಡಂಕಿ ಮೊತ್ತ ಗಳಿಸಿದ್ದು ಅಜ್ಮತುಲ್ಲಾ ಮಾತ್ರ, ಅವರದ್ದು 10 ರನ್ ಗಳ ಕೊಡುಗೆ.

ದಕ್ಷಿಣ ಆಫ್ರಿಕಾ ಪರ ಮಾರ್ಕೋ ಎನ್ಸನ್ ಮತ್ತು ಶಮ್ಸಿ ತಲಾ ಮೂರು ವಿಕೆಟ್ ಕಿತ್ತರೆ, ನೋಕ್ಯಾ ಮತ್ತು ರಬಾಡಾ ತಲಾ ಎರಡು ವಿಕೆಟ್ ಪಡೆದರು.

ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ತಂಡವು ಮೊದಲ ಓವರ್ ನಲ್ಲಿಯೇ ಡಿಕಾಕ್ ರೂಪದಲ್ಲಿ ವಿಕೆಟ್ ಕಳೆದುಕೊಂಡಿತು. ಆದರೆ ಎರಡನೇ ವಿಕೆಟ್ ಗೆ ಜೊತೆಯಾದ ನಾಯಕ ಮಾರ್ಕ್ರಮ್ ಮತ್ತು ರೀಜಾ ಹೆಂಡ್ರಿಕ್ಸ್ ತಂಡಕ್ಕೆ ಆಧಾರವಾದರು. ರೀಜಾ ಅಜೇಯ 29 ಮತ್ತು ಮಾರ್ಕ್ರಮ್ ಅಜೇಯ 23 ರನ್ ಗಳಿಸಿದರು.

ಇದುವರೆಗೆ 7 ಸೆಮಿ ಫೈನಲ್ ಗಳಲ್ಲಿ ವಿಫಲವಾಗಿದ್ದ ದಕ್ಷಿಣ ಆಫ್ರಿಕಾ ಇದೇ ಮೊದಲ ಬಾರಿಗೆ ಐಸಿಸಿ ಫೈನಲ್ ತಲುಪಿದೆ.

ಟಾಪ್ ನ್ಯೂಸ್

CM,DCM ಬಗ್ಗೆ ಪದೇ ಪದೆ ಹೇಳಿಕೆ ಬೇಡ ; ಮೀರಿದರೆ ಶಿಸ್ತು ಕ್ರಮ: ಡಿಕೆಶಿ

CM,DCM ಬಗ್ಗೆ ಪದೇ ಪದೆ ಹೇಳಿಕೆ ಬೇಡ ; ಮೀರಿದರೆ ಶಿಸ್ತು ಕ್ರಮ: ಡಿಕೆಶಿ

Jaishankar

SCO ಶೃಂಗಕ್ಕೆ ಪ್ರಧಾನಿ ಬದಲಿಗೆ ಸಚಿವ ಜೈಶಂಕರ್‌

Sullia ವಿದೇಶದಿಂದ ಬರಲು ಯುವಕನಿಗೆ ನೆರವಾದ ಸಂಸದ ಬ್ರಿಜೇಶ್‌ ಚೌಟ

Sullia ವಿದೇಶದಿಂದ ಬರಲು ಯುವಕನಿಗೆ ನೆರವಾದ ಸಂಸದ ಬ್ರಿಜೇಶ್‌ ಚೌಟ

Udupi “ದೊಡ್ಡ ಸಾಮಗರ ನಾಲ್ಮೊಗ’ ಗ್ರಂಥ ಲೋಕಾರ್ಪಣೆ

Udupi “ದೊಡ್ಡ ಸಾಮಗರ ನಾಲ್ಮೊಗ’ ಗ್ರಂಥ ಲೋಕಾರ್ಪಣೆ

Student ಇನ್‌ಸ್ಪಾಯರ್‌ ಅವಾರ್ಡ್‌ ಸ್ಪರ್ಧೆ: ಕಾರ್ಕಳದ ಮೂವರು ರಾಷ್ಟ್ರಮಟ್ಟಕ್ಕೆ

Student ಇನ್‌ಸ್ಪಾಯರ್‌ ಅವಾರ್ಡ್‌ ಸ್ಪರ್ಧೆ: ಕಾರ್ಕಳದ ಮೂವರು ರಾಷ್ಟ್ರಮಟ್ಟಕ್ಕೆ

ತೀವ್ರವಾಗಿ ಉದುರುತ್ತಿದೆ ಎಳೆ ಅಡಿಕೆ

ತೀವ್ರವಾಗಿ ಉದುರುತ್ತಿದೆ ಎಳೆ ಅಡಿಕೆ; ಕೃಷಿಕರಲ್ಲಿ ಆತಂಕ

Lokayukta ಭೂ ಮಾಪನ ಅಧಿಕಾರಿ, ಸರ್ವೇಯರ್‌ ಮನೆ, ಕಚೇರಿಗೆ ಲೋಕಾಯುಕ್ತ ಶೋಧ

Lokayukta ಭೂ ಮಾಪನ ಅಧಿಕಾರಿ, ಸರ್ವೇಯರ್‌ ಮನೆ, ಕಚೇರಿಗೆ ಲೋಕಾಯುಕ್ತ ಶೋಧ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

pragyananda

Superbet Classic Chess: ಗುಕೇಶ್‌ ವಿರುದ್ಧ ಡ್ರಾ ಸಾಧಿಸಿದ ಪ್ರಜ್ಞಾನಂದ

1-ddsadsa

Kaup; ರಾಷ್ಟ್ರ ಮಟ್ಟದ ಮುಕ್ತ ರ‍್ಯಾಪಿಡ್ ಚೆಸ್‌ಗೆ ಚಾಲನೆ

1-wewqewqe

World Cup ಗೆದ್ದ ಬಳಿಕ ಟಿ20 ಅಂತಾರಾಷ್ಟ್ರೀಯ ಕ್ರಿಕೆಟಿಗೆ ನಿವೃತ್ತಿ ಘೋಷಿಸಿದ ಕೊಹ್ಲಿ

1-dsdsadasdas

CHAMPIONS! ತಡರಾತ್ರಿ ಟೀಮ್ ಇಂಡಿಯಾಕ್ಕೆ ಅಭಿನಂದನೆ ಸಲ್ಲಿಸಿದ ಮೋದಿ

1-wewqewqeqwe

T20 World Cup ಗೆದ್ದ ಟೀಮ್ ಇಂಡಿಯಾ; ವ್ಯೂಹದೊಳಗೆ ಸಿಲುಕಿ ಸೋತ ದಕ್ಷಿಣ ಆಫ್ರಿಕಾ

MUST WATCH

udayavani youtube

ವಿಧಿಯಾಟಕ್ಕೆ ಬಲಿಯಾದ ಅಂಧರ ಪುಟ್ ಬಾಲ್ ತಂಡದ ಕ್ಯಾಪ್ಟನ್

udayavani youtube

ಮಾತು ಬರದ ಮಗುವಿಗೆ ಮಾತು ಬರಿಸಿದ ಕಾಪು ಮಾರಿಯಮ್ಮ | ಕಾಪುವಿನ ಅಮ್ಮನ ಪವಾಡ

udayavani youtube

ಡಿಸಿಎಂ ವಿಚಾರ ಇನ್ನೊಮ್ಮೆ ಮಾತನಾಡೋಣ; ಕುಕ್ಕೆಯಲ್ಲಿ ಡಿ.ಕೆ.ಶಿವಕುಮಾರ್

udayavani youtube

ಆನೆಗುಡ್ಡೆ ಶ್ರೀ ವಿನಾಯಕ ದೇಗುಲದಲ್ಲಿ ಅಂಗಾರ ಸಂಕಷ್ಟಹರ ಚತುರ್ಥಿ|

udayavani youtube

ಬಸ್ಸೇರಿ ಸಮಸ್ಯೆ ಆಲಿಸಿದ ಶಾಸಕ ರೈ

ಹೊಸ ಸೇರ್ಪಡೆ

CM,DCM ಬಗ್ಗೆ ಪದೇ ಪದೆ ಹೇಳಿಕೆ ಬೇಡ ; ಮೀರಿದರೆ ಶಿಸ್ತು ಕ್ರಮ: ಡಿಕೆಶಿ

CM,DCM ಬಗ್ಗೆ ಪದೇ ಪದೆ ಹೇಳಿಕೆ ಬೇಡ ; ಮೀರಿದರೆ ಶಿಸ್ತು ಕ್ರಮ: ಡಿಕೆಶಿ

1-ddddd

Delhi ಮುಂಗಾರಿನ ಅಬ್ಬರ: ಮೃತರ ಸಂಖ್ಯೆ 14ಕ್ಕೆ ಏರಿಕೆ

Jaishankar

SCO ಶೃಂಗಕ್ಕೆ ಪ್ರಧಾನಿ ಬದಲಿಗೆ ಸಚಿವ ಜೈಶಂಕರ್‌

Sullia ವಿದೇಶದಿಂದ ಬರಲು ಯುವಕನಿಗೆ ನೆರವಾದ ಸಂಸದ ಬ್ರಿಜೇಶ್‌ ಚೌಟ

Sullia ವಿದೇಶದಿಂದ ಬರಲು ಯುವಕನಿಗೆ ನೆರವಾದ ಸಂಸದ ಬ್ರಿಜೇಶ್‌ ಚೌಟ

J-P-Nadda

BJP ಅಧ್ಯಕ್ಷ: ಮತ್ತೆ ನಡ್ಡಾ ಅವಧಿ ವಿಸ್ತರಣೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.